ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡವೋರಂಗ ಹೆಂಗಳ ತಳ್ಳಿ ಹೋಗ ಬೇಡವೋನಾ ಬೇಡಿ ಕೊಂಬೆನುದಮ್ಯಯ್ಯ ಪ ಊರೊಳಗೆಲ್ಲ ನಿನ್ನಯ ದೂರೇ ರಂಗ ಬಾರೋ ನಿನ್ನನು ಕಾಣದಿರಲಾರೆ ಯಾರಿಗೆಂಬೆನು ಗೋಕುಲದೊಳಗಿರ್ದ ನಾರಿಯರೆಲ್ಲರು ಕಿವಿಗೆಡಸಿದರೆನ್ನ 1 ಚಿಕ್ಕವನಾಗಿ ನೀನಿರುತಿರೆ ಹೆಣ್ಣು ಮಕ್ಕಳ ಮೇಲÉ ಕಣ್ಣಿಡುವರೆ ಪೊಕ್ಕು ಪಾಲ್‍ಬೆಣ್ಣೆಯ ಕದ್ದರೆ ಗೋಪರ ಮಕ್ಕಳು ಕಂಡರೆ ಪ್ರಾಣವ ತೆಗೆವರು 2 ಎಲ್ಲ ಜೀವರಿಗೂ ನೀಹಿತನಾಗಿ ಪ್ರೀತಿಯಲ್ಲಿರು ಭಾರಿ ಪುರುಷನಾಗಿ ಹಲ್ಲ ಕಡಿದಿಹರಂತೆ ಗೋಪರು ಮಾನಕೊಳ್ಳಲು ಯತ್ನವ ಮಾಡಿ ಕೊಂಡಿಹರಂತೆ 3 ಕಂಡರೆ ಹಿಡಿದು ಕಟ್ಟುವರಾಗಿ ಪುಂಡ ನಿಲ್ಲಿಸ ಬೇಕೆನುತ್ತೆಲ್ಲಿ ಗೋಪರು ಕಂಡಿ ಕಣೆವೆ ಕಟ್ಟಿಕೊಂಡು ಸಾಧಿಪರಂತೆ 4 ಪಾಲು ಬೆಣ್ಣೆಯ ಕದ್ದು ಮೆಲುವರೆ ಕೃಷ್ಣ ಬಾಲೆಯರನು ಗೋಳು ಹೊಯ್ವರೆ ನಿ ನ್ನಾಲಯದೊಳಗೇನು ಕಡಿಮೆಯಾಗಿದೆ ಲಕ್ಷ್ಮೀಲೋಲನ ದಯದಿಂದ ಸಕಲ ಸಂಪತ್ತಿದೆ 5
--------------
ಕವಿ ಪರಮದೇವದಾಸರು
ಬ್ರಹ್ಮಾಂಡನಾಯಕನ ಪ ಕೆಂಜೆಯ ಮೇಲÉೂಪ್ಪುವ ಶಶಿ ಹಸ್ತದ ಸದ್ಯೋಜಾತ ಸ್ವಯುಂಭುವ 1 ಬೆರಳುಕದೊಳಕ್ಷಮಾಲೆಯ ವಾಮ ದೇವನ2 ಭ್ರೂಕುಟಿ ಮುಖದ ಭಯವರದ ಜಪಮಾಲೆ ಪಾಶಾಂಕುಶ ಸರ್ಪಾಭರಣದ ಘೋರನ 3 ಉಗ್ರಾಸನ ಉರಿಗಣ್ಣಿಂದು ಮೌಳಿಯ ತುತ್ಪುರುಷನ 4 ಖಡ್ವಾಂಗ ಢಮರುಗ ಕರದ ಕಪಾಲೇಂದು ಮೌಳಿಯ ಈಶಾನ್ಯನ 5 ಕಂಡೆನು ಉತ್ತರದೊಳ್ ವಾಮದೇವನ ಕಂಡೆನು 6 ಫಣಿ ಬಂಧಿವಿದ್ದ ಕೆಳದಿ ರಾಮೇಶನ 7
--------------
ಕವಿ ಪರಮದೇವದಾಸರು