ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಭಯವಿಲ್ಲ ನಮಗೆ ಪವಮಾನ ಸೇವಕ ಗುರು ರಘುಪತಿಯ ದಯವಿರೆ ಪ ಜೋಡು ಕರ್ಮದಿ ಬಿದ್ದುಕೇಡು ಲಾಭಕೆ ಸಿಲ್ಕಿ ಮಾಡಿದ್ದೆ ಮಾಡುತ ಮೂಢನಾಗಿ ರೂಢಿವಳಗೆ ತಿರಿಗ್ಯಾಡುವ ಅಜ್ಞಾನಿ ಕೋಡಗನ್ನ ಸಿಂಹ ಮಾಡಿದ ಗುರುವಿರೆ 1 ಆವಾನು ದಯಮಾಡೆ ದೇವನು ವಲಿವನು ಆವನ ನಂಬಲು ದೇವಗಣಾ ಕಾವಲಿಗಳಾಗಿ ಕಾವದು ಅಂತ ಕೋವಿದಾಗ್ರಣಿ ಗುರು ರಘುಪತಿ ದಯವಿರೆ 2 ಕರವೆಂಬೊ ಲೇಖನದ್ವಾರದಿಂದ ನಮ್ಮ ಶಿರಿಗೋವಿಂದ ವಿಠಲ ರಾಯನಾ ಕರಸಿ ಸುಹೃತ್ಸುಖ ಬೆರಸಿ ಪರಸ್ಪರ ಕರವಿಡಿದು ತಿರುಗುವ ಗುರುಕೃಪೆ ನೆರಳಿರೆ 3
--------------
ಅಸ್ಕಿಹಾಳ ಗೋವಿಂದ