ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ ಶ್ವೇತ ಭಾಪುರೆ ಸುರಕುಲ ದೀಪ ಸದಾಶಿವ ಪಾದ ಸಮೀಪದ ಸೇವಕ ಅ.ಪ. ಹರಿಪಾದೋದಕ ಶಿರದಲಿ ಧರಿಸಿದ ಹರಿಕಥಾಮೃತ ಮಳೆಗರೆವೆ ನೀ ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ- ರೀರ ಲೇಪನದಿಂದ ವರ ತೇಜಯುತನೆ ಮುರಹರಗೆರಗದ ನರನಿಗೆ ನರಕವು ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ ನಿರುತ ಅವನ ಪದ ಮೆರೆಯದೆ ಮನಗೊಂಡೆ ಶರಣು ಅಮರನುತ ಗುರು ಶಿರೋಮಣಿಯೆ1 ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ- ಶೇಷ ಸ್ಥಳದೊಳು ವಾಸವಾಗಿ ಅ- ದೋಷನಾಶನ ಸಂತೋಷದಿ ಗಿರಿಜೆಗೆ ಶ್ರೀಶನ ಮಂತ್ರೋಪದೇಶವ ಮಾಡಿದೆ ದಾಶರಥಿಯ ನಿಜದಾಸರೆನಿಸುವರ ಪೋಷಿಪೆ ಶಿವ ಪರಮೇಶ ಕೃಪಾಳೊ 2 ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ ಕಂದರ್ಪಹರ ಭಕ್ತಬಾಂಧವ ಕಾಯೊ ಇಂದಿರೆರಮಣ ಗೋವಿಂದನ ಪಾದಾರ- ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ ನಂದಿವಾಹನ ಎನ್ನ ಹಿಂದಣ ಕಲುಷಿತ ವೃಂದಗಳೋಡಿಸುವ ಇಂದುಧರ ಅರ- ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು 3
--------------
ವಿಜಯದಾಸ
ಸರಿಯಾರು ನಿನಗೆ ಸರಸಿಜಾಮುಖಿ ಪ ಕರಮುಗಿವೆನು ಗಾರುಮಾಡದೆ ಎನ್ನ ಪೊರೆಯಬೇಕಿನ್ನು ಧರೆಯೊಳಗೆ ಅ.ಪ. ಕರೆಕರೆಬಡುತಿಹ ಪೋರನ ಅಂಕೆಗಳನು ಅರಿತು ವಿಚಾರಿಸದಿಪ್ಪುದು ಥರವೇ 1 ಸುತನಾಗೀಪರಿ ಪರರನು ಸ್ತುತಿಸುತ ಮೆರೆವುದು ಸರಿಯಾ ಮ್ಯಾಲ್ ಧರಿಯಾ 2 ಆರಿಂದರಿಯದೆ ನಾನರಿಗಳ ಬೆರದೆ ಮೆರೆಯದೆ ತಂದೆವರದಗೋಪಾಲವಿಠ್ಠಲನ ತೋರುಶ್ರೀಶಾರದಾದೇವಿ 3
--------------
ತಂದೆವರದಗೋಪಾಲವಿಠಲರು
ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು