ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಹನುಮ ಮಾಂ ಪಾಹಿ ಪವನ ಜ ಖಗ ವಾಹನನ ದಾಸ ನೇಹದಲಿ ಬಿಂಬರೂಪ ತೋರೆನಗೆ ಪ ಭಾನುಸುತ ಪವಮಾನ ನಂದನ ನೀನೆ ಸಲಹಿದೆ ಮಾನನಿಧಿ ರಾಮಬಾಣದಲಿ ಇಂದ್ರ ಸೂನುವಿನ ಪ್ರಾಣ ಹಾನಿಯ ಗೈಸಿ ಮೇಣ್ ಆ ಕಿಷ್ಕಿಂಧ ನಗರದಲ್ಲಿ ವಾನರೇಂದ್ರಗೆ ನಾನಾ ಪರಿಯಲ್ಲಿ ಆನಂದವಿತ್ತ ಜ್ಞಾನಿ ನಿನ್ನ ಅಧೀನದವನೆಂದೆಂದು 1 ಸುರೇಶನಂದನ ಮಾರುತನೆ ನಿನ್ನ ಕರುಣವು ಎನ್ನೊ ಳಿರದ ಕಾರಣ ಹರಿ ಮುನಿದನೆಂದು ಅರಿದು ಮನದಿ ದ್ವಾ ಪರದಲ್ಯವ ತರಿಸಿ ಗುರುವರ್ಯ ನಿಮ್ಮ ಚರಣ ಸೇವಿಸೆ ಪೊರೆದೆ ಅಂದು ಸಮರದಿ ಕೃಷ್ಣನ ಪರಮಕೃಪೆ ಪಡೆದವರಿಗೆ ನಿನ್ನಯ ಕರುಣ ಕಾರಣವೊ 2 ಮೂರನೆಯ ಅವತಾರದಿಂದಲಿ ಧಾರುಣಿಯೊಳು .......... ಬೀರಿದ್ದ ಶಾಸ್ತ್ರವ ಬೇರೊರಿಸಿ ಕೀಳ್ದು ತೋರಿಸಿದಿ ಹರಿಯ ಆರು ನಿನ್ನನು ಆರಾಧಿಪರೊ ಆ ಧೀರರಿಗೆ ದೋಷ ಸೇರಲಮ್ಮವು ಮಾರಪಿತ ಜಗನ್ನಾಥ ವಿಠಲನ ಕರುಣ ವಾಹುದೊ 3
--------------
ಜಗನ್ನಾಥದಾಸರು
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ