ಒಟ್ಟು 33 ಕಡೆಗಳಲ್ಲಿ , 15 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೀಗೆ ಮೊರೆ ಇಡಲೋ | ನಿನ್ಹೊರತಿನ್‍ಆರೀಗೆ ಮೊರೆ ಇಡಲೋ ಪ ಮಾರ ಜನಕೆ ಹರೇ ಅ.ಪ. ಭಾರ ಬೆನ್ನಿಲಿ ಪೊತ್ತುಧಾರುಣಿಯನೆ ಚಿಮ್ಮಿ | ದುರುಳನ ತಂದೆಯೋ 1 ಕರವ ಚಾಚಿದೆ ದೇವಾ 2 ಪರಶುವ ಸಿಡಿದು ನೀ | ತರಿದೆಯೊ ತಾಯ್ ಕೊರಳಶರದಿಯ ಬಂಧಿಸಿ | ದುರುಳರ ತರಿದೆಯೋ 3 ಪೂಥಣಿ ಶಕಟ ಧೇನುಕ ವತ್ಸ ಭಂಜನಮಥಿಸಿ ಕಂಸನ ನಿನ್ನ ಮಾತಾಪಿತರ ಕಾಯ್ದೆ 4 ಬೆತ್ತಲೆ ತಿರುಗಿ ನೀ | ಉತ್ತಮ ಹಯವೇರಿವತ್ತಿ ದುರುಳನ ಶಿರ | ಕತ್ತರಿಸಿದೆ ದೇವಾ 5 ಆರತ ಜನ ನಿನ್ನ | ಈ ರೀತಿ ಪೇಳ್ವರುವಾರುತೆ ಕೇಳಿ ನಾ | ಮೊರೆಯಿಟ್ಟು ಅರುಹುವೆ 6 ಮುರಹರ ಶ್ರೀಕೃಷ್ಣ | ಗುರು ಗೋವಿಂದ ವಿಠಲಸರುವ ದೇವೋತ್ತಮ | ಕರುಣದಿ ಸಲಹೆನ್ನ 7
--------------
ಗುರುಗೋವಿಂದವಿಠಲರು
ಆಗಿದ್ದ ಹರಿ ಈಗಿಲ್ಲವೇನು ಸಾಗರಶಾಯಿ ಭಕ್ತರಭಿಮಾನ್ಯಲ್ಲೇನು ಪ ಖುಲ್ಲರ್ಹಾವಳಿಯಿಂದ ಝಲ್ಲು ಬಿಡಿಸಿ ಮುನಿಯ ಕಲ್ಲನ್ನು ಸತಿಮಾಡ್ದ ಬಿಲ್ಲು ಇಕ್ಕಡಿಗೈದ ಕೊಲ್ಲಿ ದಶಮುಖನನ್ನು ನಲ್ಲೆಯಳ ಕರೆತಂದ ಒಲ್ಲಿದು ರಾಜ್ಯವನಿತ್ತ ಸುಲಭದ್ವಿಭೀಷಣಗೆ1 ಅರಮನೆಕಂಬದಿ ಅರಿಯದಂತಡಗಿ ತಾ ದುರುಳನ ಸದೆಬಡಿದು ತರಳ ಸಲಹಿದ ಬರುವ ಮುನಿಶಾಪವಂ ವರಚಕ್ರದಿಂ ತಡೆದು ಕರುಣದಿ ನೃಪನನ್ನು ಪೊರೆದ ಪರಮಾತ್ಮ 2 ಕರುಣಾಳು ಶ್ರೀರಾಮ ಚರಣದಾಸರ ಮನಕೆ ಕೊರತೆಯ ತರದಂತಿರುವ ಬೆಂಬಿಡದೆ ಮರುಗಿ ಸೊರುಗುವುದ್ಯಾಕೊ ಸರುವ ಭಾರವನ ಮೇ ಲ್ಹೊರೆಸಿ ಮೊರೆಯಿಟ್ಟ ಬಳಿಕರಿಯನೇನೀಶ 3
--------------
ರಾಮದಾಸರು
ಇನ್ನೆಷ್ಟು ಹರಿಮಹಿಮೆ ಬಣ್ಣಿಸ್ಹೇಳಲಿ ನಿನಗೆ ನಿನ್ನೊಳು ನೀ ತಿಳಿದು ಧನ್ಯಾನಾಗೆಲೊ ಮನಸೆ ಪ ತನ್ನನ್ನು ಭಜಿಪರ ತನ್ನಂತೆ ನೋಡುವ ಉನ್ನತ ಕರುಣ್ಯೆಂದು ಚೆನ್ನಾಗಿ ನೆರೆನಂಬಿ 1 ಮೊರೆಯಿಟ್ಟು ಬೇಡುವ ಚರಣದಾಸರನಗಲಿ ಅರೆಗಳಿಗೆಯಿರ ಹರಿ ಚರಣಕ್ಕೆ ಮರೆಬೀಳು 2 ನಂಬಿದ ಭಕುತರ ಚರಣದಾಸರನಗಲಿ ನಂಬಿ ನೀ ನಗಲದೆ ಗುಂಭದಿಂ ಸ್ಮರಿಸೆಲೊ 3 ಮಾನವು ಪೋದರೇನು ಹಾನಿಯೊದಗಿದರೇನು ಪ್ರಾಣಪೋದರು ಹರಿಧ್ಯಾನ ಮರೆಯದಿರು 4 ನಾಶವಿಲ್ಲದೆ ತನ್ನ ದಾಸರ ಕಾಯ್ವನನು ಮೇಷ ಶ್ರೀರಾಮಪಾದ ಧ್ಯಾಸದೊಳಿಡು ಗಟ್ಟಿ 5
--------------
ರಾಮದಾಸರು
ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಕಷ್ಟಪಡಲಾರೆನೋ ಸೃಷ್ಟೀಶ ಶ್ರೀಶಾ ದುಷ್ಟದಮನ ದೀನವತ್ಸಲ ನಾರಾಯಣ ಪ ಒಡಲು ಕ್ಷಣಗಳು ಬಿಡದೆ ಬಾಧಿಸೆ ನಿನ್ನ ಅಡಿಯಕಾಣಿಸದಿವೆ ಕೆಡಿಪ ದುರಾಶೆಯ ಸುಡುತಲಿ ನೂಕು ದುಡುಕುವ ಮನವಂ ಸಡಲಿಸಬೇಕು ಕಡುಮುದದಿಂದಲಿ ಕಾಯುತ ಸಾಕು ಪರಾಕು 1 ಲೋಕಿಗರೊಳು ನಾನನೇಕದುಶ್ಚರ್ಯೆಯ ವಿ- ವೇಕವಿಲ್ಲದೆ ಮಾಡಿ ಕಾಕುಮನುಜನಾದೆ ಘೂಕದ ಪರಿಯೀ ಭವಸಂಸಾರ ನಾಕವಾದರೂ ಬಹು ನಿಸ್ಸಾರ ಜೋಕೆಯೊಳಿದಬಿಟ್ಟು ಒಟ್ಟು ಬಂದನೆ ತೋರಾ ಶೋಕಸಾಗರವಾ ಶೋಷಿಪಶೂರ 2 ಇಷ್ಟ ಮೂರುತಿ ನಿನ್ನ ನಿಷ್ಠೆಯಿಂ ಕಾಣುವೆ ಎಷ್ಟು ಮೊರೆಯಿಟ್ಟರೂ ದೃಷ್ಟಿಸದಿರುವೇ ಅಷ್ಟಮದಗಳನಿತಿಷ್ಟೂ ನಿಲ್ಲವೋ ಭ್ರಷ್ಟಗುಣಗಳ ನಿಷ್ಠುರಗೈವುದೋ ವಿಷ್ಣು ಶ್ರೇಷ್ಠಪದ ಕೊಟ್ಟು ಕರುಣಿಸೋ ಕೃಷ್ಣ ಕೃಪಾಳು ಹೆಜ್ಜಾಜೀಶಾ 3
--------------
ಶಾಮಶರ್ಮರು
ಗಜೇಂದ್ರ ಮೋಕ್ಷ ವರಶಂಖಗದೆ ಪದ್ಮಕರದಿ ಚಕ್ರವ ಪಿಡಿದ ಗರುಡಗಮನ ನಮ್ಮ ಕರಿವರದಹರಿಯನ್ನ ನಿರುತ ನೆನೆನೆನೆದು ಬದಿಕಿರಯ್ಯಾ ಪ ಹರಿಧ್ಯಾನ ಹರಿಸೇವೆ ಹರಿಭಕ್ತಿ ಹರಿಚರಿತೆ ದುರಿತದುರ್ಗಕೆಕುಲಿಶ ವರಮುಕ್ತಿಸೋಪಾನ ಕಾಣಿರಯ್ಯಾ ಅ.ಪ. ಕ್ಷೀರಸಾಗರ ಮಧ್ಯೆ ಗಿರಿತ್ರಿಕೂಟ ದೊಳಗೆ ಇರುವುದೂ ಋತುಮಂತ ವರುಣನ ವರವನವು ಅಲ್ಲಿ ಪರಿಪರಿಯ ಲತೆಬಳ್ಳಿ ಸರಸಸ್ಥಾನಗಳಲ್ಲಿ ಮೆರೆವೋರು ಸುರಸಂಘ ನಾರಿಯರ ಸಹಿತಾ 1 ಪದ್ಮಗಾಶ್ರಯವಾದ ಪದ್ಮಕೊಳಾದೊಳಗೆ ಮದಿಸಿದಾ ಗಜವೊಂದು ಐದಿತು ಪರಿವಾರ ಸಹಿತ ವಿಧಿಯ ಬಲ್ಲವರಾರು ಮುದದಿರ್ದ ಆ ಗಜಕೆ ವಿಧಿ ವಕ್ರಗತಿಯಿಂದ ಪಾದವನೆ ಪಿಡಿಯಿತು ನಕ್ರವೊಂದು 2 ಒಂದು ಸಾವಿರ ವರುಷ ಕುಂದದೆಲೆ ಕರಿಮಕರಿ ನಿಂದು ಹೊರಾಡೆ ಸುರವೃಂದ ಬೆರಗಾಯಿತು ಬಂಧು ಬಳಗವು ಮತ್ತೆ ಅಂದ ಹೆಂಡಿರು ಎಲ್ಲ ಕುಂದು ಅಳಿಸದೆ ಇರಲು ಛಂದದಲಿ ಯೋಚಿಸಿತು ಗಜವೂ 3 ಏನಿದ್ದರೇನಯ್ಯ ಶ್ರೀನಿವಾಸನಕೃಪೆಯು ಇನ್ನಿಲದಾಮೇಲೆ ಕುನ್ನಿಗೆ ಸರಿಎಂದು ಹೀನ ಎನ್ನಯ ಜನ್ಮ ದೀನ ಭಾವದಿ ಹರಿಯ ಮಾನವನು ಬದಿಗಿಟ್ಟು ಧ್ಯಾನಿಸಿ ಸ್ತುತಿಸಿದಾ 4 ಸತ್ಯಶಾಶ್ವತಭೋಕ್ತ ಸೃಷ್ಟ್ಯಾದಿಕರ್ಮವಿಗೆ ನಿತ್ಯ ತೃಪ್ತನು ಆದ ಶಾಡ್ಗುಣ್ಯಪರಿಪೂರ್ಣನೆ ವಂದಿಸುವೆನೋ ಓತಪ್ರೋತದಿ ಜಗದಿ ವ್ಯಾಪ್ತ ಆಪ್ತನು ಆದ ಆರ್ತದಲಿ ಕರೆವೆನೋ 5 ಎಲ್ಲಕಡೆಯಲಿ ಇರ್ಪ ಎಲ್ಲರೂಪವ ತಾಳ್ವ ಎಲ್ಲ ಪ್ರೇರಣೆಮಾಳ್ವ ಎಲ್ಲರಿಂ ಭಿನ್ನನಿಗೆ ವಂದಿಸುವೆನೋ ಎಲ್ಲರಿಂ ಉತ್ತಮಗೆ ಎಲ್ಲರಾ ಬಿಂಬನಿಗೆ ಎಲ್ಲರ ವಾಚ್ಯನಿಗೆ ನಲ್ಲನೆಂತೆಂದು ನಾಕರೆವೆನೋ 6 ಎಲ್ಲರನು ಗೆದ್ದವಗೆ ಎಲ್ಲರಾನಲ್ಲನಿಗೆ ಎಲ್ಲ ದೋಷವಿಹೀನ ಒಳ್ಳೆ ಗುಣ ಪೂರ್ಣನ ಕರೆವೆನೋ 7 ನಿನ್ನ ತಿಳಿದವರಿಲ್ಲ ನಿನ್ನ ಮೀರಿದುದಿಲ್ಲ ಜನನ ಮರಣಗಳಿಲ್ಲ ನಿನಗಿಲ್ಲ ಸಮ ಅಧಿಕ ವಂದಿಸುವೆನೋ ನಿನ್ನನಾಮಕೆ ಗುಣಕೆ ನಿನ್ನ ಅವಯವಕೆ ನಿನ್ನ ಕ್ರಿಯ ರೂಪಗಳಿಗೆ ಇನ್ನಿಲ್ಲವೊ ಭೇದಸಾರಿ ನಾಕರೆವೆನೋ 8 ವೇದಗಮ್ಯನುನೀನೆ ವೇದದಾಯಕ ನೀನೆ ವೇದಾತೀತನು ನೀನೆ ಸಾಧು ಪ್ರಾಪ್ಯನುನೀನೆ ವಂದಿಸುವೆನೋ ಖೇದವರ್ಜಿತನೀನೆ ಅಂದ ಸಾರವು ನೀನೆ ಬಂಧನೀಡುವ ನೀನೆ ಅದ್ಭುತ ಅಚಿಂತ್ಯಶಕ್ತಿವಂತನ ಕರೆವೆನೋ 9 ಜ್ಞಾನಿಗೋಚರನೀನೆ ಗುಣಾತೀತನು ನೀನೆ ಗುಣಪ್ರವರ್ತಕನೀನೆ ಅನಾಥ ಸರ್ವಸಮ ವಂದಿಸುವೆನೋ ಜ್ಞಾನದಾಯಕನೀನೆ ಆನಂದಮಯನೀನೆ ನೀನೇ ಸರ್ವಾಧಾರ ನೀನೆ ಏಕನು ಎಂದು ಕೂಗಿ ನಾಕರೆವೆನೋ 10 ಸಾಕಾರ ನಿರಾಕಾರ ಆಕಾರ ಅಹೇಯ ಓಂಕಾರ ವಾಚ್ಯನೆ ಸಾಕಲ್ಯಸಿಗದವನೆ ಸ್ವೀಕಾರ ಮಾಡೋ ವಿಕಾರ ವರ್ಜಿತನೆ ಲೋಕೈಕವೀರಾನೆ ನೀ ಕೆವಲನು ಮುಕ್ತೇಶ ಸಲಹೋ 11 ಏನು ಕೊಡಲೊ ದೇವ ದೀನನು ನಾನಯ್ಯ ನಿನ್ನದೇ ಈ ಭಾಗ್ಯ ಮನ್ನಿಸುತ ದಯಮಾಡಿ ಸಲಹೋ ಘನ್ನಕರುಣಾಳುವೆ ಅನ್ಯರನು ನಾ ನೊಲ್ಲೆ ನಿನ್ನವನು ನಿನ್ನವನೋ ನಿನ್ನ ಚರಣಕೆ ಶರಣು ಶರಣೂ 12 ಕರಿ ತಾನು ಮೊರೆಯಿಡುತ ಕೂಗಲು ಸುರವೃಂದ ಯೋಚಿಸುತ ಹರಿಯಲ್ಲದನ್ಯತ್ರ ಅರಿಯೆವೀಗುಣವೆಂದು ಅರಿತು ಸುಮ್ಮನಿರಲೂ ಹರುಷದಿಂದಲಿ ಹರಿಯು ಗುರುಡನೇರುತ ಬರಲು ತರಿದು ನಕ್ರನ ಭರದಿ ಕರಿಯಪೊರೆಯೆ ಆದ 13 ಏನೆಂದು ವರ್ಣಿಸಲಿ ಶ್ರೀನಿವಾಸನ ಕರುಣ ದೀನ ಭಕ್ತರ ಮೇಲೆ ಸಾನುರಾಗದಿ ಕರಿಯ ಹಿಡಿದೆತ್ತಿದಾ ಇನ್ಯಾಕೆ ಭಯವಯ್ಯ ಘನ್ನ ಇಂದ್ರದ್ಯುಮ್ನನೆ ಏಳು ಮುನ್ನಿನಾ ದೋಷವಿದು ಇನ್ನು ನೀ ಧನ್ಯನಹುದೋ 14 ದೇವಲನ ಶಾಪದಲಿ ಆ ವರ ನಕ್ರನಾಗಿದ್ದ ಶ್ರೀವರನ ಭಕ್ತ ಹೂಹೂ ಗಂಧರ್ವನೆರಗಿ ಬಿದ್ದನು ಹರಿಗೇ ದೇವೇಶ ಹುಸಿನಗುತ ಈವೆ ವರವನು ಕೇಳಿ ಯಾವಾತ ಈ ಕಥೆಯ ಭಾವಶುದ್ಧದಿ ಭಜಿಸೆ ಉದಯದಲಿ ನಾ ಒಲಿವೆ ತವಕದಲಿ ಎಂದನೂ 15 ಹರಿಗೆ ಸಮರಾರಿಲ್ಲ ಹರಿಭಕ್ತ ಗೆಣೆಯಿಲ್ಲ ಸುರರು ಮೊರೆಯಿಟ್ಟರಾಗ ಹರಿವಾಯುಗುರುಗಳು ಕರುಣದಿಂದಲಿ ಇದನು ಮನ್ನಿಪುದು ಬುಧರೂ 16 ಮುದ್ದುಜಯತೀರ್ಥರ ಹೃದಯದಲಿನಲಿಯುವ ಮಧ್ವಾಂತಃಕರಣದಿ ಮುದ್ದಾಗಿ ಕುಣಿಯುವಂಥ ಮಾಧವ ಶ್ರೀಕೃಷ್ಣವಿಠಲರಾಯನು ಬೇಗ ಮೋದ ಸುರಿಸುವ ಈ ಪದವ ಪಠಿಸಲೂ 17
--------------
ಕೃಷ್ಣವಿಠಲದಾಸರು
ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ | ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಪ ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ | ಲಾಭವಲ್ಲದ ಇದು ನೋಡುವದಕೆ ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ ವೈಭೋಗವಲ್ಲೆನೆಂದರೆ ಬಿಡದು ರಮಣೀ 1 ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ ಪರಿ ಸೌಖ್ಯವ ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ 2 ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ ಚಾರಮಾಡದೆ ತಂದು ಹೃದಯಮಧ್ಯ ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ ಸಾರದೊಳಗಿದ್ದ ಸುಖವಿನಿತುಂಟು ರಮಣೀ 3 ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ ಪಿಂತೆ ಕಾಂತಾರದಲಿ ಬಾಲಮೃಗನ ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ- ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ 4 ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು ಮಾಜಿಕೊಂಡಿದ್ದು ಜನರಂತೆ ನಡದು ಸಿರಿ ವಿಜಯವಿಠ್ಠಲನ ಸ ರೋಜ ಚರಣವನು ಪೂಜಿಸುವೆನು ರಮಣೀ 5
--------------
ವಿಜಯದಾಸ
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ದೇಹಿಯೆಂಬವನೊಡನೆ ನಾಸ್ತಿಯೆನಬೇಡ ಕಾಯೊ ವೆಂಕಟಪತಿಯೆ ಕಾರುಣ್ಯವಾರಿಧಿಯೆ ಪ ಮಾಡಿದಪರಾಧಗಳ ನೋಡಿ ಕ್ಷಮಿಸಿಯೆ ಯೆನಗೆ ರೂಢಿಯೊಳು ಬೆಳೆಸಿರಿಯ ಕೈಗೂಡಿಸಿ ಆಡಿ ತಪ್ಪಿದ ನುಡಿಯ ಕೂಡಿ ನಡೆಸುತ ಮುಂದೆ ಬೇಡಿದಿಷ್ಟವನಿತ್ತು ಮಾತಾಡಬೇಕೆನುತ 1 ನರನಾದ ಕುರಿಯಿದನು ಸಲಹಬೇಕೆಂದೆನುತ ಮೊರೆಯಿಟ್ಟು ನಿನ್ನಡಿಗೆ ಶರಣಾದೆನು ಕರುಣವಾರಿಧಿ ನಿನ್ನ ಚರಣದಾಭರಣನಿಗೆ ಹರಣವನು ಮರೆವಾಗೆ ಸ್ಮರಣೆ ನೀಡೆನುತ 2 ಗುಣವಾದ ಪತ್ರಿಕೆಯ ಕ್ಷಣದೊಳಗೆ ಹರಿದೆನ್ನ ಕಣುಮನಕೆ ದೃಢವಾದ ಗುಣವ ತೋರೆನುತ ಫಣಿಶಯನ ನಿನ್ನಡಿಗೆ ಮಣಿದು ಬೇಡುವೆ ನಾನು ಉಣಲಾಗದೋಗರವ ಉಣಿಸಬೇಡೆನುತ 3 ಕೆಟ್ಟ ಕೆಲಸವನಿದಿರು ದೃಷ್ಟಿಗಿಕ್ಕದೆÀಯೆನ್ನ ಬಿಟ್ಟು ಕಳೆಯಲು ಬೇಡ ಸೃಷ್ಟಿಪಾಲಕನೆ ಇಟ್ಟಡಿಯ ಕಮಲವನು ಮುಟ್ಟಿ ಭಜಿಸುವೆ ನಾನು ಹುಟ್ಟಿದೀ ಬವರದೊಳು ಕಷ್ಟ ಬೇಡೆನುತ 4 ಶುದ್ಧ ಸ್ನಾನವ ತೊರೆದು ಇದ್ದ ಜಪಗಳ ಮರೆದು ಕರ್ಮ ಒದ್ದು ಕಳೆದು ಉದ್ದಂಡವಾಗಿ ನಡೆದಿರ್ದ ಪಾಪಂಗಳನು ತಿದ್ದಿಟ್ಟು ಎನ್ನನುರೆ ಉದ್ಧರಿಸಬೇಕಯ್ಯ 5 ಪೊಡೆವಿಯೊಳಗೆನ್ನಂಥ ಕಡುಮೂರ್ಖರನು ಕಾಣೆ ಮಡದಿಯೆಂಬಡವಿಯೊಳು ಕೈದುಡುಕಿದು ಪಡೆದ ಮಕ್ಕಳ ಮುಂದೆ ಕಡೆ ಹಾಯುವವರಿಲ್ಲ ಒಡೆಯನಾಗಿಯೆ ಯೆನ್ನ ಬಿಡದೆ ಸಲಹೆನುತ 6 ನಾರಿ ಮಕ್ಕಳಿಗೆಲ್ಲ ಮೀರಿದಾಪತ್ತಿನಲಿ ತೋರಿಸುವೆ ನಿನ್ನ ಚರಣಂಗಳೆನುತ ಹಾರೈಸಿದ್ಹರಕೆಯಿದು ಭಾರವಾಗಿಯೆ ಶಿರದಿ ಏರಿದುದನಿಳುಹುವರೆ ದಾರಿ ತೋರೆನುತ 7 ತ್ರಾಹಿ ವೆಂಕಟರಾಯ ಕಾಯೊ ನಿನ್ನಯ ಮಾಯೆ ಮೋಹಿಸುತ ಜಗವೆಲ್ಲ ಬಾಯ ಬಿಡುತಿಹುದು ದೇಹಿಯೆನುತಿಹ ಜನಸಹಾಯನಲ್ಲವೆ ನೀನು ಮಾಯವಾಗದೆ ಮುಂದೆ ಆಯತನ ತೋರೆನುತ 8 ಸುರವಂದ್ಯ ಮುರಮಥನ ಗುರುದೈವ ಪರಮಾತ್ಮ ವರಲಕ್ಷ್ಮಿಕರವೆನಿಪ ಹರಿವೆಂಕಟೇಶ ಮರೆವಾಗದಿರು ಯೆನ್ನ ಕರೆದು ನೆರೆ ಸೌಖ್ಯವನು ಸ್ಥಿರವಾಗು ಎನ್ನೊಡನೆ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಧೀರತನವ ಪಾಲಿಸೋ ಪ ಭವ ತೀರಕ್ಕೆನ್ನನು ಸೇರಿಸೋ ಅ.ಪ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠರಕುಲದಿಬಹು ಪುಣ್ಯದಿ ಇನ್ನು ಪುನರಪಿ ಜನ್ಮವಿಲ್ಲ ನಿನ್ನ ಕಿಂಕರನನ್ನು ಸೇರಿಸಿ ಪಾಲಿಸಿ ||ನಾರಾ|| 1 ಅಷ್ಟಯೋನಿಗಳಲ್ಲಿ ಹುಟ್ಟಿಸಾಯುತ ಬಲು ಮೊರೆಯಿಟ್ಟು ಬೇಡಲಿ ಎಳ್ಳಿನಷ್ಟು ಕಾರುಣ್ಯವು ಪುಟ್ಟದೇನೋ ಸೃಷ್ಟಿಗೈಯುವೇ ಪುಷ್ಠಿಗೈಯುವೆ ಕಟ್ಟಕಡೆಯೊಳು ನಷ್ಟಪಡಿಸುವೆ ಸೃಷ್ಟಿಯೊಳು ಜೊತೆಗಟ್ಟಿನೋಡುವ ದಿಟ್ಟರಾರೈ ವಿಷ್ಟಮೂರುತಿ2 ಧರೆಯ ರಾಜ್ಯವನೊಲ್ಲೆ ಸಿರಿಯಸಂಪದ ವೊಲ್ಲೆ ಸುರರು ಭೋಗಿಪ ಸುರಪುರವಾನೊಲ್ಲೆ ನಿನ್ನ ಹೊರತಾದಕೈವಲ್ಯ ಸ್ಥಿರವೊಲ್ಲೆನು ನಾನಾ ತೆರದಿ ಭಕ್ತಿಯೊಳಿರಲಿ ಯನ್ನಯ ಕರಣವೃತ್ತಿಯು ಪರಮ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ನರಹರಿ ಶರಣರಸುರತರು ಶ್ರೀಕರ ಹರಿ ನಿಮ್ಮ ಪಾದಸ್ಮರಣೆ ಮರೆಯಲಾರೆನೆಂದೆಂದು ಪ ಹರಿ ನೀನೆ ಗತಿಯೆಂದು ಮೊರೆಯಿಟ್ಟು ಸ್ಮರಿಪರ ಅರಲವ ಬಿಡದವರ ಸ್ಮರಣೆಯೋಳ್ನೆಲೆಗೊಂಡು ತೆರೆದು ಕರುಣಚಕ್ಷು ಪೊರೆವೆ ಎವೆಯಿಕ್ಕದೆ 1 ವೇದವೇದಾದಿ ನಮಿತ ಸಾಧುಸಜ್ಜನ ವಿನುತ ಪಾದದಾಸರ ಭವಬಾಧೆಗೆಲಿಸಿ ಸು ಹಾದಿ ತೋರಿಸಿ ಬಹು ಮೋದದಿಂ ಸಲಹುವಿ 2 ನೀ ಮಾಡಿದುಪಕಾರ ನಾ ಮರೆಯಲಾರೆ ದೇವ ಈ ಮಹಭವದು:ಖ ಕ್ಷೇಮದಿಂ ಗೆಲಿಸಿದಿ 3
--------------
ರಾಮದಾಸರು
ನಾರಾಯಣನಿನ್ನಪಾರಾಯಣಗೈವ ಧೀರತನವಪಾಲಿಸೋ ಪ ತೀರಕೆನ್ನನು ಸೇರಿಸೋ ಅ.ಪ ಜನ್ಮದಿ ತೊಳಲುತ ಖಿನ್ನನಾಗಿ ವರ್ಣಶ್ರೇಷ್ಠಕುಲದಿ ಬಹುಪುಣ್ಯದಿ ಘನ್ನ ಮಹಿಮನೆ ನಿನ್ನ ಸೇವೆಯೊ ಳುನ್ನತದ ರತಿಯನ್ನು ಪಾಲಿಸಿ 1 ಅಷ್ಟಯೋನಿಗಳಲ್ಲಿ ಹುಟ್ಟಿ ಸಾಯುತ ಬಲು ಕೆಟ್ಟಕರ್ಮವ ಮಾಡಿ ಕಷ್ಟಪಟ್ಟು ಎಷ್ಟು ನಿನಗೆ ಮೊರೆಯಿಟ್ಟು ಬೇಡಲು ಎಳ್ಳಿ ನಷ್ಟು ಕಾರುಣ್ಯವು ಪುಟ್ಟದೇನೋ ಕಟ್ಟಕಡೆಯೊಳು ನಷ್ಟಪಡಿಸುವೆ ದಿಟ್ಟರಾರೈ ಇಷ್ಟ ಮೂರುತಿ 2 ಪರಮೇಷ್ಟಿ ಪುರದೊಳಗಿರಲಾನೊಲ್ಲೆನು ನಿನ್ನ ನಿರುತ ನಿನ್ನಯ ಚರಿತೆಯಲಿ ಮನ ವಿರಲಿ ನಾನಾತೆರದ ಭಕ್ತಿಯೊಳು ಪರಮ ಪುಲಿಗಿರಿ ವರದವಿಠಲ 3
--------------
ವೆಂಕಟವರದಾರ್ಯರು
ಪರಾಕು ಹೇಳುವನ ನಿರಾಕರಿಸುವದು ಹೊಕ್ಕ ನಿನ್ನ ಸೇವೆಯೊಳಗೆ ಬಹು 1 ಮಲಾದು(?0 ಇರುವಂ-------ಳಗೆ ಇರುವ ಅಲಾದಿ ಅಂಗಗಳು ಅವತರಿಸಿದ ದೇವಾ 2 ನೆಲಾನ ಘೂರಿಸಿದ ಭಲಾಶೆ ಮಾಡಿ ದುರುಳಾದ ಕರುಳ ತೆಗೆದು ಕೊರಾಳಲ್ಲಿಟ್ಟ ಸ್ವಾಮಿ 3 ಧರಾನÉ ದಾನ ಬೇಡಿ ಸರಾನ ಕೋಪದಿಂದ ಶರ---------ಸಿದ ಶ್ರೀಹರಿ ಎಂದು ಬಹು 4 ಬಲಾನೆ ಕುಟ್ಟಿ ಖಳನ ಬಲಾನೆಲ್ಲವ ಮುರಿದು ಲಲಾನೆಯನು ತಂದು ರಘುರಾಮನೆಂದು ಬಹು 5 ದುಷ್ಟ ಕಂಸಾನ ಕೊಂದಾ ಸೃಷ್ಟಿಕರ್ತಾನು ನೀನು ಕೃಷ್ಣಾ ಕರುಣಿಸೂ ಎಂದು ಪ್ರಾಯದಲಿ ಮೊರೆಯಿಟ್ಟು 6 ಅಂಬಾರವನು ಬಿಟ್ಟು ಸಂಚಾರದಲಿ ನೀ---- ---ಂ ಬೇರಿದಂಥ ಶ್ರೀ ಮಹಾನುಭಾವನೆನುತಾ 7 ಶರಾಣು ಎಂದು ಬಂದವರಾನ ಪೊರೆದ ಶ್ರೀಧರಾನೆ ರಕ್ಷಿಸೆಂದು ಕರಾವು ಮುಗಿದಿಂದೂ8 ನಿರಾಮಯಾನಾದ ಶ್ರೀ ರಾಮದೇವರೆನ್ನ ಪತಿ `ಹೊನ್ನ ವಿಠ್ಠಲಾ’ 9
--------------
ಹೆನ್ನೆರಂಗದಾಸರು
ಪರಿಪಾಹಿ ಗುರು ರಾಘವೇಂದ್ರ ಪ ಶರಣರ ಪೊರೆಯಲು | ವರ ಮಂತ್ರಾಲಯಪುರದಲಿ ನೆಲಿಸಿಹೆ | ಕರುಣಿಗಳರಸಅ.ಪ. ಪಿತನ ಬಾಧೆಗೆ ಲವ | ವ್ಯಥೆಯನು ಪಡದಲೆರತಿಪತಿ ಪಿತನೆ ಸ | ರ್ವೋತ್ತಮನೆಂದೂರದೆ 1 ದ್ವಿತಿಯ ಯುಗದಲಿ | ದೈತ್ಯನಲ್ಲುದಿಸುತಸೀತೆಯ ರಮಣನ | ಪ್ರೀತಿಯ ಪಡೆದೆಯೋ 2 ದ್ವಾಪರದಲಿ ಪ್ರ | ತೀಪನ ಸುತನೆನಿಸೀ ಶ್ರೀಪತಿ ಕೃಷ್ಣನ | ಪ್ರೀತಿಯ ಪಡೆದೇ 3 ಇಷ್ಟವಿಲ್ಲದ ಪುಣ್ಯ | ಎಷ್ಟೂ ಗಳಿಸಿ ನೀವುಶಿಷ್ಟರ ಪಾಲಿಸೆಂದು | ಕೃಷ್ಣನ ಮೊರೆಯಿಟ್ಟೆ 4 ವ್ಯಾಸರಾಯರಾಗಿ | ಭೂಸುರ ಸುಜನರಕ್ಲೇಶವ ಹರಿಸಿದೆ | ದಾಸಕೂಟಕೆ ಹಿರಿಯಾ 5 ಶ್ರೀಶನರಹರಿ | ವ್ಯಾಸ ರಾಮಾ ಕೃಷ್ಣಈಸು ರೂಪಗಳಲ್ಲಿ | ವಾಸವು ವೃಂದಾವನದಿ 6 ಪರಿಪರಿ ವಿಧ ನಿಮ್ಮ | ಚರಣವ ಸ್ಮರಿಸುವನರರ ಮನೋರಥ | ಹರಿಯ ಕರುಣಿಪ 7 ಸರಸಿಜಾಸನ ಮುಖ | ಸುರಪ ದೇವರ್ಕಳಲ್ಲಹರಿಯನು ಚರರೆಂಬಾ | ವರಮತಿ ಪಾಲಿಸೋ8 ಭವ ಭಯ ಹರಿಸೀ 9
--------------
ಗುರುಗೋವಿಂದವಿಠಲರು
ಪೊರೆಯುವುದೆಮ್ಮನು ನರಹರಿ ನೀನು ಸ್ಮರಿಪೆವು ತವ ಪದಸರಸಿಜಗಳನು ಪ. ತರಳ ಪ್ರಹ್ಲಾದನು ಮೊರೆಯಿಟ್ಟು ತಾನು ಕರೆಯಲಾಕ್ಷಣ ಬಂದೆ ತ್ವರಿತದಿ ನೀನು 1 ದುರುಳ ಹಿರಣ್ಯಕಸುರನನು ಸೀಳಿ ಸುರರನ್ನು ಸಲಹಿದೆ ಕರುಣವ ತಾಳಿ 2 ಮಿತ್ರ ಮಂಡಳಿ ಶತಪತ್ರಕೆ ನೀನು ಮಿತ್ರನಂತೆಸಗು ವಿಮಿತ್ರತೆಯನ್ನು 3 ಕಾರುಣ್ಯಾಮೃತವಾರಿಧೇ ಮೂರ್ತೇ ವರ ಲಕ್ಷುಮಿನಾರಾಯಣ ಸತ್ಕೀರ್ತೇ 4
--------------
ತುಪಾಕಿ ವೆಂಕಟರಮಣಾಚಾರ್ಯ