ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಯ ನಿವಾರಿಸೋ ಜಯ ಶ್ರೀ ಹರಿಯೆ ಭಯ ನಿವಾರಿಸಯ್ಯ ದಯದಿ ಭಯ ನಿವಾರನೆನ್ನ ಪ ಮರವೆಯೆಂಬುವ ಇರುಳಿನಲ್ಲಿ ದುರಿತಯೆಂಬುವ ಗಿರಿಯಲ್ಲಿ ಪರನಿಂದೆಂಬುವ ಶರಧಿಯಲ್ಲಿ ಕರುಣವಿಲ್ಲದ ಕಾಯದುರ್ಗದರಣ್ಯಕಂಜಿ ಕೊರುಗುತಿರುವೆ ಹರಿಯೆ ನಿಮ್ಮ ಸ್ಮರಣವೆಂಬ ನಿರುತ ಧೈರ್ಯ ಕರುಣಿಸಭವ 1 ವ್ಯಸನವೆಂಬ ಮುಸುಕಿನಿಂದ ಪಿಸುಣತೆಂಬುವ ದಸಕಿನಿಂದ ಪುಸಿಯುಯೆಂಬುವ ಮಿಸುನಿಯಿಂದ ವಿಷಯದಾಸೆ ತಸ್ಕರಗಂಜಿ ದೆಸೆಗೆ ಬಾಯ ಬಿಡುವೆನಯ್ಯ ಅಸಮಮಹಿಮನ್ವ ಚಶ್ರವಣೆಂಬೆಸೆವ ಧೈರ್ಯ ಕರುಣಿಸಭವ 2 ಆರು ಹುಲಿಗಳ ಘೋರಿಸುವ ಮೂರು ಮರಿಗಳ ಹಾರುತಿರುವ ಮೂರೇಳು ನಾಯ್ಗಳ ಘೋರತಾಪ ಸೈರಿಸದೆ ಸಾರಸಾಕ್ಷ ಮರೆಯ ಹೊಕ್ಕೆ ಶ್ರೀರಾಮ ನಿಮ್ಮ ಚರಣ ಭಕ್ತೆಂ ಬ್ವೀರತನವ ಕರುಣಿಸಭವ 3
--------------
ರಾಮದಾಸರು
ಗುರುರಾಯಾ ಗುರುರಾಯಾ |ತರಣಿಪ್ರಕಾಶ ಯತಿಪ ವರದೇಂದ್ರ ಪಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ |ಮಂದದಯಾಳೋ 1ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ2ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ 3ಮೇದಿನಿಪರು ಬೆರ | ಗಾದರು ದಾನಕೆ ||ಮೋದಮುನಿಮತ ಮ | ಹೋದಧಿ ಚಂದ್ರ 4ಕಾಷಾಯ ವಸನಿ |ದೇಶಿಕವರಪ್ರಾ ||ಣೇಶ ವಿಠಲನವ | ರಾ ಸಲಹುವದೋ 5
--------------
ಪ್ರಾಣೇಶದಾಸರು