ಒಟ್ಟು 59 ಕಡೆಗಳಲ್ಲಿ , 30 ದಾಸರು , 56 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ ಬ್ರಹ್ಮಾಸ್ತ್ರಅದಕೋ ಬ್ರಹ್ಮಾಸ್ತ್ರ ಅದ್ಭುತವಾದಸ್ತ್ರಬೆದರಿಪುದೆಲ್ಲರ ಬೇವುವು ಬ್ರಹ್ಮಾಂಡ ಪ ಮಾರಿಗೆ ಮಾರಿಯು ಮೃತ್ಯುಗೆ ಮೃತ್ಯುವುಘೋರಕೆ ಘೋರವು ಕ್ರೂರಕೆ ಕ್ರೂರ 1 ತಗ ತಗ ಚಕಚಕ ಲಕಲಕ ನಳನಳಝಗ ಝಗ ನಿಗಿ ನಿಗಿ ಕಳೆ ಕೋರೈಸುತಿದೆ2 ಛಟಛಟ ಛಿಳಿಛಿಳಿ ಧಗಧಗ ಭುಗುಭುಗುಪಟಿ ಪಟಿಸುತ ಉರಿ ಹೊಗೆಯೊಂದಾಗುತಿದೆ 3 ಹಲವು ಬ್ರಹ್ಮಾಂಡವ ಸುಟ್ಟರು ಹಸಿವಡಗದುಹಲವು ಸಾಗರ ಕುಡಿದೆ ತೃಷೆಯಡಗದು ಬಿರುಗಣ್ಣಿಂದಲಿ ಖಡ್ಗವ ಬೀರುತಗುರುಚಿದಾನಂದ ತಾನಾಗಿಹ ಬಗಳೆ 5
--------------
ಚಿದಾನಂದ ಅವಧೂತರು
(ಉ) ತಾತ್ತ್ವಿಕ ಕೃತಿಗಳು ಪಾರಾಯಣ ಮಾಡಿರೋ ಭವ ಪಾರಾವಾರದೊಳು ತಾರ ಕವಿದು ನೋಡಿರೋ ಪ ನೀರ ಬೊಬ್ಬುಳಿಕೆಯು ತೋರುವ ರೀತಿ ಶ ರೀರ ನಚ್ಚಿರಬೇಡಿರೋ ಧಾರಣಿಯಲಿ ಪೇಳಿರೋ 1 ಸಾಹಸ ಪಡಬೇಡಿರೋ ಬಾಹವೆಂದಿರ ಬೇಡಿರೋ 2 ನೇಹದಿ ನಾರಿಯೊಳು ದೇಹಿ ಸಂಸಾರದೊಳು 3 ಮಾರಿಯಲ್ಲವೆ ಕೇಳಿರೋ ನಾರಿಯಾರಿಗೆ ಮಕ್ಕಳಾರಿಗೆ ಜೀವಿತ ದಾರಿಯೆಲ್ಲಿಗೆ ಪೇಳಿರೋ 4 ಮಿಂಚಬಾರದು ತನ್ನ ಮಡದಿಯ ಬಾಲರ ಕಂಚು ಕನ್ನಡಿ ಭಾರದೀ ಸಂಚಿತ ದ್ರವ್ಯದಿ ಕೊಂಚವು ಬಾರುದು ಉಗಿ ಸಂಚಿಗೆ ದೇಹವಿದ 5 ಒಲಿದು ಕೊಂಡಾಡುವರು 6 ಅರ್ಥವಿದ್ದವನ ಸಮರ್ಥನೀತನ ಜನ್ಮ ಸಾರ್ಥಕವೆಂಬುವರು ಆರ್ಥವ ಕಳಕೊಂಡು ಸಾರ್ಥನಾಗಲು ಜನ್ಮಸು ವ್ಯರ್ಥವೆಂದುಸುರುವರು 7 ರೊಕ್ಕವಿದ್ದರೆ ಕೈಲಿ ಸಿಕ್ಕರೆ ಮಾತಿನೊಳಕ್ಕರೆ ಪಡಿಸುವರು ರೊಕ್ಕವಿಲ್ಲದವನ ಮಕ್ಕಳು ಮಡದಿಯರು ಲೆಕ್ಕಿಸದಿರುತಿಹರು8 ಮರಣ ಪೊಂದುವರು ಕೊರಳನು ಕೊಯ್ಸುವರೋ 9 ಬಂಧುಗಳನು ಕೊಲ್ವರು ಒಂದಿಗೆ ಜನಿಸಿದರೆಂದು ನೋಡರು ನಿಜ ದಂದುಗಕ್ಕೊಳಗಹರು 10 ಗಂಟು ಕಟ್ಟಿರೆ ಮನದಿ ಗಂಟಲ ಬಿಗಿವಾಗ ನಂಟರಿಲ್ಲವು ಜಗದಿ 11 ತಾಪದಿ ನೆನೆಯುತಿರೆ ಭೂಪನು ನಮ್ಮ ದೊರೆ12
--------------
ವೆಂಕಟವರದಾರ್ಯರು
3. ನೀತಿಬೋಧೆ ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ. ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1 ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2 ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3 ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4 ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5
--------------
ಶ್ರೀಪಾದರಾಜರು
ಅಬ್ಬಬ್ಬ ಈ ವರನ ಅದ್ಭುತಾಕೃತಿ ನೋಡಿ ಉಬ್ಬುಸವು ಮಿಗಿಲಾಯ್ತು ಸಹಿಪೆನೆಂತು ಕೆಮ್ಮೀಸೆ ಕೆಂಗಣ್ಣು ಕೆಂಪಾದ ರೋಮಗಳು ಹೆಮ್ಮಾರಿಯಂದದೊಳು ಮೊರೆವಮಿಗಿಲು ಕೆನ್ನೀರು ಪಾನದಿಂದುನ್ಮತ್ತನಂದದಿಂ ಘನ್ನಘಾತಕನಾಗಿ ಮೆರೆವ ಬೀಗಿ ಕರುಳ ಮಾಲೆಯ ಧರಿಸಿ ಮೆರೆಯುತಿಹನೀ ಸಹಸಿ ತರತರದಿ ಸುರನರರು ನಡುಗುತಿಹರು ಸ್ತಂಭವಿದೆ ಜನ್ಮಸ್ಥಲವಾಯಿತಿವಗೆ ಕುಂಭಿಣೀಯಂಬರಕೆ ಮಧ್ಯದೊಳಗೆ ಸಂಭ್ರಮದಿ ನೆಲಸಿಹನೆ ಪಡಿಯಮೇಲೆ ನಂಬಿದೆನು ಶೇಷಗಿರಿವರನ ಲೀಲೆ
--------------
ನಂಜನಗೂಡು ತಿರುಮಲಾಂಬಾ
ಇನ್ನಾರ ಭಜಿಸಲೈಯ್ಯಾ|ಯನ್ನ ಗತಿ ಮುಕುತಿದಾಯಕ ರಂಗ ನೀನಿರಲು ಪ ಸ್ನಾನಪಾನಕಬಪ್ಪ ಸುರನದಿಯನೇ ತ್ಯಜಿಸಿ ಹೀನ ಸರಿತೆಗಳಲ್ಲಿ ಮುಣುಗುವರೇ ಏನ ಬೇಡಿದ ನೀವ ಸುರ ಭೂಜ ಇದಿರಿಡಲು ಕಾನನದ ಶಾಲ್ಮಲಿಯ ಫಲವ ನರಸುವಂತೆ 1 ಕಾಮಧೇನು ಮನಿಗೆ ಬರಲು ಕರೆ ಕೊಳ್ಳದೇ ಆ ಮೊಲದ ಹಾಲವನು ಬಯಸುವಂತೆ ಕಾಮಿತಾರ್ಥವ ನೀವ ಚಿಂತಾ ಮಣಿಯಿರಲು ಪ್ರೇಮದಿಂದಲಿ ಕಾಜು ಮಣಿಯ ನರಸುವಂತೆ2 ತಾಯ ಮಾರಿಯ ತೋತ್ತು ಕೊಂಬಂತೆ ಸಿರಿಯಸುಖ ದಾಯಕ ನಿನ್ನ ಮರದನ್ಯಕೆರಗೀ ಹೇಯ ವೃತ್ತಿಗೆ ಬೆರೆವದುಂಟೇ ನಿನ್ನವನೆನಿಸಿಕಾಯೋ ಭಕುತಿಯ ನಿತ್ತು ಗುರು ಮಹಿಪತಿ ಸ್ವಾಮಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದಿಗೂ ಮರುಳಾಗೆನೋ ಸಂಸಾರಕ್ಕೆ ಎಂದಿಗೂ ಮರುಳಾಗೆನೋ ಪ ಬಂಧವ ತರಿವ ಕೇಶವನ ದಾಸನಾಗಿ ಪಾದ ಸೇರುವೆನಯ್ಯ ಅ.ಪ ನಾರಿಯರನು ನೆಚ್ಚಿಸೀ ಧರ್ಮವ ಬಿಡಿಸಿ ಮಾರಿಯರ ಸಾಕಿಸೀ ಆರರ ವಶಮಾಡಿ ರತಿಕ್ರೀಡೆ ನಂಬಿಸಿ ಮಾರಿಯ ಗೃಹಕೆನ್ನ ಗುರಿಮಾಡ್ವ ಭವಕೇ 1 ಹÉೂನ್ನುಗಳಿಗೆ ಮೆಚ್ಚಿಸೀ ಸತ್ಯವ ಬಿಡಿಸಿ ಮಣ್ಣುಗಳಿಗೆ ಸೊಕ್ಕಿಸೀ ಬಣ್ಗೆಣ್ಣಿಸಲಾಗದ ಪಾಪವ ಮಾಡಿಸಿ ಚಿನ್ನನ ಮರೆಸುವ ಪುಸಿಯಾದ ಭವಕೇ 2 ಸ್ಮರಣೆಗಳನ್ನೇ ಮಾಡಿ ಸರಸದಿ ಪಾಲಿಪ ಭಕ್ತರ ಪರಿಯನ್ನು ಭರದಿ ಸೇರಿಸಿ ಚನ್ನಕೇಶವಾ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ಎಲ್ಲಿರುವುದೋ ಸಿರಿವಲ್ಲಭನೆ ನಿನ ಗಲ್ಲದ ಕಾರ್ಯಗಳು ಪ ಕಲ್ಲಾಗಿದ್ದ ಅಹಲ್ಯಯೆ ನಿಮಿಷದಿ ಚಲ್ವೆಯ ಮಾಡಿದ ನಲ್ಲ ತ್ರಿಭುವನದಿ ಅ.ಪ ಶರಧಿಯೆ ವಾಸವು ಗರುಡನೆ ವಾಹನ ಉರಗಪತಿಯೆ ನಿನ್ನ ಪರಿಯಂಕ ಶರಧಿ ಕುಮಾರಿಯು ವರರಮಣಿಯು ಸುರ ವೀರರು ನಿನಗೆ ಕಿಂಕರರಾಗಿರಲು 1 ಕಂಬದಿ ಜನಿಸಿದೆ ಅಂಬಿಗರವಳನು ಸಂಭ್ರಮದಲಿ ನಿನ್ನ ಜನನಿಯೆನಿಸಿದೆ ಅಂಬುಜ ಮಿತ್ರನ ತನಯಗೆ ಮರುತನ ಬೆಂಬಲವರಿಯುತ ಉಳಿಸಿದೆ ಗೆಲಿಸಿದೆ 2 ಅಮಿತ ಕಾರ್ಯಗಳ ಕ್ರಮದಲಿ ನಡಿಸಿದೆ ವಿಮಲ ತನೋ ಸುಮನಸರೊಡೆಯನೆ ಕ್ಷಮಿಸಿ ಎನ್ನಯ ಮೋಹ ತಿಮಿರವ ತೊಲಗಿಸೊ ಸುಮನ ಪ್ರಸನ್ನನೆ 3
--------------
ವಿದ್ಯಾಪ್ರಸನ್ನತೀರ್ಥರು
ಕಾಲ ತಪ್ಪದು ನಿನಗೆಂದಿಗು ಮರುಳೆಒಳ್ಳಿತಾಗಿ ಕೇಳಿಕೋ ಹಿರಿಯರನು ಮರುಳೆನಾಳೆ ನಾಡದೋ ಆವಾಗಲೋ ತನು ನಿತ್ಯವಲ್ಲಕಾಲಕೆ ಸಿಕ್ಕಬೇಡ ಮರುಳೆ ಪ ಆಳುವ ಮಠಪತಿ ಊರಲ್ಲಿ ತನ್ನನ್ನುಹೂಳ್ಯಾರು ಎನಬಾರದೆ ಮರುಳೆಮೂಳ ಸಂಸಾರ ನೆಚ್ಚಲು ಕೆಡುವೆಆಲೋಚನೆ ಮಾಡಿಕೋ ಮರುಳೆ 1 ಮನವುಳ್ಳವರು ಇಹರೆ ಸಂಸಾರವೇನೆಂಬೆ ನೀನು ಸಂಗವ ಮರೆವೆ ಮರುಳೆಮಾನಿನಿ ಸುತರ ಮೋಹಕೆ ಬಿದ್ದುನಿನಗಾಗುವ ಮಾನಹಾನಿಯ ಕಾಣೆ ಮರುಳೆ 2 ಸಂಸಾರಕಾಂಕ್ಷೆಯ ಮನದಿ ತ್ಯಾಗವ ಮಾಡುಸಂಸಾರವಿದು ಮಾರಿಯು ಮರುಳೆಹಂಸ ಚಿದಾನಂದ ಸದ್ಗುರು ಹೊಂದಿಯೇನೀ ಸದಾಸುಖಿಯಾಗು ಮರುಳೆ 3
--------------
ಚಿದಾನಂದ ಅವಧೂತರು
ಕಾಲ ಮೃತ್ಯುವು ಸ್ತ್ರೀಯಲ್ಲದಲೆ ಕಾಯುವವಳು ತಾನಲ್ಲಣ್ಣ ಕಾಳಕವೀಶ್ವರ ಬಲ್ಲನು ತಾನೇನ ಕಾಳ ಕಿಚ್ಚಿನ ಕುಂಡವಣ್ಣ ಪ ಮಲ ಮೂತ್ರವು ಮಜ್ಜೆಯು ಮೇದಸ್ಸು ಮೇಲೆ ಚರ್ಮ ಹೊದ್ದಿಹೆವಣ್ಣಎಲುಬುಗಳಡಕಲಿ ನರಗಳ ಬಿಗಿವು ಎಡದೆರ ಅಪಿಲ್ಲದೆ ಇಹುದಣ್ಣ ಬಲು ಹೊಲಸಿನ ಮಡುವದು ಮತ್ತೆ ಬಗೆಬಗೆಯ ಕ್ರಿಮಿಗಳು ಮನೆಯೊಳಣ್ಣ ಹೊಲೆಮಯವಿರುವ ಸ್ತ್ರೀಯ ವರ್ಣಿಪೆನು ಹೇವ ಮಾರಿಯು ಕಾಣಣ್ಣ 1 ಕಳಸ ಕುಚವು ಎದೆಎಂಬನ ಬಾಯಲಿ ಕರಿಯ ಮಣ್ಣನೆ ಹಾಕಣ್ಣ ಹೊಳೆವ ಕಂಗಳು ಎಂಬನ ಮೋರೆಗೆ ಹುಡಿಯನೀಗಲೆ ಚೆಲ್ಲಣ್ಣಬಳಕು ನಡೆಯಂತೆಂದು ಬೊಗಳುವನ ನಿಲಿಸದೆ ಅಲ್ಲಿಂದಟ್ಟಣ್ಣಚೆಲುವಿನ ಸುಂದರ ಚೇಷ್ಟೆಗೆ ನಲಿವನ ಚಪ್ಪಲಿಯಿಂದಲಿ ಕುಟ್ಟಣ್ಣ 2 ಬ್ರಹ್ಮಧ್ಯಾನವ ಮಾಡುವುದಕ್ಕೆ ಬ್ರಹ್ಮರಾಕ್ಷಸವು ಇದು ಅಣ್ಣಹಮ್ಮಳಿದು ಯೋಗಾಭ್ಯಾಸದಲಿರೆ ಹೃದಯದಲಿ ಹರಿದಾಡುವುದಣ್ಣಬ್ರಹ್ಮೇತಿಯು ತಾನಿವನ ಸಂಗದಿ ಭವಭವತಿರುಗುವುದ ಬಿಡದಣ್ಣಸಮ್ಮತದಲಿ ಚಿದಾನಂದ ಹೊಂದಿಯೆ ಸೀಮಂತಿನಿಯ ಬಿಡಬೇಕಣ್ಣ 3
--------------
ಚಿದಾನಂದ ಅವಧೂತರು
ಕೃತ್ತಿವಾಸ ಪೂಜ್ಯ ಚರಣೇ | ಮಹತತ್ವಮಾನಿ ಸತಿಯೆ ಸುಗುಣೆ ||ಅ|| ನಿತ್ಯ ನೀಡೆ ಹರಿಯ ಸ್ಮರಣೆ ಅ.ಪ. ವಿಧ್ಯುದ್ವಾಕ್ ದಿಙËಮಾನಿಯೆ | ಹೇದ್ಯುಪೃಥಿವಿ ಭಾರತೀಯೇಪ್ರದ್ಯುಮ್ನ ಕೃತಿಗೆ ಕುಮಾರಿಯೆ | ಬುಧ್ಯಾಭಿಮಾನಿಯೇ ಕಾಯೆವಿದ್ಯುತಿಸ್ಥಿತಿ | ಬುಧ್ಯಾಬ್ದಿಯೆ | ವಿಧ್ಯೇತರ | ಅವಿಧ್ಯೆಯ ಕಳೆಸದ್ಯೋಜನ | ಶ್ರದ್ದಾಂಬಾ | ಮದ್ದೇಹದಿ | ಸಿದ್ಧಿಸು ಹರಿ 1 ಮಂದ ಪತಿ | ಸುಂದರ ಪದ | ಸಂಧಿಸು ಮನ | ಮಂದಿರದಲಿ 2 ಭಿಕ್ಷೆ ನೀಡೆ ತಾಯೇ | ಯುಕುತಿ ಶಾಸ್ತ್ರ ಒಂದನರಿಯೇಸೌಖ್ಯ ತೀರ್ಥ ಮತವನ್ವೊರೆಯೇ ಮುಕುತಿ ಮಾರ್ಗ ತೋರಿ ಪೊರೆಯೇ ||ತೋಕನು ಎನೆ | ಸ್ವೀಕರಿಸುತ | ಲೋಕರುಗಳ | ವಾಕನು ದೂ-ರೀಕರಿಸು ಪ | ರಾಕೆನ್ನುವೆ | ಭೀಕರಭವ | ನೀ ಕರಗಿಸು 3 ಕಡಗ ಕಂಕಣ ದ್ವಾರ ಧಾರೆ | ಜಡಿತ ದುಂಗುರ ದೋಷ ದೂರೆಮುಡಿದ ಮಲ್ಲಿಗೆ ಕುಂಚುಕಧಾರೆ | ಉಡುಗೆ ಬಿಳುಪಿನಂಬರೆ ನೀರೇ || ಒಡ ನಡುವು | ನಿಡಿತೋಳೂ | ತೊಡೆಕದಳೀ | ಬಡುವು ಪರೀ |ಅಡಿಗೆರಗುವೆ | ಪೊಡ ವೀಶನ | ಧೃಡ ಭಕುತಿ | ತಡೆಯದೆ ಕೊಡು4 ಶರಣು ಮುಂದಣ ವಾಣಿ ಕರುಣ | ಗುರು ಗೋವಿಂದ ವಿಠಲ ಚರಣಾ |ಭರಣವೆನಿಪ ಸುಗುಣ ಗಣಾ | ಒರೆದು ಕಳೆಯೆ ಭವದ ಬಂಧನ |ಮಾರಯ್ಯನ | ಆರಾಧನೆ | ಚಾರೀಸದೆ | ಧಾರಾಣಿಗೆಭಾರಾದೆನು | ಕಾರುಣ್ಯವ | ತೋರೂವುದು ಭಾರತಿಯೇ 5
--------------
ಗುರುಗೋವಿಂದವಿಠಲರು
ಕೋಲ ಕೋಲೆನ್ನ ಕೋಲ ಕೋಲೆನ್ನ ಕೋಲ ಕೋಲ ಶ್ರೀ ಹರಿಯ ನೆನದೇವ ಕೋಲ ಪ. ನಾರಿಯರಿಬ್ಬರಿಗೆ ಹರಿಯು ಕರೆದು ಮಾತಾಡದ್ಹಾಂಗೆ ನೀರೊಳಗೆ ಹೋಗಿ ಅಡಗಿದ ಕೋಲನೀರೊಳಗೆ ಹೋಗಿ ಅಡಗಿದ ರುಕ್ಮಿಣಿಪೋರತನವೆಂದು ಬಿಡಬೇಕು ಕೋಲ 1 ಕೃಷ್ಣ ನಮ್ಮರಮನೆ ಬಿಟ್ಹೋಗ ಬಾರದೆಂದು ಬೆಟ್ಟವ ಮ್ಯಾಲೆ ಹೊರೆಸಿದ ಕೋಲ ಬೆಟ್ಟವ ಮ್ಯಾಲೆ ಹೊರೆಸಿದ ಸತ್ಯಭಾಮೆಗಟ್ಟಿ ಎದೆಯವಳು ಹೌದು ಹೌದು ಕೋಲ 2 ನೀರಜನಯ್ಯಗೆರಡುಕ್ವಾರಿ ಚಿನ್ಹವ ಮಾಡಿ ಮಾರಿಯ ಗುರುತು ಮರೆಸಿದಿ ಕೋಲ ಮಾರಿಯ ಗುರುತು ಮರೆಸಿದಿ ನೀಲಾದೇವಿಧೈರ್ಯ ವಿನ್ನೆಷ್ಟು ಧಮಕೆಷ್ಟು ಕೋಲ 3 ಹರದೆಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಉರಿಮಾರಿಮಾಡಿ ನಿಲ್ಲಿಸಿದಿ ಕೋಲಉರಿಮಾರಿ ಮಾಡಿನಿಲ್ಲಿಸಿದಿಭದ್ರಾದೇವಿಸರಿಯವರು ನೋಡಿ ನಗುತಾರೆ ಕೋಲ 4 ಕರ ಕರಿಯೆಂದು ಬಿಡಬೇಕು ಕೋಲ 5 ಮಡದಿಯರಿಬ್ಬರು ಹರಿಯ ಕರೆದು ಮಾತಾಡದ್ಹಾಂಗೆ ಕೊಡಲಿಯ ಕೊಟ್ಟು ಬಡವನೆ ಕೋಲ ಕೊಡಲಿಯ ಕೊಟ್ಟು ಬಡವನೆ ಮಾಡಿದ ಕಿಡಿಗೇಡಿತನವ ಬಿಡು ಕಾಳಿ ಕೋಲ 6 ನಲ್ಲೆಯರಿಬ್ಬರು ಹರಿಯ ಎಲ್ಲೆಲ್ಲೂ ಬಿಡದ್ಹಾಂಗೆ ಬಿಲ್ಲನೆ ಕೊಟ್ಟು ನಿಲ್ಲಿಸಿದಿಬಿಲ್ಲನೆ ಕೊಟ್ಟು ನಿಲ್ಲಿಸಿದಿ ಲಕ್ಷಣಾಕಲ್ಲೆದೆಯವಳು ಹೌದ ಹೌದ ಕೋಲ 7 ಒಳ್ಳೆಗುಣಪೂರ್ಣಗೆ ಕಳ್ಳನಂತೆ ಹೆಸರಿಟ್ಟಿಸುಳ್ಳು ನೋಡಿದರೆ ವಿಪರೀತ ಕೋಲ ಸುಳ್ಳು ನೋಡಿದರೆ ವಿಪರೀತ ಜಾಂಬವಂತಿಕೊಳ್ಳಿಯ ಗುಮ್ಮಗುರುವೇನ ಕೋಲ 8 ಮುದ್ದು ಹದಿನಾರು ಸಾವಿರ ಬುದ್ದಿವಂತರ ಕೂಡಿಹದ್ದೆರ್ದಬೌದ್ಧ ಎನುತಲೆ ಕೋಲ ಹದ್ದೆರ್ದಬೌದ್ಧ ಎನುತಲೆ ಬೆನ್ನ ಹತ್ತಲು ಇದ್ದಜನರೆಲ್ಲ ನಗುತಾರೆ ಕೋಲ 9 ನೂರು ಮಂದಿ ಹರಿಯ ದಾರಿಯ ಕಟ್ಟಲು ಹಾರಿದ ಕೃಷ್ಣ ಕುದರಿಯ ಕೋಲ ಹಾರಿದ ಕೃಷ್ಣ ಕುದುರೆ ಏರಿಕೊಂಡುಮಾರಿ ತೋರದಲೆ ಬರಲಿಲ್ಲ ಕೋಲ10 ಚಲ್ವ ರಾಮೇಶ ಎಲ್ಲ ಲಲನೆಯರಿಗೆ ಅಂಜಿಕೊಂಡುಬಲಿಯ ಮನೆ ಮುಂದೆ ಕುಳಿತಾನೆ ಕೋಲ ಬಲಿಯ ಮನೆ ಮುಂದೆ ಕುಳಿತಾನೆ ರುಕ್ಮಿಣಿಕಲಹವ ಬಿಟ್ಟು ಕರೆತಾರೆ ಕೋಲ 11
--------------
ಗಲಗಲಿಅವ್ವನವರು
ಚದುರೇ ವೃಂದಾವನದೊಳು ನಿಂತಿಹನ್ಯಾರೇ ಪೇಳಮ್ಮಯ್ಯಾ ಪ ಸತ್ ಸಖಿಯರಿಗುಣಿಸುವ ಜಾರಚೋರ ಶ್ರೀಕೃಷ್ಣ ಕಾಣಮ್ಮಾ ಅ.ಪ. ನೀರೇ ನೋಡೋಣು ಬನ್ನಿರಿ ಎಂದುಈ ಬಾಲೇರು ಗೋಪಾಲನ ಗಾನಕೆ ಬಂದು ಬೆದರುತ ಮನದೊಳು ಮದನಾಟಕೆ ನಿಂದೂಮೋರೆಯ ತಿರುವುತ ಅಂದು ಮಾರನಯ್ಯ ತವ ಚಾರುಧರಾಮೃತ ಸೂರೆಗೈಯ್ಯೋ ಸದ್ಧೀರಿಯರೊ ನಾವು 1 ಬಾಲೆ ನಿನ್ನಾಳುವ ದಾರಿ ಬ್ಯಾರಿಲ್ಲಾ ಕಾಲಬಂದೊದಗದು ಕೇಳೆನ್ನ ಸೊಲ್ಲ ಮತ್ತಾವದೊ ತಂಗಾಳಿ ಬೀಸುವ ವ್ಯಾಳೆ ಬಂತಲ್ಲಾ ಮೋಹಿಸಿ ಬಂದೆವೊ ನಲ್ಲಾ ಫುಲ್ಲಲೋಚನ ಮೃದು ಮಲ್ಲಿಗೆ ಮುಡಿಸಿ ಮೆಲ್ಲಗೆ ಮರ್ದಿಸು ಮೃದು ಚಲ್ವಯರುಹರೆ 2 ಸಿಂಧೂ ರಾಜಕುಮಾರಿಯ ರಮಣ ಶರದಿಂದೂ ಮಂಡಲ ಮುಟ್ಟುತಲಿದೆ ಧ್ವನಿ ಹಸನಾ ಶಂಭೂರ ಶತ್ರಾದಿಗಳುಗರೆವರು ಪೂಮಳಿ ನಾನಾ ಗಣಶಿರಿಸುತ ಮರುಳಾಗಿ ಪೂ ಬಾಣಾನಾಟವನೋಡುತ ನಾರಿಯ ತ್ಯಜಿಸದೆ ಪರನಾರಿಯ ರೂಪದಿಂದ್ರಮಿಪ ಮುರಾರೇ 3 ಸುರನದಿ ಸ್ಮರಸುತ ರಾಣಿ ನಾಟ್ಯವನಾಡುತ ನವನವ ಪಾಡುತ ದಿದ್ಧಿದ್ಧಿಮಿಕಿಟ ತಾಂ ತಾಳದಿ ನಲಿಯುತ 4 ಶಶಿಸೂರ್ಯನೆಳಸನ್ನಿಭ ಪ್ರಖನಕರಾ ಸರಸೀಜಾದಳ ನುತ ಭಾವಿ ಸಮೀರಾ ಷಟ್ ಶತ ಬಂದು ವಿಂಶತಿಹಂ ಸಾಖ್ಯ ಮಂತ್ರ ಸಹಸ್ತಾದಿಂದ ಸೇವಿಪ ಮಧ್ವಮಧೀಶನ ಲೀಲೆಯನೆನಿಪರ ಬಂದು ತೋರುವಾತ ತಂದೆವರದಗೋಪಾಲವಿಠಲನು 5
--------------
ತಂದೆವರದಗೋಪಾಲವಿಠಲರು
ದನವ ಕಾಯ್ವೊನೆ ದೈನ್ಯ ಬಡುವವನೆ ವನಜಭವಾಂಡಕೆ ಒಡೆಯನಾಗೆಂದರೆಒಲ್ಲದೆ ವನವನ ತಿರುಗಿದನಮ್ಮ ನೋಡಮ್ಮಯ್ಯ ಪ. ದನಗಾಹಿ ಎಂದರೆ ಎನಗೇನು ಸಂಶಯವಿಲ್ಲಜನರೆಲ್ಲ ಬಲ್ಲರು ಈ ಮಾತು ಜನರೆಲ್ಲ ಬಲ್ಲರು ಈ ಮಾತು ಭಾವಯ್ಯನೆನಪಿಸಿ ಕೊಟ್ಟೆಲ್ಲೊ ಮರೆತಿದ್ದೆ 1 ಗೋಪಾಲ ಶಬ್ದಾರ್ಥ ನೀ ಕೇಳಿಶ್ರೀ ಕೃಷ್ಣ ಕೋಪವಿನ್ಯಾಕೊ ಎನಮ್ಯಾಲೆ ಕೋಪ ವಿನ್ಯಾಕೊ ಎನ ಮ್ಯಾಲೆ ಭಾವಯ್ಯನೀ ಪೇಳಿಕೊಂಡ್ಯೊ ನಿಷ್ಕಪಟಿ 2 ಕುದುರೆಯ ಮಾರಿಯ ಹೂವು ಗಣ್ಣಿನ ವರನಿಗೆ ಮದಗಜಗಮನೆ ಮನಸೋತುಮದಗಜಗಮನೆ ಮನಸೋತು ಮ್ಯಾಲಿನ್ನುಬದಲು ಮಾತಾಡಿ ಫಲವೇನೊ3 ನಾರುವ ಮೈಯವ ನೀರೊಳು ಅಡಗಿದ ಹಂದಿ ಮೈಯವನೆ ಮಹಾಕೋಪಿಹಂದಿ ಮೈಯವನೆ ಮಹಾಕೋಪಿ ತಿರುತಿಂಬೊಹಾರುವನ ಗೊಡವೆ ನಮಗ್ಯಾಕೊ 4 ಕೊಡಲಿಯ ಪಿಡಕೊಂಡ ಪಡೆದಮಾತೆಯಕೊಂದೆ ಒಡಲಿಗಿಕ್ಕದಲೆ ಮಡದಿಯಒಡಲಿಗಿಕ್ಕದಲೆ ಮಡದಿಯ ಕೊಂಡೊಯ್ದುಅಡವಿಗಟ್ಟಿದ ಮಹಾ ಮಹಿಮನೆ5 ಜಾರ ಚೋರನೆಂದು ಜಗದೊಳು ಹೆಸರಾದಿಅಪಾರವಾದ ವನಿತೆಯರುಅಪಾರವಾದ ವನಿತೆಯರ ಒಗೆತನಕೆನೀರು ತಂದಿದ್ದ ಮಹಾಮಹಿಮನೆ 6 ಭಂಡ ಗಾರನಂತೆ ದೇಹ ಕಂಡಜನಕೆಲ್ಲತೋರಿ ಪುಂಡಗಾರನಂತೆ ಹಯವೇರಿಪುಂಡಗಾರನಂತೆ ಹಯವೇರಿ ಹಾರಿಸುವ ಲೆಂಡ ರಾಮೇಶನ ಅರಿವೆನೊ7
--------------
ಗಲಗಲಿಅವ್ವನವರು
ದಿಗ್ವಿಜಯವಂತೆ ಬಂದಳು ರುಕ್ಮಿಣಿ ದೂತೆ ಶೀಘ್ರದಿಂದ ಕೃಷ್ಣರಾಯ ಮಾರ್ಗನೋಡ್ಯಾನೆಂಬೊ ಭಯದಿ ಪ. ಕೃಷ್ಣರಾಯನ ಬಿಟ್ಟುಎಷ್ಟು ಹೊತ್ತು ಆಯಿತೆಂದುಸಿಟ್ಟು ಬರಧಾಂಗೆ ಸುರರಿಗೆ ಎಷ್ಟು ಸಲುಹಲಿ ಎನುತ 1 ವೀಕ್ಷಿಸಿ ಎನ್ನ ಮಾರಿಯನುಲಕ್ಷ್ಮಿಯರು ಕೋಪಿಸದಿರಲಿಲಕ್ಷ ಕೋಟಿದ್ರವ್ಯ ದಾನಈ ಕ್ಷಣ ಕೊಡುವೆನೆ ಎನುತ2 ಮದನಜನೈಯ್ಯನ ದಯವುಮೊದಲ್ಹಾಂಗೆ ಇದ್ದರೆ ನಾನು ಅದ್ಬುತದ್ರವ್ಯ ದಾನ ಬುಧರಿಗಿತ್ತೇನೆ ಎನುತ3 ವಿತ್ತ ಕೋಟಿ ದಾನವನ್ನು ಮತ್ತೆಕೊಡುವೆನೆ ಎನುತ4 ಇಂದಿರೇಶಗೆ ಅಂಜಿಕೊಂಡುಚಂದ್ರ ಸೂರ್ಯರು ತಿರಗೋರಮ್ಮಚಂದಾದ ನಕ್ಷತ್ರ ಬಂದುಅಂಜಿ ಹೋಗಿವೆ ಎನುತ 5 ಹರಿಗೆ ಅಂಜಿಕೊಂಡು ಶರಧಿಮರ್ಯಾದಿಲೆ ಇರುವೋ ನಮ್ಮದೊರೆಗೆ ಅಂಜಿಕೊಂಡು ವಾಯುತಿರುಗಾಡುವನಮ್ಮ ಎನುತ 6 ಅಗ್ನಿಅಂಜಿ ತನ್ನ ದರ್ಪತಗ್ಗಿಸಿ ಕೊಂಡಿಹ ನಮ್ಮಭಾಗ್ಯದರಸು ಅಂಜಿ ಮಳೆಯುಶೀಘ್ರದಿ ಗರೆಯುವನು ಎನುತ 7 ಹಾಸಿಗ್ಯಾಗುವ ಶೇಷ ಅಂಜಿದಾಸಿ ಆಗುವಳಂಜಿ ಲಕುಮಿದೇಶಕಾಲ ಅಂಜಿ ಒಂದುಲೇಸು ಮೀರ್ಯಾವೆ ಎನುತ 8 ವರಗಿರಿ ವಾಸಗೆ ಅಂಜಿಶೇಷ ಜಗವ ಪೊತ್ತಿಹನಮ್ಮಗರಿಯ ಹರವಿ ಗರುಡ ಅಂಜಿಹರಿಯ ಧರಸಿಹನೆ ಎನುತ9 ಸಂಖ್ಯವಿಲ್ಲದ ಗಜಗಳಂಜಿಫಕ್ಕನೆ ನಿಂತಿಹ ವಮ್ಮದಿಕ್ಪಾಲಕರು ಅಂಜಿ ತಮ್ಮದಿಕ್ಕು ಕಾಯುವರು ಎನುತ 10 ನದ ನದಿಗಳಂಜಿಕೊಂಡು ಒದಗಿಮುಂದಕ್ಕೆ ಹರಿವೋವಮ್ಮಸುದತೆ ವೃಕ್ಷ ಅಂಜಿಪುಷ್ಪಫಲವ ಕೊಡುವೊವೆ ಎನುತ 11 ಕಂತು ನೈಯನ ಅರಸುತನಎಂಥದೆಂದು ಬೆರಗುಬಟ್ಟುನಮ್ಮಂಥಾ ಒಣ ಬಳಗಅಂಜಿಲಿವೋದು ಕಾಂತೆ ಅರುವನೆ ಎನುತ 12 ರಮಿ ಅರಸಗಂಜಿಕೊಂಡು ಬ್ರಮ್ಹ ಸೃಷ್ಟಿ ಮಾಡೋನಮ್ಮಸುಮ್ಮನೆ ಸುರರೆಲ್ಲ ಕೂಡಿದಮ್ಮಯ್ಯ ಎನಲೆಂದು ಹರಿಗೆ13
--------------
ಗಲಗಲಿಅವ್ವನವರು
ಧ್ರುವತಾಳ ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ ತಂದೆ ನೀನಗಲಿದಕೆ ನೊಂದೆನೊ ನಾ ಭವ ಬಂಧದೊಳಗೆ ಬಿದ್ದು ಬಹುವಿಧದಿ ನಮಗಿನ್ನು ಹಿಂದು ಮುಂದು ಮನಕೆ ನೀ ತಾರದಲೆ ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ | ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ | ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ ಇಂದುವಿನಂತೆ ಪೊಳೆದು ಮೆರೆದ ಕರುಣೀ ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ ಸಿಂಧು ಪೋಲುವ ಕರುಣಿ ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು ಧಾಮ ಶಾಮಸುಂದರವಿಠಲನ ಒಂದೇ ಮನದಿ ಭಜಿಪಾನಂದ ಭಾಗ್ಯವ ನೀಡೋ 1 ಮಟ್ಟತಾಳ ಅನುಪಮಸುಚರಿತ್ರ | ಅನುದಿನದಲಿ ಎನ್ನ ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ ಮುನಿಕೃತ ಪಾದವನಜ ಸೇವಿಪುದಕೆ ತನುವಿಗೆ ಬಲವಿತ್ತು ದಿನದಿನದಲಿ ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ 2 ತ್ರಿವಿಡತಾಳ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ ಪೊಳೆವಂತೆ ಕೃಪೆಮಾಡು 3 ಅಟ್ಟತಾಳ ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ | ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ || ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ | ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ ಶರಧಿ ಕಾಯ ತೊರೆದರೇನಾಯಿತು ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ ಸ್ವಪ್ನದಿಗರೆದು ಸಂತೈಸುತ ನಿರಯಕೆ ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ 4 ಆದಿತಾಳ ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ ಸಾಮಜವರದನ ಕಳೆಯದೆ ಪಾಮರ ಜನರನು ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ ಧಾಮವ ಸೇರಿದ ಹೇ ಮಹಾಮಹಿಮನೆ 5 ಜತೆ ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||
--------------
ಶಾಮಸುಂದರ ವಿಠಲ