ಒಟ್ಟು 208 ಕಡೆಗಳಲ್ಲಿ , 56 ದಾಸರು , 191 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜ್ಞಾತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜ್ಞಾನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ಭಯವ್ಯಾಕೆ ಭಕ್ತ ಜನಕೆಪ. ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ ಮಾಯವಾದಿಗಳನ್ನು ಅ.ಪ. ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ ಭೇದವೆಂಬುವರನ್ನು ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ 1 ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ ಹೃದಯದೊಳಗೆ ಹರಿಯ ತಂದು ಮುಂದು ಸದಯನು ನೀನೆನುತ ಸದ್ವøತ್ತಿಲುದಯನು ನೀನೆನುತ ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ 2 ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ- ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ- ತÀ್ಕøಷ್ಟ ಹಯವದನ ದೊರೆ 3
--------------
ವಾದಿರಾಜ
(ಪ್ರಮೇಯ ಪ್ರಕರಣ) ಸುವ್ವಿ ಸುವ್ವಿ ಉರಗಾದ್ರಿವಾಸ ಶ್ರೀ ವೆಂಕಟೇಶ ಸುವ್ವಿ ಶ್ರೀ ಸಚ್ಚಿದಾನಂದಾತ್ಮಕಾನೆ ಸುವ್ವಿ ಪ ಮೂಲನಾರಾಯಣ ಮೂಲಪ್ರಕೃತಿಯನ್ನು ಮೂರುಭಾಗಗೈಸಿ ಸೃಷ್ಟಿಮಾಡಿದನೆ ಸುವ್ವಿ ಸೃಷ್ಟಿಯೊಳು ಗುಣವ್ಯಷ್ಟಿಸಮಷ್ಟಿಯಿಂದ ಸೃಷ್ಟಿಸಿದ ಜಗಸಂಸೃಷ್ಟನೆನಿಸಿದಸುವ್ವಿ 1 ಸತ್ವರಜತಮ ಸಂಯುಕ್ತದಿಂದ ಕರ್ಮ ಮುಕ್ತಿ ಪರ್ಯಂತ ಜನ್ಮಕರ್ಮಂಗಳು ಸುವ್ವಿ ಕರ್ಮಂಗಳು ಸವೆದು ಉತ್ಕ್ರಾಂತ ಮಾರ್ಗ ಪಿಡಿದು ತಮ್ಮ ಸ್ವರೂಪ ಕರ್ಮನೆಸಗುವರೋ ಸುವ್ವಿ 2 ಮಹದಹಂಕಾರದಿಂದ ವೈಕಾರಿಕದಿಂದ ವ್ಯಸ್ತ- ರಾದರು ತತ್ವದೇವತೆಗಳು ಸುವ್ವಿ ದೇವತೆಗಳಾದರು ಮೇಲೆ ರಾಜಸಾಹಂಕಾರದಿಂದ ಇಂದ್ರಿಯಾದಿಗಳೆಲ್ಲ ಸೃಷ್ಟಿಯಾದವು ಸುವ್ವಿ 3 ಭೂತಪಂಚಕವು ತನ್ಮಾತ್ರಪಂಚಕಗಳು ತಾಮ- ಸಾಹಂಕಾರಗಳುದಿಸಿದವೆನ್ನು ಸುವ್ವಿ ಉದಿಸಿದಹಂಕಾರತ್ರಯದೊಳು ಬಂದು ಸರ್ವಸೃಷ್ಟಿ ಅದುಭುತವಾದುದು ಅನಿರುದ್ಧನಿಂದ ಸುವ್ವಿ 4 ಎಲ್ಲಜೀವರು ಮುನ್ನಾಸೃಷ್ಟಿಗೆ ಬಾರದಿರೆ ಇನ್ನು ಸುಪ್ತಾವಸ್ಥೆಯಲ್ಲಿ ಸುಮ್ಮನಿರ್ಪರೋ ಸುವ್ವಿ ಸೃಷ್ಟಿಗೆ ತಂದ ಗುಣವೈಷಮ್ಯದಿಂದಲೀ ಸುವ್ವಿ 5 ಭೇದಪಂಚಕವು ನಿತ್ಯತಾರತÀಮ್ಯ ಸತ್ಯ ವಿಧಿ ಮೊದಲು ತೃಣಾಂತ ಜೀವರು ತ್ರಿವಿಧವು ಸುವ್ವಿ ನಿತ್ಯ ತ್ರಿವಿಧಕಾರ್ಯ ಅರಿತು ತ್ರಿವಿಧಸಾಧನದಂತೆ ತ್ರಿವಿಧಗತಿಯು ಸುವ್ವಿ 6 ಜೀವರು ಅನಾದಿಯು ಸಾವು ನೋವುಗಳಿಲ್ಲ ಆ- ವಾವಸ್ಥೆಗಳೆಲ್ಲ ಸ್ಥೂಲ ದೇಹಕೆ ಸುವ್ವಿ ಸ್ಥೂಲದೇಹವ ಧರಿಸಿ ಪೂರ್ವಕರ್ಮದಂತೆ ಸಾಧನದಿಂ- ದಲೆ ಕರ್ಮಕ್ಷಯವಹುದು ಸುವ್ವಿ 7 ವೃದ್ದಿಹ್ರಾಸಗಳಿಲ್ಲ ಶುದ್ದ ಜೀವಸ್ವರೂಪ ವಿಧಿಮೊದಲು ತೃಣಾಂತ ಪರಿಮಿತಿ ಒಂದೆ ಸುವ್ವಿ ಪರಿಮಿತಿ ಒಂದೇ ರೀತಿ ಗುಣಕ್ರಿಯ ವಿವಿಧರೀತಿ ಅ- ದರಂತೆ ಜಡ ಪ್ರಕೃತಿ ಕಾರ್ಯವು ಪರಿಪರಿ ಇಹುದು ಸುವ್ವಿ 8 ಸರ್ವತ್ರ ಹರಿವ್ಯಾಪ್ತನಿರ್ಲಿಪ್ತನು ಸುವ್ವಿ ನಿರ್ಲಿಪ್ತನು ಅನಂತಾನಂತಗುಣಗಣಪೂರ್ಣ ಅವ್ಯಯ ಅಪ್ರಮೇಯ ಅಚ್ಯುತಾನಂತ ಸುವ್ವಿ9 ಅನಂತಾನಂತರೂಪಾನಂತ ಚೇತನ ಜಡದಿ ಅಂತರಾತ್ಮ ತಾ ನಿರಂತರ ನಿಂತಿಹ ಸುವ್ವಿ ನಿಂತು ತದಾಕಾರದಿ ತದ್ಭಿನ್ನ ತನ್ನಾಮದಲಿ ಕಂತುಪಿತನು ತಾ ನಿಂತಿಹನೆನ್ನು ಸುವ್ವಿ 10 ಇಂಥಾಜೀವರಿಗೆ ಲಿಂಗದೇಹ ಅನಾದಿಯಲ್ಲಿದ್ದು ಜ್ಯೋತಿರ್ಮಯವಾಗಿ ಪ್ರಕಾಶಿಸುವುದು ಸುವ್ವಿ ಪ್ರಕಾಶದ ಜೀವಕ್ಕೆ ಗಜ್ಜಗಬೀಜದಂತೆ ತ್ರಿಗುಣಾ ವರ್ಕವು ಲಿಂಗಕ್ಕಾವರ್ಕವು ಸುವ್ವಿ 11 ಗುಣಬದ್ಧನಾದುದರಿಂದ ಗುಣಕಾರ್ಯ ಫಲಗಳಿಂದೆ ಶೀ ತೋಷ್ಣಸುಖದುಃಖಾನುಭವವಾಗುವುದೆನ್ನು ಸುವ್ವಿ ಅನುಭವದಭಿಮಾನ ಸಾಧನದಂತೆ ಜೀವಾ ಜೀವ ಜನುಮಜನುಮಾಂತರದ ವಾಸನವಿಹುದು ಸುವ್ವಿ 12 ಸತ್ವಜೀವರ ಲಿಂಗಕ್ಕೆ ಸತ್ವಾವರಣವೇ ಪ್ರಥಮ ದ್ವಿತೀಯಾವರಣವೆ ರಜ ತೃತೀಯ ತಮವೆನ್ನು ಸುವ್ವಿ ತಮೋ ಆವರಣವೆ ಪ್ರಥಮ ರಜ ಸತ್ವವು ತದುಪರಿ ತ್ರಿವಿಧಾವರ್ಕವು ತಮೋಜೀವರಿಗಿಹುದು ಸುವ್ವಿ 13 ರಜೋ ಜೀವರಿಗೆ ರಜವು ಪ್ರಥಮಾವರಣದಿ ಇಹುದು ತಮಸತ್ವಾವರಣಾನಂತರವಿಹುದು ಸುವ್ವಿ ತಮರಜಸತ್ವಾವರಣತ್ರಯಗಳು ಲಿಂಗಕ್ಕೆ ನಿತ್ಯ ಇರಲು ತ್ರಿವಿಧಬದ್ದರಾಗಿ ಸುತ್ತುತಿಪ್ಪರು ಸುವ್ವಿ 14 ಸತ್ವಾವರ್ಕದಿ ವಿಶ್ವರಜತಮ ತ್ವೆಜಸ ಪ್ರಾಜ್ಞ ನಿತ್ಯದಿ ಜೀವನವಸ್ಥಾ ತೋರಿಸುವರು ಸುವ್ವಿ ತೋರಿಸುವರು ಜೀವರ ಜಾಗ್ರಸ್ವಪ್ನಾ ವಸ್ಥೆಯೊಳು ಶ್ರೀಭೂದುರ್ಗಾ ಲಿಂಗಕಭಿಮಾನಿಗಳುಸುವ್ವಿ 15 ಸತಿಸಹಿತರಾಗಿ ಬ್ರಹ್ಮವಾಯು ಬಿಡದೆ ನಿತ್ಯ ಭಕ್ತಿಯಿಂದ ಹರಿಯಾರಾಧಿಸುವರೋ ಸುವ್ವಿ ನಿತ್ಯಭಕ್ತಿಯಿಂದ ಸ್ತುತಿಯ ಮಾಡಿ ಜಗ- ಕತೃವಿನಾಜ್ಞೆಯಿಂ ತೃಪ್ತರಾಗೋರೋ ಸುವ್ವಿ 16 ಜ್ಞಾನ ಕರ್ಮೇಂದ್ರಿಯ ಭೂತಪಂಚಕಗಳು ಮನಸು ಎಂದು ಇನಿತು ಕೂಡಿ ಷೋಡಶಕಳೆಗಳು ಲಿಂಗಕ್ಕೆ ಸುವ್ವಿ ಷೋಡಶಕಳೆಗಳಿಂದ ಕೂಡಿ ಲಿಂಗವು ಇಹದು ಕಳೆಗಳಲ್ಲಿನ ಭಗವದ್ರೂಪವ ತಿಳಿಯೋ ಸುವ್ವಿ 17 ಮನಸಿಗೆ ಶ್ರವಣಕೆ ಶ್ರೀ ಕೇಶವನಾರಾಯಣ ತ್ವ- ಮಾಧವ ಗೋವಿಂದನೆ ಸುವ್ವಿ ಜಿಹ್ವೆ ಘ್ರಾಣದಿ ವಿಷ್ಣುಮಧುಸೂದನ ತ್ರಿವಿಕ್ರಮನೆನ್ನು ಸುವ್ವಿ 18 ಹಸ್ತ ಪಾದಕ್ಕೆಲ್ಲ ವಾಮನ ಶ್ರೀಧರ ಗುಹ್ಯಕ್ಕೆ ಹೃಷೀಕೇಶ ಮೂರುತಿ ಇಹರೋ ಸುವ್ವಿ ಮೂರುತಿ ಇಹರೋ ಮತ್ತೆ ಗುದದೊಳು ಪದ್ಮನಾಭ ಮುದದಿಂದ ಜ್ಞಾನ ಕರ್ಮೇಂದ್ರಿಯದಲ್ಲಿ ಸುವ್ವಿ 19 ಶಬ್ದದೊಳು ದಾಮೋದರ ಸ್ಪರ್ಶದಿ ಸಂಕರ್ಷಣನು ವಾಸುದೇವ ಮೂರುತಿ ಇಹರೋ ಸುವ್ವಿ ರೂಪಸುಗಂಧಗಳಲಿ ಈರೂಪಗಳಹವೋ ಸುವ್ವಿ 20 ಷೋಡಶ ಕಳೆಗಳಲ್ಲಿ ಅಭಿಮಾನಿಗಳಂತರದಲ್ಲಿ ನೀ ಬಿಡದೆ ನೆನೆಸು ಈ ಭಗವದ್ರೂಪಗಳಲ್ಲಿ ಸುವ್ವಿ ಭಗವದ್ರೂಪಗಳಲಿ ಧೃಡಭಕುತಿಯಿಂದಲಿ ಎಡೆಬಿಡದೆ ನಡೆನುಡಿಗಳಲ್ಲಿ ಸುವ್ವಿ 21 ಆಚ್ಛಾದಿಕವು ಜೀವರಿಗೆ ಎರಡುಂಟು ನಿತ್ಯದಲ್ಲಿ ಜೀವನ ಮರೆಯಮಾಡಿದ ಜೀವಾಚ್ಛಾದಿಕ ಸುವ್ವಿ ಜೀವಾಚ್ಛಾದಿಕ ಇದೆ ಹರಿಚ್ಛಾಬಂದಕಾಲದಿ ಬಿಚ್ಚಿ ಹೋಗುವುದು ನಿಶ್ಚಯ ಕೇಳೋ ಸುವ್ವಿ 22 ಪರಮಾಚ್ಛಾದಿಕವೆಂಬುದು ನಿರುತವು ತಪ್ಪಿದ್ದಲ್ಲ ಹರಿಇಚ್ಛಾ ಇಂಥಾದ್ದೆ ಇಂಥಾದ್ದೆನ್ನು ಸುವ್ವಿ ಇಂತಿದ್ದರು ಹರಿಯು ಒಮ್ಮೆ ಇಚ್ಛೆಮಾಡಿದರೆ ಒಮ್ಮೆ ಒಮ್ಮೆ ತೋರಿದರೆ ಒಮ್ಮೆ ತೋರದಿಹನೋ ಸುವ್ವಿ 23 ಲಿಂಗದೇಹಕ್ಕೆ ತಮ ಮೋಹ ಮಹಮೋಹ ತಾಮಿಶ್ರ ಅಂಧತಾಮಿಶ್ರವೆನ್ನು ಸುವ್ವಿ ತಾಮಿಶ್ರದಿ ಪಂಚ ನರಕಂಗಳಲ್ಲಿರ್ಪ ಕೃದ್ಧೋಲ್ಕಾದಿ ಪಂಚಭಗವದ್ರೂಪವಿಹುದೋ ಸುವ್ವಿ 24 ದೈತ್ಯರಿಗವಕಾಶ ಲಿಂಗದೊಳೆಂದಿಗಿಲ್ಲ ದೈತ್ಯಾರಿಜನಾರ್ದನ ಹರಿ ಅಲ್ಲೆ ಇಹನು ಸುವ್ವಿ ದೈತ್ಯಾರಿ ಜನಾರ್ದನನು ಲಿಂಗವ ರಕ್ಷಿಸುತ್ತ ನಿತ್ಯನಿರ್ಲಿಪ್ತನಾಗಿ ನಿಂತಿಹನೋ ಸುವ್ವಿ 25 ವಿಧಿಮೊದಲು ತೃಣಾದಿ ಜೀವರ ಲಿಂಗದಲಿ ದಗ್ಧಪಟದ ತೆರದಿ ವಿಧಿಗೆ ಲಿಂಗವು ಸುವ್ವಿ ವಿಧಿಗಿಹ ಲಿಂಗದ ಕಾರ್ಯ ಹರಿಯ ಪ್ರೀತ್ಯರ್ಥವು ಲಿಂಗಗುಣದ ಕಾರ್ಯವೆಂದಿಗಿಲ್ಲವೋ ಸುವ್ವಿ 26 ಲಿಂಗದೇಹಕೆ ಮುಂದೆ ಅನಿರುದ್ಧದೇಹವು ಅಂಗಿಯ ತೊಟ್ಟಂತೆ ಸಂಗಮಾದುದು ಸುವ್ವಿ ಅದರಿಂದ ಅನಿರುದ್ಧದೇಹ ಇಹುದು ಸಪ್ತಾವರಣ ಆವರಣಗಳಲ್ಲಿ ವಿವರಣೆ ತಿಳಿಯೋ ಸುವ್ವಿ 27 ಅನಿರುದ್ಧ ಪ್ರದ್ಯುಮ್ನ ಆವರಣಗಳೆರಡು ವಾಸುದೇವ ನಾರಾಯಣ ಸುವ್ವಿ ಸರ್ವತತ್ತ ್ವ ವ್ಯಕ್ತವಾದವು ನೀ ಮತ್ತೆ ತಿಳಿಯೋದು ಸುವ್ವಿ 28 ಮಹತ್ತತ್ವ ತಿಳಿ ಶ್ರೀ ವಾಸುದೇವಾವರಣದಿ ನಾರಾಯಣಾವರಣದಿ ಅವ್ಯಕ್ತ ತತ್ವವು ಸುವ್ವಿ ಅವ್ಯಕ್ತ ತತ್ವಾದಿಚತುರ್ವಿಂಶತಿ ತತ್ವದಲಿ ಕೇಶವಾದಿ ಚತುರ್ವಿಂಶತಿ ರೂಪವಿಹುದು ಸುವ್ವಿ 29 ತತ್ವಂಗಳಲಿ ತತ್ತದಭಿಮಾನಿಗಳಂತರದಿ ನಿತ್ಯ ಹರಿಯು ತನ್ನ ಸತಿಯರಿಂದಲಿ ಸುವ್ವಿ ಸತಿಯರಿಂದಲಿ ಕೂಡಿ ಕೃತ್ಯವ ನಡೆಸಿ ಅಭಿ ವ್ಯಕ್ತಮಾಡಿಸುತ್ತಿರುವನು ಹರಿ ಸತ್ಯವೆನುಸುವ್ವಿ 30 ಹೃದಯದೊಳಿರುತಿರ್ಪ ಅನಿರುದ್ಧದೇಹದೊಳು ಮುದದಿಂದ ದೈತ್ಯದಾನವಾದಿಗಳಿರುವರು ಸುವ್ವಿ ದೈತ್ಯರೆಲ್ಲರು ಪಾಪಕಾರ್ಯಗಳ ಮಾಳ್ಪರು ಪುಣ್ಯಕಾರ್ಯಗಳೆಲ್ಲ ಸುರರಿಂದಾಹುದು ಸುವ್ವಿ 31 ಲಿಂಗದೇಹದ ಸಂಗಡ ಭಂಗವಿರುವುದು ಸುವ್ವಿ ಭಂಗವಾಗಲು ವಿಷಯ ಸಂಗರಹಿತನಾಗು ರಂಗ ಅಂತರದಿ ತಿಳಿಯಗೊಡುವನು ಸುವ್ವಿ 32 ಜೀವಪ್ರಕಾಶವು ಲಿಂಗಾನಿರುದ್ಧದೊಳು ಷೋಡಶಕಳೆಗಳಿಂದ ವ್ಯಾಪಿಸಿಹುದು ಸುವ್ವಿ ವ್ಯಾಪಿಸಿಹುದು ಮುಂದೆ ಸ್ಥೂಲದೇಹವು ಒಂದು ಸ್ಥೂಲಜಡದೇಹದ ಕಾರ್ಯ ಅಭಿವ್ಯಕ್ತವಾಹುದು ಸುವ್ವಿ 33 ಸ್ಥೂಲ ದೇಹದೊಳು ಸುಷುಮ್ನಾಧಾರ ಹಿಡಿದು ಸಪ್ತಕಮಲಗಳಲ್ಲುಂಟು ತಿಳಿಯೋ ಸುವ್ವಿ ಸಪ್ತಕಮಲದಿ ಮೊದಲು ಮೂಲಾಧಾರದಿ ನಾಲ್ಕು ಕಮಲ ಹವಳವರ್ಣವಿದೆ ಭೂಲೋಕವೆನ್ನು ಸುವ್ವಿ 34 ಕಮಲ ನಾಭಿಯಲ್ಲಿ ವಾಯುಮಂಡಲವಿದೆ ಭುವರ್ಲೋಕವು ಸುವ್ವಿ ಭುವರ್ಲೋಕ ಇಲ್ಲಿ ವಾಯುಬೀಜಾಕ್ಷರದಲ್ಲಿ ನಿತ್ಯ ಸುವ್ವಿ 35 ಹೃದಯಕಮಲದಿ ಎಂಟುದಳ ಉಂಟು ರವಿಭಾ ಸತ್ರಿಕೋಣ ಅಗ್ನಿಮಂಡಲವಿಹುದಿಲ್ಲಿ ಸುವ್ವಿ ಇಹುದು ಸುವರ್ಲೋಕ ಇಲ್ಲಿ ಅಗ್ನಿ ಬೀಜಾಕ್ಷರ ನಿತ್ಯ ಸುವ್ವಿ 36 ಹೃದಯಕಮಲದ ಮಧ್ಯ ಕರ್ಣಿಕಮಧ್ಯದಲ್ಲಿ ಮೂಲೇಶನಿಪ್ಪ ಸ್ಥೂಲಾಂಗುಷ್ಟ ಮೂರುತಿ ಸುವ್ವಿ ಮೂರುತಿ ಮೂಲೇಶನ ಪಾದಮೂಲದಲ್ಲಿಪ್ಪ ಅನಿರುದ್ಧ ದೇಹವೇ ಸುವ್ವಿ 37 ನಿತ್ಯ ಇಪ್ಪತ್ತೊಂದು ಸಾವಿರದಾರುನೂರು ಸುವ್ವಿ ಆರುನೂರು ಜಪ ಮೂರು ಮೂರು ವಿಧಜೀವರೊಳು ಮೂರು ವಿಧ ನಡೆಸಿ ಮೂರ್ಗತಿ ನೀಡುವ ಸುವ್ವಿ 38 ಅಷ್ಟದಳಗಳ ಮೇಲೆ ಅಷ್ಟಭುಜನಾರಾಯಣ ನಿಷ್ಟೆಯಿಂದಲಿ ಚರಿಸಿ ಜೀವರಿಷ್ಟವ ತೋರುವ ಸುವ್ವಿ ಜೀವರಿಷ್ಟದೊಳು ಪೂರ್ವದಳದಲಿ ಪುಣ್ಯ ನಿದ್ರಾಲಸ್ಯವು ಶ್ರೀ ಆಗ್ನೇಯ ದಳದಲಿ ಸುವ್ವಿ 39 ಆಗÉ್ನೀಯದಳದ ಮುಂದೆ ಯಮದಿಕ್ಕಿನಲ್ಲಿ ಕ್ರೂರ ಬುದ್ಧಿಯು ಜೀವಗಾಗುವುದೆನ್ನು ಸುವ್ವಿ ನಿರುತ ದಳದಲ್ಲಿ ಸಂಚರಿಸುವ ಸುವ್ವಿ 40 ವಾಯುವ್ಯದಲ್ಲಿ ಗಮನಾಗಮನವು ಸುವ್ವಿ ಗಮನಾಗಮನದಿಮೇಲೆ ರತಿಬುದ್ಧಿಯ ಉತ್ತರದಲಿ ದಾನಬುದ್ಧಿಯು ಈಶಾನ್ಯದಲಿ ಸುವ್ವಿ41 ಬರಲು ಸ್ವಪ್ನಾವಸ್ಥೆಯು ಸುವ್ವಿ ಸ್ವಪ್ನಾನಂತರದಿ ಕರ್ಣಿಕೆಯಲ್ಲಿ ಜಾಗ್ರತಿಯು ಮಧ್ಯದೊಳು ಸುಷುಪ್ತಾವಸ್ಥೆಯು ಸುವ್ವಿ 42 ಉರದಲ್ಲಿ ಮುತ್ತಿನವರ್ಣ ಎರಡಾರುದಳಕಮಲದಿ ವಿರುಪಾಕ್ಷನಭಿಮಾನಿ ನರಸಿಂಹನ ಪೂಜಿಪ ಸುವ್ವಿ ನರಸಿಂಹನ ಪೂಜಿಪ ಈ ಲೋಕ ಮಹರ್ಲೋಕ ದ್ವಾದಶದಳದಿ ಕಲಾಭಿಮಾನಿಗಳಿಹರು ಸುವ್ವಿ43 ಕಂಠದಲಿ ಎರಡೆಂಟರಷ್ಟದಳಕಮಲ ಕಮಲ ರಕ್ತವರ್ಣ ಜನಲೋಕವು ಸುವ್ವಿ ಜನಲೋಕದಲಿ ಶೇಷ ಸಂಕರ್ಷಣ ಮೂರ್ತಿಯನು ನಿತ್ಯ ಸ್ತುತಿಸುತ ತಾ ಭೃತ್ಯನಾಗಿಹನೊ ಸುವ್ವಿ 44 ಭ್ರೂಮಧ್ಯ ದ್ವಿದಳಕಮಲ ಉಂಟೊಂದಿಲ್ಲಿ ತಾ ಮಧುಪುಷ್ಪದಂತೆ ಪೊಳೆಯುತ್ತಿಹುದು ಸುವ್ವಿ ತಪೋಲೋಕವೆನ್ನು ಸುವ್ವಿ 45 ಶಿರದೊಳು ಸಾವಿರದಳಕಮಲವು ವಜ್ರದ ಕಲಾ ವರುಣ ಮಂಡಲವಿದೆ ಸತ್ಯಲೋಕವೆ ಸುವ್ವಿ ಉತ್ತಮೋತ್ತಮ ಶ್ರೀರಂಗನ ಪೂಜಿಸುವನು ಸುವ್ವಿ 46 ಅಷ್ಟಾಕ್ಷರU
--------------
ಉರಗಾದ್ರಿವಾಸವಿಠಲದಾಸರು
* ನರಹರಿಯೆ ಸುಕ್ಷೇಮವ ಪ. ಪರಮಪ್ರಿಯರಿಗೆ ಇತ್ತು ವರ ಸೇವೆ ಕೈಕೊಂಡು ನಿರುತದಿ ಪಾಲಿಸೆನ್ನ ಘನ್ನ ಅ.ಪ. ದಾಸ ಗುರುಕುಲತಿಲಕರಿವರಿಗೆ ನೀನೀಗ ಘಾಸಿಗೊಳಿಸುವುದುಚಿತವೆ ದೋಷದೂರನೆ ಎಮ್ಮ ಮನವನರಿತವ ಜನರ ದೂಷಣೆಗೆ ಗುರಿ ಮಾಳ್ಪರೆ ಘಾಸಿಪಡುತಿಹರ ಆಯಾಸಪಡಿಸುವುದು ಬಹು ಲೇಸಲ್ಲ ನಿನಗೆ ಥರವೆ ಶೇಷಶಯನನೆ ಎಮ್ಮ ಮಾತು ಲಾಲಿಸಿ ಈಗ ಪೋಷಿಸಲಿ ಬೇಕೊ ಸ್ವಾಮಿ ಪ್ರೇಮಿ 1 ಕಲ್ಪತರುವಂತಿಹರು ಶಿಷ್ಯವೃಂದಕೆ ಇವರು ಇಪ್ಪರೋ ಚಂದ ಜಗದಿ ತಪ್ಪದಲೆ ಆಯುರಾರೊಗ್ಯ ಕೊಟ್ಟು ನೀ ಸರ್ಪಶಯನನೆ ರಕ್ಷಿಸೊ ಒಪ್ಪದಿಂದಲಿ ಎಮ್ಮ ಸೇವೆ ಸಫಲವಗೊಳಿಸಿ ಅಪ್ಪ ಸಂತಸವಪಡಿಸೊ ಬಪ್ಪ ಪೋಪ ಕೀರ್ತಿ ಅಪಕೀರ್ತಿ ನಿನ್ನಡಿಗೆ ಪುಷ್ಪದಂತರ್ಪಿಸುವೆನೊ ನೃಹರಿ 2 ಮನವಚನ ಕಾಯದಲಿ ಅನ್ಯ ಬಗೆಯದೆ ಎಮ್ಮ ಗುರುಗಳನು ಸೇವಿಸುವೆವೊ ಚಿನುಮಯನೆ ನೀ ಸಾಕ್ಷಿಯೋ ಮನುಜರಿದನೇನ ಬಲ್ಲರು ಕೇಳು ತಂತಮ್ಮ ಮನ ಬಂದ ತೆರ ನುಡಿವರೊ ಎನಗದರ ಗೊಡವೇನು ನೀನಿರಲು ಭಯವೇನು ಘನ ಮಹಿಮ ಪೊರೆಯೊ ಬೇಗ ಸ್ವಾಮಿ 3 ಪಂಚಪ್ರಾಣರು ಇವರು ವಂಚನಿಲ್ಲದೆ ಪೇಳ್ವೆ ಮುಂಚೆ ನೀ ಕಾಪಾಡೆಲೊ ಸಂಚಿತಾಗಾಮಿ ಪ್ರಾರಬ್ಧ ದುಷ್ಕರ್ಮಗಳು ಮಿಂಚಿನಂದದಿ ಮಾಡೆಲೊ ಸಂಚಿತಾಗಾಮಿಗಳ ಶಿಷ್ಯರಿಗೆ ಕಳೆವರಿಗೆ ಕೊಂಚ ಬಾಧೆಯ ಕೊಡದೆಲೊ ಸಂಚಿತಿತ ಪ್ರದನೆ ಎನ್ನ ಮೊರೆ ಲಾಲಿಸು ಅಚಂಚಲದ ಕ್ಷೇಮವೀಯೋ ದೇವ 4 ಪರಿ ಪ್ರಾರ್ಥಿಸುವೆ ಶ್ರೀ ಪತಿಯೆ ದಯವ ಮಾಡೊ ನಾ ಪೇಳ್ವುದಿನ್ನೇನು ನಿನ್ನ ಸೇವಾದಿಗಳು ಕೃಪೆಯಿಂದ ಗುರುಗಳಿಂದ ಪಾಪ ಪರಿಹರನೆ ನೀ ಕೈಕೊಂಡು ಕೀರ್ತಿಯನು ಈ ಪೃಥ್ವಿಯಲ್ಲಿ ನೆಲಸೊ ಗೋಪಾಲಕೃಷ್ಣವಿಠ್ಠಲನೆ ನೀ ಕಾಪಾಡು ಕಾಪಾಡು ಜಗದ್ರಕ್ಷಕ ಹರಿಯೆ 5
--------------
ಅಂಬಾಬಾಯಿ
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
(ಋ) ವಿಶೇಷಸಂದರ್ಭದ ಹಾಡುಗಳು ಬರಗಾಲವನ್ನು ಕುರಿತ ಹಾಡುಗಳು ವನಜಭವಾದಿಗಳನು ಪಾಲಿಪ ದೇವ ಪ ಸದಯ ನೀನಾದರೆ ಬದುಕಿಸಿ ಪಶುಗಳ ಮುದವನು ತೋರಿಸು ಮಧುಸೂಧನ ಈಗ 1 ಇದಿರಿಗೆ ನೋಡಲಾರದೆ ನಿನ್ನ ದೂರಿದೆ ಇದು ಒಂದು ತಪ್ಪು ಎನ್ನದು ಎಂದು ಮನ್ನಿಸು 2 ವಿಷದ ನೀರನು ಕುಡಿದಸುವನ್ನು ಕಳಕೊಂಡು ಪಶುಪಾಲರಿಗೆ ನೀನಸುವಿತ್ತು ಪೊರೆದೆ 3 ಹೊಟ್ಟಯೊಳಗೆ ಸತ್ತು ಹುಟ್ಟಿದ ಶಿಶುವನು ಮುಟ್ಟಿ ಜೀವವನಿತ್ತೆ ಕೃಷ್ಣಾಕೃಪಾಕರ 4 ಗುರುಸುತನನು ಯಮಪುರದಿಂದ ಕರೆತಂದ ಪರಮ ಶ್ರೀ ಪುಲಿಗಿರಿ ವರದ ವಿಠಲರಾಯ 5
--------------
ವೆಂಕಟವರದಾರ್ಯರು
(ಘಟಿಕಾಚಲದ ವಾಯುದೇವರನ್ನು ನೆನೆದು) ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ ತ್ರಿಜಗದ್ವಲಯವÀ ನಡಸುವಿ ಪ. ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ- ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ- ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ ತೋರುವೆಯೊ 1 ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ ಪರಿಹರಿಸದರನು 2 ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ ಮುಷ್ಟಿಯಿಂಧೆಂದಿಸಿ ಮೆರೆದನೆ 3 ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು ಧಾಮನಿರ್ಜರೋದ್ಧಾಮ ಸುಮಹಿಮ 4 ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ ವಾಸರ ಒಲುಮೆಯಿಂದಲುದಿಸಿ ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ ಘಟಿಕಾಚಲದಲಿ ನೆಲಿಸಿದೆ 5
--------------
ತುಪಾಕಿ ವೆಂಕಟರಮಣಾಚಾರ್ಯ
(ಮದ್ರಾಸಿನ ತಿರ್ವಳಕೇಣಿ ಪಾರ್ಥಸಾರಥಿ) ಏನು ಮಾಡಲಿನ್ನು ನೀನಲ್ಲದೆ ಯಾದಾರ ಬೇಡಲಿನ್ನು ಪ. ಮಾನಿನಿ ದ್ರೌಪದಿ ಮೊರೆಯಿಡುವುದ ಕೇಳಿ ಸಾರಥಿ ದೇವ ಅ.ಪ. ನೀನಿತ್ತ ಸೌಭಾಗ್ಯದ ಗರ್ವದಿ ಎನ್ನ ಧ್ಯಾನಾದಿಗಳ ಮಾಡದೆ ನಾನಾ ವಿಧದ ದುರ್ಮಾನುವಾದುದರಿಂದ ನೀನೆ ಸದ್ಗತಿಯೆಂದು ಧ್ಯಾನಿಸಿಲ್ಲಿಗೆ ಬಂದೆ 1 ಬಡತನದಿಂದಿರಲು ಸಕಲ ಸುರ- ರೊಡೆಯ ನೀ ಕೈ ಪಿಡಿದು ರೂಢಿ ಮದದಿ ನಿನ್ನನು ಬಿಟ್ಟು ಕಡೆಗೆ ನಿನ್ನಯ ಪಾದದೆಡೆಗೆ ಬಂದೆನು ದೇವ 2 ಪಶ್ಚಿಮ ವಾರಿಧಿಯ ತೀರದಲಾದ ದುಶ್ಚರಿತ್ರೆಯ ತಾಳದೆ ಆಶ್ಚರ್ಯತಮವಾದ ಸಚ್ಚರಿತ್ರನೆ ನಿನ್ನ ನೆಚ್ಚಿ ಬಂದಿಹೆನೊ ವಿಪಶ್ಚಿತರೊಡೆಯನೆ 3 ನಕ್ಷತ್ರಗಳಂದಿಂದಲು ಯೆನ್ನಪರಾಧ- ವಕ್ಷಯವಾಗಿರಲು ಅಕ್ಷರಿ ವಂದ್ಯ ನೀ ಲಕ್ಷ ಬಿಡುವುದೆ ಕ- ಟಾಕ್ಷದಿಂದಲಿ ನೋಡಿ ರಕ್ಷಿಸು ಕರುಣದಿ 4 ಎಷ್ಟು ಕರ್ಮಿಯಾದರು ನಿನ್ನಲಿ ಮನ- ವಿಟ್ಟು ಬಂದಿರುವೆನಲ್ಲ ದುಷ್ಟಮರ್ದನ ಶಿಷ್ಟರಕ್ಷಣ ಭಾಜಕ ಜ- ನೇಷ್ಟದಾಯಕ ಸೃಷ್ಟ್ಯಾದೃಷ್ಟಕರ್ತ 5 ನಟನ ಮಾಡುವ ಬೊಂಬೆಯ ಪೋಲುವ ಯೆನ್ನ ಹಟದಿಂದ ದಣಿಸುವುದೆ ವಟಪತ್ರ ಶಾಯಿ ಧೂರ್ಜಟಿ ವಂದ್ಯ ಅಂಜಲಿ ಪುಟನಾಗಿ ಬೇಡುವೆ ಘಟಿಸೊಭಿಲಷಿತವ 6 ಎಂದಿಗಾದರು ನಿನ್ನಯ ಪಾದಯುಗಾರ- ವಿಂದ ದರ್ಶನವಾಗಲು ಭವ ಸಿಂಧುವ ದಾಟುವೆ- ನೆಂದು ಬಂದಿರುವೆ ಸನಂದನಾದಿ ವಂದ್ಯ 7 ಕೂರ್ಮ ವರಾಹ ನಾರಸಿಂಹ ವಾಮನ ಶ್ರೀ ಭಾರ್ಗವ ರಾಮಕೃಷ್ಣ ಬೌದ್ಧ ಕಲ್ಕಿಯಂಬ ದಿವ್ಯ ನಾಮಗಳನು ಬಿಟ್ಟು ಕಾಮಲಾಲಸನಾಗಿ 8 ಒಂದು ನಿಮಿಷವಾದರು ತತ್ವಾಧಾರ ವಿಂದ ದರ್ಶನ ಮಾಡಲು ಹೊಂದಿದಘಗಳೆಲ್ಲ ಬೆಂದು ಹೋಗುವುದೆಂದಾ- ನಂದತೀರ್ಥಚಾರ್ಯರೆಂದ ನುಡಿಯ ನಂಬಿ 9 ದ್ವೇಷಿ ಮಾನವರ ಮುಂದೆ ನಾನಾ ವಿಧ ಕ್ಲೇಶವ ತಾಳ್ದೆ ಹಿಂದೆ ಘಾಸಿಯಾಗಿ ನಾನಾ ದೇಶ ದಾಟಿ ಬಂದೆ ಮೀಸಲಾದೆ ನಿನ್ನ ದಾಸ ದಾಸ್ಯನೆಂದೆ 10 ಜನರೊಳು ಪ್ರಮಿತನಾಗಿ ಬಾಳಿದ ಮಾನ- ವನು ಮಾನಹೀನನಾಗಿ ತನುವ ಪೊರೆದನತಿ ಘನಕ್ಲೇಶವೆನುತ ಅ- ರ್ಜುನನಿಗೆ ಉಪದೇಶವನು ಪೇಳಿದವ ನೀನೆ 11 ಯುಕ್ತಿ ಒಂದನು ಕಾಣೆನು ದೇಹದಿ ದೃಢ ಶಕ್ತಿಯಿಲ್ಲದವ ನಾನು ಮುಕ್ತಾಶ್ರಯ ಸರ್ವ ಶಕ್ತಿ ನೀನಿಹ ಪರ- ಭುಕ್ತಿ ಮುಕ್ತಿದನೆಂಬ ವಿರಕ್ತಿಯಿಂದಲಿ ಬಂದೆ 12 ಕಾಸೆಲ್ಲ ವ್ಯಯವಾಯಿತು ಎನಗೆ ಪರದೇಶವಾಸವಾಯಿತು ಆಸೆ ಬಿಡದುದರ ಘೋಷಣೆಗಿನ್ನವ- ಕಾಶವೊಂದನು ಕಾಣೆ ಶ್ರೀಶ ನೀನರಿಯೆಯ 13 ನಿಲ್ಲಲಾಶ್ರಯವನು ಕಾಣೆ ಪೋಗುವೆನೆಂದ- ರೆಲ್ಯು ಮಾರ್ಗವನು ಕಾಣೆ ಬಲ್ಲಿದ ವೈರಿಗಳಲ್ಲಿ ತುಂಬಿಹರರಿ- ದಲ್ಲಣ ನೀ ಎನ್ನ ಸೊಲ್ಲ ಲಾಲಿಸು ಕೃಷ್ಣ 14 ಅಶನವಸನ ಕಾಣದೆ ದೇಶವ ಸುತ್ತಿ ಬಸಿದು ಬೆಂಡಾಗಿಹೆನು ಉಶನಾಂiÀರ್i ಶಿಷ್ಯನ ವಶದಿಂದೆತ್ತಿ ಪೃಥ್ವಿಯ ದಶನಾಯಕರಿಗಿತ್ತ ಅಸಮಸಾಹಸ ದೇವ 15 ಮಾಡಿದಪರಾಧಕೆ ಮಾನಹಾನಿ ಮಾಡಿದುದು ಸಾಲದೆ ಬೇಡುವೆ ದೈನ್ಯದಿ ಪಾಡುವೆ ಮಹಿಮೆಯ ರೂಢಿಯೊಳಗೆ ದಯಮಾಡು ಇನ್ನಾದರು 16 ಇನ್ನಾದರೂ ಮನದಿ ಪಶ್ಚಾತ್ತಾಪ ವನ್ನು ತಾಳೊ ದಯದಿ ಕಣ್ಣ ಕಟ್ಟಿ ಕಾಡಿನೊಳು ಬಿಟ್ಟ ತೆರದೊಳಿಂ- ತೆನ್ನನು ಬಳಲಿಪದನ್ಯಾಯವಲ್ಲವೆ 17 ನಷ್ಟವೇನಹುಣನು ಎನ್ನಲಿ ಕ್ರೋಧ ಬಿಟ್ಟು ಬಾಧಿಸುತ್ತಿರಲು ಕೃಷ್ಣ ನೀ ಕರುಣದಿ ಕಷ್ಟ ಬಿಡಿಸಿ ಕಡೆ ಗಿಷ್ಟು ತಾತ್ಸಾರದಿಂದ ಕಷ್ಟಗೊಳಿಸಿದೆ 18 ಇಂದ್ರಾದಿ ಸುರರುಗಳು ಕೆಲವು ಕಾಲ ನೊಂದು ಭಾಗ್ಯವ ಪಡದು ಇಂದಿರೇಶ ನಿನ್ನ ಬಂಧಕ ಶಕ್ತಿಯಾ ನಂದ ತಿಳಿದಂತೆ ಮಂದನಾನರಿವೆನೆ 19 ಆನೆಯ ಭಾರವನು ಹೊರಲು ಸಣ್ಣ ಶ್ವಾನ ಸಹಿಸಲಾಪದೆ ದೀನ ಮಾನವನೆಂದು ಧ್ಯಾನಿಸಿ ಮನದಲಿ ಘನ್ನ ದುಖ್ಖವ ಕಳೆಯಾನಂಥ ಮೂರುತಿ20 ನೀನಿತ್ತ ಮಾನವನು ನೀ ಕಳದುದ ಕಾನು ಮಾಡುವದೇನಯ್ಯ ದಾನವಾರಿ ಸುರಧೇನು ನಿನ್ಡಿಗಳ ಧ್ಯಾನ ಮಾಡುತಲಿ ಸುಮ್ಮಾನದಿಂದಿರುವೆನು 21 ಸಾಕು ಸಾಕು ಮಾಡಿದೆ ಎನ್ನನು ಬಹು ನೀಕರಿಸುತ ದೂಡಿದೆ ಬೇಕಾದರೆ ಭಕ್ತ ನೀ ಕಪಾಲನ ಪ- ರಾಕೆಂಬ ಬಿರುದಿಂದ ಸಾಕುವದುಚಿತವೆ 22 ಅಂಬರೀಷವರದ ಸ್ವಭಕ್ತ ಕು- ಟುಂಬಿಯಂಬ ಬಿರುದ ನಂಬಿದ ಮೇಲೆನಗಿಂಬುದೋರದೆ ವೃಥಾ ಡಂಬರವ್ಯಾಕಿನ್ನು ಶಂಬರಾರಿಯ ಪಿತ 23 ಹಂಸವಾಹನ ಜನಕ ದಾಸಮದ- ಭ್ರಂಶಕನೆಂದನ- ಕ ಸಂಶಯವಿಲ್ಲದೆ ತಿಳಿದೆನು ಮಾತುಳ ಕಂಸ ಮರ್ದನ ವಿಪಾಂಸ ಶೋಭಿತ ದೇವ 24 ತರಳ ಪ್ರಹ್ಲಾದ ಧ್ರುವಾದಿಗಳನೆಲ್ಲ ಪೊರೆದನೆಂಬ ಕಥೆಯ ಹಿರಿಯರು ಪೇಳ್ವರು ಭರವಸೆ ಎನಗಿಲ್ಲ ಸಿರಿನಲ್ಲ ನೀಯೆನ್ನ ಬರಿದೆ ಬಿಟ್ಟದ ಕಂಡು25 ವಿಜಯಸಾರಥಿ ನಿನ್ನಯ ಮೂರ್ತಿಯ ಕಂಡು ಭಜಿಸಿದ ಮೇಲೆನ್ನನು ವಿಜಯ ಪೊಂದಿಸದಿರೆ ತ್ರಿಜಗವು ನಗದೇನೊ ಭುಜಗ ಭೂಷಣ ವಂದ್ಯ ದ್ವಿಜರಾಜ ಗಮನನೆ 26 ಕುಂದಣ ವರ್ಣವಾದ ಕೇತಕಿಯನು ಗಂಧಕೆ ಮರುಳನಾಗಿ ಬಂದು ಕುಸುಮಧೂಳಿಯಿಂದ ಲಂಡನಾದ ತುಂದಿಲೋದರ ಮಿಳಿಂದನಂದದಿ ಸಿಕ್ಕಿ 27 ಬೇಡುವದೇನೆಂದರೆ ನಿನ್ನನು ಧ್ಯಾನ ಮಾಡಿ ಪಾಡುವ ಭಾಗ್ಯವ ನೀಡು ನೀಚರನೆಂದು ಬೇಡದಂದದಿ ಮಾಡು ರೂಢಿಯೊಳಗೆ ದಯಮಾಡು ನೀ ನಿರುಪದಿ 28 ಇನ್ನು ತಾ ತಾಳಲಾರೆ ಕ್ಷಣೆ ಕ್ಷಣೆ ನಿನ್ನ ಪೊಗಳಲಾರೆ ಪನ್ನಗಾಚಲವಾಸ ಪರಮ ಪುರುಷ ಪ್ರ- ಸನ್ನ ವೆಂಕಟೇಶ ಪಾಲಿಸು ಕೃಪೆಯಿಂದ 29
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ರಾಘವೇಂದ್ರ ಪ್ರಾರ್ಥನೆ) ರಾಘವೇಂದ್ರ ತೀರ್ಥ ಬೋಧಿಸು ಭಾಗವತಗತಾರ್ಥ ರಾಘವ ಪಾದಾಂಬುಜ ಲಬ್ದಾರ್ಥ ಸರಾಗದಿ ಪಾಲಿಸು ನಿಜಪುರುಷಾರ್ಥ ಪ. ತುಂಗಾ ತಟವಾಸಾ ರಾಘವಶಿಂಗನ ನಿಜದಾಸ ಪಂಗುಬಧಿರ ಮುಖ್ಯಾಂಗ ಹೀನರ- ನಪಾಂಗನೋಟದಿ ಶುಭಾಂಗರ ಮಾಡಿಪ 1 ಪಾದೋದಕ ಸೇವಾರತರಿಗಗಾಧ ಫಳಗಳೀವ ಬೂದಿ ಮುಖದ ದುರ್ವಾದಿಗಳೋಡಿಸಿ ಸಾಧುಜನರಿಗಾಲ್ಹಾದ ಬಡಿಸುತಿಹ 2 ಸುಜನ ಶಿರೋಮಣಿಯೆ ವಿಜಯದನೆನಿಸುವ ದ್ವಿಜಕುಲನಂದನ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ಸುಜ್ಞಾನೇಂದ್ರ ಪ್ರಾರ್ಥನೆ) ಪಾದ ಸ್ಮøತಿಯಿಂದಾಯ್ತೆನಗಾನಂದ ಅತಿಶಯ ತೋರಿಲ್ಲಿಗೆ ಬಂದ ಪ. ಮೂರ್ತಿಯನು ಕೀರ್ತಿಯನು ತಾ ಕರುಣಿಸಿಹನು ಕ್ಷಮಿಸುವನಖಿಳಪರಾಧವನು 1 ಗೆಲುವನು ವಾದಿಗಳ ಸ್ತೋತ್ರಗಳ ಸಾದರದಲಿ ತಾ ಮಾಡುತ ನಶ್ವರ ಬೋಧರ ಶಾಸ್ತ್ರದ ಕರ್ಮಗಳ ಪಾದಾನತರಿಗೆ ಪರಮಕರುಣದಿಂದೋದಿಸಿ ತಿಳಿಸುವ ಧರ್ಮಗಳ 2 ಅಜಭವನುತ ದಿಗ್ವಿಜಯ ರಾಘವನ ಪದಪಂಕಜ ಭೃಂಗಾಯತನ ಭಜಿಸಿರೊ ಭಕ್ತಜನಾರ್ದನನ ನಿಜ ಜನರಿಗೆ ಸುರಕಲ್ಪತರುವೋಲಿದಿರಲಿ ತೋರ್ಪ ಶುಭಾಕೃತನ ಸದ್ವಿಜಜನ ಮಂಡಲಮಂಡಿತನ 3
--------------
ತುಪಾಕಿ ವೆಂಕಟರಮಣಾಚಾರ್ಯ
|| ಶ್ರೀ|| ಪದ್ಯ|| ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ ಅಭಯದ ಕೂಟ್ಟಂದಳೀಪರಿಯ||1 ಪದ ರಾಗ:ಕಾನಾಡ ಆದಿತಾಳ ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ|| ನೀಡುವೆ ನಾನು|| ಪ ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು|| ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ ಅನುಮಾನವ ಬಿಟ್ಟು|| 1 ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ|| ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು ಕಷ್ಟಗಳುಂಟೆ|| 2 ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು|| ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು ಚಿಂತೆಯನು ಬಿಟ್ಟು|| 3 ಆರ್ಯಾ ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ ಮಾತಾಡಿದಳು ಹೀಗೆಂದು|| 1 ಪದ ರಾಗ:ಮುಖಾರಿ ಆದಿತಾಳ ತುಳುಜಾದೇವಿಯೇ|| ಪ ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ|| ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1 ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2 ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ ಚಿಂತಿಯು ಮಾಡಬ್ಯಾಡಂತಿಯೇ|| ಎಂಥಾಕಿ ನೀನು ದಯಾವಂತಿಯೇ || ವರದಾ ನಂತಾದ್ರೀಶನ ಸಖನ ಕಾಂತಿಯೇ|| 3 ಆರ್ಯಾ ಕರ ಮುಗಿದು|| 1 ಪದ ರಾಗ :ಆನಂದ ಭೈರವಿ ವರಕೊಡು ಎನಗಿದು ತ್ವರಿತದಿ ತಾಯಿ|| ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ ಮಂದ ಮತಿಯು ದೈತ್ಯ ಬಂದಿಹನೋಡು|| ಕೊಂದವನ ಎನಗಾನಂದವ ನೀಡು 1 ಮಾಡುವ ತಪಸ್ಸಿಗೆ ಕೇಡು ತಂದಿಹನು|| ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2 ಪತಿಯ ಸೇವಿಸುವಂಥ ಸತಿಯು ಬೇಡುವೆನೂ|| ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3 ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1 ಮಾಡಿದಳು|| ಹುಂಕಾರ|| 2 ಒಗೆದಾನು ಯುದ್ಧದಲ್ಲಿ ಜಾಣಾ|| 3 ಸಾರಶಕ್ತಿಯನು ತೆಗೆದಾ ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4 ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು|| ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ ನಿಂತಾಗ ಮುಂದ ಖ್ಯಾಕರಿಸಿ|| 5 ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6 ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು| ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7 ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8 ಅವನ ಮುರದೊತ್ತಿ 9 ಕಡೆದಳು ಆಗವನ ಬಿಲ್ಲುಬಾಣದಲೆ|| 10 ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ ಬಂತು ಭೂತಗಳಿಗೆಲಾ||್ಲ 11 ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ ಕಡೆದಳು ಮತ್ತವನ ಶಿರವು ಖಡ್ಗದಲೇ|| 12 ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13 ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ ಓಡಿ xಟ್ಟನೆ ಹಿಡಿದರಾಗ|| 1 ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು|| ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2 ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3 ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು|| ಯಮದೂತರಸಮರವರು|| 4 ರಕ್ತ ಪಾನವ ಮಾಡಿದರು|| 5 ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು| ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6 ಹಾಕಿಕೊಂಡು ಕುಣಿದಾಡಿದರು||7 ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು|| ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8 ಅವನಂತವ ಅರಿಯೇ ನಾನು|| 9 ಆರ್ಯಾ ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಅಗಣಿತ ಬಂಟ ನೆನೆವರಿಗೆ ನಂಟಪ. ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ 1 ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ 2 ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ 3 ಮೋದ 4 ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ 5
--------------
ವಾದಿರಾಜ
ಅಯ್ಯಾಜಗದಯ್ಯಾ ಪ ಅಯ್ಯಾ ಜಗದಯ್ಯಾ ಜೀಯಾನಂದ ನಿಮ್ಮ ಮಹಿಮೆಯ ಅಜ ಭವಾದಿಗಳಿಗೆ ತಾಯಿಯ ಮರೆವ ಶಿಶುವಿನ ಪರಿದಣಿದೆನಾ ಪ್ರೀಯದಲಿ ಸಲಹವು ಅವಗುಣ ನೋಡದೇ 1 ಧರೆಯೊಳಗ ಸಕಲಪತಿತರನ್ನು ಉದ್ಧರಿಸಲ್ಕೆ ಪರಬೊಮ್ಮತಾನೊಂದು ರೂಪನಾಗಿ ಕರುಣದಿಂದಲಿ ಅವತರಿಸಿದನೆಂದೆನ್ನದೆ ನರನೆಂದು ಬಗೆವವನು ಗುರುತಲ್ಪಕಾ2 ಸಾಕಾರ ನಿಮೈಲನಾಗಿ ಕ್ರೀಡಿಸಿದರೆಯು ಏಕ ಮೇವಾದ್ವಿತಿಯು ಶೃತಿಯೆನುತಿರೇ ಕಾಕು ಬುದ್ದಿಯಲಿ ಪರತರ ವಸ್ತು ನಿಮಗೆಂದ ಧಿಕ ಉಂಟೆಂಬುವ ಸುರಾಪಾನಿಯು 3 ಗಗನದಂದಲಿ ಸಕಲಾತೀತನಾಗಿನೀ ಮಿಗಿಲೆನಿಸಿ ಸಂಸಾರ ಸ್ಥಿತಿಯಲಿರಲು ಅಗಣಿತತೆ ಗುಣಬಂದನವ ಕಲ್ಪಿಸುವ ಜಗದೊಳಗ ಬ್ರಹ್ಮತ್ಯಕಾರನವನು 4 ಎನಗ ತಾರಕ ವಸ್ತು ಇದೆಯೆಂದು ನಿಶ್ಚೈಸಿ ತನು ಮನರ್ಪಿಸಿ ನಿಮ್ಮ ಚರಣಾಬ್ಜಕೆ ಘನನಂಬಿ ಶರಣವನು ಪೊಕ್ಕುನೆಲೆಗೊಂಬುದಕೆ ಅನುಮಾನ ವಿಡಿವವನ ಸ್ವರ್ಣಸ್ತೇಯಾ5 ಇಂತು ಪರಿಯಾದಾ ನಾಲ್ವರ ಸಂಗಡದಲಿ ಅ ತ್ಯಂತ ಹರುಷದ ತಾವ ಬಾಳುತಿಹನು ಅಂತಿಜನ ಸಮನಾದ ಸರ್ವದ್ರೋಹಿಯವನು ಸಂತತ ಬುಧ ಜನರು ಯನುತಿರುವರು 6 ಎಂದೆಂದು ಈ ಪಂಚ ಮಹಾಪಾತಕಿಳಗಳ ಮುಖ ತಂದೆ ತೋರಿದಿರೆನ್ನ ನಯನಗಳಿಗೆ ಎಂದು ಬಿಡದೇ ಕಾಯೋ ಮಹಿಪತಿ ಸುತ ಪ್ರಾಣ ಛಂದದಲಿ ಮಂದಮತಿ ತನ ಹರಸಿಯನ್ನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅರಿವರಾರೆಲೋ ನಿನ್ನ ಅಗಮ್ಯ ಚರಿತ ಚರಣದಾಸರ ಪರಮ ಆನಂದಭರಿತ ಪ ದೇವರುಂಟೆಂಬ ಕೆಲವಾಧಾರಪುಟ್ಟಿಸಿದಿ ದೇವರಿಲ್ಲೆಂಬ ಹಲವು ಆಧಾರ ತೋರಿಸಿದಿ ಜೀವಬ್ರಹ್ವೈಕ್ಯೆಂಬುಪಾಯಗಳ ಸ್ಥಾಪಿಸಿದಿ ಆವರೀತಿಗು ಕಾವದೇವ ನಾನೆಂದಿ 1 ಜೀವವೆ ಮಾಯೆಯೆಂದು ಕಾಯವೆ ಕರ್ಮವೆಂದು ಭಾವಿಗಳ ಕೈಯಿಂದ ಬರೆಸಿದೆಯೋ ನಿಂದು ಜೀವಜೀವರಲಿ ಜಡ ಜೀವ ಬೇರೆನಿಸಿದಿ ಜೀವಜೀವರ ಜೀವ ಚೈತನ್ಯರೂಪ 2 ವೇದ ಸುಳ್ಳೆಂಬ್ಹಲವು ವಾದಿಗಳ ನಿರ್ಮಿಸಿದಿ ವೇದ ಅಹುದೆಂಬ ನಿಜವಾದಿಗಳ ಪುಟ್ಟಿಸಿದಿ ನಾದಬ್ರಹ್ಮವುಯೆಂಬ ಹಾದಿ ರಚಿಸಿದಿ ಸರ್ವಸಾಧನಕೆ ಒಲಿದು ಪ್ರಸನ್ನ ನೀನಾದಿ 3 ಬಗೆಬಗೆಯ ವಚನದಿಂ ಬಗೆಬಗೆಯ ನಿಗಮದಿಂ ಬಗೆಬಗೆಯ ರೂಪದಿಂ ನಿಗವಿಟ್ಟು ಸರ್ವರನು ಬಗೆಗೊಂಡು ಬೆಳಗುವೆಯೊ ಜಗಭರಿತನಾಗಿ 4 ಅವಸಾಧನವೊಲ್ಲೆ ಜಾವಜಾವಕೆ ನಿಮ್ಮ ದಿವ್ಯಸ್ಮರಣೆಯ ಎನ್ನ ಭಾವದೊಳು ನಿಲಿಸಿ ದೇವದೇವರ ದೇವ ದೇವ ಶ್ರೀರಾಮ ತವ ಸೇವಕನೆನಿಸೆನ್ನ ಕಾಯೊ ಕೈಪಿಡಿದು 5
--------------
ರಾಮದಾಸರು
ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ ಧ್ರುವ ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1 ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2 ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು