ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿಯೆನೋ ನಿನ್ಮಾಯ | ಸದ್ವಪುಷ ಚಿನ್ಮಯ ಪ ಪತಿ ಪರಿ ಮಿಗಿಲು ಇಲ್ಲವೊಚೆಲ್ವ ಹಯವೇರುತ್ತ ಮ್ಲೇಂಛರ ಸದೆವವನೆ ಅ.ಪ. ಪರಿ | ಪಂಥಿ ಬಾಧಕಕಂತುಹರ ಸಖ ಸೃಷ್ಟಿಕರ್ತನೆ | ಪ್ರಾಂತಗಾಣದ ಶಿರಿಸ್ತವನ ಕೊಂದನೆ 1 ಅಮಿತ ಮಹಿಮೋಪೇತ್ ಶಿರಿಹರಿ |ಸುಮತಿ ಸುಜನಾಂಬೋಧಿ ಚಂದಿರ | ಪ್ರಮಿತ ಜಗ ಸತ್ಕರ್ತ ಪ್ರಾಣನೇ 2 ಹರಿಯೆ ನಿನ್ನಯ ರೂಪ | ನೋಡುವುದಕೆ ಇರುವುದವು ಅಪರೂಪ |ದೇವಾದಿ ವರ್ಣಿಸೆ | ಇರುತಿರುವೆ ಬಹುರೂಪ | ಆರು ಅರಿಯದ ರೂಪ ನೀರೊಳಿರುತಿಹೆ | ಭಾರಪೊತ್ತಿಹೆ | ಕೋರೆದಂತನೆ ನಾರಸಿಂಹನೇ ಪೋರ ವಟುವೆ | ವೀರರಾಮನೆ | ಕ್ರೂರ ಖಳಹನ ನಾರಿಯರ ವ್ರತವಳಿದು ತೇಜಿಯನೇರ್ದ ಗುರು ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಕೊಡುವನು ಸಂಪದವ ಸುಙÁ್ಞನವ ಕೊಡುವ ಪ ಬಹುಜರನು ವಲಿಸಿ ಪಿತೃಭ್ರಾತಾಚಾರ್ಯನು ತಾನೆಂದೆನಿಸಿ ಕವಿವರ ನೆಂದೆನಿಸಿ ಬಹುವಿಧದಲಿ ತಾನು ಅತಿಹಿತದಲಿ ಗೈಯಲು ಸುಸ್ತವವನು ವರ್ಣಿಸೆ ಮಹಿಮೆಯನು1 ಸ್ಮರಿಸುವ ಭಕ್ತರ ಪೊರೆವಕರಣಿತಾನು ಸ್ವೀಕರಿಸಿದನದನು ಹರಿಸಾಕ್ಷಾನನವೆನಿಪಸುವಾಕ್ಯವನು ಸಂಪಾದಿತ ತಾನು ಹರಿವಿಶ್ವಸುನಾಮದಿ ಭೂತಳದಲ್ಲಿ ಉದಿಸಿದ ಮುದದಲ್ಲಿ ಪರಿಚಾರ ಕಾಮದಿ ಕರಸ್ನೇಹದಲಿ ಜನಿಸಿದ ಪೂರ್ವದಲಿ 2 ಸಿರಿಗೋಪಾಲಾಖ್ಯರು ಸುಙÁ್ಞನವನು ಕರುಣಿಸೆ ಮರ್ಮವನು ಸರಸದಿ ಗ್ರಂಥದವರ ಸುಹಸ್ಯವನು ಸಂಗ್ರಹಿಸಿದ ತಾನು ಸಿರಿರಘುವರ ಕರುಣದಿ ಧರೆಯೊಳು ಮೆರೆವುಲ್ಲರುವಿಗಿಲ್ಲರುವ ಗುರುವಿನ ಮಹಿಮೆಯನು3
--------------
ವರದೇಶವಿಠಲ
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ತø ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||
--------------
ಗುರುಗೋವಿಂದವಿಠಲರು
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆಪ. ಕಂಡೀಶವಿನುತ ಬ್ರಹ್ಮಾಂಡಪಾಲ ಮಾ- ರ್ತಾಂಡಮಂಡಲಗ ಶುಂಡಾಲವರದಅ.ಪ. ಕ್ಷೇಮದಿ ಶ್ರೀಹರಿನಾಮವ ವರ್ಣಿಸೆ ನೇಮಾನುಷ್ಠಾನದೊಳಿರಲು ನಾ ಮಾಡಿದ ನಾನಾವಿಧ ಪಾಪವ ತಾಮಸಗೊಳಿಸುವ ಕಾಮಕ್ರೋಧಗಳಿಂ1 ಶಿಷ್ಟಾಚಾರದೊಳಿಷ್ಟನಾಗಿ ಪರ ಮೇಷ್ಠಿಜನಕ ಜಯ ಜಯವೆನಲು ಭ್ರಷ್ಟಾಲೋಚನೆ ಪುಟ್ಟಿಸಿ ಪಾಪದ ಬಟ್ಟಿಯ ಹೊದ್ದಿಪ ದುಷ್ಟಸಂಗದಿಂ2 ನಾರಾಯಣ ನರಹರಿಯೆನ್ನುವ ವ್ಯಾ- ಪಾರವ ನಾ ಮಾಡುತ್ತಿರಲು ಆರೋಹಣಾವರೋಹಣ ನಾದವಿ- ಕಾರಗೊಳಿಪ ಶಾರೀರಪ್ರಕೃತಿಯಿಂ 3 ಆರ್ಕಾರಣ ರಿಪುಗಳಿಗೈ ಸರ್ವ ದೇ- ವರ್ಕಳ ಮಸ್ತಕಮಣಿ ನೀನೈ ತರ್ಕಾಗಮ್ಯ ಲಕ್ಷ್ಮೀನಾರಾಯಣ ಅರ್ಕಾಮಿತಪ್ರಭ ಕಾರ್ಕಳಪುರವರ4
--------------
ತುಪಾಕಿ ವೆಂಕಟರಮಣಾಚಾರ್ಯ
ಪಂಚರೂಪಾತ್ಮಕ ನೀನೇ ಈ ಪಾಂಚಭೌತಿಕ ದೇಹದಿ ಸಂಚರಿಸೂವೆ ಪ ಸ್ಥೂಲರಸವನು ಇತ್ತು ಸಲಹೂವೆ ಅ.ಪ ರಸಪಾಯುಆಪಜಿಹೆÀ್ವನಾಸಿಕ ಗಂಧ ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ ಉಭಯಪಕ್ಷಗಳು ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ ನಿನ್ನಿಂದೋಷಧಿಗಳು ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ ಅನ್ನದಿಂದಲೆ ದೋಷದೂರ ನೀನನ್ನದನ್ನದಾ1 ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು ಮರೀಚಿಗಳೆಲ್ಲರೂ ಸನ್ನುತಿಪರೋ ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ- ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ ದಕ್ಷಿಣೋತ್ತರಪಕ್ಷವಿರುತಿಹುದೋ ಕಾಣಿಪುದು ಮಧ್ಯದೇಶವು ಆಗಸದೊಳು ಉ- ದಾನ ವಾಯುವಿನಲ್ಲಿ ಇರುತಿಹುದೋ ಧೇನಿಪೋರು ಪೃಥುವಿಯು ಪಾದವೆಂಬುದು ಸ- ಮಾನ ವಾಯುವಿನಲಿ ಇರುತಿಹುದು ಜ್ಞಾನ ರೂಪದಿ ಈ ಪರಿಯಲಿ ರೂಪವಿರುತಿಹುದು ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2 ತತ್ವಯುತವಾಕ್ಯೋಕ್ತಾಗಸ ಶಬ್ದ ಈತೆರ ಯುಕ್ತವಾದೀ ಕೋಶವು ಇದಕೆ ಖ್ಯಾತವಾದ ಮನೋಮಯ ಕೋಶದೊಳು ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ ಪ್ರೀತಿಯಿಂದಲಿ ವ್ಯಾನನೊಡಗೂಡಿ ನೀನೆ ಯಜ್ಞಭುಕುವು ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ ಪ್ರೀತಿಯಿಂದಲಿ ಸಲಹೋ ಎನ್ನನು 3 ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿಜ್ಞಾನಮಯಕೋಶದಿ ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ ಅಹರಹ ಬ್ರಹ್ಮ ವಾಯುಗಳಿಂದಲಿ ಮಹಾಪೂಜೆ ವಂದನೆಗೊಳುತಿಹೆ- ಖಂಡಾಖಂಡದಿ ತುಂಬಿಹೆ ದೇಹದೊಳು ಉದಾನನಿಂದೊಡಗೂಡಿ ಸಹಾಯನಾಗಿಹೆ ಜೀವಿಗಳಿಗೆ ಬಾಹ ದುರಿತದಿಂ ಪಾರುಗಾಣಿಸೋ ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ ಶಿರವೆ ನಿನ್ನಯ ಶ್ರದ್ಧವೆಂಬೊರು ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು ಮಹಾ ಪ್ರಳಯದಿ ಉದರದೊಳಿಟ್ಟು ಇಹಪರದಿ ರಕ್ಷಿಸುವೆ ದೇವ4 ನಂದಮಯ ಕೋಶವು ತನ್ಮಯ ಅವ್ಯಕ್ತತತ್ವದಿಂದಲಿ ನನ್ನೀಯಿಂದ ಆನಂದಮಯ ಮೂರುತಿ ನಾರಾಯಣನೀ ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ ಅನಾದಿಲಿಂಗವ ಭಂಗಗೈಸುವಳೋ ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ ಛಿನ್ನ ಭಕ್ತರಿಗೊಲಿಯಳೋ ಅವಿ ಚ್ಛಿನ್ನ ಭಕ್ತರ ಜನನಿ ಎನಿಪಳೋ ಪ್ರಾಪ್ಯನು ಎಂದು ಪ್ರಿಯವೆಂದು ಘನ ದಕ್ಷಿಣೋತ್ತರ ಪಕ್ಷವೆನಿಪೋವು ತನ್ನ ಮಧ್ಯದ ಪ್ರದೇಶವೆಂಬೋದು ಜ್ಞಾನ ಸುಖ ಆನಂದ ಪಾದಗಳು ಬ್ರಹ್ಮನಾಮಕ ವಾಯುವೆಂಬುವರೋ ಆನಂದಮೂರುತಿ ಮಹಿಮೆ ಎಂತಿಹುದೋ ಭಿನ್ನನಾಮದಿ ಕರೆಸುತಲಿ ತಾ ಅ ಭಿನ್ನನಾಗಿ ಚರಿಸಿ ಕೋಶದಿ ಘನಕಾರ್ಯವ ನಡೆಸುತಿರ್ಪೆ ಪನ್ನಗಾದ್ರಿ ಶ್ರೀ ವೇಂಕಟೇಶನೆ 5
--------------
ಉರಗಾದ್ರಿವಾಸವಿಠಲದಾಸರು
ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ
ಲಕುಮಿ ರಮಣನು ಹೆಜ್ಜೆನಿಕ್ಕಲುಕಿಂಕಿಣಿ ಕಿಂಕಿಣಿ ಎಂದಿವೆ ಟೊಂಕದ ಗೆಜ್ಜೆ ಪ. ಲೆಕ್ಕವಿಲ್ಲದ ಹಗ್ಗ ತಂದುಚಕ್ಕನೆ ಕಟ್ಟೋಳು ಬಂದುಚಿಕ್ಕಟೊಂಕಲಿಂತೆಂದುಅಕ್ಕಜ ಬಟ್ಟಳಾಕೆ ಬಂದು1 ಧಿಟ್ಟನು ವರಳೆಳದು ತಂದುಥಟ್ಟನೆ ಮರ ಮುರಿದು ಬಂದುಸ್ಪಷ್ಟವಾದರೊ ಸೂರ್ಯರೆಂದುಕೊಟ್ಟ ಕೃಷ್ಣ ಅಭಯವೆಂದು2 ತೊಡೆಯ ನೇರುವಳೆ ಬಂದುನಡವ ವರ್ಣಿಸೆವೆÉಂದುನುಡಿಯಲಾರೆವಿತಂಡನುಡಿದಳುರಮೆ ಬಂದು 3
--------------
ಗಲಗಲಿಅವ್ವನವರು
ಹರಿಹರರಿಬ್ಬರು ಒಲಿದು ಮಾತಾಡಲು ಕೊಳವ ಕಂಡಲ್ಲಿ ಎಲೆತೋಟ ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ ಹೆಣ್ಣಿನ ಕಂಡು ಹರ ಮರುಳಾದ ಪ. ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ ಹೊಂಬಾಳೆ ಅಡಿಕೆ ಬನಗಳು ಹೊಂಬಾಳೆ ಅಡಿಕೆ ಬನದೊಳಗಾಡುವ ರಂಭೆಯ ಕಂಡು ಹರ ಮರುಳಾದ 1 ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ ಬೆರಸಿ ಮಲ್ಲಿಗೆಯ ಬನದೊಳು ಬೆರಸಿ ಮಲ್ಲಿಗೆಯ ಬನದೊಳಗಾಡುವ ಸರಸಿಜಾಕ್ಷಿಯ ಕಂಡು ಹರ ಮರುಳಾದ 2 ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ ನಿಲ್ಲದೆ ನುಡಿವೊ ಗಿಳಿಗಳು ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ ಚೆಲುವೆಯ ಕಂಡು ಹರ ಮರುಳಾದ 3 ಸೋಗೆ ನವಿಲುಗಳು ಗಿಳಿಹಿಂಡು ತುರುಗಳು [ಕೋಗಿಲೆ ನಲಿಯೊ ಪಂಸೆಗಳು] [ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ- ಬಗಿಯ ಕಂಡು ಹರ ಮರುಳಾದ 4 ಚೆಲುವ ಚರಣಗಳು ಜಂಘೆ ಜಾನೂರು ಕಟಿ ವಳಿಪಂಙÂ್ತ ಜಠರ ವಕ್ಷಸ್ಥಳವು ವಳಿಪಂಙÂ್ತ ಜಠರ ವಕ್ಷಸ್ಥಳಗಳ ಹೆಣ್ಣಿನ ಸ್ತನವ ವರ್ಣಿಸಲಾರಿಗಳವಲ್ಲ 5 ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು ವೀರಮುದ್ರಿಕೆಯು ಕಿರುಪಿಲ್ಯ ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ ಬಾಲೆಯ ಕಂಡು ಹರ ಮರುಳಾದ 6 ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ ಕೊರಳ ಪದಕ ಹಾರ ಒಲೆಯುತ ಕೊರಳ ಪದಕ ಹಾರ ಒಲೆಯುತ ಹೆಣ್ಣಿನ ಇರವ ವರ್ಣಿಸಲಾರಿಗಳವಲ್ಲ 7 ಹಸಿರು ಕುಪ್ಪಸಗಳು ಮುಂಗೈನಗಗಳು ನಳಿತೋಳುಬಂದಿ ಬಳೆಗಳು ನಳಿತೋಳುಬಂದಿ ಬಳೆಗಳು ಹೆಣ್ಣಿನ ಥಳುಕು ವರ್ಣಿಸಲಾರಿಗಳವಲ್ಲ8 ಹಾರ ಹೀರಾವಳಿ ಕೇಯೂರ ಕಂಕಣ ತೋಳ ಭಾಪುರಿ ಭುಜಕೀರ್ತಿ ತೋಳ ಭಾಪುರಿ ಭುಜಕೀರ್ತಿನಿಟ್ಟಿಹ ಇಂದುಮುಖಿಯ ಕಂಡು ಹರ ಮರುಳಾದ 9 ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು ಕದಪು ಕನ್ನಡಿಯು ಕುಡಿಹುಬ್ಬು ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ ಬೆಳಕÀ ವರ್ಣಿಸೆ ಹರಗಳವಲ್ಲ 10 ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು ಕುರುಳು ಕೂದಲುಗಳು ಕುಂತಲಗಳು ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ ಜಡೆಯ ವರ್ಣಿಸಲಾರಿಗಳವಲ್ಲ 11 ಕುಂಭಕುಚದ ಮೇಲೆ ಗಂಧವ ಪೂಸಿದಳೆ ಅಂದಕೆ ಹಿಡಿದಳೆ ಕಮಲವ ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ ಚಂದ ಬಂದ್ಹರನ ಕಂಗೆಡಿಸಿತು 12 ತÉೂೀರ ಕುಚದ ಮೇಲೆ ಸಾದು ಗಂಧವ ಪೂಸಿ ಆಯಕೆ ಹಿಡಿದಳೆ ಕಮಲವ ಆಯಕೆ ಹಿಡಿದಳೆ ಕಮಲವ ಕಡೆಗಣ್ಣ ಢಾಳ ಬಂದ್ಹರನ ಕಂಗೆಡಿಸಿತು 13 ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ ಹಸ್ತಕಟ್ಟುಗಳು ಹೊಳೆಯುತ ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ ದೃಷ್ಟಿ ಬಂದ್ಹರನ ಕಂಗೆಡಿಸಿತು 14 ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು ತÀನ್ನೊಳಗೆ ತಾನು ನಗುವೋಳು ತÀನ್ನೊಳಗೆ ತಾನು ನಗುವೋಳು ಬೊಮ್ಮನ ಮಗನ ಮರುಳು ಮಾಡಿ ನಡೆದಳು 15 ನೋಡಳು ನುಡಿಯಳು ಹರನ ಕೂಡೆ ಮಾತಾಡಳು ಓಡುತ್ತ ಚೆಂಡ ಹೊಯ್ವಳು ಓಡುತ್ತ ಚೆಂಡ ಹೊಯ್ವವೇಗವ ಕಂಡು ಮೂರುಕಣ್ಣವನು ಮರುಳಾದ 16 ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ ಕರದಿ ತ್ರಿಶೂಲ ಹೊಳೆಯುತ ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ ನುಡಿಸುತ್ತ ಹಿಂದೆ ನಡೆದನು 17 ರೂಢಿಗೊಡೆಯನ ಕೂಡೆ ಆಡುವ ವನಿತೆ ನೋಡೆ ನೀ ಎನ್ನ ಕಡೆಗಣ್ಣ ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ ಕಾಡುತ ಹಿಂದೆ ನಡೆದನು 18 ಪೀತಾಂಬರದ ಮುಂಜೆರಗನು ಕಾಣುತ್ತ ಸೋತೆ ಬಾರೆಂದು ಕರೆದನು ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ ಕಾಂತೆ ಬನದೊಳು ಮರೆಯಾದಳು 19 ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ ಗಂಗೆ ಪೊತ್ತವನ ತಿರುಗಿಸಿದ ಗಂಗೆಪೊತ್ತವನ ತಿರುಗಿಸಿದ ತನ್ನಯ ಮುಂದಣ ಅಂದವೆಲ್ಲ ಇಳುಹಿದ 20 ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು ವಟಪತ್ರ ಶಯನನಾಗಿ ಮಲಗಿದ ವಟಪತ್ರ ಶಯನನಾಗಿ ಮಲಗಿದ ಉಡುಪಿನ ಕೃಷ್ಣನೆಂದ್ಹರನು ತಿಳಿದನು 21 ಭೂಮಿಯನೆಲ್ಲ ಈರಡಿ ಮಾಡಿದ ಆಲದೆಲೆ ಮೇಲೆ ಮಲಗಿದ ಆಲದೆಲೆ ಮೇಲೆ ಮಲಗಿದ ಶ್ರೀಹಯ- ವದನನೆಂದು ಹರ ತಿಳಿದನು 22
--------------
ವಾದಿರಾಜ
ದಂಡಿಸಬೇಡೈ ದಯೆದೋರೈ ಕರದಂಡದಳಾಂಬಕನೆ ಪ.ಕಂಡೀಶವಿನುತ ಬ್ರಹ್ಮಾಂಡಪಾಲ ಮಾ-ರ್ತಾಂಡಮಂಡಲಗ ಶುಂಡಾಲವರದ ಅ.ಪ.ಕ್ಷೇಮದಿ ಶ್ರೀಹರಿನಾಮವ ವರ್ಣಿಸೆನೇಮಾನುಷ್ಠಾನದೊಳಿರಲುನಾ ಮಾಡಿದ ನಾನಾವಿಧ ಪಾಪವತಾಮಸಗೊಳಿಸುವ ಕಾಮಕ್ರೋಧಗಳಿಂ 1ಶಿಷ್ಟಾಚಾರದೊಳಿಷ್ಟನಾಗಿಪರಮೇಷ್ಠಿಜನಕ ಜಯ ಜಯವೆನಲುಭ್ರಷ್ಟಾಲೋಚನೆ ಪುಟ್ಟಿಸಿ ಪಾಪದಬಟ್ಟಿಯ ಹೊದ್ದಿಪ ದುಷ್ಟಸಂಗದಿಂ 2ನಾರಾಯಣ ನರಹರಿಯೆನ್ನುವ ವ್ಯಾ-ಪಾರವ ನಾ ಮಾಡುತ್ತಿರಲುಆರೋಹಣಾವರೋಹಣ ನಾದವಿ-ಕಾರಗೊಳಿಪ ಶಾರೀರಪ್ರಕೃತಿಯಿಂ 3ಆರ್ಕಾರಣ ರಿಪುಗಳಿಗೈ ಸರ್ವ ದೇ-ವರ್ಕಳ ಮಸ್ತಕಮಣಿ ನೀನೈತರ್ಕಾಗಮ್ಯ ಲಕ್ಷ್ಮೀನಾರಾಯಣಅರ್ಕಾಮಿತಪ್ರಭ ಕಾರ್ಕಳಪುರವರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ