ಒಟ್ಟು 10 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿವಾಸ ಮಾ[ವಿಲಾಸ] ಮಾನವೇಶ ಈಶ ಶ್ರೀಶ ದೀನ ಪೋಷಕ ಕಲುಷ[ನಾಶ ಮಾಮನಸಂತೋಷ] ಪ ಗಾನಲೋಲ ಭಕ್ತಜಾಲ ದೀನರಿಗೆ ಕರುಣಾಲವಾಲ ಮಾ[ನ]ವರ್ಗೆ ವಿಲೋಲ ಸಂಕುಲ ದಾನವಾಬ್ಧಿ ಕುಲಾಲೀಲ 1 ಲಕ್ಷರೂಪನೆ ರಾಕ್ಷಸಾರಿ ಮೋಕ್ಷದಾತ [ನುತಪಾಲಕ] ಯಕ್ಷಪಾಧಿಪ ಸುತೆಯ ರಮಣ ಯಕ್ಷ ಕಿನ್ನರ ವಿನುತ ಚರಣ2 [ಲಕ್ಷ್ಯವಿರಲಿ ರಾಮದಾಸಾರ್ಚಿತ ಭಾಗವತ ಪ್ರೋಕ್ತ] ರಕ್ಷಿಸೈ ವರಪದ್ಮಚರಣ [ಮಾಂಗಿರಿ] ಭೂ ರಮೆಯ ರಮಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಸರಸ್ವತೀ ಪ್ರಾರ್ಥನೆ) ಏನೇ ಸರಸ್ವತಿಯಮ್ಮಾ ಬಹು ಮಾನದಿ ಪಾಲಿಸು ನಮ್ಮಾ ಆ ನಳಿನಜ ಚತುರಾನನನೊಲಿಸಿದ ಶ್ರೀನಿವಾಸನ ಪರಮಾನುರಾಗದ ಸೊಸೆ ಪ. ಮೂಢತನವನೆಲ್ಲ ಕಳಿಯೆ ದಯ ಮಾಡಿ ನೀ ಮನಸಿಗೆ ಹೊಳಿಯೆ ಬಾಡದ ಪದ್ಮದ ಕಳೆಯೆ ಮನೋ ರೂಢ ಮಲವ ಬೇಗ ತೊಳಿಯೆ ಆಡುವ ಮಾತುಗಳೆಲ್ಲವು ಕೃಷ್ಣನ ಪಾಡಿ ಪೊಗಳುವಂತೆ ರೂಢಿಗೊಳಿಸು ದೇವಿ 1 ರಾಜಿಕಲೌಕಿಕವಾದ ಬಹು ಸೋಜಿಗಕರಿಪೂರ್ಣಮೋದ ಈ ಜಗದೊಳು ಮುಖ್ಯವಾದ ಸುಗು- ಣೋಜೊಧಾರಣ ಕಲ್ಪಭೂಜ ಮಂದ ವೈರಿಗಳ ಸ- ಮಾಜವ ಗೆಲಿಸುತ ರಾಜಿಸು ಮನದಲಿ 2 ಕರಣಾಭಿಮಾನಿಗಳನ್ನು ಉಪ ಕರಣರ ಮಾಡುವದನ್ನು ಕರುಣೀ ನೀ ಬಲ್ಲಿನ್ನು ಮುನ್ನ ಮನ ವರತು ರಕ್ಷಿಸು ಬೇಗೆನ್ನನು ಸರಸಿಜಾಕ್ಷ ಶೇಷಗಿರಿ ವರಪದಕಂಜ ಸ್ಮರಣೆ ಮಾಡುವಂತೆ ಕರುಣಿಸೆನ್ನನು 3
--------------
ತುಪಾಕಿ ವೆಂಕಟರಮಣಾಚಾರ್ಯ
ಅವನಿಯೊಳವತರಿಸಿದ ವ್ಯಾಸರಾಯ ಭೂಸುರಜನವರ್ಯ ಸುವಿನೋದವ ಪಡೆದರು ಸುರನರಜನರು ಪ ಪವನಸುತರ ಮತ ಭುವಿಯಲಿ ಸುಲಭದಿ ವಿವರಿಸಿ ಜನರಿಗೆ ಪ್ರವಚನವೆಸಗಲು ಅ.ಪ ಗುರು ಬ್ರಹ್ಮಣ್ಯರ ವರಪದ ಕಮಲಗಳ ಪರತÀರ ಭಕುತಿಯಲಿ ಪರಿಪರಿ ಸೇವಿಸಿ ಗುರುಕರುಣದಲಿ ಹರುಷವ ಪೊಂದುತಲಿ ವರವ ಪಡೆದ ಭೂಸುರ ರಾಮಾರ್ಯರ ವರಸತಿಯುದರದಿ ವಹ್ನಿಪುರದೊಳವ ತರಿಸುವ ಧರೆಯೊಳು ಸುಜನಗಣವನು ದ್ಧರಿಸಲು ಮುದದಲಿ ಸಿರಿಪತಿಭಕುತನು 1 ಅತಿಬಾಲ್ಯದಿ ಗುರ್ವಾಜ್ಞೆಯನನುಸರಿಸಿ ಯತಿಯಾಶ್ರಮವಹಿಸಿ ಕ್ಷಿತಿಯೊಳಪರೋಕ್ಷಜ್ಞಾನಿಗಳೆಂದು ಪ್ರಥೆಯನು ಪೊಂದಿದ ಲಕ್ಷ್ಮೀನಾರಾಯಣ ಯತಿಯಲಿ ಶಾಸ್ತ್ರಾಮೃತ ಪಾನ ಮಾಡುತ ಅತಿ ಸುಲಭದ ಶ್ರುತಿಗಳ ಸಾರವ ಕ್ಷಿತಿ ಸುರರೊಳಗತಿ ಹಿತದಲಿ ಅರುಹಲು 2 ಗಜಗಹ್ವರ ದೇಶದ ನರಪತಿಗಳಿಗೆ ನಿಜವರ ಕರುಣದಲಿ ವಿಜಯಾಭ್ಯುದಯಗಳನು ಸತತ ಪೊಂದಿಸುತ ರಜತಕನಕ ನವಮಣಿಗಣಯುತ ವಾ ರಿಜವನು ಪೋಲುವ ಸಿಂಹಾಸನದಲಿ ಸುಜನ ಸಮೂಹಕೆ ನಿಜಪದಯುಗಳಾಂಬುಜ ಸೇವೆ ನೀಡಲು 3 ನಂದತೀರ್ಥರ ವರಶಾಸ್ತ್ರಗಳನ್ನು ಚಂದದಿ ವಿವರಿಸಲು ಚಂದ್ರಿಕಾ ನ್ಯಾಯಾಮೃತ ಮೊದಲಾದ ಗ್ರಂಥಗಳನು ರಚಿಸಿ ಮಂದಜನಕೆ ಮುಚುಕುಂದನ ಶುಭಗುಣ ವೃಂದಗಳನು ಸುಖದಿಂದ ಬೋಧಿಸಲು ಅಂದಪದಗಳನು ರಚಿಸುತ ಶುಭಗುಣ ಸಾಂದ್ರನ ಭಜನಾನಂದ ಪೊಂದಿಸಲು 4 ವಿಜಯೀಂದ್ರ ವಾದಿರಾಜ ಮೊದಲಾದ ನಿಜವರ ಶಿಷ್ಯರುಗಳ ವ್ರಜಕೆ ಶಾಸ್ತ್ರಾರ್ಥಗಳನು ಬೋಧಿಸುತ ಪುರಂದರ ಸುಜನ ಶಿರೋಮಣಿ ಕನಕ ಪ್ರಮುಖ ಪೂಜಿತ ಪದಯುಗಳಾಂಬುಜ ಯತಿಶೇಖರ ವಿಜಯಸಾರಥಿಯು ಪ್ರಸನ್ನನಾಗಲೆಂದು 5
--------------
ವಿದ್ಯಾಪ್ರಸನ್ನತೀರ್ಥರು
ಗುರುವೆ ವರಹಜೆ ತಟವಾಸಾ | ಗುರುವೇ ಪುರಿ ಮಂತ್ರಾಧೀಶಾ ಪ ಆರು ಮೊರೆ ಇಡುವೆನೊ | ವರಪದ ಪದುಮಕೆಕರುಣದಲೆಮನ | ಹರಿಯಲಿ ಇರಿಸೋ ಅ.ಪ. ಬಾಗಿ ಭಜಿಪೆ ಗುರುವೇ | ಎನ್ನಯರೋಗ ಹರಿಸು ಪ್ರಭುವೇ ||ರಾಘವೇಂದ್ರ ದುರಿತೌಘ ವಿದೂರನೆ |ಭೋಗಿ ಶಯನ ಪದ | ರಾಗದಿ ಭಜಿಸುವ 1 ಭೂತ ಪ್ರೇತ ಬಾಧೇ | ಬಿಡಿಸುವಖ್ಯಾತಿ ನಿಮ್ಮದು ತಿಳಿದೇ ||ದೂತರೆನಿಪ ಜನ | ಆತುನಿಮ್ಮ ಪದ |ಪ್ರೀತಿ ಸೇವೆಯಲಿ | ಕಾತುರರಿಹರೋ 2 ಯೋನಿ ಬರಲೇನು ಅಂಜೆನೂ 3 ಪರಿಮಳಾರ್ಯರೆಂದೂ | ನಿಮ್ಮಯಬಿರಿದು ಕೇಳಿ ಬಂದೂ ||ಮೊರೆಯ ನಿಡುವೆ ತವ | ಚರಣಾಂಬುರುಹಕೆ |ಅರಿವ ನೀಯೊ ತವ | ಪರಿಮಳ ಸೊಬಗನು 4 ಪಾದ ಬಿಸಜ ||ವರ ಸುಹೃದ್ಗ ಗುರು | ಗೋವಿಂದ ವಿಠಲನಚರಣ ಸರೋಜವ | ನಿರುತ ಭಜಿಪ ಗುರು 5
--------------
ಗುರುಗೋವಿಂದವಿಠಲರು
ನಿತ್ಯ ಶುಭಮಂಗಳಂ ಪ. ಮಂಗಳಂ ಶ್ರೀ ಭೂಮಿದೇವಿಯ ರಮಣಗೆ ಮಂಗಳಂ ಸದ್ಗುಣಗಣಪೂರ್ಣಗೆ ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ ಮಂಗಳಂ ಶ್ರೀ ವೇಂಕಟಾಧೀಶಗೆ 1 ವಂದಾರು ಸುರವೃಂದ ರುಚಿರಮಣಿಮಯ ಮಕುಟ ಸಂದೋಹ ಸಂಘಟಿತಪದಪೀಠಗೆ ಇಂದಿರಾಕರಕಮಲರಂಜಿತ ಧ್ವಜವಜ್ರ ಸಂದಿಪ್ಪ ಪಾದಾದಿ ಶುಭರೇಖಗೆ 2 ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ ಭವ್ಯ ಮಂಗಳದಾಯಿ ಭಯಹಾರಿಗೆ ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ ಸೇವ್ಯ ಗಂಗಾಜನಕ ಶ್ರೀಚರಣಗೆ 3 ವರಕನಕವನಯುತ ಉರುನಿತಂಬದ್ವಯಗೆ ಸರಸಕೇಳೀವಾಸಸಜ್ಜಘನಕೆ ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ- ತ್ಸರಸಿಜಾಸನಜನಿತ ಶುಭನಾಭಿಗೆ 4 ಭುವನ ಪೂರಿತ ವಳಿತ್ರಯರಾಜದುದರಗೆ ವಿವಿಧ ಕುಸುಮಾಕಲಿತ ಸುಮಮಾಲಿಗೆ ಕೌಸ್ತುಭ ಶ್ರೀವತ್ಸ ನವಹಾರಕೃತ ರಮಾಶ್ರಿತ ವಕ್ಷಕೆ 5 ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ ಶತ್ರುಭೀಷಣ ಘನಧ್ವನಿ ಶಂಖಕೆ ಗೋತ್ರÀಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ ಶ್ರಿತಜನ ಭಯಹಾರಿ ವರಪದ್ಮಕ್ಕೆ 6 ಕಂದರ ವದನಕೆ ನಾಸಿಕ ಕಾಲ ಸನ್ಮುಖಕಮಲಕೆ ಅರುವಾರಿಜನೇತ್ರ ಶೋಭನ ಭ್ರೂಯುಗಳ ವರ ಫಾಲತಿಲಕ ಕುಂತಳರಾಯಗೆ 7 ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ ವಿಮಲದರ್ಪಣ ಭಾಸ ಗಂಡಯುಗಕೆ ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ ರಮಣೀಯ ಗುಣರಚಿತ ವರ ಮಕುಟಕೆ 8 ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ ಮದನಮದಗಜಶೀಲ ಲಾವಣ್ಯಕೆ ಸದಭೀಷ್ಟÀದಯ ಪೂರ್ಣಪ್ರಜ್ಞಮುನಿಸೇವ್ಯ ಪದ ಹಯವದನ ವೆಂಕಟರಮಣಗೆ 9
--------------
ವಾದಿರಾಜ
ಭಾಗ್ಯವ ಕೊಡೇ ನಿರುತದಿ ದೇವಿ ಪ. ನಿರುತದಿ ಪತಿಪಾದ ಚರಣವ ಸೇವಿಪ ಅ.ಪ. ವೈರಾಗ್ಯವೆಂಬುವ ಚಂಪಕಪುಷ್ಪ ವರಪದ ತೋರುವ ವರಪ್ರದ ಮಲ್ಲಿಗೆ 1 ಚರಣದಂದುಗೆ ಗೆಜ್ಜೆ ಪಾಡಗನಿಟ್ಟ ನಿನ್ನ ಚರಣ ಕಮಲವ ನಿರುತದಿ ಪೂಜಿಪ 2 ಶ್ರೀ ಶ್ರೀನಿವಾಸನ ಸ್ಮರಣೆಯನಿತ್ತು ಪಾವನಳನು ಮಾಡೈ ಪರ್ವಂತದೇವಿ 3
--------------
ಸರಸ್ವತಿ ಬಾಯಿ
ಶ್ರೀಗೋಪಾಲ ಕೃಷ್ಣಾತ್ಮಕ ಶ್ರೀರಾಮ ಭಜನೆ ರಾಮ ರಾಮ ಜಯರಾಮ ಪರಾತ್ಪರ | ನೌಮಿ ಪದಾಂಬುಜ ಶ್ರೀರಾಮಸೋಮ ಕುಲೋದ್ಭವ ಭೂಮ ಗುಣಾರ್ಣವ | ಕಾಮ ಪಿತನೆ ಶ್ರೀಕೃಷ್ಣ 1 ಖೂಳರ ಬಾಧೆಗೆ ಸುಜನರು ಮೊರೆಯಿಡೆ | ಪಾಲುಂಬುಧಿ ಶಯ ಶ್ರೀರಾಮಪಾಲಿಪೆನೆಂದ್ವರ ಪಾಲಿಸಿದನು | ಪಾಲಾಂಬುಧಿಶಯ ಶ್ರೀಕೃಷ್ಣ 2 ದಶಮುಖ ದೈತ್ಯನು ಲೋಕವ ಬಾಧಿಸೆ | ದಶರಥಗುದಿಸಿದ ಶ್ರೀರಾಮವಸುಧೆಯ ಭಾರವ ನೀಗುವೆನೆಂ | ದ್ವಸುದೇವ ಸುತನಾದ ಶ್ರೀಕೃಷ್ಣ 3 ಅನುಜರು ಲಕ್ಷ್ಮಣ ಭರತ ಶತೃಘ್ನರ | ಅನುಮೋದಿಸುತಲಿ ಶ್ರೀರಾಮಅನುಜನು ತಾ ಬಲರಾಮನಿಗಾಗುತ | ಅನುಜೆಯಳೊಂದಿಗೆ ಶ್ರೀಕೃಷ್ಣ4 ಶಿಶುತನ ಲೀಲೆಯ ದಶರಥಗೇ | ಕೌಸಲ್ಯಗೆ ತೋರಿದ ಶ್ರೀರಾಮಶಿಶುತನ ಲೀಲೆ ಯಶೋದೆಗೆ ನಂದೆಗೆ | ಸಂತೋಷವು ಶ್ರೀಕೃಷ್ಣ 5 ಯಾಗವ ರಕ್ಷಿಸೆ ಕರೆದೊಯ್ದನು | ಆ ಗಾಧಿಜ ನಿನ್ನನು ಶ್ರೀರಾಮಬಾಗುತ ಬಂದ ಕ್ರೂರನು ಧನು | ರ್ಯಾಗಕೆ ಒಯ್ದ ನಿನ್ನ ಶ್ರೀಕೃಷ್ಣ 6 ಮಾರ್ಗದಿ ಮಂತ್ರಗಳುಸುರಿದ ಮುನಿ | ನೈರರ್ಗಳದೀ ಶ್ರೀರಾಮಗರ್ಗಾಚಾರ್ಯನು ಭೋದಿಸೆ ಮಂತ್ರವ | ನಿರ್ಗಮಿಸಿದೆಯೋ ಶ್ರೀಕೃಷ್ಣ 7 ಪ್ರಥಮದಲಾಹುತಿ ಇತ್ತೆಯೊ ಕ್ರತುವಿಗೆ | ದಿತಿಜೆಯ ತಾಟಕಿ ಶ್ರೀರಾಮದಿತಿಜೆಯು ಪೂಥಣಿ ಅಸುವನು ಹೀರಿದೆ ಪ್ರಥಮದಿ | ಕವಳಕೆ ಶ್ರೀಕೃಷ್ಣ 8 ಅಸುರ ಸುಬಾಹುವನಳಿಯುತಲಬ್ದಗೆ | ಎಸೆದೆ ಮಾರೀಚನ ಶ್ರೀರಾಮ |ಉಸಿರನು ಹೀರಿದೆ ತೃಣವರ್ತನ ನೀ | ಅಸುರ ಶಕಟನ ಅಳಿದೆಯೊ ಶ್ರೀಕೃಷ್ಣ 9 ಚಾರು ಸುಂದರನೇ ಶ್ರೀರಾಮತೋರಿದೆ ವದನದಿ ವಿಶ್ವವ ಮಾತೆಗೆ | ಚಾರ್ವಾಂಗನೆ ಶ್ರೀಕೃಷ್ಣ 10 ವರಪದ ಶಿಲೆ ಸೋಕಲಹಲ್ಯಾ | ಶಾಪ ವಿಮೋಚನೆ ಶ್ರೀ ರಾಮವರಳೆಳೆಯುವಾಗ ಮಣಿಗ್ರೀವರ | ಶಾಪ ವಿಮೋಚನೆ ಶ್ರೀಕೃಷ್ಣ 11 ವ್ಯಾಕುಲರಾಗಿದ್ದಾ ಋಷಿಕುಲ ನಿ | ರಾಕುಲರಾದರು ಶ್ರೀರಾಮಗೋಕುಲವೂ ತವ ಲೀಲೆಗಳಿಂ ನಿ | ರಾಕುಲ ವಾಯಿತು ಶ್ರೀಕೃಷ್ಣ 12 ವೃಂದಾರಕ ವೃಂದವ ಸಲಹಿದನೂ | ಸುಂದರ ಮೂರುತಿ ಶ್ರೀರಾಮವೃಂದಾವನ ವೃಂದವ ಸಲಹೆ ದು | ರ್ವೃಂದವನಳಿದನು ಶ್ರೀಕೃಷ್ಣ 13 ಭಾಮಿನಿ ಸೀತೆಯ ಸ್ವಯಂವರ ನೇಮದಿ | ಪ್ರಾಣಿ ಗ್ರಹಣ ಶ್ರೀರಾಮಭೈಷ್ಮೀ ರುಕ್ಮಿಣಿ ಸ್ವಯಂವರ ನೇಮದಿ | ಪಾಣಿ ಗ್ರಹಣ ಶ್ರೀಕೃಷ್ಣ 14 ಭಾರ್ಗವನೂ ತಾ ನೊಂದೆಂಬುದ ನೈ | ರರ್ಗಳ ತೋರ್ದನು ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ |ಏಕ ಮೇವ ತಾ ಶ್ರೀಕೃಷ್ಣ 15 ಏಕಮೇವ ತಾನೇಕ ಪತ್ನಿತ್ವವ | ಲೋಕಕೆ ತೋರಿದ ಶ್ರೀರಾಮ |ವಾಕು ಸಲಿಸೆ ಬಹು ಪತ್ನಿಯರಾಳಿದ | ಏಕಮೇವ ತಾ ಶ್ರೀಕೃಷ್ಣ 16 ರಾಜ್ಯವ ಬಿಟ್ಟನ ರಾಜ್ಯವ ಸಾರ್ದ ನಿ | ರ್ಲಜ್ಜರ ಸದೆಯಲು ಶ್ರೀರಾಮರಾಜ್ಯವ ಕಟ್ಟಿ ಸ್ವರಾಜ್ಯವ ಮಧುರೆಲಿ ನಿ | ರ್ಲಜ್ಜರ ಹನ ಶ್ರೀಕೃಷ್ಣ 17 ಭಂಜನ ಶ್ರೀಕೃಷ್ಣ 18 ದಂಡಕ ವನದಲಿ ಪುಂಡರ ದಂಡಿಸೆ | ದಂಡವ ಪಿಡಿದನು ಶ್ರೀರಾಮ |ಮಂಡೆಯ ಪಿಡಿದು ಕಂಸನ ಶಿರ | ಚೆಂಡಾಡಿದನು ಶ್ರೀಕೃಷ್ಣ 19 ಶಬರಿಯ ಭಕ್ತಿಗೆ ಎಂಜಲ ಮೆ | ದ್ದಬುಜಾಂಡೋದರ ಶ್ರೀರಾಮ |ಕುಬುಜೆಯ ಭಕ್ತಿಗೆ ವಕ್ರವ ತಿದ್ದಿದ | ಅಬುಜಾಂಡೋದರ ಶ್ರೀಕೃಷ್ಣ 20 ಕಾಯ ಛೇದ ಉ | ಪಾಯದ ಗೈದೆಯೊ ಶ್ರೀಕೃಷ್ಣ 21 ವಾಹನ ಗೈಯುತ | ಮೋಕ್ಷವನಿತ್ತನು ಶ್ರೀಕೃಷ್ಣ 22 ಸೀತೆಯ ಕಳಕೊಂಡ್ವೆಥೆಯನೆ ನಟಸಿದ | ಪೃಥ್ವೀಪತಿಯು ಶ್ರೀರಾಮಕೌತುಕ ತೋರಿದ ನಾರದಗೇ ಬಹು | ಪತ್ನಿಯರಲ್ಲಿ ಶ್ರೀಕೃಷ್ಣ 23 ಮಾಯಾ | ವೈಭವ ಪೊಗಳಿರಿ ಶ್ರೀಕೃಷ್ಣ 24 ಜೋಡಿಸಿ ಬಹು ಸೈನ್ಯವ ಹೂಡಿದ | ರಾವಣ ಸಂಗರ ಶ್ರೀರಾಮಜೋಡಿಸಿ ಬಹು ಸೈನ್ಯವ ಜರೆ ಜನು | ಹೂಡಿದ ಯುದ್ಧವ ಶ್ರೀಕೃಷ್ಣ 25 ಮುರ ನಬಕರು ಮಡಿದರು | ದೇವ ನೀ ಬಾಣವ ಬಿಡೆ ಶ್ರೀಕೃಷ್ಣ 26 ಸೀತೆಯನಗ್ನಿ ನಿವೇಶವ ಗೈಸುತ | ಪೂತಳು ಎನಿಸಿದ ಶ್ರೀರಾಮ |ಕೌತುಕಳು ವೇದ್ವತಿಯಳ ನೀ | ನಾಂತೆಯೊ ಶ್ರೀ ವೆಂಕಟ ಕೃಷ ್ಣ 27 ಪ್ರಥಮಾಂಗನು ಮಾರುತನಿಂ | ಪೃಥ್ವೀ ಭಾರವನಿಳುಹಿದೆ ರಾಮ |ಪ್ರಥಮಾಂಗನು ಭೀಮನಿಂ | ಪೃಥ್ವೀ ಭಾರವನಿಳುಹಿದೆ ಕೃಷ್ಣ 28 ಭರತನಿಂ ವಾರ್ತೆಯ ಕಳುಹಿ | ಭರತನ ಉಳುಹಿದೆ ಶ್ರೀರಾಮ |ಅರದಿ ರವಿ ಮರೆ ಮೌಡುತ ನೀ | ನರನನು ಉಳುಹಿದೆ ಶ್ರೀಕೃಷ್ಣ 29 ಸೀತೆಯ ಸಹ ಪುರಿ ಕೋಸಲೆಗೆ ನೀ | ಮಾತುಳಹಲು ಬಂದೆ ಶ್ರೀರಾಮ |ನೀತರು ನರಕನಿಂದಾ ತರುಣಿಯರ | ಪ್ರೀತಿಲಿ ತಂದೆಯೊ ಶ್ರೀಕೃಷ್ಣ 30 ಪಟ್ಟವಗಟ್ಟಲಯೋಧ್ಯಾಪುರಿಲಿ | ಶಿಷ್ಟರ ಸರ್ವರ ಮಾಡಿದೆ ರಾಮಪಟ್ಟ ಭದ್ರ ಪ್ರಭು ದ್ವ್ಯಷ್ಟಸಾಸಿರ ಪ | ತ್ನ್ಯಷ್ಟರನಾಳಿದೆ ಶ್ರೀಕೃಷ್ಣ 31 ಕುಶಲವರ್ಹ ಸುಳೆಗಳಾ ಮಗೆ | ಅಸಮ ಸಾಹಸಿಗಳ್ ಶ್ರೀರಾಮ |ಶಿಶುಗಳ್ಕøಷ್ಣಗೆ ಗಣನೆಗಸಾಧ್ಯವು | ಅಸಮ ಸಾಹಸಿಗಳ್ ಶ್ರೀಕೃಷ್ಣ 32 ರಾಜ್ಯ ಸುಭೀಕ್ಷವು ಪತಿವ್ರತೆರೆಲ್ಲರು | ವ್ಯಾಜ್ಯ ರಹಿತ ಸ್ವರಾಜ್ಯದಿ ಶ್ರೀರಾಮಪರ್ಜನ್ಯವರ್ಷಿಸಿ ರಾಜ್ಯ ಸುಭಿಕ್ಷವು | ಆರ್ಜವರು ಪ್ರಜೆ ರಾಜ್ಯದಿ ಕೃಷ್ಣ 33 ಪಾಲನ ಪಾಲನ ಶ್ರೀಕೃಷ್ಣ 34 ಭಕ್ತಲಿ ರಾಮನ ಚರಿತೆಯ ಕೇಳಿ | ಮುಕ್ತಿದನು ಕೃಷ್ಣಾತ್ಮಕ ರಾಮಭಕ್ತಿಯಿಂದಾಲಿಸೆ ಭಾಗವತಾ ಕಥೆ | ಮುಕ್ತಿದನು ಗುರು ಗೋವಿಂದ ವಿಠಲ 35
--------------
ಗುರುಗೋವಿಂದವಿಠಲರು
ಶ್ರೀಯತಿವರ ನಮಿಪರ ಸುರತರುವೆ | ಮಮಗುರುವೆ | ನಿರುತದಿ ಭಕುತರ ಪೊರೆವೆ ಅ.ಪ ದಯಾಸಾಂದ್ರ ರಾಘವೇಂದ್ರ | ಸುರುಚಿರಮಂತ್ರಾಲಯೇಂದ್ರ | ಜಯಯತಿವರ ನಮಿಪರ ಸುರತರುವೆ 1 ಭಾಸುರಾಂಗ ಜಿತಾನಂದ | ರಘುವರಪದಮಲಭೃಂಗ | ಜಯಯತಿವರ ನಮಿಪರ ಸುರತರುವೆ 2 ಶ್ರೀಸುಧೀಂದ್ರವರಕುಮಾರ | ಶ್ರೀಶಕೇಶವಾಂಘ್ರಿರುಚಿರ | ಜಯಯತಿವರ ನಮಿಪರ ಸುರತರುವೆ 3
--------------
ಶ್ರೀಶ ಕೇಶವದಾಸರು
ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ ಸ್ಮರಿಸು ಪರಿಮಳ ವಿರಚಿಸಿದ ಗುರು ವರರ ಕರುಣವ ಪಡೆದ ಶರಣರ ದುರಿತ ಉರಗಕೆ ಗರುಡನೆನಿಸಿದವರ ಸುಚರಿತೆಯ ಹರುಷದಿಂದಲಿ ಅ.ಪ ಇಳಿಯೋಳ್ ಶ್ರೀ ಸುರಪುರದಿ ಯಳಮೇಲಿ ಶ್ರೀ ವಿಠ್ಠಲಚಾರ್ಯ ರಿಹ ಜನ್ಮದಿ ಕುಸುಮೂರ್ತಿ ಗುರುಗಳ ಒಲಿಮೆ ಪಡೆದು ನಿತ್ಯದಿ ಗಳಿಸಿದ ಸುಪುಣ್ಯದಿ ಲಲನೆ ಜಾನಕಿ ವರ ಸುಗರ್ಭದಿ ಚಲುವ ಲಕ್ಷಣ ಗಳಲಿ ಜನಿಸಿ ಗೆಳೆಯರೊಡನಾಡುತಲೆ ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1 ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ ತಿರುಗಿಸುತ ಮನವಿರದೆ ಸಿರಿವರ ತುರುಗವದನನ ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ ಮನ್ಮರುತ ಶಾಸ್ತ್ರದ ಶ್ರವಣಗೈದರ 2 ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ ಗುರುಗಳ ಕರುಣವ ಸಂಪಾದಿಸಿ ನೃಪಮಾನ್ಯರೆನಿಸಿ ಹರಿದಿನಾದಿ ವೃತ ಬಿಡದಾಚರಿಸಿ ಕಾರ್ಪರ ನಿಲಯ ಶಿರಿನರ ಹರಿಯ ಪುರವನು ತ್ವರದಿ ಶೇರಿದ ಪರಮ ಮಹಿಮರ ಚರಣ ಯುಗಲವ 3
--------------
ಕಾರ್ಪರ ನರಹರಿದಾಸರು
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು