ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ಶ್ರೀನಿವಾಸನೂ ಶ್ರೀರಂಗನೂಈತನೀಗ ಶ್ರೀನಿವಾಸನೂ ಪಈತನೀಗ ಶ್ರೀನಿವಾಸ ಈತ ಸಕಲಾ ಲೋಕಕೀಶಈತ ಭೂತಪತಿಯ ಪ್ರೀತ ಈತ ಲಕ್ಷ್ಮೀಕಾಂತ ಖ್ಯಾತ ಅ.ಪಕೌಸಲ್ಯಾತ್ಮಜಾತನೆನಿಸಿದ ಶ್ರೀ ರಾಮಚಂದ್ರಕೌಶಿಕನೊಳ್ ವಿದ್ಯ ಪಠಿಸಿದಾ ವೈಶ್ವಾನರನಸಾಕ್ಷಿಯಿಂದ ವಸುಧೆಸುತೆಯ ಒಲಿಸಿ ತಂದಕೀಶಬಲನ ಕೂಡಿ ಬಂದು ಆ ದಶಾಸ್ಯನನ್ನೆ ಗೆಲಿದಾ 1ದೇವಕೀಯ ತನಯನೆನಿಸುತಾ ಶ್ರೀಕೃಷ್ಣವನದಿಗೋವುಗಳನು ಮೇಸಿ ಚಲಿಸುತಾಹಾವಿನ್ಹೆಡೆಯ ತುಳಿದು ನಲಿದುಗೋವರ್ಧನವ ಸೆಳೆದು ಬಡಿದು ಮಾವಕಂಸನ್ನ ಗೆಲಿದು ದೇವಿ ರುಕ್ಮಿಣಿಯನು ತಂದ 2ಬಕುಳದೇವಿದತ್ತಪುತ್ರನೂ ಶ್ರೀ ವೆಂಕಟೇಶಸುಖದಿ ತಿರುಪತಿಯೊಳು ನಿಂತನೂಯುಕುತಿಯಿಂದ ಪದ್ಮಾವತಿಯ ಸಕಲವೈಭವದಲಿ ವರಿಸಿ ಭಕುತರನ್ನ ಪೊರೆವ ಗೋವಿಂದದಾಸನೊಡೆಯನಿವನೂ 3
--------------
ಗೋವಿಂದದಾಸ
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
--------------
ಗೋವಿಂದದಾಸ
ಗೋಪಾಲ ಶ್ರೀಕೃಷ್ಣ ಮೂರುತಿ ನೀನೇಕಾಪಾಡೆನ್ನನುಜಿಷ್ಣುಸಾರಥಿ ಪತಾಪತ್ರಯದೊಳ್ ನೊಂದೆ ತಪಗೈಯ್ಯಲರಿಯೆನು ನೀಕೃಪೆಯೊಳನುದಿನರೂಪತೋರಿಸು ದೇವಾ ಅ.ಪದೇವಕಿಯುದರದಿ ಜನಿಸಿಗೋಪಿದೇವಿಗೆ ತನಯನೆಂದೆನಿಸಿಜೀವ ಘಾತಕೆ ಬಂದ ಪೂತನಿಯಸು ಹೀರಿಗೋವುಗಳನು ಮೇಸಿದೆ 1ದೈತ್ಯರ ಕೊಂದು ಗೋವರ್ಧನವೆತ್ತಿದೇಕಾಮದಿ ಬಂದ ಬಾಲಕಿಯರನು ಕೂಡಿದೇಹಾವಿನ ಹೆಡೆಯ ಮೇಲೆ ನಲಿದು ಬಿಲ್ ಹಬ್ಬದಿಮಾವ ಕಂಸನ ಮುರಿದು ಕರುಣದಿತಾಯಿ ತಂದೆಯ ಸೆರೆಯ ಬಿಡಿಸಿದೆ 2ಶರಧಿಮಧ್ಯದಿ ಮನೆಮಾಡಿದೇಅಲ್ಲಿಭರದಿಂದಷ್ಟಮ ಸ್ತ್ರೀಯರಲಿ ಕೂಡಿದೇನರಮುರಶಾದ್ಯರ ಮುರಿದು ಷೋಡಶ ಸಹಸ್ರತರುಣಿಯರೊಡಗೂಡಿದೇ ಪಾರಿಜಾತತರುವ ನೀನೊಲಿದು ತಂದೆ ಪಾಂಡವರೊಳುಭರಿತ ಕೃಪೆಯ ತೋರಿದೆಧುರದಿಮಾಗಧಚೈದ್ಯ ಧರಣಿಪಾಲರ ಗೆಲ್ದುತರುಣಿ ದ್ರೌಪದಿಗ್ವರವ ಪಾಲಿಸಿನರಗೆ ಸಾರಥಿಯಾದೆ ಶ್ರೀಹರೀ 3ಸಂಧಾನವೆಸಗಿ ಪಾಂಡವರಕರ-ದಿಂದ ಕೊಲ್ಲಿಸಿದೆ ಕೌರವರಚಂದ ಧರ್ಮರಾಯಗೆ ಪಟ್ಟ ಕಟ್ಟಿಸೀನಿಂದಶ್ವಮೇಧಗೈಸಿ ನೀ ಸುರಗಣವೃಂದ ಸಂತಸ ಬಡಿಸಿ ಯಾದವಕುಲ ಮುಗಿಲದಿಂದಲಿಸುಂದರಾಂಗವ ಬಿಟ್ಟು ಕ್ಷೀರಸಿಂಧುವಿಗೈದೆಚಂದದಲಿ ಗೋವಿಂದದಾಸನೆಬಂದು ಮಂಗಲ ಮುಖವ ತೋರಿಸೋ 4
--------------
ಗೋವಿಂದದಾಸ