ಒಟ್ಟು 11 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಬ್ಬನೆ ದಾಸ ಹುಟ್ಟಿದವನಿವ | ನೊಬ್ಬನೆದಾಸ ಪ ಸೂರಿ ತಾಯಿತಂದೆಗಳಿಂದಾಯಿತು ಅ.ಪ ನಾಲ್ಕು ವರ್ಷದವರೆವಿಗೂ ಮಾತಾಪಿತರು ಪಾಲನೆಗೈದರು ಬಳಿಕ ಕಾಲಾಧೀನವನೈದಿದರವರಾ ಮೇಲೆ ನಡೆದ ಕಥೆಯನು ಬಿನ್ನೈಸುವೆ 1 ದ್ವಾದಶ ವರುಷ ಪರಿಯಂತವು ಮಾತುಳನ ಗೃಹದಿ ಬೆಳೆದು ಪಾದವೂರದೆ ದೇಶವÀ ತಿರುಗುತ- ಲಾದುದು ಇಪ್ಪತ್ತುನಾಲ್ಕು ವರುಷವು 2 ಶ್ರೀರಮಣ ಗುರುದ್ವಾರದಲಿ ಇಪ್ಪತ್ತು ಮೂರನೆಯ ವರುಷದಲಿ ಸಾರವ ತಿಳುಹಿಸಿ ಅನುಗ್ರಹಿಸಿದನ- ಪಾರ ಸುಗುಣನಿಧಿ ಕೈಪಿಡಿದೆನ್ನನು 3 ಹರಿನಾಮಬಲದಿಂದಲಿಪ್ಪತ್ತೈದು ವರುಷದ ಮೊದಲು ಸುಕೃತದಿಂ ಹರಿಸೇವೆಗಳಿಂ ನೆರೆದ್ರವ್ಯಗಳಿಸಿ ನಲವತ್ತು ವರುಷವಾಯಿತು 4 ನಲವತ್ತೊಂದನೆ ವರ್ಷಮೊ- ದಲು ಬಲು ಜನಗಳ ಬೇಡಿ ಕಳೆದಿತು ಐವತ್ತಾರು ವರ್ಷಗಳು 5 ಮಧ್ವರಾಯರೆ ನಮ್ಮ ತಂದೆಯು ಮಧ್ವರಾಯರೆ ನಮಗೆ ಗುರು ಮಧ್ವರಾಯರೆ ಉದ್ಧಾರಕರ್ತರು ಪದ್ಮನಾಭಗತಿ ಪ್ರೀತ್ಯಾಸ್ಪದರು 6 ಬೆಂಡಾಗಿರುವುದು ಶರೀರ- ಧರ್ಮವು ಬೇರೊಬ್ಬರ ಕಾಣೆ ಉಂಡುಟ್ಟು ತೆಗೆಯುವ ವಿಷಯದಿ ಊರಿನವರ ದೂರುವುದಿನ್ಯಾಕೆ 7 ಹರಿನಾಮದ ಬಲದಿಂದ ಗಳಿಸಿದುದು ಹರಿಗೆ ಪ್ರೀತಿಯಾಯಿತು ಪರರು ವ್ಯರ್ಥವಾಗಸೂಯೆ ಪಟ್ಟರೆ ದುರಿತವ ಪ್ರಯೋಜನವು ಸತ್ಯವಿದು 8 ಏನು ಕೋರುವುದು ಸಾಕು ಸೀತಾಪತಿ ಗುರುರಾಮವಿಠ್ಠ- ಲನ ಸೀಮೆ ಈಗಲು ಮುಂದಕು ಇರಬೇಕು9
--------------
ಗುರುರಾಮವಿಠಲ
ಜನ್ಮ ಸಫಲ ಕಾಣಿರೋ ನಮ್ಮ ಗುರು ವಾದಿರಾಜರಾಯರ ಕಂಡು ಜನ್ಮ ಸಫಲ ಕಾಣಿರೋ ಪ ಯುಕ್ತಿ ಮಲ್ಲಿಕೆಯೆಂಬ ಗ್ರಂಥ ಮಾಡಿಹರು ಮತ್ತೆ ಮುತ್ತಿನ ಸಿಂಹಾಸನವನೇರಿಹರು ಮತ್ತೆ ದುರ್ವಾದೀಭಗಳಿಗೆ ಮೃಗೇಂದ್ರರು ಸೂತ್ರನಾಮದಿ ಮುಂದೆ ಮೆರೆವರು 1 ದಾಸಕೂಟಗಳಲ್ಲಿ ರತ್ನದಂತಿಹರು ಭಾಸುರಕಾಯದಿ ನೂರ ಇಪ್ಪತ್ತು ವರ್ಷಗಳೊಳಗಿದ್ದು ಮೆರೆದವರು 2 ಮೂಜಗದೊಳಗಿಂಥ ಗುರುಗಳೆಲ್ಲಿಹರು ಕಂಜಸುತನ ಪದವೇರುವವರು ರಾಜೇಶ ಹಯಮುಖ ಕಿಂಕರಾಗ್ರಣಿಗಳು ರಾಜಿಪ ಶ್ರೀಸೋದಾಪುರದೊಳಗಿಹರು 3
--------------
ವಿಶ್ವೇಂದ್ರತೀರ್ಥ
ನದಿಗಳ ಸ್ತೋತ್ರ ಕಾವೇರಿ ಕಲುಷ ಸಂಹರಳೆ ಕಾವೇರಿ ಪ ವಿಧಿ ಸುತೆ ನಮ್ಮ | ಕಾವುದು ಬಿಡದಲೆ ಅ.ಪ. ಅಮಿತಾಭ ಕವೇರ ನೃಪನು | ಪುಣ್ಯಶಮದಮದಿಂದಯುತನು | ಸಾರಿಹಿಮನಗ ತಪ್ಪಲುಗಳನು | ದಿವ್ಯಸಮಶತದಶ ವರ್ಷಗಳನು | ಆಹಸುಮನ ಸೋತ್ತಮನಾದ | ಬೊಮ್ಮನ ಧೇನಿಸಿಅಮಮಸುಘೋರವು | ವಿಮಲ ತಪವ ಗೈದ 1 ಬೊಮ್ಮ | ಅಚ್ಚ್ಯುತ ಮಾಯ ತನ್‍ಇಚ್ಛೆಯ ಸುತೆ ನಿನ | ಮೆಚ್ಚು ಪುತ್ರಿಯಹಳು 2 ಸ್ಮರಣೆ ಮಾತ್ರದಿ ವಿಷ್ಣುಮಾಯಾ | ದಿವ್ಯತರುಣಿ ರೂಪದಿ ಬ್ರಹ್ಮರಾಯ | ನೆದುರುಕರವ ಮುಗಿದು ಪೇಳು ಜೀಯಾ | ಎನೆಬರೆದನಾ5ದು ಕವೇರ್ಕನ್ಯಾ | ಆಹಸರಿತು ರೂಪದಿ ಮೋಕ್ಷ | ವg್ವ5ರ ವಹುದು ನೀಸರುವ ತೀರಥ ಮಯಿ | ಪರಿವುದು ಈ ಪರಿ 3 ಎರಡು ಅಂಶವು ನಿನಗಿಹುದೂ | ಒಂದುಸರಿತಾಗಿ ಪ್ರವಹಿಸುವೂದು | ಮತ್ತೆತರುಣಿ ರೂಪದಿ ಪತ್ನಿಯಹುದು | ಮುನಿವರ ಕುಂಭ ಸಂಭವಗಹುದು | ಆಹಕರೆಸಿ ಲೋಪಾಮುದ್ರೆ | ಮೆರೆವುದು | ಪತಿವ್ರತೆಶಿರೋಮಣಿ ಎನಿಸಿ ನೀ | ಮೆರೆವುದು ಭುವಿಯಲ್ಲಿ 4 ವರವಿತ್ತು ಮರೆಯಾಗೆ ಅಜನು | ನೃಪವರ ಸುತೆಯೊಡನೆ ಪೊರಟನು | ಕಾಲಕರ ಮರತನದಿ ಕಳೆದಾನು | ಮುಂದೆವ್ಯೆರಾಗ್ಯದಿಂ ಪೇಳಿದಾನು | ಆಹಪರಿಶುದ್ಧನಿಹೆ ನಿನ್ನ | ದರುಶನ ಮಾತ್ರದಿಪರಮ ನಿಷ್ಕಾಮದ | ಕರ್ಮವನೆಸಗುತ್ತ 5 ಹರಿಧ್ಯಾನದೊಳು ಬಲುರತ | ನಿರೆನರಪತಿ ಹರಿಲೋಕ ಗತ | ನಾಗೆತರುಣಿ ಕಾವೇರಿಯು ಸ್ಥಿತ | ಘೋರವರ ತಪವನ್ನು ಗೈಯ್ಯುತ್ತ | ಆಹಇg5ರಲೀ ಪರಿ ಪರಿ ಪರಿ ಬೇಡಿದಳ್ 6 ಸರಿದ್ರೂಪಳಾಗಿನ್ನು ಪರಿದೂ | ಹರಿಶರಣರ ಪಾಪವ ತರಿದೂ | ಮತ್ತೆಸರುವರ ತಾಪವ ಕಳೆದೂ | ಇನ್ನುಸರಿತು ಗಂಗಾದಿಗೆ ಹಿರಿದೂ | ಆಹವರ ಕೀರ್ತಿಯಿಂದಲಿ | ಮೆರೆಯುತ ಲೋಕೋಪಕರಳೆನಿಸಿ ಪ್ರವಹಿಸಿ | ಶರಧಿಯ ಸೇರ್ವಂಥ 7 ಸ್ಮರಣೆ ಮಾತ್ರದಿ ಪಾಪನಾಶಾ | ಮಾಳ್ಪಗಿರಿಯುಂಟು ಸಹ್ಯ ಆದ್ರೀಶ | ಅಲ್ಲಿತರು ರೂಪಮಲಕ ದೊಳ್ವಾಸಾ | ನಿನ್ನಚರಣ ಕಮಲವ ವಾಣೀಶಾ | ಆಹವಿರಜೆ ಪುಣ್ಯದ ಜಲ | ವರ ಕಂಬುವಿಲಿ ತುಂಬಿಎರದಭಿಷೇಚಿಸೆ | ಪರಿವುದದರ ಸಹ 8 ವರ ದತ್ತಾತ್ರೇಯ ನೆಂದೆನಿಸಿ | ತವಶಿರ ಸ್ಥಾನದಲ್ಲಿ ವಾಸೀಸಿ | ಎನ್ನಶರಣರ ಅಘಗಳ ಹರಿಸೀ | ನಿನ್ನವರ ದಕ್ಷಗಂಗೆಂದು ಕರೆಸೀ | ಆಹವರ ತವೋತ್ಸಂಗದಿ | ಶಿರವಿಟ್ಟು ಮಲಗುತ್ತಸರಿದ್ವರಳೆನಿಸುತ್ತ | ಮೆರೆಸುವೆ ನಿನ್ನನು 9 ಮಂಗಳ ಜಪತಪ ಸ್ನಾನ | ಮಿಕ್ಕಗಂಗಾದಿ ತೀರ್ಥಾನುಷ್ಠಾನ | ನಾಲ್ಕ್ಯುಗಂಗಳೊಳಗೆ ಮಾಳ್ಪ ನಾನಾ | ಕರ್‍ಮಂಗಳ್ತವೋತ್ಸುಂಗ ಶಿರಸ್ಥಾನ | ಆಹಮಂಗಳಾಮಲಕ ಜಲಂಗಳಿಗ ಸಮ ಕ-ಳೆಂಗಳ್ಷೋಡಶಕ್ಕೊಂದಂಗ ಸರಿ ಬರೆದು 10 ದಾತ | ತನ್ನಕಾಮಂಡುಲಿನೊಳ್ ನಿನ್ನ ಧೃತ | ಆಹನೇಮದಿಂದೊಂದಂಶ | ಲೋಪಾ ಮುದ್ರೆಯು ಆಗಿಆ ಮಹ ಮುನಿಯನ್ನ | ಪ್ರೇಮದಿ ವರಿಸುವೆ 11 ವರವಿತ್ತು ಮರೆಯಾಗೆ ಹರಿಯು | ಅತ್ತವರ ಮುನಿ ತಪಸಿನ ಧಗೆಯು | ಕಂಡುಸುರಜೇಷ್ಠ ಅವನೆದುರು ಹೊಳೆಯು | ಆಗಬರೆದನು ಜೀವನ ಧೊರೆಯು | ಆಹಹೊರಲಾರದವ ತಾನು | ವರ ಸನ್ಯಾಸದಿ ಮನವಿರಸಿರುವುದು ನಿರಾ | ಕರಿಸುತ್ತ ಪೇಳ್ದನು 12 ಚಕ್ರಧರ | ತುಂಬಿದ ಮನದಿಂದಹಂಬಲಿಸಿ ಕೈಗೊಂಡು | ಬೆಂಬಿಡದೆ ಸಲಹುವ 13 ಮುನಿವರಗಸ್ತ್ಯನು ಅಜನ | ಮಾತಮನವಿಟ್ಟು ಕೇಳುತ್ತ ವಚನ | ಪೇಳ್ದಅನುಕೂಲ ಭಾರ್ಯಳಾಳ್ವುದನ | ಯೋಗಅನುಕೂಲಿಸುವುದೆಂಬ ಹದನ | ಆಹವನಜ ಗರ್ಭನು ತನ್ನ | ತನುಜೆಯ ಸುಕನ್ಯಾಮಣಿಯ ಕಾವೇರಿಯ | ವಿನಯದಿ ವರಿಸೆಂದ 14 ನಗ ಶೃಂಗದಿರಿಸುತ್ತಮಿಗೆ ಚೆಲ್ವ ಸರಿತಾಗಿ | ಪೋಗಲನುಗ್ರಹಿಸು 15 ಮೋದ ತಾಳುತ್ತಸುಗುಣೆಯ ಬೆಸಸೀದ | ನಗು ಮುಖದಿಂದಲಿ 16 ಹೊರ ಮುಖಳಾದಳ್ ಕಾವೇರಿ | ಮುನಿವರನ ಸತ್ಕರಿಸಲು ನಾರಿ | ದ್ವಿಜವರ ಪೇಳೆ ಬ್ರಹ್ಮಗನುಸಾರಿ | ಆಕೆವರಗಳ ಬೇಡಲು ಭಾರಿ | ಆಹಸುರಜೇಷ್ಠ ನ್ವೊರೆದಂತೆ | ವರಗಳ ನೀಯಲುಸುರಕನ್ಯಾಮಣಿಯಾಗ | ವರಿಸಿದಳಾ ಮುನಿಯ 17 ವಾಹನ ಪತ್ನಿ ಸೇರಿ | ಶಿರಿಕಂಸಾರಿ ಗರುಡನ್ನ ಏರಿ | ಕ್ರತುಧ್ವಂಸಿ ಉಮಾ ನಂದಿ ಏರಿ | ಇಂದ್ರಶಂಸಿ ಸೈರಾವತನೇರಿ | ಆಹಸಾಂಶರು ಯೋಗ್ಯ ನಿರಂಶರು ಸೇರಿ ಪ್ರ-ಶಂಸನ ಗೈಯುತ್ತ ವೈವಾಹ ನಡೆಸಿದರ್ 18 ಮದುವೆ ವೈಭವ ಪೇಳಲಾರೆ | ಜಗದುದಯಾದಿ ನಡೆಪರಿಹಾರೆ | ಹರಿಮುದ ಪೊಂದಲಿನ್ನೆದುರ್ಯಾರೆ | ಎಲ್ಲರ್ವೊದಗಿ ಆಶೀರ್ವದಿಶ್ಯಾರೆ | ಆಹವಿಧ ವಿಧ ದುಡುಗೊರೆ | ಅದ ಪೇಳಲಳವಲ್ಲಅದುಭುತ ಜರುಗಿತು | ಉದ್ವಾಹ ಕಾರ್ಯವು 19 ಗಮನ | ಮತ್ತೆಕಾವೇರಿ ಸಹ ಮುನಿ ಹಿಮನ | ಕೇಳ್ಕೆಭಾವಿಸುತಲ್ಲೆ ಕೆಲದಿನ | ಆಹಆವಾಸಿಸಿರೆ ಋಷಿ | ಸಾರ್ವರ ಮನ ತಿಳಿದುಆಹ್ವಾನ ವಿತ್ತಳು | ಸಹ್ಯಾದ್ರಿ ಸನಿಯಕ್ಕೆ 20 ಗಮನ | ಆಹಇಂಬಿಟ್ಟನ್ನೊಂದಂಶ | ಲೋಪಾಮುದ್ರೆಯು ಕುಂಭಸಂಭವ ಸಹ ಸಹ್ಯ ಅದ್ರಿಗೆ ಗಮಿಸಿದಳ್ 21 ಉತ್ತರ ಹಿಮನಗ ಬಿಡುತ | ವನಸುತ್ತುತ ವಿಂಧ್ಯ ಮೀರುತ್ತ | ಹಾಂಗೆಉತ್ತಮ ಸಹ್ಯಾಚಲೇರುತ್ತ | ಅಲ್ಯುನ್ನತ್ತ ಬ್ರಹ್ಮಗಿರಿ ಸಾರುತ್ತ | ಆಹಉತ್ತಮ ಕ್ಷೇತ್ರದಿ ಜತ್ತಾಗಿ ಕಮಂಡಲಒತ್ತಟ್ಟಿಗಿರಿಸುತ್ತ ಪತ್ನಿಗೆ ಬೆಸಸಿದರ್ 22 ಕಾಲ ಮುದದಿ ಕರಕದಿಂದಅದುಭೂತವೆನೆ ಸರಿದ್ವರಳಾಗಿ ಪ್ರವಹಿಸು 23 ಪರಿ ಕಾಲ ಸಮೀಪವಾಗಲು ಸುರಪ 24 ಹರಿ ಮನೋಭಾವಾನು ಸಾರಿ | ಮಳೆಗರೆಯಲನ್ಯತರುವ ಸಾರಿ | ಶಿಷ್ಯರುಗಳಾಶ್ರಯಿಸಲು ಮೀರಿ | ಕುಂಡಸರುವೆ ತೀರಥಗಳು ಉಸುರಿ | ಆಹಪರ್ವ ಕಾಲವು ಇದು | ಪೊರಮಡು ಕಾವೇರಿಪರಿವೆವು ನಿನ ಪಿಂತೆ | ತೀರ್ಥಗಳಗ್ರಣಿಯೆ 25 ವಿಧಿ ಬಂದ ಹಂಸವನೇರಿ | ಆವಮುದದಿಂದ ವನಗಳ್ ಸಂಚಾರಿ | ಇನ್ನುಅದುಭೂತಾಮಿತ ತೀರ್ಥ ಗಿರಿ | ಕಂಡುಒದಗಿ ಕರಕದ ಜಲ ಭಾರಿ | ಆಹಮುದದಿ ಮೀಯುತ ಜಪ ಅದುಭೂತಾಷ್ಟಾಕ್ಷರಪದುಮ ಸಂಭವ ಹರಿಧ್ಯಾನದಿ ರತನಾದ 26 ಮಂದ ಮಾರುತ ಬೀಸೆ ವಿಮಲ | ಧಾತ್ರಿಗಂಧ ವೆಂದೆನುತಲಿ ಬಹಳ | ಮುದದಿಂದೆಚ್ಚರಗೊಂಡು ಕಂಗಳ | ಮುಂದೆಸುಂದರಾಮಲಕಾ ಕೃತಿಗಳ | ಆಹಎಂದು ಕಾಣದ ದೃಶ್ಯ | ವೆಂದೆನುತಲಿ ಮನದಿಂದ ಧೇನಿಸೆ ಅದು | ಛಂದದಿ ಮರೆಯಾಯ್ತು27 ಸಿರಿ ಹರಿಯು | ಸಿರಿವತ್ಸಾಂಕಿತನು ಬಾಹು ದ್ವಿದ್ವಯು | ಇಂದಮೆಚು5Àೂಪವ ತೋರೆ ವಿಧಿಯು | ಆಹ |ಸಚ್ಚರಿತೆಯ ಪಾಡೆ | ನಿಚ್ಚಳಾಮಲಕದಉಚ್ಚರೂಪವ ಕಂಡು | ಅರ್ಚಿಸಿದನು ಬಹಳ 28 ಗಾತ್ರ ಪಾದ | ಬಿಸಜಗಳ್ವಂದಿಸಿಬಿಸಜ ಸಂಭವ ಗೈದ | ಅಸಮ ಸಂಪೂಜೆಯ 29 ಧಾತಾ ಸ್ವ ಕುಂಡಿಕಾಸ್ಥಿತ | ವಿಮಲ ತೀರ್ಥವು ವಿರಜೆಯಿಂ ಹೃತ | ಶಂಖಪೂರ್ತಿಸಿ ಪೂಜಾ ಪದಾರ್ಥ | ಪ್ರೋಕ್ಷಿಸಿಪೂತಾತ್ಮಾಮಲಕದಿ ಸ್ಥಿv5 ಆಹಶ್ರೀ ತರುಣೀಶನ | ದತ್ತಾತ್ರೇಯನ ರೂಪಖ್ಯಾತ ಪೂಜಿಸುತಿರಲಶರೀರ ವಾಕ್ಕಾಯ್ತು 30 ಪರಿ ಗೈಯ್ಯುವ ಭಾಮಾ ಮಣಿಕುರಿತು ಪೇಳಿತು ವಾಣಿ ನೇಮ | ನೀನುಶರಧೀ ಸೇರುವ ಮನೋ ಕಾಮಾ | ಆಹಪರಿಪೂರ್ಣವಹುದೀಗ | ವರ ತುಲಾಪರ್ವದಿಶರತ್ಕಾಲ ಮುಕ್ತಿದ | ಪರಿವುದು ಕಾವೇರಿ31 ತತುಕ್ಷಣ ಮುನಿಯ ಕಮಂಡ್ಲು | ದೊಳುಸ್ಥಿತ ಸರ್ವ ತೀರ್ಥಮಾನಿಗಳೂ | ಪೇಳೆತುತುಕಾಲ ಕವೇರ ತನುಜಳೂ | ಶೀಘ್ರಉತು ಪತ್ತಿ ತಾಳಿ ಪರಿದಾಳೂ | ಆಹಇತರ ತೀರಥಗಳು | ಸರಿತು ರೂಪದಿ ಹಿಂದೆಅತಿ ತ್ವರೆಯಲಿ ಪ್ರವ | ಹಿತರಾಗಿ ಪೋದರು 32 ಋಷಿವರ್ಯ ಸ್ನಾನವ ಮಾಡಿ | ಪರಿಕ್ಷಿಸಲಾಗ ವಿಸ್ಮಯ ಕೂಡಿ | ಶಿಷ್ಯರಿಗುಸರಲಾಕ್ಷೇಪದ ನುಡಿ | ಅವರುಸಿರಿದರ್ ಮಳೆಯ ಗಡಿಬಿಡಿ | ಆಹರಸ ರೂಪದಲಿ ಪರಿವ | ಅಸಮ ಪತ್ನಿಯ ಕೂಗೆಋಷಿಗೆ ಶಾಂತಿಯ ಸೊಲ್ಲ | ಒಸೆದು ಪೇಳಿದಳವಳೂ 33 ಸುರವರ ಪೂಜ್ಯ ಧಾತ್ರಿಯು | ಇನ್ನುತರುವು ಆ ಮಲಕದ ಬಳಿಯು | ತೀರ್ಥವರ ಶಂಖ ಸಂಜ್ಞಿತ ತಿಳಿಯು | ಇಲ್ಲಿವಿರಜೆಯ ದೊಂದಿಹ ಕಳೆಯು | ಆಹವರ ನಭೊ ಗಂಗೆಯು | ಸರಿ ಸಹ್ಯಾಮಲಕವುವರಣಿಸಲಳವಲ್ಲ | ಸರಿದ್ವರ ಮಹಿಮೆಯ 34 ಕೈವಲ್ಯ | ದಾತನ ಒಲಿಮೆಯು 35 ಗಂಗಾನದೀಗಗಳು ತಮ್ಮ | ಪಾಪಹಿಂಗಿಸಲೋಸುಗವಮ್ಮ | ತುಲಾಮಂಗಳ ಮಾಸದಲಮ್ಮ | ಒಂದುತಿಂಗಳಿಹರಿಲ್ಲಿ ಸಂಭ್ರಮ್ಮಾ | ಆಹಗಂಗೆ ದಕ್ಷಿಣಾಖ್ಯೆ | ಮಂಗಳೆ ಜನಗಳಘಂಗಳ ಕಳೆಯುತ್ತ | ತುಂಗೋಪಕಾರಿಯೆ 36 ಕಾವೇರಿ ಪ್ರವಹಿಸಿ ಭರತ | ವರ್ಷಪಾವಿಸುತಿಹಳು ತಾ ನಿರುತ | ಬಂದುಸೇವಿಸೂವರ ಪಾಪ ತ್ವರಿತ | ದೂರಗೈವಳೆಂಬುವದೆ ನಿಶ್ಚಿತ | ಆಹಈ ವಿಧ ಮಹಿಮೆಯ ಓವಿ | ಪಾಲಿಸಿದನು |ಶ್ರೀವರ ಶ್ರೀ ಗುರು | ಗೋವಿಂದ ವಿಠಲಯ್ಯ 37
--------------
ಗುರುಗೋವಿಂದವಿಠಲರು
ಮೊದಲನೇ ಅಧ್ಯಾಯ ಪಾತಿವ್ರತ್ಯ ಮಹಾತ್ಮೆ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ - ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ ಸಾಧನಕೆ ಗತಿಯ ಮಾಡುವ ಅವತಾರ ಲೀಲಾ 1 ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ 2 ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ ಕರ ಚರಣಾದ್ಯವಯವಕ್ಕೂ ಅವಗೂ ಅವನು ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ 3 ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ 4 ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ ಅನಂತರೂಪನು ಅನಂತಗುಣ ಕ್ರಿಯಾವಂತನು ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು 5 ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ 6 ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ 7 ಹಿಂದೆ ಬ್ರಹ್ಮದೇವರಾಜÉ್ಞಯಿಂ ಅತ್ರಿಋಷಿವರ್ಯರು ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ ಅದ್ಭುತ ತಪವಚರಿಸಿ ಜಗದೀಶ್ವರ ಸಮ - ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು 8 ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ ತರುವಾಯ ತಾನಿತ್ತ ವರವ ಒದಗಿಸಿದನು 9 ಭಾಗವತ ಈ ವಿಷಯ ಒಳಗೊಂಡು ಇಹುದು ಪತಿ ವೇದವ್ಯಾಸ ಸಂಕೃತ ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್ ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ 10 ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು ಶ್ರೀವರನ ಹಿತಾಜÉ್ಞಯಿಂ ಪ್ರಸನ್ನ ಶ್ರೀನಿವಾಸೀಯ ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ 11 ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ ಆಗಮವು ಒಳಗೊಂಡ ವಿಷಯಗಳು ಇವೆಯು ಕಾಯ ಶುದ್ಧಿಯಿಂ ಪಠಣೀಯವು 12 ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ ಕೋರಿ ಅವರ ಅಪ್ಪಣೆಯಿಂದ ಓದಬಹುದು 13 ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ ಪತಿ ಹೇಳಿದಂತೆ ನಡೆಯುವಳು 14 ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ 15 ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ ಕಟಿ ಸಮೀಪ ಹಾಹಾ 16 ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು 17 ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ ಪತಿ ಅಂತಸ್ಥ ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು 18 ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ 19 ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ 20 ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ 21 ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ ವಿಹಿತೋಪಚಾರ ಪೂಜಾದಿಗಳ ಮಾಡಿ ಆ ಸಾಧ್ವಿ ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ 22 ಸೂರ್ಯ ಉದಿಸುವದಕ್ಕೆ ಪತಿ ಬದುಕಿಸಲ್ಪಡುವನು ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ 23 ಸೂರ್ಯ ಮುನಿಶಾಪ ಫಲಿಸಿತು ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ 24 ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ 25 ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ ಏನು ವರ ಕೇಳಿದರೂ ಕೊಡುವವೆಂದು ಸುರಪ ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ ವಿಧಿ ಶಿವ ತನ್ನಲ್ಲವತರಿಸಲೆಂದಳು 26 ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು 27 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು 28 ಎರಡನೇ ಅಧ್ಯಾಯ ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು 1 ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು 2 ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ 3 ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ 4 ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು 5 ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ ಆದಿತ್ಯ ಸಹಸ್ರಾಮಿತ ಮಹೋತ್ಕøಷ್ಟ ತೇಜಃಪುಂಜ ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ 6 ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ 7 ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು 8 ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು 9 ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ - ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು 10 ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ 11 ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ 12 ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು ಶೀಲತಮ ವರವಾಯುವು ವರುಣನು ಬುಧಾದಿ ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು ಜಲಶಾಯಿ ನಾರಾಯಣ ಅವತಾರ ದತ್ತನಿಗೆ 13 ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ ಬಂದರೂ ಬಂದರೂ ಎಂದು ಕೂಗೆ ಋಷಿಕುವರರು ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ 14 ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು ಯೋಗಿ ಹೀಗಾದರೆ ಎನ್ನುತ ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ 15 ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ 16 ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್ ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್ ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ 17 ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರÀು 18 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು 19 -ಇತಿ ಎರಡನೇ ಅದ್ಯಾಯ ಸಂಪೂರ್ಣಂ - ಮೂರನೇ ಅದ್ಯಾಯ ಸಂಪತ್‍ಲಕ್ಷ್ಮೀ ವೃತ್ತಾಂತ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಸುರಪ ಜಂಭಾಸುರನಿಂದ ಅಪಜಯವ ಕೊಂಡು ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ ಶರಣು ಹೊಕ್ಕು ಸೇವಗೈಯಲು ಆಗ ಅವನನ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ತುಳಜಾ ಮಹಾತ್ಮೆ ಅಧ್ಯಾಯ ಒಂದು ರಾಗ:ಸೌರಾಷ್ಟ್ರ ತಾಳ:ತಿವಿಡೆ ಸಿರಿಯ ಸಹಿತಾಗಿರುವ ವೆಂಕಟಗಿರಿಯ ರಮಣನ ಮರೆತು ಎಲ್ಲವನು|| ಚರಕೆರಗುವೆನು|| 1 ಧರೆಯೊಳಗವನ ಮೆಟ್ಟಿ ಹಾರುವ ಹಿರಿಯ ಕವಿಗಳಿಗೆಲ್ಲಾ ನಾನೇ ಕಿರಿಯನೆಂದೆನಿಸಿ ಅವರನು ಮರೆಯದಲೆ ನೆನೆವೆ|| ಕಿರಿಯನಾದರೇನು? ನಾ ಈ ಧರೆಯೊಳಗೆ ಎಲ್ಯಿದ್ದರೇನು? ಮರೆಯದಲೇ ಮಾಡುವರು ಗುರುಗಳು ಮಮತೆ ಎನ ಮೇಲೆ||2 ಕೇವಲಾನಂತಾದ್ರಿ ರಮಣನ ಭಾವ ತಿಳಿಸುವ ನಮ್ಮ ಗುರುಗಳು ಭಾರ ಭಾವದಲ್ಲಿ ಪೇಳುವೇನು ತುಳುಜಾದೇವಿಯ ಮಹಿಮೆಯನು|| 3 ಪದ್ಯ ಪೂರ್ವದಲಿ ಕೃತಯುಗ ಪೂರ್ವದಲ್ಲಿ| ದ್ವಿಜವಯ ನೀರ್ವಕದ್ರುಮನೆಂದು ಊರ್ವಿಯಲ್ಲಿ ಪ್ರಖ್ಯಾತ ಸರ್ವದಾ ಮಾಡುವನು ಸರ್ವರಿಗೆ ಸಮ್ಮತಪೂರ್ವಧರ್ಮವು ಭಕ್ತಿ ಪೂರ್ವಕವಾಗಿ|| ಸರ್ವ ಸ್ತ್ರೀಯ ರೊಳಗ ಪೂರ್ವ ಸುಂದರಿಯಾಗಿ ಇರ್ವಳಾತನ ಮಡದಿ ಊರ್ವಶಿಯ ಪೋಲುವಳು ಊರ್ವಿಯಲಿ ಪತಿಸೇವೆ ಸರ್ವದಾ ಮಾಡುತಲೆ ಇರ್ವಳಾತೆಯು ಮನಃ ಪೂರ್ವಕವಾಗಿ||1 ಆ ಕಾಂತನಿಂದಲ್ಲಿ ತಾಕೂಡಿ ತನ್ನ ಮನಕೆ ಬೇಕಾದ ಸೌಖ್ಯದನೇಕ ವರ್ಷಗಳಲ್ಲಿ ಸ್ವೀಕಾರ ಮಾಡಿದಳು ಶ್ರೀಕಾಂತನ ದಯದಿ ಆಕೆಯ ಹೆಸರುಂಟು ಅನಭೂತಿ ಯಂತೆಂದು|| ಆ ಕರ್ದಮಾಖ್ಯ ದ್ವಿಜತಾಕಾಲದಿಂದ ಭೂತೋಕವನು ಬಿಟ್ಟು ಪರಲೋಕಕೆ ಪೋಗುತಿರೆ ಆಕೆ ಪತಿವುತೆಯು ಎಂಬಾಕೆ ಸಹಗಮನವೆಂಬ ಸಹಗಮನೆಂಬೊ ಆಶಾರ್ಯ ಮಾಡುತಿರೆ| ಆ ಕಾಲದಲ್ಲಿ ಆಯಿತಾಕಾಶವಾಣಿ|| ಪದ ಬ್ಯಾಡ ಬ್ಯಾಡಮ್ಮ ಬ್ಯಾಡದು || ನೀ ಮಾಡೋಕಾರ್ಯ ಬ್ಯಾಡ|| ಬ್ಯಾಡು ಬ್ಯಾಡುಮ್ಮ ಕೇಳು ಮಾಡತಕ್ಕ ಕಾರ್ಯದೂರ ನೋಡಿ ಮಾಡುಬೇಕು ಇಂಥ ಮೂಢ ಬುದ್ಧಿ ಮಾಡುವದು||ಪ ಪತಿಯ ಸರಿಯು ಹಿತಕರಿಲ್ಲವು || ಪತಿವ್ರತೆಗೆ ತನ್ನ ಪತಿಯ ಹೊರತು ಗತಿಯು ಇಲ್ಲವು || ಸುಳ್ಳಲ್ಲವು|| ಪತಿಯು ಇಲ್ಲದಿದ್ದರೇನು ಸುತರು ಸುಗುಣರುಂಟು ನಿನಗೆ ಸುತರು ಇರಲು ಪತಿಯ ಕೂಡಿ ಗತಿಯಸಮ್ಮತವು ಅಲ್ಲ|| 1 ಪತಿಯ ಬಿಟ್ಟು ಸ್ಥಿತಿ ಅಧರ್ಮವೇ| ಆ ಸತಿಗೆ ತನ್ನ ಪತಿಯ ಕೂಡೆ ಗತಿಯು ಧರ್ಮವೇ|| ಸತ್ಕರ್ಮವೇ|| ಪತಿಯ ಮ್ಯಾಲೆ ಸತಿಯು ಊಂಟು ಸತಿಗೆ ಸಮ್ಮತವು ಸತ್ಯ ಪತಿಯಿಂದಲೇ ಪತಿಯಲೋಕ ಗತಿಯು ಪತಿವುಲೆಯೇ ನಿನಗೆ||2 ಮುಖ್ಯಮಾತು ನೀನು ಕೇಳಿದ್ದು|| ಗರ್ಭಿಣಿಯು ಮತ್ತು ಮಕ್ಕಳುಳ್ಳ ಸ್ತ್ರೀಯು ಮಾಳ್ಪುದು || ಧರ್ಮಲಿಲ್ಲದ್ದು|| ಮಕ್ಕಳುಳ್ಳವಳು ನೀನು ಮಕ್ಕಳನ್ನು ಪಾಲಿಸುವುದು ಮುಖ್ಯನಂತಾದ್ರಿ ರಮಣ ತಕ್ಕ ಮುಕ್ತಿಕೂಡುವ ನಿನಗೆ|| 3 ಪದ್ಯ ಆ ಕಾಲಕ್ಕಾಗಿರುವ ಆಕಾಶವಾಣಿಯನ್ನು ತಾ ಕೇಳಿ ಅನುಭೂತಿ|| ಕಾಲ ಮೇರು ಶೈಲದಲ್ಲಿ|| 1 ಚಾರು ಮಂದಾಕಿನಿಯ ತೀರದಲ್ಲಿ ಪರ್ಣದ ಕುಟೀರವನ್ನು ಹಾರಿಸುತಾ ಬಂದನಾ ನಾರಿ ಇದ್ದಲ್ಲಿ||2 ಆಗ ಆಕೆಯ ಕಂಡು ಹೋಗಿ ಬದಿಯಲಿ ನಿಂತು ಹೀಗೆಂದು ಮನಸಿನಲಿ ಯೋಗಿಯಂತಲಿ ನಿಶ್ಚಳಾಗಿಹಳು ದಾವಾಕಿ ದೈವಯೋಗದಲ್ಲಿ ನೋಡಿದರೆ ಯೋಗಿಗಳು ತಮ್ಮ ಉದ್ಯೋಗಿವನ್ನು ಬಿಡುವರು ಹೀಗೆಂದು ಅನುಭೂತಿಯಾಗಿ ಮೋಹಿಸಿ ನುಡಿದ ಭೋಗ ಬಯಸುತಲೇ|| 3 ಪದ ರಾಗ:ಶಂಕರಾಭರಣ ನೀಪೇಳೆ ದಾವದಾವದು ನಿನ್ನ ಜೀವಕ್ಕ ಬೇಕು ಹೇಳೆ|| ಪ ನಿತ್ಯ ಶೋಷಣ ಮಾಡುಬ್ಯಾಡೇ|| 1 ದೇವತೆಗಳು ಎಲ್ಲಾರು ಬಿಡದೆ ಎನ್ನ ಕೋಕರಾಗಿಹರು|| ಸಾವಿರ ಸ್ತ್ರೀಯರು ಸೇವಿಸುವರು ಎನ್ನ ಸೇವಿಸುವರು ನಿನ್ನನ್ನು 2 ಚಿಕ್ಕ ಪ್ರಾಯದಲ್ಲಿ ನೀನು ಇರುವಿ ನಿನ್ನ ತಕ್ಕ ಪುರುಷನು ನಾನು|| ಮುಖ್ಯನಂತಾದ್ರೀಶ ಸಿಕ್ಕ ನಿನಗೆ ನಿನ್ನ ತಕ್ಕಂತೆ ಆಯಿತ್ಹೇಳೆ|| 3 ಪದ್ಯ ಧ್ಯಾನದಲ್ಲಿರಲು ದುಷ್ಟ ದನುಜೇಶ್ವರನು ತಟ್ಟನೆ ಮಾಡಿ ದುಕೃಷ್ಟ ತಾಳ ಧ್ವನಿಯು ಕಟ್ಟು ಇಲ್ಲದೇ ಒಳ್ಳೆ ಗಟ್ಟಿ ವದರಿಸಿ ನೋಡಿ ಒಂದಿಷ್ಟು ನುಡಿಯದೆ ಇರಲು, ದಿಟ್ಟಾಗಿ ತನಗೆ ರೀತಿ|| ಸಿಟ್ಟಲೇ ನುಡಿದಾಳು ಆ ಪತಿವುತೆ|| 1 ದಾ ಪೇಳಲೋ ನೀ ಧಿಟ್ಟ ದಾರಿಲ್ಯಾತಕೆ ಬಂದ್ಯೊ ನೀ ಪಾಪಿಷ್ಠ|| ದೂರದಲ್ಲಿ ಇರೋ ನೀ ದುಷ್ಟ || ಧೈರ್ಯದಿ ನೀ ಎನ್ನ ಮುಟ್ಟಿದ್ಯೋ ಭ್ರಷ್ಟ|| 2 ಸುಖಭರಿತ || ಲಗುಬಗೆಯಲಿ ಮೋಹಿಸುತ || ಬಗೆ ಬಗೆಯಲ್ಲಿ ಮಾತನಾಡಿದನು ನಗುನಗುತ| 3 ಪದ, ರಾಗ:ಶಂಕರಾಭರಣ ಮರುಳು ಗೊಂಡೆನೇ || ತರುಳೆ ನೊಂದೆನೆ|| ಮರಳು ಗೊಂಡೆ ತರುಳೆ ನಿನ್ನ ಹೊರಳಿ ನೋಡುವ ಯ್ಹರಳಿನೋಟಕೆ|| ಪ ಮಾನ್ಯ ಮಾನಣಿ || ರನ್ನೆ ಶಿರೋಮಣಿ || ಚೆನ್ನವಾದ ಚಿನ್ನದಂಥ ನಿನ್ನ ದೇಹವನ್ನು ಕಂಡು|| 1 ಮಾತುಲಾಲಿಸೆ|| ಪ್ರೇತಿ ತೋರಿಸೆ ||ಪ್ರೀತಿ ಎಂಬೊದ್ಯಾತಕಿನ್ನ ಸೋತು ಕಾಮಾಪೂರದಲ್ಲಿ|| 2 ನಿಂತು ಮರೆತೆನಾ || ಅನಂತಾದ್ರೀಶನಾ || ಎಂಥಹವರಿಗೆ ಭ್ರಾಂತಿ ಬಿಡಿಸುವಂಥ ನಿನ್ನ ಕಾಂತಿ ನೋಡಿ|| 3 ಆರ್ಯಾ ಇಂಥಾ ಮಾತವು ಕೇಳಿ || ಚಿಂತಾಕ್ರಾಂತಳಾದಳಾಗ ಆಗ ಆ ಬಾಲಿ|| ಬಂದಿತು ಇಂಥಾ ಘೋರಾ || ಚಿಂತಿಸ ಬೇಕಿನ್ನು ಇವನ ಸಂಹಾರಾ|| 1 ಶಾಪಿಸ ಬಾರದು ಜ್ಞನಿ || ಶಾಪಿಸಿದವರ ಅಗುವುದು ತಪಹಾನಿ|| ಪರಿ ಮನಸಿಗೆ ತಂದು ವ್ಯಾಪಾರವು ಮಾಡಿದಳು ಮತ್ತೊಂದು| 2 ಎಂಬಾಕೆ ನಾಮವೇ ತುಳಜಾ|| 3 ಪದ ರಾಗ :ಸಾರಂಗ ತಾಳ :ತಿವಿಡಿ ಸ್ವರಷಡ್ಜ ಸಲಹಬೇಕೆಂದು ನಿಲ್ಲದೆ|| ಪ ಪಾಶಾಕೃಷ್ಟ ಧರಿಸುತಾ||1 ವರೆಂದು || ದಯಮಾಡಿ ವರಗÀಳ ನೀಡುವಳು ಹಿಡಿಯಂದು|| ಕಾರುಣ್ಯಸಿಂಧು|| ಗಾಢನೆ ಧ್ವನಿ ಮಾಡುತಲೇ ಹಾರ್ಯಾಡುತಲೇ ತ್ವರ ಮಾಡಿಸುತಲೇ ಓಡಿ ಬರುತಿಹ ಪ್ರೌಢಗಣಗಳ ಕೂಡಿ ಸಿಂಹಾರೂಢಳಾಗಿ||2 ಎಂತು ಪೊಗಳಲಿ ನಾನು|| ಅತ್ಯಂತ ಬಹಳಾದಂತ ಮಹಿಮೆಗಳನು ಎಂತೆಂಥವರು ಬೇಕಂತ ಹುಡುಕಿದರೇನು|| ಹಿಗಂತ ಆಕೆಯ ಅಂತೂ ತಿಳಿಯದು ಇನ್ನು|| ಗುಣವತಿ ತಾನು|| ಶಾಂತಿಯಿಂದ ಅನಂತಾದ್ರೇಶನ ಕಾಂತಯಳ ಪೋಲುವಂತ ದೇವಿಯು ಚಿಂತೆಯಲಿ ತನ ಚಿಂತಿಸಿರುವಳ ಚಿಂತೆ ಬಿಡಿಸ ಬೇಕಂತ ಧಾವಿಸಿ|| 3 ಆರ್ಯಾ ಸಾರ ಪರಮಾದರದಿಂದ ಕೂತು ಕೇಳಿದವರು || ಪರಿಪೂಜಿಸುತಾ ತುಳಜಾ ತಾನಾಗುವಳು ಪ್ರತ್ಯಕ್ಷ|| 1 ವರಕವಿತಾ ರಚನಕ್ಕೆ|| ತುಳಜಾದೇವಿಯ ದಿವ್ಯ ಚರಿತಕ್ಕೆ || ಚರಿಸದು ಎನ್ನ ಉಪಾಯ|| ಗುರು ಕೃಪೆಯಿಂದಾಯಿತೊಂದಧ್ಯಾಯ|| ಶ್ರೀಹರೇ ಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ವಿಷ್ಣು ತೀರ್ಥರು (ಮಾದನೂರು) ಶ್ರೀ ವಿಷ್ಣು ತೀರ್ಥರೆ ನಮೋ ಪ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವಸಾರ್ವಭೌಮ ಹರಿಗನ್ವಯಿಪರಂ ಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ ಅ.ಪ. ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿ ಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂ ಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯ ನವಂ ಮಾಡಿ ಸರ್ವ ವೇದ ವೇಂದಾಗ ಪಾರಂಗತರು ಐಜಿ ಆಚಾರ್ಯರಲಿ ಬಿಡಲು 1 ಕುಶಲತೆಯು ಮತ್ತೆ ಸೌಶೀಲ್ಯ ಗುಣನಿಧಿ ಎನಿಪಶಿಷ್ಯನಿಗೆ ಸಚ್ಛಾಸ್ತ್ರ ಪಾರಂಗತನು ಎನಿಸಿಒಸೆದು ದ್ವಿತಿಯಾಶ್ರಮಕೆ ಚೋದಿಸಿ ಕಳುಹಲವ ಗೃಹಧರ್ಮ ಸ್ವೀಕರಿಸುತ |ಎಸೆವ ಕೀರ್ತಿಲಿ ಮೆರೆದು ಶಿಷ್ಯರಿಗೆ ಶಾಸ್ತ್ರ ಬೋ-ಧಿಸುತಲಿರಲು ಸತ್ಸಂತಾನವಂತರಾಗುತಎಸೆವ ಹಂಸತೂಲಿಕ ತಲ್ಪದೊಳು ಪವಡಿಸಿರೆ ಅಪರಾಹ್ನ ರೋಗಾರ್ತರು 2 ಪತಿ ಪುರಂದರ ಸುದಾಸಾರ್ಯ ನುಡಿದುದನುಅಂತೆ ಮಂಚ ಬಾರದು ಮಡದಿ ಬಾರಳು ಎಂಬಪಿಂತಿನ್ವಚನವ ಕೇಳಿ ಚಿಂತಿಸುತ್ತಿರೆ ತಮಗೆ ಜಾತಿ ಸ್ಮøತಿ ಒದಗುತಿರಲು 3 ಘನವಾದ ಐಶ್ವರ್ಯ ಸತಿಸುತರು ಬಂಧುಗಳತೃಣಕೆ ಸಮ ತಿಳಿಯುತ್ತ ಜಯ ಗುರೂ ಹೃದ್ಗತವಅನು ಸರಿಸೆ ಅಜ್ಞಾತ ಬಗೆಯಲಿರುತಿಹನೆಂದು ವೈರಾಗ್ಯವನೆ ಪೊಂದುತ ||ಮನೆಯಿಂದ ಹೊರ ಹೊರಟು ಅನತಿ ದೂರವಸಾಗೆಘನ ಸರ್ಪ ರೂಪದಿಂ ತೋರಿ ಕೊಳೆ ಜಯತೀರ್ಥ ಮುನಿವರ್ಯ ಹೃದ್ಗತವ ತಿಳಿದು ವಸುಮತಿ ವ್ಯರ್ಥ ಸಂಚರಣೆ ಸಂತ್ಯಜಿಸುತ 4 ಶೃತಿ ಸ್ಮøತಿಗೆ ಸಮ್ಮತವು ದಶಮತಿಯ ಸಮಯವೆನುತತಿ ಹಿತದಿ ಪ್ರವಚನೆಗೆ ಪ್ರೇರಿಸಿಹ ಗುರುಮತವ ಸತ್ಕರಿಸಿ ಕಾರುಣ್ಯ ಕೊಂಡಾಡಿ ಸಾಧಿಸಲು ತೃತಿಯಾಶ್ರಮವನು ||ಹಿತದಿ ಕೈಕೊಂಡು ಮಲವ ತಾನಪಹರಿಪಸರಿತೃತಟದಲಿ ಇರುವ ಮನುವಳ್ಳಿ ಪಳ್ಳಿಯಲಿ ನೆಲಿಸುತಲಿ ವಿಹಿತ ಕರ್ಮಾಚರಿಸಿ ಸಿರಿಮತ್ಸು ಮಧ್ವ ವಿಜಯವ ಪಠಿಸುತಿಹರು 5 ಸಂಚಿತ ಸಿರಿ ವಿಷ್ಣುತೀರ್ಥರೆಂಬಂಕಿತದಿ ಮೆರೆಯುತಿಹರು 6 ಭಾಗವತ ಸಾರದುದ್ಧಾರವನುಮುಂತಾದ ಮುಕುತಿ ಸತ್ಪಂಥಗಳ ಬೋಧಿಪಗ್ರಂಥಗಳ ರಚಿಸಿ ಸುಜನೋದ್ಧಾರವನೆ ಗೈದು ಶೋಭಿಸುವರವನಿಯಲ್ಲಿ 7 ಲಕ್ಷುಮಿಯು ನರೆಯಣರನುಗ್ರಹವನೇ ಪಡೆದುದಕ್ಷಿಣದಿ ಬದರಿಕಾಶ್ರಮವೆನುತಿರೆ ಮೆರೆವತ್ರಕ್ಷ್ಯ ಮೋದೇಶ್ವರ ಪುರದಲಿ ನೆಲಿಸಿ ನೂರೆಂಟು ಸಲ ಸುಧೆ ಪ್ರವಚಿಸುತಲಿ ||ಕುಕ್ಷಿಯೊಳಗುಳ್ಳ ಸು ಕ್ಷೇತ್ರಗಳ ಸಂಚರಿಸಿ ಲಕ್ಷಿಸುತ || ಯೋಗ್ಯ ಜನಕುಪದೇಶ ಚರಿಸಲುಸ್ವಕ್ಷೇತ್ರಕೇ ಮರಳಿ ಕುಶಸರಿತು ತೀರದಲಿ ಪರ್ಣ ಶಾಲೆಯಲಿ ವಸಿಸಿ 8 ಕಾಲ ತಾ ತಿಳೀಯುತ್ತ ಶಿಷ್ಯಜನಕರಿವಿತ್ತು ಶಾಲಿವಾನ ಸಹಸ್ರ ಷಟ್ಯತೊತ್ತರವಷ್ಟಸಪ್ತತಿಯು ಮಾಘಾಸಿತ ಪಕ್ಷ ತ್ರಯೋದಶಿ ಸುಮೂಹೂರ್ತದಿ ||ಸುರರು ಭೂಸುರರೆಲ್ಲ ಜಯಘೋಷ ಗೈಯ್ಯುತಿರೆವರ ಮಹಾತ್ಮರು ಆಗ ಹೊಗಲು ವೃಂದಾವನವಪರಿಜನರು ಮುಳುಗಿದರು ದುಃಖ ಆನಂದ ಸಾಗರದಲದನೇನೆಂಬನು 9 ಅವತಾರಮಾರಭ್ಯ ಐದು ದಶ ವರ್ಷಗಳುಅವನಿಜನ ದೃಗ್ವಿಷಯರೀ ಮಹಾತ್ಮರು ತಾವುಅವಧೂತ ವೇಷದಿಂ ಭವನ ಪಾವನವೆನಿಸಿ ಪಿಂತೆ ಶುಕಮುನಿಯಂದದಿ ||ಪವನ ಮತ ಶರನಿಧಿಗೆ ಶಶಿಯು ಇಪ್ಪತ್ತೆಂಟುಪವಿತರ ಸುಲಕ್ಷಣ ಸುತನುವಿಂದುರೆ ಮೆರೆದುಅವನಿಸುರ ಶಿಕ್ಷಣ ಸದುಪದೇಶನುಷ್ಠಾನದಿಂ ಗೈದ ಕೀರ್ತಿಯುತರು 10 ಇವರ ನಾಮಸ್ಮರಣೆ ಕಲಿಮಲದ ಅಪಹರಣೆಇವರ ಸೇವೆಯ ಫಲವು ಸರ್ವಾಮಯ ಹರವುಇವರುನುಗ್ರಹವಿರಲು ವಾದಿನಿಗ್ರಹವಹುದು ಇದಕೆ ಸಂಶಯ ಸಲ್ಲದು ||ಇವರಿಹರು ಸುರತರುವಿನಂದದಲಿ ಶರಣರಿಗೆಇವರೆ ಚಿಂತಾಮಣಿಯು ಸರ್ವ ಭಯ ಹರಿಸುವರು ಇವರ ಗುಣಕೊಂಡಾಡಿ ಇವರೊಲಿಮೆ ಅರ್ಜಿಸಲು ಸರ್ವಕಾಮವು ಲಭ್ಯವು 11 ಸರ್ವಕ್ಷೇತ್ರಾಧಿಕದಿ ಭೂವರಹ ನಿಲ್ಲಿರುವಸರ್ವಭಯ ನಾಶನಕೆ ನರಹರಿಯು ಅರಿರೂಪಸರ್ವಭಕ್ತರ ಭೀಷ್ಟ ವರ್ಷಣಕೆ ಗೋಪಾಲಕೃಷ್ಣರೂಪದಿ ಇರುವನು ||ಇವರ ವೃಂದಾವನದೊಳೀ ಪರೀ ಹರಿರೂಪಪವನ ರೂಪಗಳಿಹವು ಶಿರದೊಳಗೆ ಜಯ ಮುನಿಯುಸರ್ವಋಷಿ ದೇವತೆಗಳಿಹರು ವೃಕ್ಷರೂಪದಿ ಈ ಪವಿತರ ಕ್ಷೇತ್ರದಿ 12 ಭಾಗವತ ನಿಷ್ಠಾತರೆ ||ನಮೊ ನಮೋ ಭಕ್ತಜನ ಕಾಮಧುಕ್ ಭವ್ಯಾತ್ಮನಮೋ ಶ್ರೀ ಮದಾನಂದ ಮುನಿಚರಣ ಮಧುಪರೆನಮೊ ಗುರೂ ಗೋವಿಂದ ವಿಠಲ ಪಾದಾಶ್ರಿತರೆ ನಮೊ ವಿಷ್ಣುತೀರ್ಥ ಪಾಹಿ ||
--------------
ಗುರುಗೋವಿಂದವಿಠಲರು
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು