ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಂಡಿಯಾಗಲಿ ಬೇಗ ಪ ತೊಂಡರೊಡನೆ ಕೂಡಿ ತ್ವರಿತದಿ ಹೊರಡೋಣ ಅ.ಪ ಅನ್ನಸಾರೆರಡೇ ಬೇಕು | ಮಿಕ್ಕಾದ್ದೆಲ್ಲಾ ಹನ್ನೊಂದು ಗಂಟೆ ಹೊತ್ತಿನೊಳಗೆ ಅಡಿಗೆಯ ಮಾಡಿ ಹರಿದಾಸರ ಕೂಡಿ ಆ ವೂರಿಗೆ ಹೋಗೋಣ1 ಕಟ್ಟಿ ಪಾತ್ರೆಯೊಳಗಿರಿಸಿ ಜಾತ್ರೆ ನೋಡುವುದಕ್ಕೆ ಜನರು ಮಿತ್ರರು ಸಹ 2 ಉಪ್ಪಿನಕಾಯಿ ತೆಗಿಯಲಿ ಹಪ್ಪಳ ಸುಟ್ಟು ನಮ್ಮಪ್ಪ ಗುರುರಾಮ ವಿಠ- ಲ್ಪಪನ ನೆನೆಯುತ ಚಪ್ಪಾಳೆ ತಟ್ಟುತ 3
--------------
ಗುರುರಾಮವಿಠಲ
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿUಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ 1 ದುರಿತ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ 2 ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ 3 ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ 4 ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ 5
--------------
ವ್ಯಾಸವಿಠ್ಠಲರು
ನಂಬು ನಂಬು ನಂಬು ಮನವೆ ಅಂಬುಜಾಕ್ಷನ ಪ್ರಭುವ ಪಾದ ಇಂಬು ನಿನಗೆ ದೊರಕುವುದು ತುಂಬಿ ಮಂಗಳ ಪ ದುಷ್ಟ ಅನ್ನ ದುಷ್ಟ ಸಂಗ ಭ್ರಷ್ಟ ಭಾವದಿಂದ ಮನವು ಕೆಟ್ಟು ಬೆದರಿ ಸವಿಯುಗೊಳ್ಳದು ಶಿಷ್ಟರನುಭವ 1 ಸತ್ಯಹರಿಯು ಜಗದ್ಗುರುವು ಸತ್ಯ ಮಧ್ವಶಾಸ್ತ್ರ ಫಲವು ಸತ್ಯ ಮಹಿಮ ಗುರುಕರುಣ ಸತ್ಯ ನಿತ್ಯದಿ 2 ಭಾರತ ಭಾಗವತವ ಕೇಳು ಭರತನಣ್ಣನ ಚರಿತೆ ಕೇಳು ಖರೆಯು ಹರಿಯ ಭಕ್ತರೀಗೆ ನಿರುತ ಮಂಗಳ 3 ನಿರುತ ವಿದಯ ಲೋಭಿಗಳ ದುರುಳ ದುರ್ಬಲ ಭಾವ ತಿಳಿದು ಹರಿಯ ಮೆರೆಯೆ ಸಕಲ ಭಯವು ಮರುಳು ಮಾಳ್ಪವು 4 ಕರಿಯ ಧ್ರುವನ ಅಸುರ ಬಾಲನ ನರನ ಸತಿಯು ಭೀಷ್ಮ ಕುಚೇಲ ವರದ ದೇವನ ದಾಸರ ಭಜಿಸು ನಿರುತ ದೃಢದಲಿ 5 ಹಿಂದೆ ಎಷ್ಟೊ ಕಾಲದಿಂದ ಕುಂದು ನೋಡದೆ ನಿನ್ನ ಬಿಡದೆ ಮುಂದು ತಂದ ಬಗೆಯ ತಿಳಿಯೊ ಸಂದೇಹ ಪೋಪದು 6 ಕಾಲಿಗೆ ಬಿದ್ದ ದೀನರನ್ನು ಕರ್ಮ ಮೀರಿ ಪೊರೆವ ಬಾಳ ಕರುಣಿ ಮಹಾ ವಿಜಯ ರಾಮಚಂದ್ರನು7 ಹಿಂದೆ ಪೇಳ್ದ ವಾಕ್ಯವೆಲ್ಲಿ ಇಂದು ಬಿಡದೆ ಫಲಿಸುವೋವು ಮಂದನಾಗದೆ ಪ್ರಭುವ ಪಾದ ದ್ವಂದ್ವ ಬಿಡದಿರು 8 ನಿತ್ಯ ಹನುಮ ಭೀಮ-ಮಧ್ವ ಭೃತ್ಯರ ಶಿರೋರತನುನಿವನು ಸತ್ಯ ಮಹಿಮ ಜಯೇಶವಿಠ- ಲಾಪ್ತ ಸತ್ಯವು 9
--------------
ಜಯೇಶವಿಠಲ