ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉ) ಯತಿವರರು ಜಿತಾಮಿತ್ರ ತೀರ್ಥರು 52 ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ಪ. ಬಂದ ದುರಿತಗಳ ಹಿಂದೆ ಕಳೆದು ಆ- ನಂದ ಪಡುವ ವಿಭುದೇಂದ್ರ ಕರೋಧ್ಭವನಅ.ಪ. ಸೂತ್ರ ಅಗಣಿತ ಮಹಿಮರ1 ವರಮಹಾತ್ಮೆ ತಿಳಿಸಿ ಮೊದಲಿಂದೀ ಪರಿಯಂದದಿಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿದರೆ ಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದ ತರವಲ್ಲಿರುವವರ2 ಮುದದಿ ಕೃಷ್ಣಾ ತಟಿಯ ಮಧ್ಯದಿ ಸದನದ ಪರಿಯಸದಮಲ ಯತಿವರ್ಯ ತಪಮೌನದಲಿಇದ್ದು ದ್ರುತ ಕರಿಯಕಾರ್ಯ ಒದಗಿ ನದಿಯು ಸೂ -ಸುತ ಬರಲೇಳು ದಿನಕುದಯಾದವರ ಸುಪದ ಕಮಲಂಗಳ3 ಮಾಸ ಮಾರ್ಗಶೀರ್ಷಾರಾಧನೆಗಶೇಷದಿನ ಅಮಾವಾಸ್ಯ ದಾಸರು ಪ್ರತಿವರುಷ ಮಾಳ್ಪರುಲೇಸೆನಲು ಶ್ರಿತಿಗೋಷ ಕಾಶಿಯ ಕ್ಷೇತ್ರ ಈ ಸ್ಥಳ ಮಿಗಿಲೈದಾಸರಿಗೆ ಭೂಸುರ ಪದಗಳ 4 ಮಧ್ವಶಾಸ್ತ್ರ ಗ್ರಂಥಸಾರದ ಪದ್ಧತಿ ತಿಳಿಸಿದಂಥರುದ್ರವಂದ್ಯ ಮೂರುತಿ ರಂಗವಿಠಲ ಪದ ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ5
--------------
ಶ್ರೀಪಾದರಾಜರು
ಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರಯಚ್ಚರಿಕೆ ಯಚ್ಚರಿಕೆ ಶ್ರೀ ಸೋದೆಪುರವಾಸಿ ಗುರುಪಾದ ಯಚ್ಚರಿಕೆ ಯಚ್ಚರಿಕೆ ಪ ಶ್ರೀ ತ್ರಿವಿಕ್ರಮ ಲೋಕನಾಥನ ತಂದೆ ಶ್ರೀಪಾದಯಚ್ಚರಿಕೆ ಯಚ್ಚರಿಕೆ ಅ.ಪ. ಗುರುಹಯವದನ ಮನಮುಟ್ಟಿ ಸ್ಮರಿಸಿ ಪೂಜಿಪಶ್ರೀ ಗುರುಪಾದ ಯಚ್ಚರಿಕೆ ಯಚ್ಚರಿಕೆ 1 ಶತಷಣ್ಣವತಿ ಸಪ್ತ ಬ್ರಹ್ಮ ಕಲ್ಪಗಳಲ್ಲಿ ಶ್ರೀಹರಿಯೆ ಮಹ ಮಾರೆತವ ಚರಿಸಿದ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 2 ತಪಚರಿನಿಯರ ಡೃವತ್ತೂ ಷಣ್ಣವತಿ ಲಿಷ್ಟನೇ ಕಲ್ಪದ-ಲಿಲಾತವ್ಯ ವಾಯುಸಾಧನ ಮಾಡುವಾನಂದ ಜ್ಞಾನ ಯೋಗ ಸಿದ್ಧಿಸಿ ಕೊಡುವ ಉದಾರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 3 ಪ್ರಧಾನ ವಾಯು ಪದ ಸ್ವೀಕರಿಪ ಹಂಸವಾಹನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ4 ಹಿಂದೆ ವಿರಜಸ್ನಾನದಿ ಅಜ್ಞಾನಾತ್ಮಕ ಲಿಂಗದೋಷನಿಶ್ಶೇಷ ಹೊಂದಿದ ಗುರುವಿರಾಜರ ವಾದದ್ವಯ ಯಚ್ಚರಿಕೆ ಯಚ್ಚರಿಕೆ 5 ನಿರ್ಜೀವ ನಿಷ್ಕ್ರಿಯಾ ದಗ್ಧಪಟದಪ್ಪಂತಿರುವ ದೇಹ ಲಿಂಗವ ನಿಮಿತ್ತ ಮಾತ್ರಕೆ ಹರಿಯಿಭಯಿಂ ಧರಿಸಿರುವ ಲಾತವ್ಯ ಗುರುಪಾದ ಯಚ್ಚರಿಕೆ ಯಚ್ಚರಿಕೆ6 ಮುಕ್ತ ಅಮುಕ್ತಿ ಭೇದ ತೋರ್ಪದಕೆ ಶಿರಿಯಿಂದನದಿ ಶಾಲ್ಮಲ ವಾಸಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 7 ದ್ವಸ್ತ ದುರಾಗಮಿ ಶ್ರೀರಾಜಗುರು ಪಾದಕೆಚ್ಚರಿಕೆ 8 ಅಜ್ಞಾನ ಅಹಂಕಾರ ಭಯ ಮೋಹ ವಿಸ್ಮøತಿ ದುಃಖಾದಿಬಂಧನ ಕಳೆವ ಪ್ರಭುವಾದಕೆಚ್ಚರಿಕೆ 9 ಪತಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 10 ತ್ರಿವಿಧ ಜೀವರ ಚತುರ್ವಿಧಶರೀರದಿಯಿದ್ದವರ ಸಾಧನವಾ ಮಾಡಿಸಿ ಜೀವರ ಸುಖದುಃಖಗಳಿಂತಾ ಬದ್ಧರಾಗದೆ ಪೂರ್ಣ ನಿರ್ಲಿಪ್ತರಾಗಿರುವಶ್ರೀಪಾದ ಯಚ್ಚರಿಕೆ ಯಚ್ಚರಿಕೆ11 ತ್ರಿವಾರ ವಿರಜ ಸ್ನಾನವ ಮಾಡ್ವ ಸೌಭಾಗ್ಯ ಪ್ರಾರಬ್ಧಪೊಂದಿರುವ ಗುರು ವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 12 ಸತ್ವ ಜೀವರ ಮೋಕ್ಷ ಪ್ರಾಪ್ತಿಗೆ ವಿರಜ ನದಿಯಲಿಸ್ನಾನ ಮಾಡಿಸಿ ಜೀವಸತ್ವರ ಮೋಕ್ಷಕ್ಕಿಡುವ ನಿವ್ರ್ಯಾಜ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 13 ಸುಜೀವರ ಅನಾದಿ ಲಿಂಗ ಅಜ್ಞಾನ ಸ್ವರೂಪ ದೇಹ-ಭಂಗಿಸುವ ಶ್ರೀರಮಾತ್ಮಕ ವಿರಜ ನದಿಯಲಿ ಸ್ನಾನ-ಮಾಡಿ ಸ್ವಲಿಂಗ ವಿಶಿಷ್ಟವಾದ ಅಜ್ಞಾನದಿಂ-ವಿರಹಿತರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 14 ಆನಂದವ ವೃಷಭಾವಿ ಆನಂದ ತೀರ್ಥ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 15 ತ್ರಿವಿಧ ಜೀವರಲಿಯಿದ್ದು ತ್ರಿವಿಧಸಾಧನ ಮಾಡಿಸುವ ಭಾವಿ ವಾಯುನಾಮಕ ನತ್ತಾ ಪ್ರದ ಲಾತವ್ಯವಾಯು ವಾದಿರಾಜ ಮಧ್ವ ಮುನಿ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 16 ಆಯಾಯರ ಜೀವರ ಚಲನವಲನಾದಿ ವ್ಯಾಪಾರ ಮಾಡಿಸುವ ಭಾವಿ ಪ್ರಾಣನಾಮಕ ಭೀಷ್ಟಾಪ್ರದ ವಾದಿರಾಜಗುರುಪಾದಯಚ್ಚರಿಕೆ ಯಚ್ಚರಿಕೆ 17 ಚತುರ್ವಿದ ಶರೀರಗಳಲಿದ್ದು ಸಂರಕ್ಷಿಸುವ ಭಾವಿ ಧರ್ಮನಾಯಕಧಾರಣಪ್ರದ ಶ್ರೀ ಗುರುರಾಜರಶ್ರೀಪಾದ ಯಚ್ಚರಿಕೆ ಯಚ್ಚರಿಕೆ 18 ಪ್ರಭುತ್ವವಾರ್ತೈಸಿಜೀರರ ಅವರವರ ಸ್ವರೂಪಯೋಗ್ಯಗತಿ ಕೊಡುವ ಭಕ್ತಿ ಮುಕ್ತಿ ಪ್ರದ ಭಾವಿ ಭಾರತೀ ರಮಣ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 19 ದೇವೋತ್ತಮ ಲಾತ ವಾಯುಸ್ವನಾಮಕೆ ಭಗವಂತಗೇ ನಿತ್ಯನ್ವ ಭಕ್ತರ ಪಾಪ ಮನ್ನಿಸುವಂತೆ ಪ್ರಾರ್ಥಿಸಿ ತಾವು ಮನ್ನಿಸಿ ಕ್ಷಮಿಸುವಲ್ಲಿ ಕ್ಷಮಾ ಸಮುದ್ರರಾದ ಶ್ರೀಗುರುಪಾದಯಚ್ಚರಿಕೆ ಯಚ್ಚರಿಕೆ 20 ಪುಣ್ಯ ಪ್ರದಾನ ಮಾಡುವಲ್ಲಿ ಜೀವರಿಗೆ ಪರಮ ದಯಾಳು ಆರ್ತರಿಗೆ ದಯತೋರುವ ಕೃಪಾನಿಧಿ ಸಜ್ಜನರ ದೋಷ ವಿಚಾರದಿ ಮಹಾ ಸಹಿಷ್ಣುಗಳಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 21 ಶಿಖಾಮಣಿ ಸಕಲ ತಾತ್ವಿಕ ದೇವತಾ ರಂಜಕ ಆಹ್ಲಾದಕರ ದಾನವ ಭಂಜಕ ಸಂಹಾರ ಕರ್ತರಾದ ಕಾರಣ ಭಾವಿ ಪ್ರಭಂಜನ ವರವಾಜ್ಯರಾದವರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 22 ಸರ್ವದಾ ಅನ್ಯ ಜೀವರು ಕಾಣದಾ ಅಸಾಧಾರಣ ಗುಣ ಕ್ರಿಯಾ ಸ್ವರೂಪರಾದ ವೇದ ಪ್ರತಿಪಾದ್ಯರಾದುದರಿಂದ ಮಹಂತರೆಂದು ಕರೆಸುವ ಭಾವಿ ವಾಯುವಿನ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ23 ಅವರವರ ಸಾಧನಗಳ ಪೂರೈಸಿ ಕೊನೆಗವರ ನಿಜಗತಿ ಪ್ರವರಾದ ಸರ್ವ ಜೀವರಂತರ್ಯಾಮಿ ಸಕಲ ಗುಣ ಸದ್ಧಾಮ ಭಾವಿ ಮರುತ ಗುರುವಾದಿರಾಜರ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 24 ಬರುವ ಜಗತ್ತಿನ ಸರ್ವ ಜೀವರಿಗೆಲ್ಲ ಜೀವನ ಪ್ರಾಣ- ವಾಗಿರುವ ಜೀವೋತ್ತಮ ಶ್ರೀ ಭಾವಿ ಬ್ರಹ್ಮ ಮರುತ ವಾದಿರಾಜರ ಶ್ರೀಪಾದದ್ವಯ ಯಚ್ಚರಿಕೆ ಯಚ್ಚರಿಕೆ 25 ಸಕಲ ಜೀವರ ಸಂಜೀವರಾದ ಯಲ್ಲ ಜೀವರ ಜೀವ ಯಲ್ಲಪ್ರಾಣಿಗಳ ಪ್ರಾಣರಾಗಿ ಪ್ರಾಣೆಂದು ಕರೆಸುವ ಭಾವಿ ಮುಖ್ಯ ಪ್ರಾಣ ವಾದಿರಾಜರ ಗುರುಪಾದಕೆಚ್ಚರಿಕೆ 26 ಸದಾಸರ್ವತ್ರ ಭಗವದ್ರಷ್ಟøಗಳಾದ ಬ್ರಹ್ಮದೇವರ ಭೃತ್ಯಣ ಜೀವ ಪರ್ಯಂತ ವ್ಯಾಪ್ತರಾದ ಆಯಾ ಸ್ಥಳದಿದ್ದು ಆಯಾ ಜೀವರ ತಕ್ಕ ವ್ಯಾಪಾರ ಮಾಡುವ ಭಾವಿ ಪೂರ್ಣಪ್ರಜ್ಞರೆನಿಸಿರುವ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 27 ಸಾಕ್ಷಾತ್ರ್ಪತಿಬಿಂಬರಾದ ಕಾರಣ ಭಾವಿ ಮುಖ್ಯ ಪ್ರತಿಬಿಂಬ-ರೆಂದೆನಿಸಿಕೊಂಡ ಗುರುವಾದಿರಾಜ ವಿಭುಪಾದಕೆಯಚ್ಚರಿಕೆ ಯಚ್ಚರಿಕೆ 28 ನಿತ್ಯ ಸಾಯುಜ್ಯ ಸಹ ಭೋಜನದ ಭೋಗ ಹೊಂದುವ ಭಾವಿ ಮರುತ ಶ್ರೀಲಾತವ್ಯ ವಾಯು ಗುರು ಮಧ್ವ ಮುನಿಯ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 29 ಸದನ ಪೂರ್ಣ ಚಂದ್ರವದನರು ಮೋಕ್ಷ ಸಾಮ್ರಾಜ್ಯ ನಿರ್ದುಷ್ಟ ಆನಂದ ಸುಖಸ್ವರೂಪರು ಪರಮ ಪುರುಷಾರ್ಥ ಪಾತ್ರಗಳು ಪುಣ್ಯ ಸ್ವರೂಪ ಪಂಚ ರೂಪಾತ್ಮಕ ಹರಿಯೆ ಪಂಚ ವೃಂದಾವನ ಸ್ವರೂಪದಿಯಿರುವ ರಂಜಪುಣ್ಯ ವೃಂದಾವನದಿ ವಿರಾಜಿಸಿ ಪಂಚ ಪುಣ್ಯ ಧಾರೆಯೆರೆವ ಪಂಚಪ್ರಾಣರಾದ ವಾದಿಗಳ ಪಲ್ಮುರಿವ ವಾದಿರಾಜಮಧ್ವ ಮುನಿಯ ಶ್ರೀ ಭಾವೀ ಭಾರತೀದೇವಿ ತನ್ನ ಮೃದು ಕೋಮಲ ತೊಡೆಯ ಮೇಲೆ ಪತಿಯ ಶ್ರೀಪಾದಪದ್ಮದ್ವಯವಿಟ್ಟು ವತ್ತೂವ ಅಜ್ಞಾನ ತಿಮಿರಕೆ ಮಾರ್ತಾಂಡ ವಾದ ಜ್ಞಾನಾನಂದ ದಾಯಕ ಶ್ರೀಗುರುಪಾದ ಯಚ್ಚರಿಕೆ ಯಚ್ಚರಿಕೆ30 ಜಗಜ್ಜೀವನಗಳಿಗೆ ಮುಖ್ಯ ಕಾರಣ ಪ್ರಾಣ ಆ ಪ್ರಾಣವಿಲ್ಲದಿರೆ ಸ್ವತಃ ಚಲಿಸಲು ಅಸಮರ್ಥ ಸರ್ವ ಜಗತ್ತಿಗೆ ಪ್ರಾಣ ವಿಜ್ಞಾನ ಪ್ರಾಣಾಗ್ನಿ ಶಬ್ದವಾಜ್ಯ ಈ ಭಾವಿಮುಖ್ಯ ಪ್ರಾಣ ಜಗಜ್ಜೀವನಗಳಿಗೆ ತಾನೇ ಮುಖ್ಯ ಪ್ರಾಣರೂಪ ಹೀಗೆಂದು ಬಳಿತ್ಥಾ ಸೂಕ್ತ ಅಗ್ನಿ ಸೂಕ್ತದಲಿ ಉಕ್ತ ಈ ಸೂಕ್ತಿಗಳಿಂದ ಪ್ರತಿಪಾದ್ಯರಾದ ಜಗನ್ನೇತ್ರಜಗಜ್ಜೀವನರಾದ ಪಂಚಪ್ರಾಣ-ರೂಪಾತ್ಮಕ ಶ್ವಾಸನಿಯಾಮಕ ಸೋದೆಪುರವಾಸಿ ಭೂತರಾಜರ ಹೃನ್ಮಂದಿರ ವೇದ್ಯ ವೇದ್ಯನುತ ಅಹಿಪ ಖಗಪ ಉಮೇಶಾದಿ ಸುರರಿಗೆ ಚಿಂತಿಸಲು ಅಳವಲ್ಲದ ಅಗಮ್ಯ ಮಹಿಮ ಶ್ರೀ ಪ್ರಭು-ವಾದಿರಾಜರ ನಿರ್ದೋಷ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 31 ಜಿತಣಮ ಸರ್ವಜ್ಞ ಅಶೇಕ್ಷ ಸಂಪದ್ವಿಶಿಷ್ಟ ಸದ್ಗುಣ ಭರಿತ ಪೂರ್ಣ ತೃಪ್ತ ನಿಶ್ಚಲ ಭಕ್ತ ದೃಢವ್ಯೆರಾಗ್ಯಶಾಲಿಚಿರಂಜೀವಿ ಶ್ರೀ ಗುರುವಾದಿರಾಜರ ಶ್ರೀಪಾದ ಪದ್ಮ ನಖರೇಣುಗಳಿಗೆ ಯಚ್ಚರಿಕೆ ಯಚ್ಚರಿಕೆ 32 ಪರಿ ಪರಿ ಕ್ರೀಡೆ-ರಮಿಸಿ ಆ ಆನಂದ ಶ್ರೀ ಹರಿಗೆ ಅರ್ಪಿಪ ಗುರುವಾದಿರಾಜಶ್ರೀಪಾದಂಗಳ ಶ್ರೀಪಾದ ಯಚ್ಚರಿಕೆ ಯಚ್ಚರಿಕೆ 33 ನಿತ್ಯ ನಿತ್ಯ ಶ್ರೀವರ ಮಾಲೇಶೆಗೆ ಅರ್ಪಿಪ ಭಾವಿಲಾಳೂರ ಶ್ರೀ ಗುರುರಾಜರ ಪಾದಕೆ ಯಚ್ಚರಿಕೆ ಯಚ್ಚರಿಕೆ34 ತನ್ನ ಶ್ರೀಪಾದ ರಜ ಧೆಣಿಯಲಿ ಧರಿಸಿ ಜೀವಿವರ ಹಯವದನ ಪಾದಕರ್ಪಿಸುವೆನೆಂದು ಪಣತೊಟ್ಟು ಜೀವನ್ಮುಕ್ತರನು ಮಾಡಿ ಪರಿಪಾಲಿಪೆನೆಂದು ಧೀರ ವೃಂದಾವನದಿ ಮೆರೆವ ಶ್ರೀಗುರು-ವಾದಿರಾಜರ ಶ್ರೀಪಾದಕೆ ಯಚ್ಚರಿಕೆ ಯಚ್ಚರಿಕೆ 35 ಶ್ರೀ ತ್ರಿವಿಕ್ರಮನ ರಥೋತ್ಸವಕೆ ಬಂದವರಲಿ ಒಂದೊಂದಂಶ ಸುರರ ಪ್ರವೇಶಿಸಿ ಅವರಲ್ಲಿ ತನ್ನೊಂದಂಶದಿಂದ ಸುರರ ಸಾಧನ ಮಾಡಿ ಸುರನರರ ಕೃತ ಕೃತ್ಯರೆನಿಸಿ ಶಿರಿ ಹಯ-ವದನನ ಕಾಣ್ವ ಜ್ಞಾನ ಭಕುತಿ ವೈರಾಗ್ಯ ನಿಷ್ಠಿಯನಿತ್ತು ಬ್ರಹ್ಮ ನಿಷ್ಯ್ಠೆ ಕರೆನು ಮಾಳ್ವ ಶ್ರೀ ಗುರು ಶ್ರೀಪಾದಕೆಯಚ್ಚರಿಕೆ ಯಚ್ಚರಿಕೆ 36 ಶ್ರೀ ಧವಳ ಗಂಗೆಯ ಸ್ನಾನ ಮಾಡುವ ಜ್ಞಾನವೀವ ಶ್ರೀ ಗುರು-ಪಾದಕೆ ಯಚ್ಚರಿಕೆ ಯಚ್ಚರಿಕೆ 37 ವಾಸುದೇವ ಪರಿ ಸ್ತೋತ್ರ ಮಾಡಿರೈ ಜ್ಞಾನಿ-ಗಳಾದವರೆಲ್ಲ ಶ್ರೀ ಗುರುಪಾದದೆಚ್ಚರಿಕೆಯಲಿ ತಂದೆವರದಗೋಪಾಲವಿಠಲ 38
--------------
ಗುರುತಂದೆವರದಗೋಪಾಲವಿಠಲರು
ವಂದನೆ ಮಾಡಿರೈ ವ್ಯಾಸ ಮುನೀಂದ್ರರ ಪಾಡಿರೈ ಪ ವಂದಿಸುವರ ಭವಬಂಧವ ಬಿಡಿಸಿ ಆ ನಂದವ ಕೊಡುವ ಕರ್ಮಂದಿವರೇಣ್ಯರ ಅ.ಪ ಸದ್ಗುಣ ಸಾಂದ್ರಾ ಚಂದ್ರಿಕಾದಿ ಪ್ರಬಂಧತ್ರಯ ನಿರ್ಮಿಸಿದಾ ಮತವರ್ಧಿಸಿದಾ ಸತಿ ಮೆಚ್ಚಿಸಿದಾ ಹಿಂದಕೆ ಹರಿಯನು ಸ್ತಂಭದಿ ತೋರಿದ ಕಂದ ಪ್ರಹ್ಲಾದರೆ ಬಂದಿಹರೆನ್ನುತ 1 ಕೃಷ್ಣರಾಯನಿಗೆ ದುಷ್ಟಯೋಗ ಪರಿಹರಿಸಿ ರಾಜ್ಯವಹಿಸಿ ಯ- ಥೇಷ್ಟ ದಾನಫಲಕೊಟ್ಟು ನೃಪನನುಗ್ರಹಿಸಿ ರಾಜ್ಯದೊಳಿರಿಸಿ ಶ್ರೇಷ್ಠವಾದ ಸಿಂಹಾಸನದಲಿ ಕುಳ್ಳಿರಿಸಿ ಆಜ್ಞೆಯ ತಿಳಿಸಿ ಎಷ್ಟು ಮಹಿಮರೆಂದರಿತು ಇವರ ಮನ ಮುಟ್ಟಿ ಭಜಿಪರಿಗ ಭೀಷ್ಟೆಯಗರಿವರ 2 ಸೂರ್ಯಯತಿ ಕುಲ- ವರ್ಯ ಗುರುಮಧ್ವಮ ತದಿಸದ್ವೈಷ್ಣವ ಕುಮುದಕೆ ಭಾರ್ಯಾ ಪಾವನ ಚರ್ಯ ಪರಮಮಹಿಮ ಬ್ರಹ್ಮಣ್ಯ- ತೀರ್ಥರಿಗೆ ತನಯಾ ಕವಿಜನಗೇಯಾ ಶರಣರ ಪೊರಿಯುವ ಶಿರಿಕಾರ್ಪರನರಹರಿಯ ನೊಲಿಸಿರುವ ಪರಮ ಮಹಾತ್ಮರ3
--------------
ಕಾರ್ಪರ ನರಹರಿದಾಸರು
ಶ್ರೀರಂಗನಾಥನ ಸೇವೆಯ ಮಾಡಿರೈ ಸದಾ ಪ ಅಡಿಗಳ ಭಜಿಪರ ಎಡರು ಕಳೆವುದಕೆ ವಡವಾಟಲಿ ತಾ ಬಿಡದೆ ನೆಲೆಸಿಹನ 1 ಶರಣುಪೊಕ್ಕವರ | ಕರುಣದಿಂದ ಲಘು | ಹರಣಗೈವ ರಥ | ಚರಣಧಾರಿ ಪದ 2 ಕಷ್ಟ ಕಳೆದು ಸುಖ | ಕೊಟ್ಟು ಪೊರೆವ ಹರಿ 3 ಪ್ರಥಮಮಾಸದಲಿ | ಶಿತ ಸುಪಕ್ಷದಲಿ ತಿಥಿ ದಶಮಿಯಲಿ | ರಥವೇರಿ ಬರುವಹರಿ 4 ನೇಮದಿ ತನ್ನಯ | ನಾಮಧ್ಯಾನಿಪರ ಕಾಮಿತಗರೆಯುವ | ಶಾಮಸುಂದರ 5
--------------
ಶಾಮಸುಂದರ ವಿಠಲ
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು