ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ಸರ್ವದೇವತಾ ಸ್ತುತಿಗಳು 1. ವಿನಾಯಕ 261 ಗಜಮುಖನೇ ಮಾಂಪಾಲಯ ಗೌರೀತನಯಾ ಪ ಭುಜಗಾಪವೀತನೆ ದ್ವಿಜಗಣನಾಥನೆ ಅಜಿಮಹಾರಾಜನೆಂದು ಭಜಿಸುವೆನೆಲ್ಲೋ ದೇವ 1 ತ್ರಿಗುಣಾ ವಿರಾಜಿತ ತ್ರಿಶರ ವಿನೋದಿತಾ ಜಗದೊಡೆಯನೇ ಬಾರೊ ಮೃಗವದನದವನ್ಯಾರೊ 2 ಕೋಲೂಪುರೀಶನೆ ಬಾಲಗಣೇಶನೇ ಕಾಲವೈರಿಯೆ ಬಾರೊ ತುಲಶೀರಾಮ ತಾನ್ಯಾರೋ 3
--------------
ಚನ್ನಪಟ್ಟಣದ ಅಹೋಬಲದಾಸರು
ನಾಗರಾಜ ನರಸುರ ನಮಿತೇ |ಸಾಗರ ಕರುಣೀ ಸರಸ್ವತೀ ||ಕೋಗಿಲ ಗಾನವಿನೋದಿತೇ ಬೇಗನೆವರಗಳ ಕೊಡು ಮಾತೇ ಪಶೃಂಗೇರಿ ಪುರವರ ನಿಲಯೇ |ಮಂಗಲಚರಣೆ ಶಾರದೆಯೇ |ಭೃಂಗಕುಂತಲೆಭವಭಂಗನಿವಾರಿಣಿ |ರಂಗನ ಸುತನರ್ಧಾಂಗಿಯೆ ರಕ್ಷಿಸು 1ಪುಸ್ತಕಹಸ್ತಜಗದ್ಭರಿತೇ ಉತ್ತಮಳೆಮಕುಟಾನ್ವಿತದಾತೇ |ಪೃಥ್ವಿಪಾಲ ಮನದರ್ಥಿಯ ಸಲಿಸುವ |ಸ್ವಸ್ತಿಶ್ರೀಮನ್ಮಥನತ್ತಿಗೆ ಶಾರದೆ 2ಕುಂದಮಂದಾರಪುಷ್ಪಗಳ |ಚಂದಣ ಕುಂಕುಮ ಗಂಧಂಗಳಮಂದಗಮನೆ ಅರವಿಂದನಯನೆ ಗೋವಿಂದನ ಸೊಸೆಗಾನಂದದೊಳರ್ಚಿಸಿ 3
--------------
ಗೋವಿಂದದಾಸ
ಸ್ಥಾಣುಮಹೇಶ್ವರ ತ್ರಿನಯನ ||ಶಂಕರ||ಮಾಣದೆಸಲಹೋ ರುದ್ರಾಣಿ ಮನೋಹರ ಪಪೂರ್ಣ ಕೃಪೆಯೊಳ್ ನಿನ್ನ | ಶರಣನೆಂದೆನಿಸೆನ್ನ ಅಬಾಣನಿಗೊಲಿದಾತಣ್ಗದಿರನಿಶೇಖರ |ಭೂತನಾಥನೆಭವ| ಭೀತಿವಿನಾಶನೆ |ಪಾತಕಹರಸುರ | ವ್ರಾತಾನಮಿತನೆ ಚಭೂತಳದೊಳಗೆ ಸರ್ವಾರ್ಥರಕ್ಷಕನೆಂದು |ಖ್ಯಾತಿಯ ತಳೆದ ಕಾತ್ಯಾಯನಿ ರಮಣಾ 1ರುದ್ರಚಮಕಗಳಿಂದ | ಲಭಿಷೇಕವಗೈದು |ಶ್ರದ್ಧೆಯೊಳರ್ಚಿಸಲಾರೇ | ಪತ್ರೆಯ ಕೊಯ್ದು |ರುದ್ರಾಕ್ಷಿಯು ಭಸ್ಮಲೇಪನ ಧರಿಸುತ |ಪ್ರದೋಷದ ವ್ರತವರಿಯೆನ್ನುದ್ಧರಿಸೊ 2ಸುಗುಣಶರಧಿಲಿಂಗ | ಪೂಜೆ ವಿನೋದಿತ |ಮೃಗದ ನೆವದಿ ಪಾರ್ಥಗೊಲಿದಕೈರಾತ|ಜಗದೀಶ್ವರನೆ ಗೋವಿಂದನಸಖನಿನ್ನ |ಮೊಗವ ತೋರಿಸುದಾಸಗೊಲಿದು ನೀ ದಯದಿ 3
--------------
ಗೋವಿಂದದಾಸ