ಒಟ್ಟು 10 ಕಡೆಗಳಲ್ಲಿ , 7 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಗಿರಿಜಾ ಸುತನೆ ಸುರರಾಜ ಪೂಜಿತನೆ ಇಭ ಆನನೆ ದುರಿತಾಪ ಹರನೆ ಫ ಶರಣು ಗಣನಾಯಕನೆ ಮೂಷಿಕ ಸುವಾಹನನೆ ಶರಣು ಪಾಶಾಂಕುಶನೆ ಪರಮ ಪಾವನನೆ ಶರಣು ಶರಣು 1 ಲಿಖಿತದೊಳುವೇದವ ಬರೆದ ಪೂಜೆಯನು ಕೈಗೊಳುತ ಗಜ ಶರಣು ಶರಣು 2
--------------
ಕವಿ ಪರಮದೇವದಾಸರು
ಏನು ಕಡಿಮೆ ನಿನಗೆ ಗಣಪತಿ ಜ್ಞಾನವ ಕೊಡು ಎನಗೆ ಪ ನೀಲ ಮೇಘದ ಕಾಂತಿ ಬಾಲಕೇಳಿ ವಿಲಾಸ ನೀಲ ಕಂಠನ ಸುತ ಸ್ಥೂಲಶರೀರಿ 1 ಹೊನ್ನಾ ಭರಣ ಶೃಂಗಾರ ಕಟಿಗೆ ಚಿನ್ನದ ಉಡುದಾರ | ಚೆನ್ನಾಗಿ ಸುತ್ತಿದ ಪನ್ನಗಭೂಷಣ ಹೊನ್ನ ಕಡಗ ಕೈಯ ಬೆರಳ ಉಂಗುರವು 2 ಹೊತ್ತು ನಡೆವ ಮೂಷಿಕವು 3 ಹೊಂದಿಕೆಯಿಂದ ಕಿವಿಯಲಿಟ್ಟ ಕುಂಡಲ ಗಂಧ ಚಂದನ ಸರ್ವಾಂಗ ಲೇಪಿತನ 4 ಪರಿ ನೀಧೀರ ಉದಾರ 5
--------------
ಕವಿ ಪರಮದೇವದಾಸರು
ಕಂಡೆನೋ ನಿನ್ನ ಚರಣ ಕಮಲವ ಸೊಂಡಿಲಿಂದಿಹ ಗಣಪತಿ ಕೊಡು ವರವ ಪ ಮಣಿ ಕುಂಡಲ ಭೂಷಾ ಉಂಡಲಿಗೆ ಚಕ್ಕುಲಿಯೊಳಗೆ ಸಂತೋಷ ಚಂಡ ಪ್ರಬಲನಲ ಅಖಂಡ ಪ್ರಕಾಶ ಭೂ ಮಂಡಲದೊಳು ನಿನ್ನ ಕೀರ್ತಿ ವಿಶೇಷ 1 ಚಂದನಾಗರು ಧೂಪ ದೀಪಾವಳಿಯಿಂದಾ ನಂದದಿಂದಲಿ ಪೂಜಿಪೆ ಭಕ್ತಯಿಂದ ನಂದಿವಾಹನನಿಗೆ ಮೋಹದ ಕಂದ ಮಂದಮತಿಯ ಬಿಡಿಸೈಯ್ಯ ನೀ ಮುದದಿಂದ 2 ಚಿಕ್ಕ ಮೂಷಿಕವೇರಿ ಗಕ್ಕಾನೆ ಬರುವೆ ಅಕ್ಕರಿಂದಲಿ ಭಕ್ತರೆಲ್ಲಾರ ಪೊರೆವೆ ಮಿಕ್ಕ ಮಾತುಗಳೇನೋ ಪೊಗಳಲೆನ್ನಳವೇ ಇಕ್ಕೇರಿಯೊಳು ಟೆಂಕಸಾಲೆಯೊಳಿರುವೆ 3
--------------
ಕವಿ ಪರಮದೇವದಾಸರು
ಗಣೇಶ ಸ್ತುತಿ ಮಂಗಲಂ ಜಯ ಮಂಗಲಂ ಪ ಗಜಮುಖದೆಸೆವೆ ಲಂಬೋದರಗೆ ತ್ರಿಜಗವಂದಿತ ಮೋದಕ ಕರಗೆ ರಜತಾದ್ರಿವಾಸನ ರಮಣಿಯಸುತನಿಗೆ ಭಜಕರ ಪಾಲಿಪ ವಿಜಯನಿಗೆ 1 ಮೂಷಿಕ ತೇಜಿಯನೇರಿದಗೆ ದೇಶದಿ ಕೀರ್ತಿಯ ಬೀರಿದಗೆ ಶೇಷಾಭರಣವೆತ್ತ ಶೂರ್ಪಕರ್ಣನಿಗೆ ವಾಸೆಯಿಂದ ಭಕ್ತರ ಪೋಷಿಪಗೆ ಮಂಗಲಂ 2 ಕಡುಕರುಣದಿ ಜಗವನು ಕಾಯ್ವಾ ಯೆ ನ್ಹೊಡೆಯ ಶ್ರೀ ವಿಘ್ನೇಶ್ವರ ದೇವಾ ಇಡಗುಂಜಿಯೊಳಗಿದು ದೃಢದಿ ಲಕ್ಷ್ಮಣನಿಗೆ ಗಡಣವಿದ್ಯವನಿತ್ತು ನುಡಿಸುವಗೆ ಮಂಗಲಂ 3
--------------
ಭಟಕಳ ಅಪ್ಪಯ್ಯ
ನೆನೆಯಿರೋ ಜನರೆಲ್ಲ ಗುಣಯುತನ ಮೂರ್ತಿ ಮಧುಪುರದ ಗಣನಾಥನ ಪ ಫಣೆಯುದರದಿ ಸ್ತುತಿ ತಿರುಗುವನ ಕರದಿ ಪಾಶಾಂಕುಶ ಪಿಡಿದಿಹನ ಪಾದವ ನೆನೆವರ ಭಕ್ತರ ನೋಡಿ ಮರುಗುವನ 1 ಶಿಬ್ಬಲುಂಡಿಗೆಯ ಮೆಲುವವನ ಕಾಲ ಕೊಬ್ಬಿದ ರಕ್ಕಸರಹಲ್ಲ ಮುರಿದವನ ಜಗಕೊಬ್ಬನೇ ಸುರನರ ಸೇವಿತನ 2 ಭಾಸುರ ತೇಜದಿ ಮೆರೆವನ ಒಳ್ಳೆ ಮೂಷಿಕವನೇರಿ ನಲಿದವನ ಅನುದಿನ ಪೊರೆವವನ 3
--------------
ಕವಿ ಪರಮದೇವದಾಸರು
ಪಾಲಿಸೊ ಎನ್ನ ಗಣಪತಿಯೆ ಪ ಆಲಿಸು ಎನ್ನ ವಿಜ್ಞಾಪನೆಯನು ನೀಂ ಅ.ಪ ಮೂಷಿಕವಾಹನ ಮುನಿಜನ ಪೋಷಣ ಶೇಷಾಭರಣ ವಿಶೇಷ ಮಹಿಮನೆ 1 ಅಂಬಾಸುತ ಹೇರಂಭ ನಿನ್ನಯ ಪಾ- ದಾಂಬುರುಹವ ನೆರೆ ನಂಬಿದೆ ಜೀಯ 2 ಗುರುರಾಮವಿಠಲ ಸ್ಮರಣೆ ಮಾಡುವುದಕೆ ನಿರ್ವಿಘ್ನತೆ ಕೊಡು ಕರುಣವಾರಿಧಿಯೆ3
--------------
ಗುರುರಾಮವಿಠಲ
ಶರಣು ಶ್ರೀ ಗಣನಾಥ ಮೂಷಿಕೇಂದ್ರ ವರೂಢ ಶರಣು ವಿದ್ಯದ ಸತ್ರ ಲಂಬೋದರ ಶುಭಗಾತ್ರ ಶರಣು ವರದೋರ್ದಂಡ ಶುಂಡ ಮಂಡಿತ ಗಂಡ ಕುಂಡಲ ವಕ್ರತುಂಡಾ ಶರಣೂ ಸುರನರಧೇಯ ಸಿದ್ದೀಂದಿರಾ - ಪ್ರೀಯ ಶರಣು ವಿಘ್ನವಿನಾಶ ಏಕದಂತ ಪ್ರಕಾಶ ಶರಣು ಮಹಿಪತಿ ನಂದನಗ ನೀಡುವಾನಂದ ಶರಣು ಪಾರ್ವತಿಯ ಕಂದಾ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗಣೇಶ ಪ್ರಾರ್ಥನೆ ಅಗ್ರಪೂಜಾ ವಿಘ್ನರಾಜ ಅಗ್ನಿಜಾಗ್ರಜ ಮಹೋಜ ಪ. ಲಗ್ನವಾಗಲಿ ಹರಿಪದಾಬ್ಜ ನಿಗ್ರಹೀತ ಕಾಮಬೀಜ ಅ.ಪ. ಭಾನುತೇಜ ಭಕ್ತಿಭಾಜ ಧ್ಯಾನಗಮ್ಯ ಮುನಿಸಮಾಜ ದೀನಕಾಮದ ಕಲ್ಪಭೂಜ ಗಾನಲೋಲ ಭಾವ ನಿಯಾತ್ಮಜ 1 ಚತುರಭುಜ ಸಚ್ಚರಿತ ವಿರಜ ಯತಿವರೇಣ್ಯಗಣ ವಿರಾಜ ಮತಿಮತಾಂವರ ನತಬಿಡೌಜ ಪಂಕಜ 2 ರುಕುಮಿಣೀಜ ರುದ್ರಗಣವ್ರಜ ಭಕುತ ವತ್ಸಲ ಮನೋಜ ಮುಖಮತಂಗಜ ಮೂಷಿಕಧ್ವಜ ಲಕುಮಿನಾರಾಯಣ ಗುಣಜ್ಞ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಗಣೇಶ ಪ್ರಾರ್ಥನೆ ಅಗ್ರಪೂಜಾ ವಿಘ್ನರಾಜ ಅಗ್ನಿಜಾಗ್ರಜ ಮಹೋಜ ಪ. ಲಗ್ನವಾಗಲಿ ಹರಿಪದಾಬ್ಜ ನಿಗ್ರಹೀತ ಕಾಮಬೀಜಅ.ಪ. ಭಾನುತೇಜ ಭಕ್ತಿಭಾಜ ಧ್ಯಾನಗಮ್ಯ ಮುನಿಸಮಾಜ ದೀನಕಾಮದ ಕಲ್ಪಭೂಜ ಗಾನಲೋಲ ಭಾವ ನಿಯಾತ್ಮಜ 1 ಚತುರಭುಜ ಸಚ್ಚರಿತ ವಿರಜ ಯತಿವರೇಣ್ಯಗಣ ವಿರಾಜ ಮತಿಮತಾಂವರ ನತಬಿಡೌಜ ಪಂಕಜ 2 ರುಕುಮಿಣೀಜ ರುದ್ರಗಣವ್ರಜ ಭಕುತ ವತ್ಸಲ ಮನೋಜ ಮುಖಮತಂಗಜ ಮೂಷಿಕಧ್ವಜ ಲಕುಮಿನಾರಾಯಣ ಗುಣಜ್ಞ 3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಗಣನಾಥ ನೀ ಎನ್ನ ಮೇಲೆ ಕೃಪೆಯ ನಿರತ ಪಸ್ಥೂಲ ಶರೀರ ವಿಶಾಲ ಲೋಚನ ಸುರಜಾಲ ವಂದಿತಜಾಲವಂದಿತ ಗುಣಶೀಲ ಸಜ್ಜನಪಾಲ ಅ.ಪಮೂಷಿಕವಾಹನನೆ ವಿಘ್ನೇಶ್ವರ ಪಾಶಾಂಕುಶಧರನೆಈಶ ನಂದನ ನಿನ್ನ ದಾಸನೆನಿಸೊ ಎನ್ನಆಸೆಯ ಸಲಿಸು ವಿಘ್ನೇಶ ವಿನಾಯಕ 1ಕಾಮಿತಫಲಪ್ರದನೇ ವಿನಾಯಕ ಸ್ವಾಮಿ ಶನೇಶ್ವರನೆಸಾಮಜವದನನೇ ಶ್ಯಾಮಲವರ್ಣನೇಕಾಮವರ್ಜಿತ ಗುಣಸ್ತೋಮ ವಂದಿತನೇ 2ಗಿರಿಜೆಯ ವರಸುತನೇ ಲಂಬೋದರ ಉರಗನ ಸುತ್ತಿಹನೇಕರದಿ ಮೋದಕಹಸ್ತವರಏಕದಂತನೆಶರಣು ನಿನಗೆ ಗೋವಿಂದನ ಸಖನೆ 3
--------------
ಗೋವಿಂದದಾಸ