ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಶರಣು ಶರಣು ದೇವಾಧಿಗಳೊಂದಿತ ನಹುದು ಸ್ವಾಮಿ ಗಣನಾಥ ಶರಣು ಧ್ರುವ ಅಖಿಳ ಭವನದೊಳು ಪೂಜಿತ ಭಕುತ ಜನಕೆ ನೀ ಸಾಕ್ಷಾತ ಶಕುತನಹುದಯ್ಯ ಪ್ರಖ್ಯಾತ 1 ಶುದ್ಧ ಬುದ್ಧರ ಸಹಕಾರ ಬುದ್ಧಿನೀವ ಘನ ಉದಾರ ರಿದ್ಧಿ ಗ್ಯಾಗೀಹ್ಯ ನೀ ಆಧಾರ ಸಿದ್ಧಿದಾಯಕ ವಿಘ್ನಹರ 2 ಜನಕೆ ಮಾಡುವೆ ದೋಷನಾಶ ಅನುದಿನವೆ ಮತಿ ಪ್ರಕಾಶ ದೀನ ಮಹಿಪತಿಯ ಮನೋಭಾವಪೂರಿತಗಣಾಧೀಶ ಶರಣು ಶರಣು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಧ್ರುವ ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು