ಒಟ್ಟು 13 ಕಡೆಗಳಲ್ಲಿ , 10 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಹಸುಖ ಮೊದಲೇಯಿಲ್ಲ | ಕೃಷ್ಣ ಅಹಹ ಪರಸುಖವಾಗುವುದ್ಹ್ಯಾಗೊ ಪ ಸಾಹಸಿನಾನೆನುತ ಜನರ ಮೆಚ್ಚಿಸುವೊಡೆ ಕುಹಕ ಮಾತುಗಳ ಕೂಗಿ ಬಾಯಾರಿದೆ ಅ.ಪ ಶ್ರವಣ ಮನನ ನಿಧಿ ಧ್ಯಾಸನ ವೊಂ- ದೆವೆ ಮಾತ್ರವು ನಿಜವಾಗಿ ಕಾಣೆನುನಾ ಬವನಾಶಿ ಧರಿಸಿ ದಾಸನೆಂದು ನಾ ಬರಿದೆ ದೇಶಗಳ ತಿರುಗಿ ಬೆಂಡಾದೆನು 1 ಯಮನಿಯಮಾಸನ ಯೋಗ | ಗಳ ಭ್ರಮೆಯ ಪಡುತ ಬಳಲುವೆಯಾವಾಗ ಮಮಯೆಂಬುದರಿಂ ಬಂದಿತು ರೋಗ 2 ಶಂಕರ ಮುಖ ಸುರವಂದ್ಯ | ಅರಿ ಶಂಖ ಗದಾಧರ ಶ್ರೀಶ ಮುಕುಂದ ಸಂಕಟ ಬಂದಾಗ ವೆಂಕಟರಮಣೆಂದು ಮಂಕುಜನರು ಪೇಳ್ವಗಾದೆಯಂತಾಯಿತು 3 ಕಾಸಿಗೆ ತಿರುಗಿದೆನಲ್ಲದೆ | ದಿವ್ಯ ಕಾಶಿಗಯಾಯಾತ್ರೆಯ ಮಾಡಿದೆನೇ ಘಾಶಿಪಟ್ಟಿ ಸಾಕು ಸಾಕಿದರ ಗೊಡವೇ 4 ಕೊಟ್ಟದ್ದರೆ ಹರಿಕೊಡುವ | ಯಂ ಕೊಟ್ಟರುವದಕು ಕೊಡದಿರುವದಕೂ ಕೃಷ್ಣ ನೀನರಿಯದೆ ನಾನು ಸ್ವತಂತ್ರನೇ 5 ಕಣ್ಣಿಲ್ಲದ ಚಿಂತೆವಂದು | ಸದಾ ಬನ್ನ ಬಡುವದು ಯೋಚನೆಯೆರಡು ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ- ಕಣ್ಣು ಕೊಟ್ಟು ನಿನ್ನ ಸೇವೆಯ ಪಾಲಿಸೋ 6 ಛಳಿ ಜ್ವರದ ಯಾತನೆ ಪಡುವೆ | ನಿನ್ನ ಕರೆಕರೆ ಪಡಿಸುವುದು ನಿನಗೆ ತರವೇ 7 ಆರು ಜನರ ಸೇವೆ ಕೊಡಿಸೋ | ಯೀ ಆರು ಜನರ ಸಂಘವ ಪರಿಹರಿಸೋ ಮೂರು ಜನದ ಕೂಟ ಮೊದಲೇ ಬಿಡಿಸೋ ತಾಳಲಾರೆಯಿವರು ಬಲು ಕ್ರೂರಾತ್ಮರು 8 ಆಸೆಯ ಪರಿಹರಿಸಯ್ಯಾ | ನಿಜ ದಾಸನೆನಿಸಿ ನೀ ಪಿಡಿಯೆನ್ನ ಕೈಯ್ಯಾ ಈಸಲಾರೆ ಗುರುರಾಮ ವಿಠ್ಠಲ ಜೀಯಾ 9
--------------
ಗುರುರಾಮವಿಠಲ
ಋಣವ ಮಾಡ್ದಧಮಗುಸುರಲೆುಲ್ಲ ನೀತಿಯಮನು ಮುಖ್ಯಸ್ಮøತಿಕರ್ತರೂ ಪಕಣುಗೆಟ್ಟಿನೀ ದೋಷ ಕಡಲೊಳಗೆ ಮುಳುಗಿ ಮುಂದಣ ಗತಿಯದೇನೆನಗೆ ಕರುಣಿಸೈ ಗುರುವೆ ಅ.ಪಹೇಮಾದ್ರಿ ಮಾಧ'ೀಯಾದಿ ಪ್ರಾಯಶ್ಚಿತ್ತ ನೇಮ 'ಧಿ ಕಾಂಡಗೆಗಳೊಳೂಕಾಮದಿಂದಲಿ ಮಹಾಪಾತಕಗಳನು ಮಾಡಿದೀ ಮಹಾ ತಂಡಗಳೊಳೂಭೂ'ು ಗೋ ದ್ವಿಜರಾಜ ಸ್ತ್ರೀ ದ್ರೋ'ಗಳೊಳು ಪರಭಾ'ುನೀಗಾ'ುಗಳೊಳೂತಾಮಸಾಧಮರೊಳಧರ್ಮನೆನಿಸಿಹೆನೆಂದೇ ಮರಳಿ ಮರಳಿ ಪೇಳಿಹುದಲ್ಲವೆ ಗುರುವೆ 1ಹದಿನೆಂಟು ಬಗೆ ಮಹಾ ಪೌರಾಣ ಕಥೆಗಳೊಳಗಧಮನೀ ಋಣವಂತನೆವದರುತಿವೆಯುಪಪುರಾಣಂಗಳಷ್ಟಾದಶಗಳಧಮನೀ ಋಣವಂತನೆಒದಗಿದೀ ಸಂಖ್ಯೆಯುಪಸ್ಮøತಿಗಳೊಳಗೂ ಪೇಳ್ವುದಧಮನೀ ಋಣವಂತನೆಸದಯತನ ಪುಟ್ಟದಾುತೀ ಪತಿತ 'ಷಯದಲಿಹದನೆನಂಮುಂದೆ ಮುಳುಗಿದೆನೆಲ್ಲೊ ಗುರುವೆ 2ಮೂರು ಮತ್ತೈದಾ ಭೇದ ಋಣ 'ದ್ದರೆಯು ತೀರುವರೆ ಮಾರ್ಗಗಳಿವೆತೀರದಿದ್ದರು ಜನುಮಗೊಡುವವಲ್ಲದೆ ವೃದ್ಧಿಸಿರಿ ಬೆಳೆಯದೆ ನಿಂತಿವೆಆರು ಬಗೆುಂ ಬಡ್ಡಿ ನುಡಿಯದಿದ್ದರು ದಿನವು'ುೀರಲಿದಕೊದಗುತಲಿವೆದಾರಿಯ ನನಗೀಪರಿಯ ಧನ ಋಣವ ದೈವಹೇರಿ ತಳವಳಿದೆನೈರಕ್ಷಿಸೈ ಗುರುವೆ 3ಕಾಶಿಗೈದುವರಾಗದಡ'ಯೊಳಿರುವರಾಗದೀಶ ಭಜನೆಯ ಗಣಿಸದೂುೀಷಣೆಗಳನು ಬಿಟ್ಟು ಸನ್ಯಾಸವನು ಮಾಡಲೀಸದೆ ತನವನರಸದೂದೇಶದೇಶವ ತಿರುಗೆ ತೀರ್ಥಗಳೊಳ್ಮಿಂದರೂಲೇಶ ಮಾತ್ರವು ಸವೆಯದೂಈ ಶರೀರವು ಬೀಳೆ ಕ್ರಮವಾಗಿ ತೊತ್ತು ಸತಿದಾಸಸುತ ಕತ್ತೆಭವಗೊಡುವದೈ ಗುರುವೆ 4ಋಣವು ಮಾಡಿದ ಪತಿತನುಂಬ ಪಂಕ್ತಿಯೊಳು ಜನರುಣಲಾಗದುಂಡರವನೂತನಯ ಪೌತ್ರರು ಸ'ತ ಪತಿತನಪ್ಪನು ನಿಮಂತ್ರಣಗೈಸೆ ಧನ ಋಣಿಯನೂಎಣಿಸಲಾ ಕಲ್ಪನರಕವು ಪಿತೃಗಳಿಗೆ ಕರ್ತನನುಭ'ಪ ನರಕಗಳನೂಎನುತ ಭೀಷ್ಮಾಚಾರ್ಯರುಸುರಿದರು ಧರ್ಮನಂದನಗೆ ಭಾರತ ಶಾಂತಿಪರ್ವದೊಳು ಗುರುವೆ 5ತಲೆಯೋಡ ಪಿಡಿದು ಚಂಡಾಲಗೇರಿಯಲಾದರಳುತ ಕೊಟ್ಟ ಪರಧನವಸಲಿಸದೆ ಕೆಟ್ಟು ಬಂದೆನು ಭಿಕ್ಷಗೊಡಿಯೆಂದುಹಲವು ನಿಂದ್ಯದ್ರವ್ಯವಾಅಳುಕದೆ ತಂದು ಜೀವನಗೈಯ್ದುದರಿಂದುಸಲೆಗೈದು ತಂದ ಋಣವಾಕಳಿವ ನವನರಕಗಳೆಂದು ಹರಿಶ್ಚಂದ್ರ 'ಭುತಿಳು'ದರು ದುರ್ಮನ ಬಿಡದಲ್ಲೊ ಗುರುವೆ 6ಸುತನ ಮಾರಿದ ದೋಷ ಸತಿಯ ಮಾರಿದ ದೋಷಪಿತೃ ಮಾತೃಹತ್ಯ ದೋಷಾಪತಿತನಾಗುವ ದೋಷ ಪತ್ರವನು ಬರದು ತನುಪತನವಾಗುವ 'ಶೇಷಯತನದಿಂದ ಮಾಡ್ದ ಪುಣ್ಯವು ಪೋಪದೋಷ ಪರಸುತ ಭೃತ್ಯನಪ್ಪ ದೋಷಜೊತೆಗೂಡಿ ಗಣಿಸದೆ ಸಾಲವನು ಮಾಡಿದೀಪತಿತನನು ನರಕಕಿಳುಹುವದೆಲ್ಲೊ ಗುರುವೆ 7ನಿತ್ಯಕರ್ಮವ ಮಾಡುವಧಿಕಾರ ಮೊದಲಿಲ್ಲಸತ್ತ ಸೂತಕಕಧಿಕವೂಹೆತ್ತ ತಾು ತಂದೆಗಳ ಮೃತ ದಿನದಿ ಪಿಂಡಗಳನಿತ್ತರವರನುಸಿರವೂಸತ್ತರೂ ಬಿಡದೆ ಬೆಂಬತ್ತಿ ಪೈಶಾಚದಂತೊತ್ತುವದೇಳೇಳು ಭವವೂಇತ್ತಲ್ಲದೆ ಬಡ್ಡಿಸಹ ಮೌಲ್ಯವನು ಪೋಗದೆತ್ತ ಹೋಗಲಿ ಯೇನಮಾಡಲೈ ಗುರುವೇ 8ವರುಷ ಸಾ'ರವಾದರೆಯು ಋಣದ ಮ'ಮೆಯನುಬರೆಯುವದಸಾಧ್ಯ ಗುರುವೆಪರಮ ಋಣಿಗಳು ಸ್ಮøತಿ ಪುರಾಣೇತಿಹಾಸಗಳೊಳರುಪುತಿಹರಿಂತು ಗುರುವೆಹರತು ಋಣಗತ್ತಲೆಯು ನಿನ್ನ ಪದಗಾಬಂತೆಕರುಣಿಸೈ ಬೇಗ ಗುರುವೆಮರೆಯೊಕ್ಕೆ ನಾನು ತಿಮ್ಮದಾಸ ಚಿಕ್ಕನಾಗಪುರವರನಿಲಯ ವಾಸುದೇವಾರ್ಯ ಸದ್ಗುರುವೆ 9
--------------
ತಿಮ್ಮಪ್ಪದಾಸರು
ಏನೂ ತೋಚದೋ ಮುಂದೇನು ಗತಿಯೋ ದೇವಾ ಅಪ್ರಮೇಯ ಸದಾ ಪ ನಾನು ನನ್ನದು ಎಂಬಭಿಮಾನದಿಂದನುದಿನ ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ ಬೋಧರ ಮತತತ್ತ್ವ ಸಾಧಿಸಲಿಲ್ಲವೋ ಸಾಧುಸಜ್ಜನರೆಂದು ಆದರಿಸಲರಿಯೆನೋ ಆಧಾರನಾಗೋ ನಿರಾಧಾರನಾಗಿಹೆ ಬಾಧಿಪರೋ ಬಂಧುಗಳು ಪ್ರತಿದಿನ ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ ಉದಯಾಸ್ತ ಪರಿಯಂತರದಿ ಎನಗೆ ಉದರದ ಯೋಚನೆ ಆದುದೀಪರಿ ಎನ್ನ ಜೀವನ ಇದಕೆ ಸಾಧನಮಾಡಿ ಮೋಹದ ಮುದದಿ ಮೈಮರೆದೆನನುದಿನ ಪದುಮನಾಭನೆ ಮೊರೆಯಿಡುವೆ ಮುಂದೇನು ಗತಿ ಪಥವಾವುದೋ ದೇವಾ 1 ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ ಭಕುತಿಮಾತ್ರವು ಏನ್ನೊಳಿನಿತಿಲ್ಲವೋ ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ ಭಕುತಿ ಕೊಡದಿರುವೆಯಾ ಮುಕುತರೊಡೆಯಾ ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ- ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ ನೀ ಕರುಣಿಸದಲಿರೆ ಇನ್ನು ಅವಿ- ವೇಕಿ ನಾನಿನ್ನೆಂತುಗೈಯಲಿ 2 ನರಜನುಮದಿ ಬಂದು ಬರಿದೆ ಆಯುವ ಕಳೆದೆ ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ ಕರೆಕರೆಪಡುತಲಿ ಜರೆಯೊಳಾಡುತಿಹೆ ದುರಿತ ಹರೇ ದಾರಿ ಎನಗೇನಿಹುದೋ ಇನ್ನು ಮುಂದೆ ಕ್ಲೇಶ ಕೊಡದಲೆ ಪಾರುಗಾಣಿಸೋ ತಂದೆ ಶರಣಜನರಿಗನವರತ ಸುರಧೇನು ನೀನೆಂದೇ ಅರಿಯದವ ನಾ ನೀ ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು ಉರುತರ ಸಾಧನವು ಅದು ತರವರಿತು ಧೃಢಭಕ್ತಿ ಪಾಲಿಸೊ ಉರಗಗಿರಿ ಶ್ರೀ ವೇಂಕಟೇಶನೆ3
--------------
ಉರಗಾದ್ರಿವಾಸವಿಠಲದಾಸರು
ಏನೇನಿಲ್ಲದ ಧನಹೀನನಿಗೆ ಹರಿ ನಾಮವೆ ಭಾಗ್ಯಕರ ಸಾಧಿಸು ಮುಕ್ತೀಕರ ಪ ನೊಂದನು ಮಾಡದಿರೆ ಇಂದಿನ ಜನ್ಮದೊಳಗೆ ದಾರಿದ್ರ್ಯವು ಬಂದು ಪೀಡಿಸುತಲಿದೆ ಮುಂದೆ ಸಾಧಿಸಿ ಕೊಂಬೆನೆಂದರೆ ಕೈಯೊಳೊಂದರೆ ಕಾಸಿಲ್ಲವು ಪಾಲಿಸೋ ಹರಿಯೇ 1 ಕುಟ್ಟಿ ಕೊಂದರೆ ಪಣೆಯ ನಿನ್ನಿಷ್ಟವಮನ ದಣಿಯ ಪಡೆದಷ್ಟು ಉಣ್ಣಬೇಕಲ್ಲದೆ ಪೂಜಿಸೋ ಹರಿಯೆ 2 ಮಾತ್ರವು ಸುಖವಿಲ್ಲ ಜಗದೇಕ ವಂದ್ಯನ ನೆನೆಸು ಶ್ರೀ ಲಕ್ಷ್ಮೀಶನ ಭಜಿಸಿದರೆ ಬೇಕಾದನಿತುವನಿತ್ತು ಕಡೆಗೆ ತನ್ನ ಲೋಕವ ಪಾಲಿಪನು 3
--------------
ಕವಿ ಪರಮದೇವದಾಸರು
ಕಂಡೆ ನನ್ನನು ಕಾಯ್ವನೆಂಬುದ ಕಂಡೆ ಪಾವನನಾದುದಪುಂಡರೀಕದಳಾಯತಾಕ್ಷನೆ ಗಂಡುಮಾಡುವ ಗೂಢವ ಕಂಡೆಕಂಡೆ ಪ.ಮಲಿನವೆಂಬುದು ಮನಕೆ ತೋರಲು ಮಲಿನ ಹೇತುವು ಮೂಡಲುಮಲಿನಕಳುಕುತಲಿದ್ದ ಸಮಯಕೆ ಬಲುಹಿನರಿಕೆಯ ಬೀರಲುಮಲಿನವೇ ಹುಸಿಯೆಂಬ ನಿಶ್ಚಯ ಬಲಿದು ಬಲು ಹುರಿಯಾಗಲುಕಲಕಿ ಸಂಶಯ ಕಡೆಗೆ ಜಾರಲು ನಿಲುಕಿ ನೀನಿದಿರಾಗಲು 1ಶುದ್ಧವೆಂಬುದಶುದ್ಧವೆಂಬುದು ಬುದ್ಧಿಕಲ್ಪಿತಮಾತ್ರವುಇದ್ದು ಸುತ್ತಲು ಈಶನಂತಿರೆ ಹೊದ್ದುವನ್ಯವದಾವದುಶುದ್ಧ ಶ್ರೀಹರಿ ಪೂರ್ಣ ಮಿಕ್ಕಿನ ಬದ್ಧನೆಂಬುದೆ ಭ್ರಾಂತಿಯುಅದ್ವಯಾನಂದಾಬ್ಧಿ ಯೆಂಬೀ ನಿರ್ಧರವ ನೆರೆ ತೋರಲು 2ಅಳುಕದಿರು ನಾ ವಿಶ್ವವಾಗಿಯೆ ಹೊಳೆದು ತೋರಿದೆನೊಬ್ಬನೇಬಳಸಬೇಡತಿಭೀತಿಯೆಂಬುದ ತಿಳಿದು ನೋಡೆಂದರುಹಿದೆಹುಳುಕು ತಾನದು ಹೊಂದದೆಂದಿಗು ಸುಳಿದು ಶುದ್ಧನ ಮಾಡಿದೆಒಳಗೆ ನೀನಿಹೆ ನಲಿದು ತಿರುಪತಿ ನಿಳಯ ವೆಂಕಟನಾಥನೆ 3ಕಂ||ಇಂತೀ ಭಾವನೆಗೈಯುವುದೆಂತೊದಗಿದುದೆನಲು ಸದ್ಗುರುವ ಕರುಣವು ತಾಬಂತೆನಗೆ ತಿರುಪತೀಶನೆಸಂತೋಷದಿ ವಾಸುದೇವ ಯತಿಯಾರ್ಗೀಯಲ್‍ಓಂ ದಯಾನಿಧಯೇ ನಮಃ
--------------
ತಿಮ್ಮಪ್ಪದಾಸರು
ಕರವ ಮುಗಿದ ಮುಖ್ಯಪ್ರಾಣದುರುಳರ ಸದೆದು ಶರಣರ ಪೊರೆಯೆಂದು ಪ. ಜೀವೇಶರೈಕ್ಯವು ಜಗತು ಮಿಥ್ಯವೆಂದುಈ ವಿಧ ಪೇಳುವ ಮಾಯಿಗಳಳಿಯೆಂದು 1 ಪಂಚಭೇದ ಸತ್ಯವೆಂದುಮಾರುತಮತ ಪೊಂದಿದವರನು ಪೊರೆಯೆಂದು 2 ಇಲ್ಲಿ ಮಾತ್ರವು ಭೇದ ಅಲ್ಲಿ ಒಂದೆ ಎಂಬೊಕ್ಷುಲ್ಲಕರ ಹಿಡಿದ್ಹಲ್ಲು ಮುರಿಯೆಂದು3 ಕರ್ಮ ಶ್ರೀಹರಿಗೆ ಅರ್ಪಿತವೆಂದು 4 ಹರಿ ಮಾಡೊ ವ್ಯಾಪಾರ ಬಲ್ಲಕಾರಣದಿಂದಸಿರಿ ಗೋಪಾಲವಿಠಲಗೆರಗಿ ನಿಂದು 5
--------------
ಗೋಪಾಲದಾಸರು
ದಯವಿರಲಿ ದಯವಿರಲಿ ದಾಮೋದರ ಪ. ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣಅ.ಪ. ಹೋಗಿ ಬರುವೆನಯ್ಯ ಹೋದಹಾಂಗೆಲ್ಲಸಾಗುವವನಲ್ಲ ನಾ ನಿನ್ನ ಬಿಟ್ಟುತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲ್ಲುವುದುಹ್ಯಾಗೆ ನೀ ನಡೆದಂತೆ ಹಾಗೆ ನಾ ನಡಕೊಂಬೆ 1 ಇದ್ದಲ್ಲೆ ಎನ್ನನುದ್ಧರಿಪ ಶಕ್ತಿ ಅ-ಸಾಧ್ಯ ನಿನಗೆಂದು ನಾ ಬಂದವನಲ್ಲನದ್ಯಾದಿ ಕ್ಷೇತ್ರಮೂರ್ತಿಗಳಲ್ಲಿ ನಿಜ ಜ್ಞಾನ-ವೃದ್ಧಜನರ ಹುಡುಕಿ ನಿನ್ನ ತಿಳಿಯಲು ಬಂದೆ 2 ಸತತ ಇದ್ದಲ್ಲೆ ಎನ್ನ ಸಲಹೊ ಅದರೊಳಗಾಗಿಅತಿಶಯವು ಉಂಟು ವಿಭೂತಿಯಲ್ಲಿಗತಿಯು ಸಾಧನಕೆ ಅಭಿವ್ಯಕ್ತ ಸಂದರ್ಶನದಿಸ್ಮøತಿಗೆ ವಿಶೇಷ ಮಾರುತಿರಮಣ ನಿನ್ನ 3 ನೋಡಿದೆನೆ ನಾ ನಿನ್ನ ನೋಡದೆ ಎಂದೆಂದುಪಾಡಿದೆನೆ ಆರಾರು ಪಾಡದೊಂದುಮಾಡಿದೆನೆ ಅರ್ಚನೆಯ ಮೀಸಲಾದುದು ಒಂದುಮೂಢಮತಿಯಲಿ ಮುಂದೆ ನಿಂದೆ ಕೈಮುಗಿದು 4 ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ-ದಿಂದ ನಿನ್ನ ಬಳಿಗೆ ಇಂದಿರೇಶಒಂದು ಮಾತ್ರವು ಇಟ್ಟು ಸಕಲವು ಅರ್ಪಿಸಿದೆಬಂಧನ ಕಡಿವ ಭಕುತಿಯು ಜ್ಞಾನ ನೀಡುವುದು 5 ಬಿನ್ನಪವ ಕೇಳು ಸ್ವಾಮಿ ಎನ್ನನ್ನೊಬ್ಬನ್ನೆ ಅಲ್ಲಎನ್ನ ಹೊಂದಿ ನಡೆವ ವೈಷ್ಣವರನಇನ್ನವರಿಗೆ ಬಾಹೊ ದುಷ್ಕರ್ಮಗಳ ಕೆಡಿಸಿಘನಗತಿಗೈದಿಸುವ ಭಕುತಿ ಕೊಡು ಕರುಣದಿ 6 ರಾಜರಾಜೇಶ್ವರ ರಾಜೀವದಳನಯನಮೂಜಗದೊಡೆಯ ಮುಕುಂದಾನಂದಈ ಜೀವಕೀದೇಹ ಬಂದದ್ದಕ್ಕು ಎನಗತಿ ನಿ-ವ್ರ್ಯಾಜದಿ ಸುರಗಂಗೆ ಸ್ನಾನವನು ಮಾಡಿಸೊ 7 ಎನಗೆ ಆವುದು ಒಲ್ಲೆ ಎಲ್ಲೆಲ್ಲಿ ಪೋದರುಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊಚಿನುಮಯಮೂರುತಿ ಗೋಪಾಲವಿಠಲಘನಕರುಣಿ ಮಧ್ವಮುನಿಮನಮಂದಿರನಿವಾಸ8
--------------
ಗೋಪಾಲದಾಸರು
ಪಾಲಿಸೋ ಶ್ರೀ ಗುರುರಾಯಾ ಪ ಕಾಯ - ಭವ ಜಾಲ ತಪ್ಪಿಸೊ ಮಹರಾಯ - ಆಹಾ ಪಾಲಗು ಜನರ ಸು - ಪಾಲಕ ಹರಿಪಾದ ಭವ - ತೂಲಕಾನಲನೆ ಅ.ಪ ಶೇಷಾಂಶ ಪ್ರಹ್ಲಾದ ವ್ಯಾಸಾ - ಮುನಿ ವೇಷ ತಾಳಿದೆಯೊ ಯತೀಶಾ - ಜಾಗು ಪೋಷಣೆ ಗೈಯ್ಯೊ ಮನೀಷಾ - ಎನ್ನಾ - ಶೇಷ ಕ್ಲೇಶವಳಿದೀಶಾ - ಆಹಾ ಭವ ನಿ - ಸ್ಸೇಷ ಮಾಡಿ ಎನ್ನ ಪೋಷಿಸೊ ನಿರುತ ಧೃ - ತಾಷಾಢ ಗುರುವರ 1 ಕಾಮಧೇನು ಕಲ್ಪವೃಕ್ಷಾ - ನಿನ್ನ ಈ ಮಹಮಹಿಮೆ ನಿರೀಕ್ಷಾ - ಮಾಡಿ ಈ ಮಹಿ ಯಾಕೆಂದುಪೇಕ್ಷಾ - ಮಾಡಿ ಧಾಮ ಸೇರಿದವೊ ಭಕ್ತಪಕ್ಷಾ - ಆಹಾ ಸಾಮಜನಾಥನ ಪ್ರೇಮ ಪಾತ್ರನೆ ನಿನ್ನ ಈ ಮಹ ಮಹಿಮೆಗೆ ನಾಮಾಳ್ಪೆ ನಮೊ ನಮೊ 2 ಆಸೇತು ಹಿಮಾದ್ರಿ ತನಕಾ - ನಿನ್ನ ಆಸೆಯ ಮಾಳ್ಪರನೇಕಾ - ಅಂಥ ದಾಸಜನರಿಗೆ ಅನೇಕಾ - ಫಲ ರಾಶಿಯ ಕೊಡುವಿ ಮಜ್ಜನಕಾ - ಆಹಾ ಮಾನವ ಜನ್ಮ ಈಸೆ ಸಾಕೆಲೊ ಸ್ವಾಮಿ ಎಸು ಪೇಳಲಿ ನಿನ್ನ ದಾಸರ ದಾಸನೋ 3 ಎಲ್ಲಿ ಪೋದರು ಕಾಯ್ವರಿಲ್ಲ - ಜಗ - ದ್ವಲ್ಲಭ ಬಲ್ಲಿ ನಿನೆಲ್ಲಾ - ಬಹು ಬಲ್ಲಿದನೆಂಬುವರೆಲ್ಲಾ - ಜನ ಸೊಲ್ಲು ಕೇಳಿಬಂದೆನಲ್ಲಾ - ಆಹಾ ಪುಲ್ಲಲೋಚನ ನೀ - ನಲ್ಲದೆ ಎನ ಭವ ಣೆಲ್ಲ ಮಾತ್ರವು ಕಳೆಯೊ - ರಿಲ್ಲವೊ ಎನ್ನಜೀಯಾ 4 ನಾಥ ನಿನ್ನೊಳು ಜಗಕೆಲ್ಲ - ಮಹ ಪ್ರೀತಿಯು ಇರುತಿಹುದಲ್ಲ - ಸದ - ತಾತ ನೀನಾಗಿ ಜಗಕೆಲ್ಲಾ - ಮತ್ತೆ ಪೂತ ಫಲ ಕೊಡುವಿಯಲ್ಲಾ - ಆಹಾ ದಾತ ಗುರುಜಗ - ನ್ನಾಥವಿಠಲ ಸದಾ ಪ್ರೀತಿಂದ ಇರುವೊನು5
--------------
ಗುರುಜಗನ್ನಾಥದಾಸರು
ಪ್ರಸನ್ನ ಶ್ರೀ ವೇದವ್ಯಾಸ ಪ್ರಥಮ ಆಧ್ಯಾಯ ಪ್ರಾದುರ್ಭಾವಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ನಾರಾಯಣ ಸರ್ವ ಉರು ಗುಣಾರ್ಣವ ನಮೋ ಪಾರತಂತ್ರ್ಯಾದ್ಯಖಿಲ ದೋಷಾತಿ ದೂರ ಪರ ಬ್ರಹ್ಮ ಶ್ರೀ ರಮಣ ವಿಷ್ಣು ಸರ್ವೋತ್ತಮನೇ ಸೂರಿ ಜ್ಞಾನ ಪ್ರಾಪ್ಯ ನಿಗಮೈಕ ವೇದ್ಯ 1 ವಾಸುದೇವ ವೈಕುಂಠ ನಮೋ ತುರ್ಯ ಸಂಕರ್ಷಣ ಪ್ರದ್ಯುಮ್ನಾನಿರುದ್ಧ ತುರಗಾಸ್ಯ ಕಾರ್ದಮ ನಾಭಿಜಾತ್ರೇಯನೇ ಪರಮಾತ್ಮ ಉದ್ದಾಮ ಹರಿ ಶ್ರೀನಿವಾಸ 2 ಕೂರ್ಮ ಕ್ರೋಢ ನರಸಿಂಹ ವಾಮನ ಮುನಿಜ ರಾಘವ ಕೃಷ್ಣ ವನಜ ಕಲ್ಕೀಶ ಆನಂದ ಜ್ಞಾನಾದಿ ಗುಣಮಯ ರೂಪಗಳು ನಿತ್ಯ 3 ವಾರಿಜ ಭವಾಂಡವ ಸೃಜಿಸಿ ಅದರೊಳು ಪೊಕ್ಕು ಕೃತಿ ನಡೆಸಿ ಮೂರು ವಿಧ ಅಧಿಕಾರಿಗಳಿಗೆ ಗತಿ ಇತ್ತು ಮೂರು ವಿಧ ಜೀವರಿಗೆ ಯೋಗ್ಯ ಫಲವೀವಿ 4 ಯದಾ ಯದಾಹಿ ಸದ್ಧರ್ಮಕ್ಕೆ ಹಾನಿಯೋ ಅಧರ್ಮಕ್ಕೆ ವೃದ್ಧಿಯೋ ಆದಾಗ ಅವತರಿಪಿ ಸಾಧುಗಳ ಉದ್ಧಾರ ಪಾಪಿಗಳ ಪತನಕ್ಕೆ ಸದ್ಧರ್ಮ ಸ್ಥಾಪನೆಗೆ ಶ್ರೀಶ ಮುಕುಂದ 5 ಕಲಿಯ ಚಟುವಟಿಕೆಯಲಿ ವೈದಿಕ ಜ್ಞಾನ ಇಳೆಯಲಿ ಸುಜನರಲಿ ಕಡಿಮೆ ಆಗಿ ಶೀಲ ಗೌತಮ ಸಹ ನಿಧಾನ ತಪ್ಪಿ ಶಪಿಸೆ ಬೆಳೆಯಿತು ಅಜ್ಞಾನ ಕಲಿ ವಿಷ ಏರಿತು 6 ದೇವತೆಗಳಿದು ನಿನ್ನಲಿ ಪೇಳಿ ಪಾಥಿರ್üಸಲು ದೇವ ದೇವೋತ್ತಮ ನೀ ಅಭಯವನಿತ್ತು ಭುವಿಯಲಿ ಪರಾಶರ ಸತ್ಯವತಿ ಸುತನೆಂದು ಅವತಾರ ಮಾಡಿದಿ ಸಜ್ಜನೋದ್ಧಾರ 7 ವೃತತಿಜಾಸನ ಸುತ ವಸಿಷ್ಠ ಋಷಿಗಳ ಮಗ ಶಕ್ತಿ ಋಷಿಗಳ ಪುತ್ರ ಪರಾಶರ ಋಷಿಯು ಆ ತಪೋಧನ ನಿನ್ನ ಕುರಿತು ತಪಶ್ಚರಿಸಿದರು ಅಜ ನೀ ತನ್ನಲವತರಿಸು ಎಂದು 8 ವೇದ ವೇದಾಂಗ ಕೋವಿದ ಪರಾಶರರ ಶ್ರದ್ಧೆ ಶೀಲತ್ವವ ಮೆಚ್ಚಿ ನೀನು ಪೇಳ್ದಿ ವಸುರಾಜನ ಸುತೆ ಸತ್ಯವತಿಯ ಸುತನೆನಿಸಿ ಅವತಾರ ಮಾಡುವಿ ಎಂದು 9 ವಸುರಾಜ ಅಡವಿಯಲಿ ಬೇಟೆಯಾಡುವಾಗ ಇಚ್ಚೈಸಿ ಮಗ ತನ್ನ ರಾಣಿಯ ನೆನೆಯೇ ವಿಸರ್ಜನೆ ಆಯಿತು ರೇತಸ್ಸು ಅದನ್ನ ತನ್‍ಸತಿಗೆ ಕಳುಹಿಸಿದ ಪಕ್ಷಿ ಮೂಲಕ 10 ಶೇನಪಕ್ಷಿ ಅದನ್ನ ಕುಂಡದಲಿ ಹಿಡಕೊಂಡು ರಾಣಿಯ ಪಟ್ಟಣಕೆ ಹೋಗುವ ಮಾರ್ಗದಲಿ ಯ- ಶೇನಪಕ್ಷಿ ತಡೆದು ಯುದ್ಧ ಮಾಡಿತು 11 ಆಗ ವಸುರಾಜ ಕೊಟ್ಟ ಪೊಟ್ಟಣ ನೀರೊಳು ಬಿದ್ದು ಬಿದ್ದ ವೇಗದಲಿ ಎರಡಾಗಿ ಆಗ ಗಂಗೆಮಾತೆಯು ಪ್ರಸನ್ನಳಾಗಿ ಸಣ್ಣದರೋಳ್ ಆವಿಷ್ಟಳಾದಳು ಅದನ್ನ ಹೆಣ್ಣು ಮೀನೊಂದು ನುಂಗಿ ಗರ್ಭ ಧರಿಸಿತು 12 ಸರ್ವೋತ್ತಮನೇ ನಿನ್ನ ಅವತಾರ ಕಾಲದಲಿ ಗಂಗಾಧರಾದಿ ದೇವತೆಗಳು ತಪಸ್ ಮಾಡಿ ವರಗಳ ಹೊಂದುವುದು ಅನುಚಿತವೂ ಅಲ್ಲ ಆಶ್ಚರ್ಯವೂ ಅಲ್ಲ ಗಂಗಾಧರನೂ ತಪವಾಚರಿಸಿ ನಿನ್ನನುಗ್ರಹದಿಂ ಪುತ್ರನಾದ ಶುಕನಾಗಿ 13 ಮತ್ಸದ ಗರ್ಭವು ವರ್ಧಿಸಿತು ಆಗ ಬೆಸ್ತರು ಆ ಮೀನ ಹಿಡಿದು ಸೀಳೆ ಅದರ ಉದರದಿ ಎರಡು ಶಿಶುಗಳ ಕಂಡರು ಒಂದು ಹೆಣ್ಣು ಮತ್ತೊಂದು ಮಗು ಗಂಡು 14 ತಮ್ಮ ನಾಯಕ ದಾಸರಾಜನಲಿ ಪೋಗಿ ಆ ಮೀನುಗಾರರು ಶಿಶುಗಳ ಕೊಡಲು ಆ ಮತಿವಂತನು ವಸುರಾಜನಲಿ ಪೋಗಿ ಸಮಸ್ತವ ಪೇಳಿ ಮಕ್ಕಳ ಮುಂದೆ ಇಟ್ಟ 15 ವಸುರಾಜನು ವಿಷಯವ ಚೆನ್ನಾಗಿ ಅರಿತು ಶಿಶುಗಳು ತನ್ನದೇ ಎಂದು ತಿಳಿದು ಭಾಸ್ಕರೋಜ್ವಲ ಗಂಡು ತಾನು ಇಟ್ಟುಕೊಂಡು ಶಶಿಕಾಂತಿಯ ಮಾತ್ಸೇಯ ದಾಸನಿಗೆ ಕೊಟ್ಟ 16 ಶೀಲತ್ವ ಸುಗುಣತ್ವದಲಿ ಪ್ರಕಾಶಿಸುತ ಬೆಳೆಯುತಿಹಳು ದಾಸರಾಜನ ಗೃಹದಿ ಬಾಲೆ ಇವಳಿಗೆ ಸತ್ಯವತೀ ಎಂಬ ನಾಮವು ಬಲು ಪುಣ್ಯವಂತಳು ಸುಶುಭ ಲಕ್ಷಣಳು 17 ದಾಸನಾಯಕನ ಮನೆಯಲ್ಲಿ ಬೆಳೆವ ಕಾರಣ ದಾಸನು ನಾವಿಗನು ಆದ್ದರಿಂದ ಸುಶೀಲೆ ಈ ಸತ್ಯವತಿಯು ನಾವೆ ನಡೆಸುವಳು ವಸುರಾಜಪುತ್ರಿ ಇವಳಿಗೆ ಗರ್ವವಿಲ್ಲ 18 ಸಮುದ್ರ ಕುರಿತು ಪ್ರವಹಿಸುವ ಸೂರ್ಯಾತ್ಮಜ ಯಮುನೆಯ ದಾಟಲು ಹಡಗಿನಲ್ಲಿ ಕುಳಿತ ಆ ಮುನಿ ಪರಾಶರರಿಗೆ ಒದಗಿದಳು ಕಾಲ 19 ಶ್ರೀಶ ನಿನ್ನಯ ಮಾತು ನೆನೆದು ಪರಾಶರರು ಆ ಸತ್ಯವತಿಯನ್ನ ಮದುವೆ ಆಗಲು ಒಪ್ಪಲು ವಸಿಷ್ಠರು ಯಾಜ್ಞವಲ್ಕ್ಯಾದಿ ಮುನಿ ಸಭೆಯಲಿ ವಸುರಾಜನು ಧಾರೆ ಎರೆದಿತ್ತ ಮಗಳ 20 ನಾರದರ ವೀಣೆ ಸಂಗೀತ ಗಾಯನವು ಸುರ ಗಂಧರ್ವರ ಸುಸ್ವರ ಗಾನ ಸುರನಾರಿ ನರ್ತಕರ ಆನಂದ ನರ್ತನವು ಸರಸಿಜಾಸನ ಮುಖ ಸುರರ ಸ್ತೋತ್ರಗಳು 21 ನೀಲ ಮೇಘ ಶ್ಯಾಮ ಇಂದಿರಾಪತಿಯು ಕಲಿ ವಿದಾರಕ ವಿಜ್ಞಾನ ಭೋದಕನು ಇಳೆಯಲಿ ವ್ಯಾಸ ಅವತಾರ ಸಮಯವೆಂದು ಸುರರು ಕೂಡಿ ತುಂಬಿದರು 22 ನಿಮೇರ್ಘ ಹಿಮ ಆಗಲಿ ದೇಶ ಪ್ರಕಾಶಿಸಿತು ಮರಗದ ವರ್ಣದಲಿ ಜ್ವಲಿಸುವ ರೂಪ ಉರು ಸ್ವಕಾಂತಿ ಸಹಸ್ರ ಲಕ್ಷ ಕೋಟ್ಯಮಿತ ಸೂರ್ಯತೇಜಃ ಪುಂಜ ಅವತಾರ ಮಾಡಿದಿ 23 ಶೋಣಿತ ಸಂಬಂಧ ಇಲ್ಲವೇ ಇಲ್ಲ ಅಪ್ರಾಕೃತ ಚಿದಾನಂದ ಕಾಯ ಚಿಕ್ಕ ಬಾಲಗೆ ಅಂದು ಒಲಿದು ಕಂಬದಿ ಬಂದ ಶ್ರೀಕಾಂತ ನರಸಿಂಹ ಅವತಾರದಂತೆ 24 ತಂದೆ ತಾಯಿಲ್ಲದೆ ಪುಂ ಸ್ತ್ರೀ ಕೂಡದೆ ಅಂದು ಕಂಬದಿಂದ ಸ್ವೇಚ್ಛದಿ ಬಂದಿ ಇಂದು ಸ್ವತಂತ್ರದಿ ಸತ್ಯವತಿ ಋಷಿ ಮುಂದೆ ಬಂದು ಪ್ರಕಟಿಸಿದಿ ವ್ಯಾಸ ಅವತಾರ 25 ಶೋಣಿತ ರಹಿತ ಅಲೌಕಿಕವಾದರೂ ನೀ ಲೋಕ ರೀತಿಯಲಿ ಪುಟ್ಟಿದ ತೆರದಿ ಕಲಿ ಕಲಿ ಪರಿವಾರ ದುರ್ಜನ ಮೋಹಕ್ಕೆ ಮಾಲೋಲ ನೀ ವಿಡಂಬನ ಮಾಡಿ ತೋರ್ದಿ 26 ಅಂಕುಶ ಅಬ್ಜ ಧ್ವಜ ಚಕ್ರ ರೇಖ ಪದಯುಗ ಪದ್ಮ ಸುಖಜ್ಞಾನಮಯ ಜ್ಞಾನ ಸುಖದ ಧ್ಯಾನಿಪರ್ಗೆ ತಟಿತ್ ಪ್ರಭಾ ಜಟಾಮಕುಟ ಶಿರವು ಪ್ರಕಾಶಿಸುವ ಕಸ್ತೂರಿ ತಿಲಕ ಲಲಾಟ 27 ಸೃಷ್ಟ್ಯಾದಿಕರ್ತ ನಿನ್ನ ಭೃ ಚೆಂದ ನಿಖಿಳ ಇಷ್ಟಪ್ರದ ಅನಿಷ್ಟ ನಿವಾರಕ ನೋಟ ಕರ್ಣ ಕುಂಡಲದ್ವಯವು ಶ್ರೇಷ್ಠತಮ ತುಳಸೀ ದಳಗಳು ಕಿವಿಯೋಳ್ 28 ಸುಧಾರಸ ಸುರಿಸುವ ಶಶಿಕೋಟಿ ನಿಭ ಮುಖ ಸಂದರ್ಶನ ಸುಖ ಸಂದೋಹ ಈವುದು ಮಂದಹಾಸವು ನತಜನ ಶೋಕ ಕಳೆವುದು ಶುಭ ಲೋಹಿತೋಷ್ಟ್ರಗಳು 29 ಸುಂದರ ರೇಖಾತ್ರಯಯುತ ಕುಂಬುಗ್ರೀವದಿ ಕೌಸ್ತುಭ ಮಣಿಯು ಶ್ರೀ ದೇವಿಗಾಶ್ರಯ ವಿಶಾಲ ವಕ್ಷ ಸ್ಥಳದಿ ಚಿದ್ದಮಲ ಮೋದಮಯ ಶ್ರೀವತ್ಸ ಅಂಕ 30 ಪೊಳೆವ ರತ್ನದ ಹಾರಗಳು ಉರದೇಶದಲಿ ವಲಿತ್ರಯಾಂಕಿತ ಉಳ್ಳ ಉದರ ಸುಂದರವು ಕೀಲಾಲಜ ಭವಾಂಡವ ಪಡೆದ ನಾಭಿಯು ಬೆಳಗುತಿದೆ ಮೌಂಜಿಯು ಸುಪ್ರಕಾಶದಲಿ 31 ಸುಪವಿತ್ರ ಜ್ಞಾನ ತೇಜ ಕೃಷ್ಣಾಜಿನವು ಶ್ರೀಪ ನಿನ್ನಯ ದಿವ್ಯ ಯೋಗ ಅಸನವು ಉಪಮವಿಲ್ಲದ ಸುಂದರ ಕಟಿಜಾನು 32 ಉರು ಜಂಘಾ ಗುಲ್ಫ ಪದ್ಮಾಂಘ್ರಿ ಸೌಂದಂiÀರ್i ಉರು ಸುಶುಭ ಲಕ್ಷಣ ವರ್ಣಿಸಲಶಕ್ಯ ವಜ್ರನಖಗಳ ದ್ಯುತಿ ಶಶಿ ಕೋಟ್ಯಮಿತವು ಶುಭ್ರತಮ ಯಜÉ್ಞೂೀಪವೀತ ಧರಿಸಿರುವಿ 33 ತಿಮಿರ ಮಾರ್ತಾಂಡ ನೀ ರವಿ ಕೋಟಿ ಅಮೃತ ಇಂದು ಕೋಟಿ ಅತ್ಯಧಿಕ ತೇಜ ಈ ದಿವ್ಯ ಸುರೂಪದಿ ಶ್ರೀಯಃಪತಿಯೇ ಪ್ರಾದುರ್ಭವಿಸಿದಿ ಸ್ವಾಮಿ 34 ನೀ ಪ್ರಾರ್ದುರ್ಭವಿಸಿ ದಿನ ಏಳೊಳಗೆ ಉಪನಯನ ರೂಪ ಪೂಜೆ ಪರಾಶರರು ಮಾಡಿದರು ಉಪನಯನ ಸಂಸ್ಕಾರ ಲೀಲಾ ಮಾತ್ರವು ನಿನಗೆ ಆ ಪರಾಶರ ಸತ್ಯವತಿಗೆ ಮುದಕರವು 35 ಸತ್ಯವತೀ ಪರಾಶರರ ಸುತನೆಂದು ನೀ ಕೀರ್ತಿ ಅವರಿಗೆ ಜಗತ್ತಲ್ಲಿ ಇತ್ತಿ ಸಾತ್ಯವತೇಯ ಪರಾಶರ್ಯ ನಾಮದಿಂ ಸತ್ ಸೃಷ್ಟಿ ಸುಖಜ್ಞಾನ ಪವಿತ್ರತ್ವಜÉ್ಞೀಯ 36 ಯಾವ ಯಾವಾಗ ಸತ್ಯವತಿ ಪರಾಶರರು ದೇವತಾ ಸಾರ್ವಭೌಮನೇ ವ್ಯಾಸ ನಿನ್ನ ತಾವು ನೋಡಲು ಇಚ್ಛೈಸಿ ನೆನೆಯುವರೋ ಆವಾಗ ತೋರುವಿ ಎಂದಿ ಮಾತೆಗೆ 37 ವ್ಯಾಸ ಅವತಾರದ ಕಾರ್ಯೋನ್ಮುಖನಾಗಿ ನಗ ಮೇರುಗಿರಿಗೆ ಬಿಸಜಭವ ಮೊದಲಾದ ದೇವರು ಹಿಂಬಾಲಿಸುತ ಶ್ರೀಶ ನೀ ಹೊರಟೆ ಪ್ರಣತಾರ್ತಿಹರ ಅಜಿತ 38 ಜ್ಞಾನ ಸುಖಪೂರ್ಣ 'ಪ್ರಸನ್ನ ಶ್ರೀನಿವಾಸ' ಪೂರ್ಣ ಪ್ರಜ್ಞರ ಹೃತ್‍ಸ್ಥ ವನಜ ಭವತಾತ ಸ್ವರ್ಣಾಂಡ ಬಹಿರಂತವ್ರ್ಯಾಪ್ತ ತೇಜಃಪುಂಜ ಆ ನಮಿಪೆ ಬದರೀಶ ಜ್ಞಾನಮುದ ಧನದ 39 - ಇತಿ ಪ್ರಥಮಾದ್ಯಾಯ ಸಂಪೂರ್ಣಂ - ದ್ವಿತೀಯ ಅಧ್ಯಾಯ ಸಾರ ಜ್ಞಾನ ಸುಖ ಬಲಪೂರ್ಣ ಅನಘ ವೇದವ್ಯಾಸ ವನಜಜಾಂಡಾಂತರ್ ಬಹಿವ್ರ್ಯಾಪ್ತ ಶ್ರೀಶ ಇನ ಸೋಮ ಕೋಟ್ಯಮಿತ ತೇಜ ಚಿನ್ಮಯಗಾತ್ರ ಜ್ಞಾನಾದಿ ಸಂಪತ್‍ಪ್ರದ ಶರಣು ಪಾಹಿ ಪ ರಾಜ ರಾಜೇಶ್ವರನೇ ರಾಜೀವಾಲಯ ಪತೇ ರಾಜೀವಭವ ಭವಾದ್ಯಮರ ವಿನುತ ರಾಜೀವ ಪದಯುಗಗಳ್ಗೆ ಶರಣಾದೆ ನಿನ್ನಲಿ ರಾಜೀವನಯನ ಔದಾರ್ಯ ಕರುಣಾಬ್ಧಿ 1 ಸೃಷ್ಟಿ ಕಾಲದಲಿ ನೀ ಪರಮೇಷ್ಟಿರಾಯನಿಗೆ ಶ್ರೇಷ್ಟ ನಿಗಮಾದಿಗಳ ಬೋಧಿಸಿದ ತೆರದಿ ಕೃಷ್ಣ ದ್ವೈಪಾಯನನೆ ಸುರಮುನಿಗಳಿಗೆ ಈಗ ಉತ್ಕøಷ್ಟ ಉಪದೇಶ ಮಾಡಿದಿ ಮೇರುವಿಲಿ 2 ಸಮಸ್ತ ಶಾಸ್ತ್ರಾರ್ಥ ನಿದರ್ಶನಾತ್ಮಕವಾದ ವಿಮಲ ಶಾಸ್ತ್ರೋತ್ತಮ ಮಹಾ ಭಾರತವನು ಸುಮಹಾ ವೇದಾರ್ಥ ನಿರ್ಣಯಕವಾದ ಬ್ರಹ್ಮ ಸೂತ್ರಂಗಳ ವಿರಚಿಸಿದಿ ವ್ಯಾಸ 3 ಹರಿ ವ್ಯಾಸ ಕೃಷ್ಣದೈಪಾಯನ ನಿನ್ನ ಅಮಿತ ಬಲಯುತ ಶರದಿಂ ರುದ್ರಾದಿಗಳ ಮನೋಗತವಾಗಿ ಇರುತ್ತಿದ್ದ ಕ್ರೂರ ಕಲಿಮೃತನಾದವನಂತೆ ಆದ 4 ಸಾತ್ಯವತೇ ವ್ಯಾಸ ನಿನ್ನಯ ಮುಖಾಂಬುಧಿಯಿಂದ ಉದ್ಭೂತವಾದ ಉತ್ತಮ ಜ್ಞಾನ ರೂಪ ಸುಧೆಯ ದೇವತೆಗಳು ಭುಂಜಿಸಲು ಆಗ ವಿದೂರರಾದರು ಕಲಿಯ ಕಲ್ಮಷದಿಂದ 5 ವಿಧಿ ವಾಯು ಎಂದೆಂದೂ ಕಲಿಕಲುಷ ವಿದೂರರು ಬಂದ ರುದ್ರಾದಿಗಳು ಮುಂದೆ ಕುಳಿತು ಶ್ರೀದ ನೀ ಬೋಧಿಸಿದ ಮಹಾಭಾರತ ಬ್ರಹ್ಮ- ಸೂತ್ರಾದಿ ಅಮೃತವ ಪಾನ ಮಾಡಿದರು 6 ಮನುಷ್ಯೋತ್ತಮರೊಳು ಇದ್ದ ಕಲಿ ಭಂಜನಕೆ ದೀನ ದಯಾಳು ನೀ ದಿಗ್ವಿಜಯಗೈದಿ ಮಂದಾಧಿಕಾರಿಗಳ ಉಪಕಾರಕಾಗಿ ನೀ ನಿಗಮ ವಿಭಾಗ ಮಾಡಿದಿಯೋ 7 ಯಾವ ಯಾವ ಸಜ್ಜನರು ಅಜ್ಞಾನ ಪೂರಿತರೋ ಅವರು ವಾಸಿಸುವ ಸ್ಥಳಗಳಿಗೆ ಪೋಗಿ ದಿವ್ಯ ಸಜ್ಞಾನವ ಬೋಧಿಸಿ ಕಲಿ ವಿಷ ನಿವಾರಣ ಮಾಡಿದಿ ಕರುಣಾಂಬು ನಿಧಿಯೇ 8 ಪರಮಾರ್ಥ ಭಾಷ್ಯಾರ್ಥ ಐಹಿಕಾಮುಷ್ಮಿಕ ಸರ್ವಾರ್ಥ ಒದಗಿಸುವ ಮುಖ್ಯ ನಿಯಂತೃ ಪರಮಾತ್ಮ ವ್ಯಾಸ ನೀ ದಿಗ್ವಿಜಯ ಮಾರ್ಗದಲಿ ಮರವಟ್ಟ ಕ್ರಿಮಿಗೆ ಔದಾರ್ಯದಲಿ ಒಲಿದಿ 9 ಹರಿಯ ಅಪರೋಕ್ಷ್ಯವು ಲಭಿಸಿದವರಿಗೂ ಸಹ ಕರ್ಮ ನಿಮಿತ್ತ ನರ ನರೇತರ ಜನ್ಮ ಅಸಂಭವವು ಅಲ್ಲವು ಈ ಕ್ರಿಮಿ ಜನ್ಮ ಸಹ ಪ್ರಾರಬ್ಧ ನಿಮಿತ್ತ 10 ಶೂದ್ರನು ಲೋಭಿಯು ಪೂರ್ವ ಜನ್ಮದೀ ಕ್ರಿಮಿಯು ಈ ದೇಹವ ಬಿಡು ರಾಜನಾಗಿ ಹುಟ್ಟಿಸುವೆ ಎಂದು ನೀ ಪೇಳಲು ದೇಹದಾಶೆ ಪ್ರಕಟಿಸಿತು ಆದರೂ ಆ ಕ್ರಿಮಿಗೆ ರಾಜಪದವಿತ್ತಿ 11 ಆ ಕ್ರಿಮಿಯಿಂದ ನೀ ರಾಜ್ಯವ ಆಳಿಸಿ ಜಗದೇಕ ಸ್ವಾಮಿಯು ಸ್ವತಂತ್ರ ಸಚ್ಛಕ್ತ ಭಕ್ತೇಷ್ಟ ಸಿದ್ಧಿದ ಸತಾಂಗತಿ ನೀನೆಂದು ಜಗತ್ತಿಗೆ ವ್ಯಕ್ತ ಮಾಡಿದಿ ದೇವ ದೇವ 12 ಅಗಣಿತ ಗುಣಾರ್ಣವನೇ ವ್ಯಾಸ ಕೃಷ್ಣನೇ ನಿನ್ನ ಮಗನೆಂದು ತಾ ಜನಿಸಿ ಸೇವಿಸಬೇಕೆಂದು ಗಂಗಾಧರ ನಿನ್ನ ಕುರಿತು ಮಹತ್ತಪಸ್ ಮಾಡಿ ಹಾಗೆ ನಿನ್ನಿಂದ ವರ ಪಡೆದು ಮಗನಾದ 13 ಯಥಾರ್ಥ ಹೀಗಿರಲು ನೀನು ಸಹ ತಪಸ್ ಮಾಡಿ ರುದ್ರಗೆ ವರವಿತ್ತು ಅಧಮರ ಮೋಹಿಸಿದಿ ಒಂದೊಂ
--------------
ಪ್ರಸನ್ನ ಶ್ರೀನಿವಾಸದಾಸರು
ಮಾತು ಆಡುವೆ ಯಾತಕೆ ಮನವೆ ನೀ ಸೋತು ಸುಮ್ಮನಿರು ಜೋಕೆ ಪ ಮಾತು ಆಡುವೆ ಯಾಕೆ ಮಮತಾ ಅಹಂಕಾರದಿ ಶ್ರೀತರುಣಿವರನ ಸಿರಿನಾಮವಿಲ್ಲದೆ ಅ.ಪ ಕಾಯ ಅಸ್ಥಿರವೆನ್ನದೆ | ಇಹ ಪರಕೆ ಸ- ಮಾಯವಾದಗಳಾಡೆ ಬಾಯಿ ನೋವಲ್ಲದೆ 1 ವೇದ ಪುರಾಣವಿಲ್ಲ | ಶಾಸ್ತ್ರವೆ ಬ್ರಹ್ಮ- ವಾದವೇ ಮೊದಲೇಯಿಲ್ಲಾ ಸಾಧನೆಯೆಂಬುವದು ಲೇಶಯಿದರೊಳಿಲ್ಲಾ ಹಾದಿಹೋಕರ ಕೂಡಿ ಪ್ರೌಢನು ನಾನೆಂದು 2 ಹರಟೆ ಹರಟೆ ಮೋದಿಸಿ ಪರಗತಿ ಚಿಂತೆ ಬಿಂದು ಮಾತ್ರವು ಕಾಣೆ ಹರಿವ ನೀರೊಳು ಬೂದಿಹಾಕುವಂದದಿ ವ್ಯರ್ಥ 3 ಒಂದಕ್ಕೊಂದ್ಹೆಚ್ಚಿಸುತ | ಶುಷ್ಕವಾದ- ದಿಂದ ಕಾಲವ ಕಳೆಯುತ ನಿಂದಿಸಿ ಪರರ ಸ್ವಯೋಗ್ಯತೆ ತಿಳಿಯದೆ 4 ಬಲ್ಲೆನಾ ಬಿಡು ಎಂಬುವೆ | ಸದಾ ಒಬ್ಬ- ಪುಲ್ಲಲೋಚನ ಗುರುರಾಮವಿಠಲನ ಕಾಣ- ಲಿಲ್ಲ ಶೋಧಿಸಿ ತಿಳಿಯಲಿಲ್ಲ ಬರಿದೆ ಬಾಯಿ 5
--------------
ಗುರುರಾಮವಿಠಲ
ಸಹಿಸಲಾರೆನೊ ವ್ಯಥೆಯ ಪವಮಾನ ವಂದಿತನೆ ಪ. ಅಹೋರಾತ್ರಿಲಿ ಮನ ಕಳವಳ ಪಡುವದೊ ಆಹಾರ ನಿದ್ರೆಗಳು ತೊಲಗಿ ಪೋದವು ದೇವಾ ಸಹಿತಾಗಿ ತಾಯಿಯ ಸರ್ವಬಾಂಧವರೆಲ್ಲಾ ಸ ನ್ನಿಹಿತರಾಗಿ ಎನ್ನ ಬಳಗ ಇದ್ದರೂ ಕೂಡ ಅ ಸಹ್ಯವಾದ ದುಃಖ ದೂರಾಗಲಿಲ್ಲವೊ ಆಹಾ ಇರಲಾರೆ ಇರಲಾರೆ ಭಕ್ತ ಜನರ ಬಿಟ್ಟು ಮಹಿದಾಸ ಮೂರ್ತಿಯ ನಿನ್ನ ಭಕ್ತರ ಪಾದ ಸಹವಾಸ ಸುಧೆಯ ಸುರಿಸಿ ಬಲುಪರಿ ಅಹಿಭೂಷಣ ತಾತ ಕಾಳಿಮರ್ಧನಕೃಷ್ಣಾ 1 ಕರ್ಮ ಅಡ್ಡಬಂದು ಎನ್ನ ಘಾಸಿ ಮಾಡುತಲಿದೆ ಅರಿಯದಾದೆನೊ ದೇವಾ ಬ್ಯಾಸರವಾಗಿದೆ ಜನ್ಮವು ಮಹಿಯೊಳು ಸಾಸುವೆ ಮಾತ್ರವು ಸ್ವತಂತ್ರವಿಲ್ಲದಿಹ ದೋಷಿಜೀವನ ತಾನೇನು ಮಾಡಬಲ್ಲ ಸಾಸಿರನಾಮಗುರು ಕಾಳೀಮರ್ಧನಕೃಷ್ಣ2 ಜಲದ ಮಧ್ಯದಿ ಇರುವ ಮೀನವನು ಕಾವ ಮಳಲಿನೊಳಗೆ ತೆಗೆದು ಬಿಸುಟಿದಂತಾಯಿತು ಹೊಳೆಯ ಈಜುವೆನೆಂದು ಬಲು ಹೆಮ್ಮೆಯಿಂದಲಿ ಸೆಳೆವಿಗೆ ಸಿಕ್ಕು ಬಿದ್ದ ಮನುಜನ ತೆರನಾಯ್ತು ಬಲವಾಗಿ ಘಾಯವ ಪೊಂದಿದ ಸ್ಥಾನದಲ್ಲಿ ಸಲೆ ಕಾದ ಆಯಸ ಸೆಳೆಯನೆಳೆದಂತಾಯ್ತು ಅಳಲನು ನಿನಗಲ್ಲದೆ ಇನ್ನಾರಿಗೆ ಪೇಳಲೋ ಕೊಳಲಧರನೆ ಗುರು ಕಾಳಿಮರ್ಧನಕೃಷ್ಣಾ 3 ನಿನ್ನ ಭಕ್ತರಾ ಮಾತು ಯನಗದು ಮನ್ನಣೆ ನಿನ್ನ ಭಕ್ತರ ಕಥಾಶ್ರವಣ ಯನ್ನ ಕರಣಾಭರಣ ನಿನ್ನ ಭಕ್ತರ ಸಮೂಹ ಎನ್ನಯ ಕಣ್ಬೆಳಕು ನಿನ್ನ ಭಕ್ತರ ಪಾದದೂಳಿಯೆ ಶಿರೋಭೂಷಣವೆನೆಗೆ ನಿನ್ನ ಭಕ್ತರ ಆಶೀರ್ವಾದವೇ ಸರ್ವ ಬಲವೈ ಇನ್ನು ಈ ಬುದ್ಧಿಯು ಎಂದಿಗೂ ಕೆಡೆದಂತೆ ಚೆನ್ನಾಗಿ ರಕ್ಷಿಸೊ ಗುರು ಕಾಳಿಮರ್ಧನಕೃಷ್ಣಾ 4 ಪರಾಧೀನನೆಂದು ಪರಿಪರಿಯಿಂದಲಿ ಕೊರಗಿಸುವುದು ನಿನಗೆ ಎಂದಿಗೂ ಸರಿ ಅಲ್ಲ ಪರಾಧೀನನು ಅಹುದು ಪರತಂತ್ರನಾನಹುದು ಸರ್ವತಂತ್ರ ಸ್ವತಂತ್ರ ನೀನೆಂಬುದು ಸಿದ್ಧ ಶರಣಾಕರ ಆದರಿಷ್ಟು ಮಾತ್ರ ಕೇಳೋ ಸತಿ ತನ್ನಧೀನಳೆಂದು ಶಿರಶಿಡಿಯುವ ಊರಿ ಬಿಸಿಲಿನೊಳು ನಿಲ್ದಪನೆ ಸರಿಬಂದಿದ್ದು ಮಾಡೋ ಇದರ ಮೇಲಿನ್ನು ದೇವಾ ಉರಗಶಯನ ಗುರು ಕಾಳೀಮರ್ಧನಕೃಷ್ಣಾ 5 ನೀನು ನುಡಿಸಿದಂತೆ ನುಡಿದು ನುಡಿವೆನಯ್ಯ ನಿನ್ನ ಚಿತ್ತವು ಗುರು ಕಾಳೀಮರ್ಧನಕೃಷ್ಣಾ
--------------
ಕಳಸದ ಸುಂದರಮ್ಮ
ದಾರುದಾರಿಲ್ಲೆಲೆ ರಂಗದಾರುದಾರಿಲ್ಲ ಸಂಗನೀರಜಾಕ್ಷನೀನೆ ಭವಸಾಗರತಾರಿಸಿ ಕೀರ್ತಿ ಪಡೆಯೊ ದಾತಾರ ಪ.ಮೀನವಾಮಿಷವುಂಡಂತೆ ಸುಖಮಾನಿನಿಯರ ತಡಿಯುಧೇನುಜರಿಯಾದಂತೆ ಏಳಿಲುಸೂನುಗಳ ಬಿರುನುಡಿಯುಏನು ಬಳಗಾಮೃಗ ದಗ್ಧ ವಿಪಿನದ ಸ್ನೇಹದೆ ಕಡಿಯುಪ್ರಾಣ ಪಯಣಕೆ ಬುತ್ತಿಲ್ಲಭವಸಂಧಾನ ಹರಿದರೆ ಆರಿಲ್ಲ ಒಡೆಯಾ 1ಏಸೋ ದಿನ ನೆಚ್ಚಿದಕಾಯಹೇಸಿಕೆಘನವಾಯಿತುಆಸೆಬಟ್ಟಾರ್ಥ ವೃಥಾವ್ರಯಕಾಸು ನಾಶಾಯಿತುಲೇಶ ಮಾತ್ರವು ಹಿತ ಹೊಂದದೆ ಮನದ್ವೇಷಿ ತಾನಾಯಿತು ಆಯುಷ್ಯ ಸೂತ್ರವು ಹರಿದರೆ ಭವರೋಗಭೇಷಜರಿಲ್ಲದಂತಾಯಿತು 2ಕುನ್ನಿ ಸಂತೆಗೆ ಹೋದಂತೆ ಬಹುಜನ್ಮ ನೋವಾದವುಮಣ್ಣಿನೊಳು ಹಾಲ ಕೊಡ ಒಡೆದಂತೆನನ್ನ ಧರ್ಮಕರ್ಮವುನನ್ನೆಚ್ಚರ ನನಗಿಲ್ಲವುನಿನ್ನೆಚ್ಚರವೆಲ್ಲಿಯದು ಪ್ರಸನ್ನವೆಂಕಟ ನಿನ್ನ ಯಾತ್ರೆಗೆ ನೀನೆಬೆನ್ನಾದರೆನಗೆಲ್ಲ ಗೆಲುವು 3
--------------
ಪ್ರಸನ್ನವೆಂಕಟದಾಸರು
ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು