ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂಡನಾಡುವ ಬಾರೆಲೈ ಪ್ರಾಣೇಶ್ವರ ಪ. ಮಲ್ಲೆ ಜಾಜಿ ಸಂಪಿಗೆ ಮೇಣ್ ಮಲ್ಲಿಗೆ ಇರುವಂತಿಗೆ ಚಲ್ವ ಪಾರಿಜಾತದಿಂದ ಚೆಲ್ವನಾಂತು ಮೆರೆಯುತಿರ್ಪ 1 ಪರಿಮಳಾನ್ವಿತ ಪಾಟಲೀ ಸುರಗಿ ಸೇವಂತಿಗೇ ಸುರಭಿಳÀ ಕರಮಾಗಿ ಯೆಸವಪರಿಯನೋಡಿ ನಲಿಯುತಾವು 2 ವಿಮಲಶೇಷಶೈಲವಾಸ ಕಮಲಬಾಂಧವ ಸದೃಶಭಾಸ ಕಮಲನಾಭ ಭಕ್ತಪಾಲ ರಮಣ ನಿನ್ನ ಕಮಲಪಾಣಿಯಿಂ3
--------------
ನಂಜನಗೂಡು ತಿರುಮಲಾಂಬಾ
ದ್ರೋಹಿಯೋ ನಾನಿನಗೆ ದ್ರೋಹಿಯೋ ಪ ಪಾಹಿ ಬ್ರಹ್ಮಜವಂಶ ಪಾಪ ಬ್ರಾಹ್ಮಣ ಪ್ರಿಯ ಅ.ಪ ಸ್ವಪ್ನ ಜಾಗ್ರತೆ ನಿದ್ರೆ ಮೋಕ್ಷಾವಸ್ಥೆಯಲ್ಲಿ ತೈಜಸ ವಿಶ್ವ ಅಪ್ಪತುರೀಯನಾಗಿ ದಾತ ನಿನ್ನನ್ನು ಬಿಟ್ಟು ಬೆಪ್ಪನಂದದಿ ನರರ ಯೆಂಜಲ ಬಯಸುವೆ 1 ಬಿಂಬ ಮೂರ್ತಿಯು ನೀನು ಪ್ರತಿ ಬಿಂಬನಾನಿನಗೆ ತುಂಬಿ ಅಂತರ್ಬಹಿ ಮೆರೆವ ವಿಷ್ಣುವೆ ನಿನ್ನ ನಂಬಿದೆ ದೃಢದಿಂದ ಬರಿದೆ ಹಂಬಲಿಸುವೆ ಬೆಂಬಲನಾಗಿದ್ದು ತುಂಬೊ ನಿನ್ನಯ ಭಕ್ತಿ 2 ಸತಿ ಸುತ ಪಿತರಲ್ಲಿ ತಿಳಿಯದೆ ನಿನ್ನಿರವ ಹಿತರವರು ಬರಿದೆಂಬ ಭ್ರಾಂತಿಯ ನೀಗದೆ ಖತಿಯ ಪಡುವೆನು ಭವದಿ ಕುಮತಿಯನಗೆಮುಂದೆ ಗತಿಯೇನು ಜಗದೀಶ ಮರೆತು ನಿನ್ನನು ದೇವ 3 ಕಸವ ರಸವೆಂದು ಬಯಸುವೆ ವಿಷಯವ ರಸವ ವಿಷವೆಂದು ತೊರೆದು ಜೀವಿಸುತಿರ್ಪೆ ಅಸಮವಿಷಣವಿಷ್ಣು ಆತ್ಮಾಖ್ಯಾತನ ನಿನ್ನ ತುಸಸಹ ನೆನೆಯದೆ ಹುಸಿಯ ದಾಸನಾಗಿ 4 ನನ್ನದಲ್ಲದ ಒಡವೆ ನನ್ನದೆಂದು ತಿಳಿವೆ ನಿನ್ನ ಸ್ವಾಮಿತ್ವವ ಮರದು ಮೆರೆಯುತಿರ್ಪೆ ನನ್ನದೇ ಸ್ವಾತಂತ್ರವೆಂದು ತಿಳಿದು ಭವದಿ ಹುಣ್ಣು ತಿಂದೆನು ದೊರೆಯೆ ಕೊಡದೆ ನಿನ್ನದುನಿನಗೆ 5 ವೇದ ವೋದುವ ನಾನು ನಾನೆನೀನೆಂಬುವೆ ಭೇದವ ತಿಳಿಯದೆ ಭಜಿಸುವೆ ಕುವಿದ್ಯೆ ಬಾದರಾಯಣಗುದರ ಭೇದವ ನುಡಿಯುವೆ ಮಧ್ವಮಂದಿರ ಕೃಷ್ಣ ನೀನಿಲ್ಲ ವೆನ್ನುತ6 ಪೂರ್ಣ ಗುಣದವ ನಿನ್ನ ನಿರ್ಗುಣನೆಂಬುವೆನು ಪೂರ್ಣರಲ್ಲದ ಸುರರ ಸಾಟಿ ನಿನಗೆಂಬುವೆನು ಪೂರ್ಣಬೋಧರ ಕರುಣ ಕೊಡಿಸದ್ದಿದರೆಯಿನ್ನು ಜ್ಞಾನ ಮಾರ್ಗವ ಕಾಣೆ ಸ್ವಾಮಿ ಜಗಜ್ಜನಕ 7 ಜನನ ಮರಣ ರಹಿತ ಜನಿಸುವೆ ನಮ್ಮೊಡನೆ ಕ್ಷಣ ಬಿಟ್ಟಗಲದಲೆಮಗೆ ಉಂಡುಣಿಸುತಿಪ್ಪೆ ಅನಿಮಿತ್ತ ಬಂಧುವೆ ಮರೆತು ನಿಮ್ಮುಪಕಾರ ದನುಜರ ಸೇವಿಸುತ ಹಾಳು ಮಾಡಿದೆ ಬಾಳು 8 ನಿರಯ ಭಾಜನ ನಾದೆ ದೂರವಾಯಿತು ಮುಕುತಿ ದಾರಿಕಾಯುವರ್ಯಾರೊ ಧೀರ ಜಯತೀರ್ಥ ವಾಯು ಅಂತರದಿರ್ಪ ನೀರಜಾಕ್ಷನಮ್ಮ ಶ್ರೀ ಕೃಷ್ಣವಿಠಲನೆ 9
--------------
ಕೃಷ್ಣವಿಠಲದಾಸರು
ನಂಬಿ ಭಜಿಸಿರೋ _ ಜನರೆಲ್ಲರೂ _ ನಂಬಿ ಭಜಿಸಿರೊ ಪ ಅಂಬುಜಾಕ್ಷ ಪ್ರಿಯಾ _ ನಮ್ಮ ಜಯರಾಯರಾ ಅ.ಪ ಕ್ಲೇಶ ಯಾತಕೇ ಕಾಸು ಕಳಕೊಂಡು _ ಅತಿಘಾಸಿ ಯಾತಕೇ ಶ್ರೀಶನಂಘ್ರಿ ಭಜಕರಾದ _ ವಾಸವಾವೇಶರಿವರ ಪಾದ ಆಶೆಯಿಂದ ಭಜಿಸಲೂ _ ವಾಸುದೇವನೊಲಿವನು 1 ನೇಮ ಯಾತಕೇ _ ನಿಷ್ಠೆ ಯಾತಕೇ ಹೋಮ ಯಾತಕೇ _ ಕಷ್ಟಯಾತಕೇ ಪ್ರೇಮದಿಂದಲೀ _ ಇವರ ಭಜಿಸಲೂ ತಾಮಸಗುಣ _ ತಾನೇ ಓಡೋದು 2 ಮಧ್ವಶಾಸ್ತ್ರದ _ ಚಂದ್ರರಿವರು ಅದ್ವೈತವಾದವ _ ಗೆದ್ದಸಿಂಹರು ಮಧ್ವರಾಯರಾ _ ಮುದ್ದುಮೊಮ್ಮಗ ಸಿದ್ಧಸೇವ್ಯರು _ ಸುಧೆಯ ಕರ್ತರು 3 ಇವರ ಧ್ಯಾನವೂ _ ಜ್ಞಾನದಾಯಕಾ ಇವರ ಪೂಜೆಯೂ _ ಪಾಪನಾಶನ ಇವರ ಸ್ಮರಣೆ _ ಕಲಿವಿ ಭಂಜನೆ ಇವರ ಸೇವೆಯು _ ಮುಕ್ತಿಸೋಪಾನ 4 ಶ್ರೀಕಳತ್ರನಾ _ ಆಜ್ಞೆಯಿಂದಲಿ ನಾಕದಿಂದಲೀ _ ಇಲ್ಲಿ ಬಂದರು ಏಕಮನದಿ _ ಶರಣು ಹೋಗಲು ಪಾಪನಾಶನ _ ಪುಣ್ಯವೆಗ್ಗಳಾ 5 ಮಳಖೇಡದೀ _ ನೆಲಸಿ ಇಪ್ಪರೂ ನಳಿನನಾಭನ _ ಒಲಿಸುತನುದಿನಾ ನಲಿಸಿ ಮನದೊಳು _ ಒಲಿಸುವಾತನೆ ಶೀಲವಂತನು _ ಧನ್ಯ ಮಾನ್ಯನು6 ನರನ ವೇಷದಿ _ ಸುರರ ಒಡೆಯನೊ ಹರಿಯ ಕರುಣದಿ _ ಮೆರೆಯುತಿರ್ಪರು ಶರಣಜನರ _ ದುರಿತರಾಶಿಯ ತರಿದು ಶೀಘ್ರದಿ _ ಪೊರೆಯುತಿಪ್ಪರು7 ಎತ್ತಿನ್ವೇಷದಿ _ ವಾತದೇವನ ಪ್ರೀತಿ ಪಡೆದು _ ಖ್ಯಾತಿಆದರು ಮತ್ತೆ ಯತಿಯಾಗಿ _ ಕೀರ್ತಿಯಿಂದಲಿ ಬಿತ್ತರಿಸಿದರು, ತತ್ತ್ವಶಾಸ್ತ್ರವ 8 ಕಾಗಿನೀನದೀ _ ತೀರವಾಸರು ವಿಗತರಾಗರು _ ನಿತ್ಯತೃಪ್ತರು ಜಾಗರೂಕದಿ _ ಪೊಗಳಿ ಪಾಡಲು ನಿಗಮವೇದ್ಯನು _ ಬೇಗ ಪೊರೆಯುವ 9 ಶೇಷಾವೇಷದಿ _ ವಾಸಿಸುವರು ಶೇಷಶಯನನ _ ದಾಸರೀವರು ಬೆಸರಿಲ್ಲದೆ _ ಆಸೆ ತೊರೆದು ದಾಸನೆನ್ನಲು _ ಪೋಷಿಸೂವರು 10 ಕೆರೆಯ ಏರಿಯು _ ಬಿರಿದು ಪೋಗಲು ಮೊರೆಯ ಇಟ್ಟರು _ ಇವರ ಅಡಿಗೆ ಭರದಿ ಕರುಣದಿ ಹರಿಯ ಸ್ತುತಿಸಿ ಕರದಿ ಮುಟ್ಟಲು _ ಏರಿ ನಿಂತಿತು 11 ಯರಗೋಳದ _ ಗುಹೆಯ ಒಳಗೆ ಮರುತದೇವನ _ ಕರುಣದಿಂದಲಿ ಪರಿಪರಿಯಲಿ _ ಬರೆದು ಟೀಕೆಯ ಕರೆದು ಸುರಿದರು _ ತತ್ತ್ವಕ್ಷೀರವ 12 ಇವರ ನಾಮವು _ ವಿಜಯ ಸೂಚಕ ಇವರ ಕೀರ್ತನೆ _ ಭವಕೆ ಔಷಧ ಇವರ ಕರುಣದಿ _ ಅನಿಲನೊಲಿವನು ಇವರ ಶಿಷ್ಯರೇ _ ಅವನಿಶ್ರೇಷ್ಠರು 13 ಸರ್ವಕ್ಷೇತ್ರದ _ ಯಾತ್ರೆಯಾ ಫಲ ಸರ್ವದಾನವ _ ಮಾಡಿದ ಫಲ ಇವರ ಪಾದವ _ ನಂಬಿ ಭಜಿಸಲು ತವಕದಿಂದಲಿ _ ತಾನೇ ಬರುವುದು 14 ಜಯತೀರ್ಥರ _ ಹೃದಯವಾಸಿಯು ವಾಯುಹೃದಯಗ _ ಕೃಷ್ಣವಿಠ್ಠಲನು ದಯದಿ ನುಡಿಸಿದಾ _ ಪರಿಯು ಪೇಳಿದೆ ಜೀಯ ಕೃಷ್ಣನೆ _ ಸಾಕ್ಷಿ ಇದಕ್ಕೆ15
--------------
ಕೃಷ್ಣವಿಠಲದಾಸರು