ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನರಸಿಂಹ ಲ- ಕ್ಷ್ಮೀರಮಣನೆ ಪರಬ್ರಹ್ಮ ಪ. ಸಾರಭೋಕ್ತನೆ ಸ್ವತಂತ್ರನೆ ದೋಷವಿ- ದೂರ ಪರಿಪೂರ್ಣಕಾಮ ಅ.ಪ. ಸತ್ವಾದಿಗುಣಾತೀತ ವಿತತ ಸ- ರ್ವೋತ್ತಮ ನಿರುಪಮ ಮಹಿಮ ಪ್ರತ್ಯಗಾತ್ಮ ನಿಗಮಾಗಮವೇದ್ಯ ಸು- ಹೃತ್ತಮ ಮಂಗಲಧಾಮ 1 ವಿಧಿಭವೇಂದ್ರಾದಿ ವಿಬುಧಾಶ್ರಿತಪದ- ಪದುಮ ನೀಲಾಂಬುದಶ್ಯಾಮ ಹೃದಯಾಬ್ಜಮಧ್ಯಸದನ ಸಾಮಜವ- ರದ ಯದುವಂಶಲಲಾಮ 2 ಮಾಯಾತೀತ ಮಹೋನ್ನತ ಸುರಜನ- ಪ್ರಿಯ ದ್ಯೆತ್ಯೇಯನಿರ್ನಾಮ ವಾಯುವಾಹನ ಜನಾರ್ದನ ಲಕ್ಷ್ಮೀನಾ- ರಾಯಣ ತೇ ನಮೋ ನಮಃ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಾರಾಯಣ ನರಸಿಂಹ ಲ-ಕ್ಷ್ಮೀರಮಣನೆ ಪರಬ್ರಹ್ಮ ಪ.ಸಾರಭೋಕ್ತನೆ ಸ್ವತಂತ್ರನೆ ದೋಷವಿ-ದೂರ ಪರಿಪೂರ್ಣಕಾಮ ಅ.ಪ.ಸತ್ವಾದಿಗುಣಾತೀತ ವಿತತ ಸ-ರ್ವೋತ್ತಮ ನಿರುಪಮ ಮಹಿಮಪ್ರತ್ಯಗಾತ್ಮ ನಿಗಮಾಗಮವೇದ್ಯ ಸು-ಹೃತ್ತಮ ಮಂಗಲಧಾಮ 1ವಿಧಿಭವೇಂದ್ರಾದಿ ವಿಬುಧಾಶ್ರಿತಪದ-ಪದುಮ ನೀಲಾಂಬುದಶ್ಯಾಮಹೃದಯಾಬ್ಜಮಧ್ಯಸದನ ಸಾಮಜವ-ರದ ಯದುವಂಶಲಲಾಮ 2ಮಾಯಾತೀತ ಮಹೋನ್ನತ ಸುರಜನ-ಪ್ರಿಯ ದ್ಯೆತ್ಯೇಯನಿರ್ನಾಮವಾಯುವಾಹನ ಜನಾರ್ದನ ಲಕ್ಷ್ಮೀನಾ-ರಾಯಣ ತೇ ನಮೋ ನಮಃ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು