ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀರಾಮಸ್ತುತಿಗಳು ರಾಮನ ನೆನೆ ಮನವೆ ಹೃದಯಾರಾಮನ ನೆನೆ ಮನವೆ ಪ ಸದ್ಗುಣಧಾಮನ ಸೀತಾ ಅ.ಪ ದಶರಥ ನಂದನನಾ ಧರಣಿಯೊಳಸುರರÀ ಕೊಂದವನ ವಸುಮತೀಸುತೆಯಂ ಒಲಿದೊಡಗೂಡಿ 1 ತಂದೆಯಮಾತಲಿವನಕೈತಂದುಸರಾಗದಲಿಬಂದವಿರಾಧನ ಕೊಂದು ನಿಶಾಚರಿಯಂದವಳಿದು ಖಳವೃಂದವ ಸವರಿದ 2 ಸೀತೆಯನರಸುತಲಿ ಕಬಂಧನ ಮಾತನನುಸರಿಸುತ ಸುತನ ಘಾತಿಸಿ ದಾತನ 3 ವಿಲಾಸದಿಂದ ತರುಣಿಯನರಸಲು ಮರುತನ ಮಗನಿಗೆ ಬೆರಳುಂಗುರವನು ಗುರುತಾಗಿತ್ತನ 4 ಧರಣಿಜೆಯನುಕಂಡುವನವನುಮುರಿದುಗುರುತುಗೊಂಡು ಅರಿಪುರವನು ಸುಟ್ಟುರುಹಿದ ವಾನರವರನಿಗೆ ಸೃಷ್ಟಿಪ ಪದವಿತ್ತಾತನ 5 ಶರಣನ ಲಂಕೆಗೆ ದೊರೆಯನು ಮಾಡಿ ಸಿರಿಯನಯೋಧ್ಯೆಗೆ ಕರೆತಂದಾತನ6 ಧರಣಿಯ ಪಾಲಿಸುತ ಧರ್ಮದ ಸರಣಿಯ ಲಾಲಿಸುತ ವರದವಿಠಲದೊರೆ ಪರಮೋದಾರನ 7
--------------
ವೆಂಕಟವರದಾರ್ಯರು
ಸಲಹೋ ಶ್ರೀನಿವಾಸ ಸದ್ಗುಣನಿಲಯ ವೆಂಕಟೇಶ ಪ ಜಲಜಾಂಬ ನೀನಲಸದೆ ಎನ್ನನು ಅ.ಪ ವಾತವು ಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಘಾತವು ಹೆಚ್ಚಿದ ಸೇರುವ ನೋಡಿ 1 ಶ್ವಾಸ ನಿರೋಧದಲಿ ಸೇರಿದ ಕಾಸುಗಳುದರದಲಿ ಕೇಶರಂಧ್ರವಕಾಶದೊಳೂಧ್ರ್ವ ಬಲು ಶ್ವಾಸ ಹೆಚ್ಚಿ ಘಾಸಿಪಡಿಸುತಿದೆ 2 ಕಾಯದಬಲವೆಲ್ಲಾ ಕದಲುತ ಮಾಯವಾದವಲ್ಲ ನೋಯುತ ದೇಹದೊಳಾಯಾಸ ಹೆಚ್ಚಿತು 3 ನಿದ್ರೆಬಾರದಯ್ಯ ನಿಶೆಯೊಳಗೆದ್ದಿರಬೇಕಯ್ಯಾ ಗುದ್ದಿಕೊಂಡು ಬಿದ್ದೊದ್ದಾಡಿಸುತಿದೆ4 ಅನ್ನವರೋಚಕವು ಅಪ್ತರೊಳನ್ಯತೆಗೋಚರವು ಕಾಣಿ ಕಣ್ಣತೆರೆದು ನೋಡೆನ್ನ ಕಟಾಕ್ಷದಿ5 ರೋಗವು ಘನವಯ್ಯಾರೋದನೆಯಾಗಿಹುದೆನಗಯ್ಯಾ ಭವ ರೋಗ ವೈದ್ಯ ನೀನೇಗತಿಯೆಂದಿಗು 6 ಪರಮಪುರುಷ ನಿನ್ನ ಚರಣವ ಮೆರೆಹೊಕ್ಕಿಹೆ ಮುನ್ನ ವರದವಿಠಲದೊರೆ ವರದದಯಾನಿಧೆ7
--------------
ವೆಂಕಟವರದಾರ್ಯರು