ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರ ತರುವಿರೇನೆ ಕೃಷ್ಣನ ಮೇಲೆ ಪ ದೂರ ತರುವಿರೇನೆ ಚೋರಾಗ್ರೇಸರನೆಂದು ಕ್ಷೀರ ತಕ್ರಗಳನ್ನು ಸೂರೆ ಮಾಡಿದನೆಂದು ಅ.ಪ ನೊರೆಹಾಲ ಕುಡಿಬಾ ದೊರೆ ಬಾರೋ ಬಾ ಎಂದು ಕರದಿಂದಲೆತ್ತಿ ಮುತ್ತಿಟ್ಟೆಯಂತೆ ಬಿರುಗಾಳಿ ಬಂತೆಂದು ಬಿಗಿದಪ್ಪಿ ಕೊರಳಿಂಗೆ ಕೊರಳಿಟ್ಟು ಬರಿಗೈಯ ತೋರಿದೆಯಂತೆ 1 ಹಸಿದೆ ಬಾ ಕಂದ ಮೊಸರ ಕುಡಿಯೆಂದು ಹುಸಿನಗೆಯ ಬೀರಿ ಕೈಹಿಡಿದರವಳು ಉಸಿರಾಡದಂತೆ ಅಧರಕಧರವನ್ನಿಟ್ಟು ಹಸಿವಾರಿತಿನ್ನು ನೀ ಹೋಗೆಂದಳಂತೆ 2 ಮಲ್ಲಿಗೆ ಹಾಸಿನಲ್ಲಿ ಮಲಗು ಬಾರೆನ್ನುತ ಬೆಲ್ಲ ತುಪ್ಪವ ನೀ ತಿನ್ನಿಸಿದೆಯಂತೆ ಹಲ್ಲ ತೋರಿಸು ಹೊಂಬೆಳಕ ನೋಡುವೆನೆಂದು ಮೆಲ್ಲನೆ ಬಾಗಿ ಬಾಗಿ ಗಲ್ಲವ ಕಚ್ಚಿದೆಯಂತೆ 3 ಬೆಣ್ಣೆಗಳ್ಳನು ಎಂದು ಹಿಂದೋಡಿ ಓಡಿ ಬಂದು ಸಣ್ಣ ತೋಳನು ಹಿಡಿದು ಎಳೆದಾಡಲವಳು ಕಣ್ಣಿನಲಿ ಕಣ್ಣಿಟ್ಟು ದೃಷ್ಟಿ ದೋಷವ ಬೀರೆ ಚಿಣ್ಣ ಮಾಂಗಿರಿರಂಗ ಕಣ್ಣಬಿಡಲೊಲ್ಲ ನೋಡೆ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1 ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2 ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
--------------
ಕನಕದಾಸ