ಒಟ್ಟು 3008 ಕಡೆಗಳಲ್ಲಿ , 115 ದಾಸರು , 1760 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶೇಣಿ ಗೋಪಾಲಕೃಷ್ಣ) ಗೋಪಾಲಕೃಷ್ಣ ನಿನ್ನಡಿಗಳ ಸೇರಿದೆ ಪ. ಕಾಳಕೂಟಧರ ಕಾಳಿಯ ಸರ್ಪನ ಧಾಳಿಗೊಂಡಿಹ ಗೋಪಾಲರನ್ನು ಪಾಲಿಪೆನೆಂದು ಕೃಪಾಲಯ ತಾಂಡವ ಲೀಲೆಯಿಂದ್ಯಮುನಾಜಲಾಲಯ ಬಿಡಿಸಿದ 1 ವಿಷವೃಕ್ಷ ದಾವಾಗ್ನಿ ವೃಷಭಕೇಶಿ ಬಕ ಅಸಮಸಾಹಸಧೇನುಕಾದಿಗಳಾ ನುಸಿಯಂತೆ ಬಡಿದು ತನ್ನೊಶಗರ ಸಲಹಿದ ಪಶುಪತಿ ವಂದ್ಯ ನೀ ದೆಸೆಯೆಂದು ನಂಬಿದೆ 2 ಸರ್ವದೋಷಹರ ಸಕಲಲೋಕ ವಂದ್ಯ ಗೀರ್ವಾಣಗಣಪೂಜ್ಯ ಪಾದಪದ್ಮ ನಿರ್ವಹಿಸುತ ನೀನೆ ನಿರುತ ನಾಗರಾಜ ಪರ್ವತನಾಥ ಸುಪರ್ಣಾಂಗ ಗಮನಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆನಂದ ಚಂದಿರನೇ ದಾಸನನೇಕಿಂತು ಮರೆವೇ ಪ ದೀನ ದಯಾಪರ ನೀನು ಮನುಜಾಧಮ ನರ ನಾನು ಅ.ಪ ತ್ರಿಜಗಾಧಿಪ ಸುಪೂಜ್ಯನೇ | ಗಜರಾಜ ನತ ಪಾದನೇ ಅಜಸನ್ನುತ ವೈಭವನೇ | ಸುಜನಾವಳಿ ಸನ್ನುತನೇ 1 ಕರುಣಾಮಯ ಸಾಗರನೇ | ಪುರುಷೋತ್ತಮ ಮಾಧವನೇ ಉರಗಾಧಿಪ ಭೂಷಿತನೇ | ಗರುಡಧ್ವಜ ಕೇಶವನೇ2 ಕಡಲವಾಸ ದುರಿತನಾಶ | ಒಡಲ ಬೇಗೆ ಮನದ ಕ್ಲೇಶ ದಡಕೆಸೆಳೆದ ಬಂಧುನಾಶ | ಬಿಡಿಸಿ ಕಾವವ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಂಥ ಮಹಿಮ ಬಲವಂತ ನಮ್ಮ ್ಹನುಮಂತ ನಿಂತು ನೀ ಸಲಹೋ ನಿರಂತರದಲ್ಲೆನ್ನ ಪ ರಾಮನುಂಗುರ ಸೀತೆಗಿಟ್ಟ ಮರವ ಕಿತ್ತಿಸೂ- ರೆ ಮಾಡ್ಯಕ್ಷಕುಮಾರನ್ನ ಮುರಿದು ರಾವಣೇಶನ ಲಂಕಾದ್ವೀಪಕೆ ದೀಪಗಳ್ಹಚ್ಚಿ ಹಾರಿದ್ವಾರಿಧಿ ವಾರ್ತೆ ಹರಿಗೆ ಬಂದರುಹಿದ 1 ಭೀಮಸೇನವತಾರ ಮಾಡಿ ತಾ ಪಾಂಚಾಲಿ ಕೂಡಿ ಕೊಂಡ್ವನವಾಸ ಚರಿಸಿ ಬಂದು ಕ್ರೂರ ಕುರುಪತಿ ಕುಲಕಂತಕನೆಂದರಸನ ಪಟ್ಟ- ರಾಜ್ಞಿ ದ್ರೌಪದಿಧರ್ಮರಾಜಗ್ವಂದಿಸಿದನು 2 ಮಾಯಾವಾದಿಯ ಮುರಿದೊತ್ತಿದ ತಾ ಮಧ್ವ- ರಾಯರಾಗಿ ರಜತಪೀಠಪುರದಲ್ಲೆ ಭೀಮೇಶ ಕೃಷ್ಣನ್ನ ನಿಲಿಸಿ ಬಂದೀ ಬೊಮ್ಮ ಗ್ರಾಮದಿ ನಿಂತನೆ ಸೀತಾರಾಮರ ಸಹಿತವಾಗಿ3
--------------
ಹರಪನಹಳ್ಳಿಭೀಮವ್ವ
ಎನ್ನ ಬಿನ್ನಪ ಕೇಳೊ ಘನ್ನ ಮಹಿಮನೆ ಭವ ಬನ್ನ ಬಡಿಸುತಲಿಹುದೋ ಸ್ವಾಮಿ ಪ ಇನ್ನು ನೀ ಪೊರೆಯೊ ಅಪನ್ನಜನರಾಪಾಲ ಮನ್ನಿಸಿ ಕಾಯೊ ಸ್ವಾಮೀ ಪ್ರೇಮೀ ಅ.ಪ ಆಗಾಮಿಸಂಚಿತಭೋಗಂಗಳು ಎನ್ನ ಯೋಗ ಮಾರ್ಗಕೆ ಪೋಗದಂತೆ ಹೇಗೆ ಮಾಡಿ ಙÁ್ಞನನೀಗೆ ನಿನ್ನಲಿ ಮನಸು ಯೋಗವನು ಮಾಡಗೊಡದೇ ಜಾಗುಮಾಡುತ ಪರಮಭಾಗವತರಲಿಸದಾ ಆಗಮಗಳ ತಿಳಿಯದೇ ಹೀಗಾಗಿ ನಾನು ಅಯೋಗ್ಯನೆನಿಸೀ ಜಗದಿ ಕಾಗಿಯಾಗಿ ತಿರುಗಿದೇ ಸ್ವಾಮಿ 1 ಹೆತ್ತ ಈ ಮೊದಲು ಮತ್ತಾರು ಜನರಿಲ್ಲ ಹೊತ್ತಿಗೇ ಕರೆದನ್ನವೀವರಿಲ್ಲಾ ಗೊತ್ತು ಸ್ಥಳಗಳು ಇಲ್ಲ ವೃತ್ತಿ ಸ್ವಾಸ್ಥ್ಯಗಳಿಲ್ಲ ಚಿÉತ್ತ ಶುದ್ಧಿಯು ಮೊದಲೆ ಇಲ್ಲಾ ಎತ್ತ ಪೋದರೆನ್ನ ಇತ್ತ ಬಾಯೆಂತೆಂದು ಹತ್ತಿರ ಕರೆವೊರಿಲ್ಲ ಎತ್ತ ಪೋದರೆನ್ನ ಮತ್ತೆ ಪಾಲಿಪರ್ಯಾರೊ ಉತ್ತಮನೆ ನೀನೆ ಕಾಯೋ ಸ್ವಾಮೀ 2 ಗರ್ಭವಾಸದಕಿಂತ ದುರ್ಭರಾಭವತಾಪ ನಿರ್ಭರಾವಾಗಿಹುದೋ ಅರ್ಭಕಾಮತಿಯಿಂದ ಅಭರ್Àಟಾ ಕಾರ್ಯವನು ನಿರ್ಭಯದಿ ಮಾಡಿದೆನೊ ಗರ್ಭ ನಾ ದೂತ ನೀ ನಿರ್ಭಯವ ಕೊಡದಿರಲು ಲಭ್ಯವೇ ಸರ್ವಕಾರ್ಯಾ ಲಭ್ಯ ಶ್ರೀಪತಿ ನೀನು ಲಭ್ಯನಾಗದಿರೆ ವೈ ದÀರ್ಭಿರಮಣಾ ಕಷ್ಟವೋ ಸ್ವಾಮಿ 3 ಉಡುವ ವಸ್ತ್ರಗಳಿಲ್ಲ ಒಡಲಿಗಶನವು ಇಲ್ಲ ಕೊಡುವ ಧನ ಮೊದಲೆ ಇಲ್ಲ ಪೊಡವಿಯೊಳು ನಾನತೀ ಬಡವನಲ್ಲದೆ ಮಹಾ ಕಡು ಪಾಪಿಯಾದೆನಲ್ಲೋ ತುಡುಗುತನದಲಿ ಪರರ ಮಡದಿಯರ ನಾ ಬಲು ದೃಢಮನಸಿನಿಂದ ಬಯಸಿ ಧೃಢ ಭಕುತಿಯಿಂದ ಅಡಿಗೆರಗದಲೆ ನಾನು ಪೊಡವಿಭಾರಾದೆನಲ್ಲೋ ಸ್ವಾಮೀ 4 ಓದಿ ಬರೆಯಾಲಿಲ್ಲ ವೇದ ಪಠಿಸಾಲಿಲ್ಲ ಮೋದತೀರ್ಥರ ಶಾಸ್ತ್ರ ತಿಳಿಯಲಿಲ್ಲಾ ವಾದಶಾಸ್ತ್ರಗಳಿಲ್ಲ ಭೇದಪಂಚಕವಿಲ್ಲ ಸಾಧನದ ಮಾರ್ಗವಿಲ್ಲ ಖೇದಗೊಳಿಸುವ ಭವದ ಹಾದಿ ತಿಳಿಯದೆ ನಾನು ಮೋದಕÀರವೆಂದು ಅಲ್ಲೀ ಸಾದರದಿ ಬಿದ್ದು ಆಮೋದಬಡುತಲಿ ದ್ವಿ ಪಾದಪಶು ನಾನಾದೆನಲ್ಲೋ ಸ್ವಾಮೀ 5 ಸತಿಸುತ ಮೊದಲಾದ ಅತಿಹಿತ ಜನರೆನ್ನ ಸತತ ಸಂತ್ಯಜಿಸಿಹರೋ ವಿತತವಾಗಿಹ ಮಹಾಪತಿತದಾರಿದ್ರ್ಯನ್ನ ಅತಿಬಾಧೆ ಬಡಿಸುತಿಹದೋ ಇತರ ಜನರೂ ಎನ್ನ ಅತಿದÀೂರದಲಿ ನೋಡಿ ಅತಿಹಾಸ್ಯ ಮಾಡುತಿಹರೋ ವ್ರತತಿಜಾಂಬಕÀ ನಿನ್ನ ನತಿಸಿ ಬೇಡಿಕೊಂಬೆ ಸತತ ನೀ ಪಾಲಿಸೆಂದೂ ಸ್ವಾಮೀ 6 ತಂದೆ ತಾಯಿಯೂ ನೀನೆ ಬಂಧು ಬಳಗವು ನೀನೆ ಇಂದು ಸಿಂಧು ಒಳಗೆ ಬಿದ್ದೆ ಮುಂದಕ್ಕೆ ಕರೆದು ಕಾಯೋ ಸುಂದರಾಂಗನೆ ಕೃಪಾಸಿಂಧು ನೀ ಬಿಡೆ ಎನ್ನ ನೊಂದದಲೆ ಸಲಹೊರ್ಯಾರೋ ಸ್ವಾಮಿ 7 ಹೊಟ್ಟೆಗಿಲ್ಲದೆ ನಾನು ಬಟ್ಟೆ ಹಾಸೀ ನರರಿ ಗ್ವಟ್ಟರಿಸಿ ಒದರುತಿಹೆನೋ ಪುಟ್ಟದಿರಲೂ ಅನ್ನ ಸಿಟ್ಟಿನಿಂದಾ ನಾಯಿ ಬೆಟ್ಟಕ್ಕೆ ಒದರಿ ತಾನೂ ಹೊಟ್ಟೆಯುಬ್ಬೀ ಕೊನೆಗೆ ಹೊರಳಿ ಹೊರಳಿ ತಾನು ಸುಟ್ಟ ಬೂದಿಲಿ ಬೀಳ್ವ ತೆರದೀ ಒಟ್ಟು ಮಾತಿದು ಕೃಪಾವಿಟ್ಟು ನೀ ಎನ್ನನು ಥsÀಟ್ಟನೇ ಕರಪಿಡಿದು ಕಾಯೋ ಸ್ವಾಮೀ 8 ನಿನ್ನ ದಾಸನು ಆಗಿ ಅನ್ಯರನ ಬೇಡಿದರೆ ಘನ್ನತೆಯು ನಿನಗುಂಟೇ ಘನ್ನ ಜನಪನ ತನುಜ ಇನ್ನು ದೈನ್ಯದಿ ತಾನೆ ಅನ್ಯರನು ಬೇಡುವುದು ಉಂಟೇ ಚೆನ್ನ ಸುಮನಸ ಧೇನು ಮುನ್ನ ಮನೆಯೊಳಿರೆ ಗೋ ವನ್ನು ಬಯಸುವರುಂಟೇ ಇನ್ನು ಪೇಳುವದೇನು ಎನ್ನಭವಣೇ ತಿಳಿದು ಇನ್ನು ಕಾಯಲಿ ಬೇಕೋ ಸ್ವಾಮೀ ಶುದ್ಧಮಾರ್ಗವ ಬಿಟ್ಟು ಬದ್ಧ ಭವಸಾಗರವೆ ಉದ್ಧಾರ ಮಾಳ್ಪದೆಂದೂ ಶಿದ್ಧಜನರಾ ಸೇವೆಗೆ ಬದ್ಧನಾಗದೆ ದುರಾ ರಾಧ್ಯ ಜನರನ್ನು ಭಜಿಸೀ ಉದ್ಧರಿಸುವೊ ಶ್ರೀ ಮಧ್ವಸಿದ್ಧಾಂತದ ಸೂ ಪದ್ಧತಿಯನ್ನೆ ಬಿಟ್ಟೂ ಸಿದ್ಧಮೂರುತಿ ಎನ್ನ ¥ದ್ಧಗಳ ಎಣಿಸದಲೆ ಉದ್ಧಾರಮಾಡೊ ಸ್ವಾಮೀ ಪ್ರೇಮೀ 10 ದಾತ ನೀನೇ ಎನ್ನ ಮಾತುಲಾಲಿಸಿ ಭವದ ರತಿಯನ್ನೇ ಬಿಡಿಸಿ ಕಾಯೋ ಪೊತನಲ್ಲವೆ ನಿನಗೆ ಆತುರದಿ ನಾನೀ ರೀತಿಯಿಂದಲಿ ಪೇಳಿದೆ ಯಾತರಾ ಮಾತೆಂದು ನೀ ಪ್ರೀತಮನಕೇ ತರದೆ ತಾತನೂಕೀ ಬಿಟ್ಟರೆನ್ನಾ ಸೋತುಬಂದಾ ನಿನಗೆ ಆತುರಾವ್ಯಾಕೆಂದು ನೀತವಾಗೀ ಕಾಯ್ವರಾರೋ ಸ್ವಾಮೀ 11 ಮಾತೆ ಮಕ್ಕಳಿಗೆ ವಿಷದಾತೆಯಾಗೇ ತಂದೆ ಪೋತರ ಮಾರಿದಾರೆ ದಾತನಾದಾ ರಾಜ ಆತುರಾದಿಂದಲಿ ನಿಜ ದೂತರರ್ಥಪಹಾರಮಾಡೆ ನೀತಸತಿಯು ತನ್ನ ನಾಥನಾಯು ತಾನೆ ಘಾತವನೆ ಮಾಡಿದಾರೆ ನೀತವೇ ನಿನಗಿದಕೆ ಯಾತರಾ ಚಿಂತೆ ಈ ಮಾತಿನಂತೆ ನಿನಗೆ ಪ್ರೀತೇ ಸ್ವಾಮೀ ಎಷ್ಟು ಪೇಳಲಿ ಎನ್ನ ಕಷ್ಟರಾಶಿಗಳೆಲ್ಲ ಶ್ರೇಷ್ಟವಾಗಿರುತಿಹವೊ ಸ್ವಾಮೀ ದುಷ್ಟನಾದರು vನ್ನ ಭ್ರಷ್ಟಮಗನನು ತಾಯಿ ಅಟ್ಟೀಸೂವಳೆ ಅಡವಿಗೆ ಎಷ್ಟು ಕೆಟ್ಟವ ನಾನಾರಿಷ್ಟನಾದರು ಕೃಪಾ ದೃಷ್ಟಿಯಿಂದಲಿ ನೋಳ್ಪಳೋ ನಷ್ಟದೈವ ನಾನರಿಷ್ಟ ಅಙÁ್ಞನಿ ಕರುಣಾ 13 ದೃಷ್ಟಿ ಯಿಂದಲಿ ನೋಡಿ ಸಲಹೋ ಸ್ವಾಮೀ ಕುಟಿಲ ಖಳಮತಿಯು ನಟಿನೆಮಾಡುತ ಭವಲಂ ಪಟದೊಳಗೆ ಬಿದ್ದಿಹೆನೂ ಸ್ವಾಮೀ ಶಠÀತರನು ನಾನತಿಕಠಿಣಮನಸೀನಿಂದ ಧಿಟಜ್ನಾನಿದ್ರೋಹಗೈದೆ ದಿಟರಿಲ್ಲ ಎನಗೆಂದು ನಟಿಸುತ್ತ ಸರ್ವದ ಅಟನೆಮಾಡಿದೆ ಸರ್ವರಲ್ಲಿ ಪಟುತರನು ನಾನೆಂದು ಧಿಟಗುರುಜಗನ್ನಾಥ ವಿಠಲ ದೇವಾ ನಿನ್ನ ಮರೆದೆ ಸ್ವಾಮೀ 14
--------------
ಗುರುಜಗನ್ನಾಥದಾಸರು
ಕಂಡಿರೆ ಬಗಳಾಶ್ಚರ್ಯವ ಕಂಡಿರೇ ಬಗಳಾಶ್ಚರ್ಯವದಿಂಡೆಯರಾದವರನ್ನೆಲ್ಲ ತುಂಡು ಮಾಡಿಶುಂಭ ನಿಶುಂಭರಸುವ ಕೊಂಡವಳ ಪ ಕ್ರೂರ ಧೂಮ್ರಾಕ್ಷ ಶುಂಭರಾಜನ ನೇಮದಿಂದಸಾರಿ ದೇವಿಯನ್ನು ಮುಂದಲೆ ಹಿಡಿದು ಎಳೆವೆನೆನಲುವೀರಳೀಗ ಕೇಳಿ ಅವಡುಗಚ್ಚಿ ಕಣ್ಣು ತೆರೆಯೆಹಾರಿದನು ಧೂಮ್ರಾಕ್ಷನುರಿದು ಭಸ್ಮವಾದನು1 ಚಂಡ ಮುಂಡಗಪ್ಪಣೆಯನುದ್ದಂಡ ಶುಂಭನೀಗ ಕೊಡಲುಖಂಡೆಯವನೆ ಹಿರಿದು ಮುಂಕೊಂಡು ದೇವಿ ಬಲಕೆ ನಿಂದುಗುಂಡೆಯರ ಕೂದಲು ಹಿಡಿದು ತುಂಡು ಮಾಡಿಯೆ ತಿಂದುಚಂಡ ಮುಂಡರ ತಲೆಯ ಖಂಡಿಸಿದ ವೀರಳ 2 ರಕ್ತ ಬೀಜನ ರಕ್ತದಿಂದ ರಕ್ತಬೀಜರಾಗೆರಕ್ತನಯನಿ ಹಾಸಿದಳು ನಾಲಿಗೆಯ ಭೂಮಿಗೆರಕ್ತ ಬೀಜರನ್ನು ಕಡಿದು ನುಣ್ಣಗೆ ನುಂಗಿ ಆದಿ-ರಕ್ತ ಬೀಜನನ್ನು ಶೂಲದಿಂದ ತಿವಿದು ತಿಂದಳು 3 ಅಂಬನ ಮೇಲೆ ನಿಶುಂಭನೆರಡು ಹಸ್ತ ಹೋಗಿಎಂಬೆನೇನು ಒದಯಲಾಗ ಅಂಬುಜಾಕ್ಷಿ ತೊಡೆಯ ಕಡಿಯೆತುಂಬಿ ಕೋಪದಿಂದಲವನು ತಿಂಬೆನೆಂದು ಮುಂದೆ ಬರಲುಅಂಬಿನಿಂದ ತಲೆಯ ಕಳೆದಳಂಬರದಲುಘೇ ಎನಲು 4 ತಕ್ಕೆಯಲ್ಲಿ ಬಿದ್ದು ದೆಕ್ಕಬುಕ್ಕಿಯಾಡೆ ಶುಂಭನನ್ನುನಕ್ಕು ಶಿವನ ಶೂಲದಿಂದಲಿಕ್ಕಿದಳು ಖಳನ ಎದೆಯಉಕ್ಕಿ ಹರುಷ ದೇವತೆಗಳು ಓಲಗವನೆ ಮಾಡಿದರುದುಃಖಾತೀತ ಚಿದಾನಂದ ತಾನಾದ ಬಗಳೆಗೇ5
--------------
ಚಿದಾನಂದ ಅವಧೂತರು
ಕಂಡೆ ಕಂಡೆ ಮುಚುಕುಂದವರದ ಮು- ಕುಂದ ಮೂಡಲಗಿರಿ ಗೋವಿಂದನ ಪ ಶರಧಿ ಬಿಟ್ಟು ಈ ಗಿರಿಯಲ್ಯಾಕೊ ನೀ ತೆರೆದ ಕಣ್ಣು ನಾರುವಮೈಗೆ ಬಿಳಿಯ ಕರ್ಪುರ ಪರಿಮಳದ ಸುವಾಸನೆಗೆ ಜರಿದು ಬಂದೆ ನಿನ್ನ ಪರಿಯ ನಾ ಬಲ್ಲೆ 1 ಛಲನ ಮೇಲೆ ನಿನ್ನ ಛಲವು ಯಾಕೊ ನೀ ಸುರರಸುರರ ಕೈಯಲಿ ಸಿಕ್ಕು ಭಾರ ತಿರುಗನುಪಕಾರ ಗಿರಿರಾಜನು ನಿನ್ನ ಸರಿಯೆಂದೆನಿಸುವ 2 ಬಲ್ಲೆ ಬಲ್ಲೆ ಕೋರ್ಹಲ್ಲುಗಳಿಂದ ಮೆಲ್ಲುತ ಬೇರನವಲ್ಯವನು ಎಲ್ಲ ನೀಗಿ ದಧ್ಯಾನ್ಯ ನೈವೇದ್ಯ ಚೆಲ್ವ ಧರಣಿಪತಿ ಬಲ್ಲಿದ ವರಾಹನ 3 ಕಂಬ ಒಡೆದು ಕರುಳ್ಹಾರವಲ್ಲದೆ ಕಂಡು ಅಜನ ಕಂಠಾಭರಣ ನೊಂದ ಮೈಗೆ ಪುನುಕಾಪು ಮಜ್ಜನ ತಾಂಬೂಲ ಮಂಚ ಸುಪ್ಪತ್ತಿಗೆಶಯನ 4 ದಾನ ಬೇಡಿದ ನೆಲ ಭೂಮಿಯ ಬಿಟ್ಟುರ- ಗಾದ್ರಿಯಲಿರುವುದು ಉಚಿತವಲ್ಲ ಸಾಧಿಸಿ ಬಲಿಯ ಪಾತಾಳಕೆ ಮೆಟ್ಟಿದ ಪಾದ ತೋರದಲಾಚ್ಛಾದನ ಮಾಡಿದಿ 5 ಪೊಡವಿದಾನ ನೆಲಬಿಡದೆ ಕೊಟ್ಟು ಅಡವಿ ಗುಡ್ಡದಲ್ಲಾವಾಸ ಕೊಡಲಿಪಿಡಿದು ತನ್ನ ಹಡೆದ ಮಾತೆಶಿರ ಕಡಿದ ಕೈ ಕೆಳಗೆ ಮಾಡ್ಹಿಡಿದಸುರನ 6 ಹೆತ್ತಜನಕ ಮನೆಬಿಟ್ಟು ಹೊರಡಿಸೆ ಉಟ್ಟ ನಾರ್ವಸÀ್ತ್ರ ಸಹಿತಾಗಿ ಲಕ್ಷ್ಮಿ ಲಕ್ಷಿಟ್ಟು ಬಂದ್ವಕ್ಷ ಸ್ಥಳದಲ್ಲಿರೆ ಅಷ್ಟಪದವಿಗಧಿಕಾರಿ ಎನಿಸಿದಿ 7 ಗೊಲ್ಲರೇಶ ಎಲ್ಲರಿಗುತ್ತಮನೆಂದು ಬಲ್ಲಿದಮುನಿ ಪಾದದ್ವೊದೆಯೆ ಕೊಲ್ಲಾಪುರ ಮನೆಮಾಡೆ ಮಹಾಲಕ್ಷುಮಿ ನಿಲ್ಲದೆ ಬಂದ್ವಾಲ್ಮೀಕವ ಸೇರಿದೆ 8 ಸಾರಿ ಹೇಳಿ ನೀ ನಿಗಮವ ನಿಂದ್ಯಮಾಡಿ ನಾರಿಯರ ವ್ರತವಳಿದು ಮಾರಜನಕ ಅಭಿಮಾನ ಬಿಟ್ಟರೆ ಅ- ಪಾರಮಹಿಮ ನಿನ್ನ ನೋಡಿ ನಗುವರೊ 9 ದೊರೆ ನಿನ್ನ ದರುಶನಕೆ ತ್ವರಿತದಿ ಜನರು ಮೂವತ್ತು ಗಾವುದ ಮೂರ್ಹೆಜ್ಜೆಯ ಮಾಡಿ ತುರಗನೇರ್ಹಾರಿಸಿ ಗಿರಿಯ ಬಿಟ್ಟೂ ್ಹೀದರೆ ವರದ ವೆಂಕಟನ್ಹಿಂದೆ ತಿರುಗುವರ್ಯಾರೊ 10 ನಿನ್ನ ನಾಮವ ತಂದೆನ್ನ ಜಿಹ್ವಕೆ ಚೆನ್ನವಾಗಿ ಬಂಧನ ಮಾಡೆ ಘನ್ನ ಮಹಿಮ ಭೀಮೇಶಕೃಷ್ಣ ಬಂದು ಕಣ್ಣಿಗೆ ಸುಳಿವ ಪ್ರಸನ್ನವೆಂಕಟನ 11
--------------
ಹರಪನಹಳ್ಳಿಭೀಮವ್ವ
ಕಂಡೆ ನಾನೊಂದು ಸುವಸ್ತ ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ ನೆನವಿನ ಕೊನೆಯಲಿ ಅನುವಾಗಿ ದೋರತದೆ ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ 1 ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆÀದ ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ 2 ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕುಂಡಲಿಶಯನನ ಕೋದಂಡಧರನಾ ಮಂಡಲಾಧಿಪ ತ್ರಿ------- ಬಲವಂತನ ಪ ಪುಂಡರೀಕ ವರದನ ಪುರಾಣ ಪುರುಷನ ಪಂಡರಪುರ ನಿಲಯ ಭಕ್ತರ ಚಲನ 1 ದಂಡಿ ದಾನವರನ ಛೇದನ ಮಾಡಿದನ -------ಕರುಣಿಸಿ ಕಾಯ್ದನ 2 ಪುಂಡರಾವಣನ ಶಿರಗಳ ತರಿದನ ಅಂಡಸೇರಿ ಶರಣಂದನ ಕಾಯ್ದನ 3 ಮಾನವ ದಯಮಾಡಿ ಕಾಯ್ದನ ಕವಿಜನ ರಕ್ಷಕ ಘನ ಶ್ರೀಕೃಷ್ಣನ 4 ಭುವಿನಾಯಕನ ಪೂರ್ಣ ಪ್ರಭಾಕರನ ರಾಜೀವ ನೇತ್ರನ 5 ಲವಕುಶ ಜನಕನ ರಘುಕುಲ ಶ್ರೇಷ್ಠನ -------------------- 6 ಭವಸುರ ವಂದ್ಯನ ಪರಮಾನಂದನ ಕಲೆಯುಕ್ತ ಶಿರಸೂರನ 7 -----ನಾಭನ ಪಾಂಡವ ಪಕ್ಷನ ಮುದನೂರ ವಾಸನ ಮುನಿಜನವಂದ್ಯನ 8 ಯದುಕುಲ ಭೂಷಣನ ------- ವೇದಾಂತ ವೇದ್ಯನ ವಿಶ್ವರೂಪನ 9 ಹೆನ್ನಪುರನಿಲವಾಸ 'ಹೆನ್ನೆವಿಠ್ಠಲನ’ ನಿನ್ನ ------ ಶ್ರೀತ ಜನಪೋಷಕನ 10
--------------
ಹೆನ್ನೆರಂಗದಾಸರು
ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಕುಕ್ಷಿ ಯದು ಭೂಷಣ1 ಅಸಮಂಜ ಸಂಜನಾಭಾ ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ ಹಸ್ತಿ ವಸು ಅರಿಹಹೇಮಗರ್ಭ 2 ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ ಹುಶದಿಪ್ತಕೇತ ಸುವುತವಿಭಾವ ಸು ಶಕುತಿ ಶಿಖಿ ಸಾರ್ವಭೌಮಾ ಸುಖಸೇನ ಭಗೀರಥ ಅಜಮಾನು ಸ್ವರ್ಭಾನು ರುಕ್ಮಾಂಗದ ವಿರಾಜ 3 ಪುರಮೀಢ ಸುಮೀಢ ಭದ್ರಾಶ್ವ ರಮಣಕಾ ಹರಿಧರ್ಮನೇತ್ರ ಸುನೇತ್ರಕೇತುಮಾಲ ಪುರೋರವ ಮಿತ್ರಮನ ಜಯಸೇನ ಶುಭವರ್ಮ ಧರಯತೀ ಪುಣ್ಯದ್ರವಿಣೌ ಕರವೀರ ಸಾವೀರ ಪೌಷ್ಯಕೇಸರಿ ಸಿಂಗ ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ ಅರಣಿ ಭೂಮನ್ಯು ಪ್ರಥಮಾಹವೀರ್ಯ ಸುರದತ್ತ ಹರಿವೀರಮನ್ಯು ವಿಶ್ವಾ 4 ಸುಮತಿ ಸುಂಹರ ರಘು ಮುಚಕುಂದ ದಶರಥ ಸುಮನ ದುಷ್ಯಂತ ಸಂಯಾತಿ ಹಂಸಧ್ವಜ ದಮಯಂತ ನೀಲಾಂಗ ಧರ್ಮಾಂಗದ ಶಮಲ ವಿಮರ ರವಿಕಾಂತ ನಹುಷ ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ ಅಮಿತ ಪರಾಕ್ರಮ ನಭಾಗಂಬರೀಷ ಸೌಮಿತ್ರ ಕಾರ್ತವೀರ್ಯಾ 5 ಪರಮೇಷ್ಟಿ ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ ಮಣಿಕೇತ ಪಾಂಚಜನ್ಯ ಧನಂಜಯ ಕಾಶಿ ಸುಕಾಂತಕುಶ ಕುಶನಾಭ ಮಣಿಸೇನ ಪಾಂಡವ ಜಂಬುನದಿ ದಿವ್ಯರಥ ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ ಅನು ಅನಾಯುಪದಾತೀ 6 ಹರಿಶ್ರವ ಉತ್ತಾನಪಾದ ಕುಂಡಲಗಜ ಯವನಾಶ್ವರಾಜ ನೀಲಧ್ವಜ ಸುರವೃತ್ತ ಕವೇರ ಆಯು ದೃಢಾಯು ವಿಶಾಲ ಪ್ರತಿ ಶ್ರವ ಚಿತ್ರವೀರ್ಯ ಸುಭಗಾ ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ ವಿಕುಂಠ ಸುರಭೀ ಸೂ ಹವಿ ಅಭಿರಾಜ ಸುಹಿಜಾ 7 ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ ಸಂಧ ರೋಹಣ ಸಾಹದೇವ ವಾಪೀ ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ ವೃಂದ ವಿಷ್ಣುವರ್ಧನ 8 ಸಂತತದಲಲ್ಲೆಣಿಸಿದರೆ ಪಾರಗಂಡವರಾರು ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ ಸಂತರು ಕೇಳಿ ಲಾಲಿಸೀ ಪಿಂತೆ ಬಲು ಜನನದಾ ದುರಿತೌಘ ಪೋಗುವದು ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ ಸಂತತಿ ಸಹಿತ ಕಾಂಬರೂ 9
--------------
ವಿಜಯದಾಸ
ಜೈ ಭೀಮ ಜರೆಸುತನ್ವೈರಿ ಜೈ ಭೀಮ ಜಯ ಜಯ ಜಯ ಮುಖ್ಯಪ್ರಾಣ ಸೋಮ ಕುಲದೊಳುದ್ಭವಿಸಿ ಗೀರ್ವಾಣ ಬಲು ಬಲುಮೆಯಿಂದಲಿ ದುರ್ವಾದಿಗಳನ್ನೆ ಮೂತಿಂದ್ವೊತ್ತಿ ಸಲಹೆನ್ನ ಶ್ರೀಮ- ದಾನಂದತೀರ್ಥಮುನಿ ಪ ರೋಮ ರೋಮಕೆ ಕೋಟಿಲಿಂಗ ಜಗತ್ಪ್ರಾಣಿಗಳಿಗೆ ಅಂತರಂಗ ಲಂಕೆನಾಳ್ವೋ ಭೂಪತಿಗತಿ ಭಂಗಬಡಿಸಿ ಕ್ಷೋಣಿಸುತೆಗೆ ಉಂಗುರಿಟ್ಟು ರಾಮರಲ್ಲೆ ಪ್ರೇಮ- ವಾರ್ತೆಯ ತಂದ ಪ್ರಾ- ಣೇಶ ದಯವಾಗೊ 1 ಮಧುವೈರಿ ಮಾತುಳನಾಗೆ ಬಂದು ಮಗಧ ಮುತ್ತಿಗೆ ಹಾಕೆ ಬ್ಯಾಗ ವೃಕೋದರ ಛಲವ್ಹಿಡಿದು ತಾ ಹೋಗೆ ಅಲ್ಲೆ ದ್ವಿಜನ್ವೇಷಧರಿಸ್ವಾಸುದೇವ ವಾಸವಿ ಕೂಡಿ ಮಗಧರಾಜನ ಮ- ರ್ಮಗಳಿಂದ ಸೀಳಿದ್ಯೊ 2 ಹಾಟಕಾಂಬರನಲ್ಲಿ ಭಕ್ತರೆಂದು ಅರಿಯದೆ ಅಂತಕನ ಪುತ್ರ(ನ) ಜೂಜಿನಾಟ(ದಿ) ಸೋಲಿಸಿ ಸೆಳೆಯೆ ವಸ್ತ್ರ ಕೃಷ್ಣೆ ನೋಟದಿ ಭಸ್ಮ ವಿಚಿತ್ರ ಸವ್ಯಸಾಚಿ ಸಹಿತವಾಗ್ವಿರಾಟ- ವರ್ಗದಿ ಸತಿಗೆ ಕಾಟ ಕಳೆದ್ಯಮ- ಪುರಿಗೆ ದಾಟಿಸ್ದ್ಯೋ ಕೀಚಕನ 3 ಕಳೆದÀು ಅಲ್ಲಜ್ಞಾತವಾಸ ಬಂದು ಖಳರೊಳಗಧಿಕ ದುಶ್ಶಾಸ(ನ) ಅವನ ಕರುಳ ಬಗೆಯಲತಿ ರೋಷ ಕಾಲಕ್ಕೊದಗಲು ನರಹರಿ ಆ- ವೇಶ ಕಂಡು ಸುರರಸುರರ ಸೈನ್ಯ ಜರಿದು ಹಿಂದಕೆ ನಿಲ್ಲೆ ರಣಧೀರ- ಗೆಣೆಯಿಲ್ಲ ಪರಮ ಪರಾಕ್ರಮ 4 ಸಕಲ ಜೀವರಿಗಾಧಾರಕನೊ ಭಾರತಿ ಪ್ರಾರಂಭಕ್ವೊಂದಿತನೊ ಮಧ್ವಮತ ಶಾಸ್ತ್ರಗಳ ಉದ್ಧಾರಕÀನೊ ತ್ರಿಗುಣ ಜೀವನು ಸಾರಪ್ರೇರಕನು ವಾಯು ಸಕಲ ಸುರರೊಡೆಯ ಭೀಮೇಶ ಕೃಷ್ಣನಲ್ಲಿ ಭಕುತಿ ಜ್ಞಾನವ ದಿವ್ಯ ಮುಕುತಿ ಮಾರ್ಗವ ತೋರಿದಿ 5
--------------
ಹರಪನಹಳ್ಳಿಭೀಮವ್ವ
ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ದೇವಕೀಕುವರ ನವಘನಸುಂದರ ಭಾವಜ ಜನಕ ಮಾದೇವ ಕೃಪಾಕರ ಪಾವನ ಸುಕುಮಾರ ಹರೇ ಹರೇ ಪ ನಿರುಪಮ ಚರಿತ ವರಗುಣ ಭರಿತೇ ಮರಕತಮಣಿ ಮಾಲಾಹಾರ ಸಂಶೋಭಿತೇ ಸುರಗಂಗಾಸುತ ರಾಜಿತಮೌನಿಯುತೇ ವೈರಿಕುಲ ಭಂಜನ ಪಾಂಡವ ಮಿತ್ರೇ1 ಶ್ರೀವನಮಾಲಾಧರ ಮುರಳೀಕರ ದೇವಸುಧಾಕರ ಶ್ರೀ ಮಾಂಗಿರಿವರ ಭಾವಕಜನಪರಿವಾರ ಶುಭಂಕರೇ ರೇವತೀರಮಣಾ ನಂದಕರೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಮೋ ನಮೋ ವೆಂಕಟೇಶಾ ಸರ್ವೋತ್ತಮಾನೆ ಶ್ರೀಶಾ ಪ ರಮಾರಮನೆ ಸದ್ಧಿ ಮಾಕರಾಕರ್Àಮುಖ ಸುಮಾನಸಾನತ ಸಮೀರನಗಧೀಶಾ ಅ.ಪ ವರವೈಕುಂಠದಿಂದ ಈ ಧರಾತಳಕೆ ಬಂದ ಚರಣಕಮಲಕೆ ಶರಣು ಮಾಳ್ಪರ ಕುರುಣಿಸೀ ಭವ ಅರಣದಾಟಿಪ 1 ಧರೇಶ ತೊಂಡನೃಪಗೆ ನೀ ದರಾರಿ ಇತ್ತವಗೆ ಧರಾಸುರೇಶನ ಜರತರಿದು ಬಹು ತ್ವರದಿ ಯೌವನ ಖರೆಯನೀಡಿದಿ 2 ಇಭರಾಜ ನಿನ್ನ ನುತಿಸೆ ಅಭಯವಿತ್ತೆಘನ್ನಾ ಶುಭಕರನೆ ನಿನ್ನ ಪ್ರಭಾವ ಕೇಳಿದೆ ಪ್ರಭುವೆ ಎನ್ನ ಭವಭಯಾಕಳಿಯೊ ಸ್ವಾಮಿ 3 ಮಹಾನುಭಾವ ಎನ್ನ ಮನದಲಿ ವಹಿಸಿದೇ ನಿನ್ನ ಗಹನಮಹಿಮನೆ ಮಹಾಪರಾಧವ ಸಹನ ಮಾಡೆಲೊ ಅಹೀಶಗಿರಿವಾಸ 4 ಪಾತಕಾದ್ರಿಕುಲಿಶಾ ನೀ ವಿಧಾತಾದಿಸುರಕುಲೇಶಾ ನೀತಗುರು ಜಗನ್ನಾಥವಿಠಲ ನಿಜ ದೂತಜ£ಕÀತಿ ಪ್ರೀತಾನಾಗುವೊ ದಾತಾ 5
--------------
ಗುರುಜಗನ್ನಾಥದಾಸರು
ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ. ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ. ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1 ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಕೂರ್ಮ ಬಾರೊ ಹರಿಯೆ 2 ಧsÀರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3 ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ- ಡಿಂಬ ಬಾರೊ ಹರಿಯೆ 4 ಮಾಣವಕವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5 ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ 6 ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೊ ಹರಿಯೆ 7 ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8 ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9 ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10 ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
--------------
ವಾದಿರಾಜ
ಪರಿ | ಪೋಷಿಸು ನೀ ಎನ್ನ | ಕರುಣಾರಸ ಪೂರ್ಣಾ ಪ ಶ್ರೀಶ ನೀನಲ್ಲದೆ | ಪೋಷಿಸುವರ ಕಾಣೇ | ಹುಸಿಯಲ್ಲ ಯನ್ನಾಣೆ ಅ.ಪ. ಗೋಪಿ ಜನರ ಪ್ರೀಯ | ಸುಮ್ಮನಿ ಜನ ಗೇಯಾಹೇ ಪರಮ ಪುರುಷ ತವ | ರೂಪ ಕಾಂಬುದೆಂದೂ | ಬಿನ್ನಪ ಸಲಿಸಿಂದೂ ||ಕಾಪಥ ಐಸದೆ | ಸುಪಧವ ನೀ ತೋರೋ | ಭಕುತ ಪೋಷ ಬಾರೋ |ದ್ರೌಪತಿಗಕ್ಷಯ | ವಸನವ ನೀನಿತ್ತು | ಕಳೆದೆಯೋ ಆಪತ್ತು 1 ಕಡಲ ಶಯನನೇ | ಮಡದಿ ಮಕ್ಕಳನ್ನ | ನಿನ್ನಡ್ಡಿಗ್ಹಾಕಿದೆನಿನ್ನಒಡಲಿಗಾಗಿ ದೈನ್ಯ | ಪಡಲಾರೆನೊ ಹರಿಯೇ | ಕೇಳೆನ್ನ ದೊರೆಯೇ ||ಮಡುವಿಲಿ ಮಕರಿಯ | ಬಿಡದೆ ಕಾಯ್ದ ಹರಿಯೇ | ಕರಿರಾಜನ ಪೊರೆಯೇಒಡಮೂಡಿ ಕಂಬದಿ | ದೃಡ ಭಕುತ ಜಂಗುಳಿಯ | ಪರಿಹರಿಸಿದೆ ಜೀಯ 2 ಪಾದ | ಲೀಲೆ ಬಹು ವಿನೋದ |ಪಾಪಿಯು ನಾ ನಿಜ | ಪಾವನ ನೀ ಕೇಳೋ | ನಾ ನಿನಗಡಿಯಾಳೋ ||ಗೋಪ ಗೋಪಿಯರ ಸ | ಲ್ಲಾಪಕೊಲಿದ ದೇವ |ಹೇ ಮಹಾನುಭಾವತಾಪ ಮೂರುಗಳ ಗುರು | ಗೋವಿಂದ ವಿಠಲ | ಪರಿಹರಿಪುದು ನಲ್ಲ 3
--------------
ಗುರುಗೋವಿಂದವಿಠಲರು