ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಛಿ ಛಿ ಮನುಜನೆ ನಿನ್ನನೆ ತಿಳಿಯೋಚಿಕ್ಕ ಬುದ್ಧಿಯ ನೀನೀಗ ಮಾಡಬೇಡ ಪ ಎಲ್ಲ ದಿನಗಳು ಆಗಲೋ ಈಗಲೋ ಒಳ್ಳಿತಾಗಿ ಬಿಡು ಸಂಸಾರವನುಸರ್ವರನು ನಿನಗೊಪ್ಪಿಸೆಯೋ ಸತಿಸುತ ರೆಂಬರುಏನಾದರೆಂದು ತಿರುಗಿ ಪರಾಮರಿಸಿ ಕೊಂಬೆಯಾ 1 ತುದಿಗಟ್ಟೆಯಲಿ ತಂಬಿಗೆ ಇಟ್ಟರೆ ತೆಗೆಯಿರಿ ಒಳಯಿಕೆ ನೀವೆಂಬಿತುದಿಗಟ್ಟೆಯಲಿಹ ತುಂಬಿಗೆಯಿಂದಲಿತಿರುಗಿ ಕುಡಿಯುವೆಯೋ ನೀನೀರ2 ಮನೆ ಮಾತಿಗೆ ನೀ ಬಡಿದು ಆಡಿದ ಮನೆ ತಕ್ಕೊಂಡೆಲ್ಲದರಮನೆಯಲಿ ಆರಿಗೆ ಹೇಳಿ ಹೋಗುವೆಯೋಮನೆ ಪರಾಮರಿಗೆ ತಿರುಗಿ ಕೊಂಬೆಯೋ 3 ದೇಹವ ಸಾರ್ಥಕ ಮಾಡಿರಿ ಎಂದು ದೈನ್ಯದಿ ಎಲ್ಲರಿಗೂ ಹೇಳುವೆದೇಹವ ಸಾರ್ಥಕ ಮಾಡಿದರಿಲ್ಲವೋದೇಹ ಪರಾಮರಿಕೆಯ ಕೊಂಬೆಯೋ 4 ನಿನ್ನ ದೇಹವೇ ನಿನಗೆ ಇಲ್ಲವೋ ನಿನಗೆಲ್ಲಿಯ ಸತಿಸುತ ಭ್ರಾಂತಿನಿನ್ನ ಚಿದಾನಂದ ಗುರುವೆಂದು ಕಂಡರೆನಿನಗೇನಿಲ್ಲವೋ ಗುರುವಾಗುವೆ ನೀ 5
--------------
ಚಿದಾನಂದ ಅವಧೂತರು
ಮಾಡಿದರಿಲ್ಲವೋ ಪ ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ ಘಾಸಿ ಮಾಡಿದರಿಲ್ಲ 1 ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ 2 ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ 3 ಪರ ಊರಿಗೆ ಹೋದರಿಲ್ಲ ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ 4 ವಾತಸುತನ ಕೋಣೆ ಲಕ್ಷ್ಮೀಶನು ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ 5
--------------
ಕವಿ ಪರಮದೇವದಾಸರು