ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಟವ ಮಾಡದಿರು ಕೇಳೆಲೊ ಮೂಢ ಪ ಕುಟಿಲವ ಬಿಡು ನೀ ಗಾಢ ಅ.ಪ. ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರ ವೈಷ್ಣವೋತ್ತಮನೆನ್ನೊ 1 ಮಧ್ವ ಸಿದ್ಧಾಂತದ ಪದ್ಧತಿ ಬಿಡದಲೆ ಶುದ್ಧ ವೈಷ್ಣವರೊಳಾಡೊ 2 ಹರಿ ಶರಣರ ಚರಣ ಕಮಲಂಗಳಿಗೆ ಗರುವಪಡದೆ ನೀ ಬೀಳೊ 3 ಸಂತತದಲಿ ಶ್ರೀಕಾಂತನ ಗುಣಗಳ ಚಿಂತನೆ ಮಾಡುತ ಬಾಳೊ 4 ಮಂಗಳಾಂಗ ತ್ರಿಜಗಂಗಳ ಪೊರೆವವ ರಂಗೇಶವಿಠಲನೆನ್ನೊ 5 ನೆಲವಿತ್ತ ದಯವಂತ ಶ್ರೀಕಾಂತ 3
--------------
ರಂಗೇಶವಿಠಲದಾಸರು