ದತ್ತಾತ್ರೇಯ ಸ್ವಾಮೀ ಕೃಪೆ ಮಾಡೈ ನೀಯನ್ನ ಮ್ಯಾಲ ಪ
ಅನಿಮಿಷಮಾನಸ ಸಂಚಾರಾ
ಅನಾಥ ಜನ ಸಂಕಟ ಪರಿಹಾರಾ
ದೀನ ದಯಾಲ ರಮಾವರಾ ನೆನೆವರ ಸಹಕಾರಾ 1
ಅನಸೂಯಾಕರ ಸಂಪುಟರನ್ನಾ
ಘನತರ ಚರಿತ ಪರಮ ಪಾವನ್ನಾ
ಅನುಪಮ ತ್ರೈಜಗ ಜೀವನ್ನಾ ವನರುಹವದನಾ2
ಸರಸಿಜೋದ್ಭವ ನುತ ಮನ್ನಾಥಾ
ವರ ನಿಗಮಾ ಗೋಚರ ಅನಂತಾ
ಕರುಣಾಂಬುಧಿಯೇ ಸರ್ವಾತೀತಾ ಗುರು ಮಹಿಪತಿ ದಾತಾ3