ಮೊದಲಿಂದ ನೀ ಕೆಟ್ಟೆ ಮನುಜ ಪ
ಬುಧರಾಡುತಿಹ ನುಡಿಯನು ಕೇಳದೆ ಅ.ಪ
ಹಗಲಿರುಳು ದುರ್ವಿಷಯದಲಿ ಬಿದ್ದು
ಮಿಗೆ ದುರಿತಗಳ ಗಳಿಸಿ ಮುಂದೆ ಯ-
ಮಗೆ ನಿರುತ್ತರನಾದೆಯಲೊ 1
ಹೆಣ್ಣು ಹೊನ್ನು ಮಣ್ಣುಗಳ ಬಯ
ಸಿನ್ನು ದುರ್ಜನ ಸೇವೆಯಿಂ
ಜನ್ಮವ ನಿರರ್ಥಕವ ಗೈಯುತಾ
ರಣ್ಯದೊಳಿಹ ಪಿಶಾಚದೋಲ್ 2
ನಿರತವು ಸಜ್ಜನರಡಿಯ ಕಿಂ-
ಕರನೆನಿಸಿ ನೀ ಬಾಳೆಲೊ
ಕರುಣದಲಿ ಗುರುರಾಮ ವಿಠ್ಠಲ
ಕಾಯುವನು ಸಂದೇಹ ಬಿಡು 3