ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಕಳೆಯಬೇಡ ಮನವೇ ಮೂಳನಾಗಬೇಡ ಪ ಕಾಳು ಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲ ಮೋಹಿಸಿ ಹೊತ್ತು ಹಾಳುಮಾಡಿಕೊಂಡು ಅ.ಪ ನಿನ್ನೊಳು ಹುಡುಕಾಡಿ ಹರಿಯ ಉನ್ನತಕೃಪೆ ಪಡಿ ಕಣ್ಣುಮುಚ್ಚಿ ಪರರ್ಹೆಣ್ಣಿನ ಹೊಲೆಮೈ ಬಣ್ಣಕೆ ಮನಸೋತು ಠೊಣ್ಯನೆನಿಸಿಕೊಂಡು 1 ನೋಡಿ ತಿಳಿದು ಭವಮೂಲ ಹುಡುಕಾಡಿ ಹಿಡಿಯೋ ನಿಜವ ರೂಢಿಸುಖಕೆ ಮನನೀಡಿ ಸನ್ಮಾರ್ಗದ ಜಾಡು ತಿಳಿಯದೆಮತಾಡಣೆಗೊಳಪಟ್ಟು 2 ಅರಿತು ಶ್ರೀರಾಮಚರಣ ನಿರುತದಿ ಗುರುತು ಹಿಡಿಯೋ ಜಾಣ ಪರಲೋಕ ಸಾಧನ ಸುರತು ಷರತು ಮಾಡಿಕೊಂಡು ಪರಕೆ ಪರಮ ಪರತರ ಮುಕ್ತಿ ಸುಖ ಸುರಿ 3
--------------
ರಾಮದಾಸರು
ಮರೆವಿನೊಳಗೆ ಮನೆಮಾಡಿದ್ದಿ ಮನ ಅರಿವಿನ ಆಲಯ ಬಿಟ್ಟಿದ್ದಿ ಪ ಹರಿದುಹೋಗುವಂಥ ಸಿರಿಗೆ ಒಲಿದು ನೀ ಪರಮ ಹರಿಯ ಪಾದಕ್ಹೊರತಿದ್ದಿ ಅ.ಪ ಮಂದಿಮಕ್ಕಳೆಂದು ನೆಚ್ಚಿದ್ದಿ ನಿನ್ನ ಹಿಂದೆ ಬರುವರೇನು ಅಂತಿದ್ದಿ ಕುಂದುವ ಜಗ ಮಾಯದಂದಗೆಟ್ಟು ಒಬ್ಬ ನೊಂದಿನ ಹೋಗ್ವುದು ಮರೆತಿದ್ದಿ 1 ಸಿರಿಸಂಪತ್ತಿಗೆ ಹಿಗ್ಗಿದಿ ಇದು ಸ್ಥಿರವಲ್ಲೆಂಬುದು ಅರಿಯದ್ಹೋದಿ ಎರೆದೆಣ್ಣಿರುವನಕುರಿವ ದೀವಿಗೆಯೋಲ್ ವರ ಪುಣ್ಯಿರುವನಕಿರುತದೆ ಸಿರಿಯದು 2 ಹೇಳಿದಮಾತನು ಕೇಳದ್ಹೋಗಿ ಮನ ಮೂಳನಾಗಬೇಡೆಲೆ ಗೂಗಿ ಹಾಳುಯೋಚನೆ ಬಿಟ್ಟು ಮೇಲುಪದವಿ ಪಡಿ ಶೀಲ ಶ್ರೀರಾಮಗೆ ತಲೆಬಾಗಿ 3
--------------
ರಾಮದಾಸರು