ಒಟ್ಟು 8 ಕಡೆಗಳಲ್ಲಿ , 1 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿ ಬೆಳಗುವೆ ನಾ ಸದ್ಗುರುವಿಗೆ ಪ ಭಾವದ ಪೊಂಬ್ಹರಿವಾಣ ಭಕುತಿಯಾ ತೀವಿದ್ಯಾರತಿಜ್ಞಾನ ಜ್ಯೋತಿಯಲಿತ್ತಿ1 ಮುಖದಲಿ ನುಡಿಯುತ ನಾಮಾವಳಿಯೂ ಸಕಲರು ಪ್ರೇಮದಿ ಹಾಕಿ ಚಪ್ಪಾಳಿಯಾ2 ನಯನದಿನೋಡಿ ಶರಣವ ಮಾಡೀ ಭಯವನೀಡಾಡಿ ಸ್ತುತಿಗಳ ಪಾಡಿ3 ಇಂದಿನ ದಿನದಾನಂದವು ನಮಗ ಹಿಂದಿನ ಪುಣ್ಣ್ಯಿದಿರಿಟ್ಟಿತು ಈಗ 4 ಒಡಲ್ಹೊಕ್ಕು ಮಹಿಪತಿನಂದನೊಡಿಯನಾ ಪಡೆಯ ಬನ್ನಿರೀಬ್ಯಾಗ ಮುಕುತಿಯ ಸಾಧನಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚದುರಂಗನಾಡುವ ನೋಡಿರೇ | ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ ಭೂಮಿಯ ಹಲಗಿಲಿ ಕಾಯದ ಮನೆಯೊಳು | ವ್ಯಾಮೊಹಿ ಜೀವನು ಅರಸನಿಲ್ಲಿ | ನೇಮದಿ ಪುಣ್ಯ ಪಾಪದ ಪಲಗಳಿಸುವ | ಈ ಮನೆವೆಂಬ ಪ್ರಧಾನಿಯನಿಟ್ಟು 1 ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ | ನಾನು ನನ್ನದು ಎಂಬ ಒಂಟೆಗಳ | ಜಾಣತನದ ಬುದ್ದಿ ಚಿತ್ತದ ಕುದುರೆ | ನಿ ಧಾನ ದಶೇಂದ್ರಿಯ ಕಾಲಾಳಿನಿಂದ 2 ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ | ಮೂಲದಿ ಹಾನಿವೃದ್ದಿಗಳಿಹವೋ | ಮೇಲೆ ಯಶಾಪಯಶ ಪಾಲಿಗೆ ತರುವ | ನೃ ಪಾಲಕ ಮಹಿಪತಿನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪತಿ ಪಿತ | ಅರವಿನುತಗೆ (ಮಾರುತನುತಗೆ) 1 ಕಾಲಜನನುಜಗ ಕಾಕಾದಲಯ ಕಾಲದುರಿತರಿದ ಕಾಲಕಾಲಗ 2 ಕಾಲಿಂದಿ ನದಿ ಯೊಳು ಕಾಳಿಯಸಿರದಲಿ ಕಾಲಲಿ ಕುಣಿದ ಲೋಕಾವಳಿ ವ್ಯಾಪಕಗ 3 ಕಾಳರೂಪದಿ ಗಜಕಾಲ್ವಿಡಿದ ಮಕರಿ ಕಾಲ ಜಲದ ಭಗ 4 ಪತಿ ಜನಗ ತಂದೆ ಮಹಿಪತಿನಂದನ ಪಾಲ ಮುಕುಂದ ಶ್ರೀಹರಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂದ ಹಾಸನಾ | ತಂದು ತೋರೇ ಮಂದಹಾಸನಾ ನಂದ ಕಂದ ಶ್ರೀ ಮುಕುಂದ | ವಂದಿತಾ ಮುರೆಂದ್ರ ವೃಂದಾನ ಕಾಮಿನಿ ಪ ಹರನ ಹೊದಿಯ ಅರಿಯ ಶಾಪದಿ | ಹರಿಯರಾದ ರೊಡೆಯನಿಂದ ಭರದಿಯಜ್ಞ ಕಾಯ್ಸಿ ಕೊಂಡನಾ ||ಕೋಪಕ || ವರವನಿತ್ತು ಗುರು ಮೊಮ್ಮನು | ದರಲಿ ಬಂದ ಮಾತೆ ಮಗನಿ ಶರದ ಭರಕ ಪಣಿ ಲಿ ತಾಳ್ದನಾ 1 ಸರಳ ಮಂಚದವನ ತಲಿಗೆ | ಸರಳದಿಂಬು ಕೊಟ್ಟನವನ| ಸರಳದಿಂದ ಪ್ರಾಣ ತೊರೆದನಾ || ಪ್ರೀತಿಯಾ || ಸರಳಕಾತು ಆಳಿದ ನೈಯ್ಯನ | ಸರಳಗದೆಯ ಕೈಯ್ಯಲಿಂದ | ಸರಳ ತೃಯನ ಕೊಲಿಸಿ ದಾತನಾ2 ವಾಹನ | ಸಖನ ಉರಬಕಾಗಿ ನಿಲದೇ | ಅಖಿಲ ದೊಳಗನು ಸಳಿತೀಹನಾ ||ರಾಶಿಯಾ || ಸುಖವ ನಲಿದ ನರಿಯ ಸುತರ | ಕ್ಷೇತ್ರ ಮಹಿಪತಿನಂದನ | ಮುಖದಿ ತನ್ನ ಚರಿತ ನುಡಿಪನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ | ಸಿರಿಯರಸನಸಿರಿ ಚರಣವ ಸ್ಮರಿಸದೇ | ನರದೇಹ ಬರಡವ ಮಾಡುವರೆ ಜಾಣಾ ಪ ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು | ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ | ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ | ತೊಳಲುತ ನಿಶಿದಿನ ಬಳಲುವೆ ಜಾಣಾ 1 ಅವಗತಿಯೋ ಎನಗೆ ಮುಂದಾ | ಆವ ಜನಮ ವಿಹುದೋ | ವಿವೇಕದಿಂದ ವಿಚಾರಿಸಿ ಮನದೊಳು | ಭಾವಿಸಿ ಗುರುವಿನ ಪಾವನ ಪಾದಾ | ಭಾವಭಕುತಿಯಲಿ ಸಾವಧನನಾಗದೆ | ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ 2 ಬದಿಯಲ್ಲಿದ್ದಾ ವಸ್ತುವನು | ಸದಗಾನಾದ್ಯೋ ಕಾಣದೆ | ಸಾಧುರ ಕೈಯಲಿ ಹಾದಿಯ ಕೇಳೆಲೋ | ಸಾದರದಲಿ ನಿಜ ಸಾಧನ ಬಲಿದು | ಭೇದಿಸು ಮಹಿಪತಿನಂದನ ಸಾರಿದಾ | ಗಾದಿಯನ್ನದೆ ಗತಿ ಸಾಧಿಸೋ ಜಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತಚರಿಯ ಗೂಢಾ | ತಿಳಿಯದು | ಭ್ರಾಂತರಿಗಿದು ನೋಡಾ ಪ ವೇಷವ ಸಂತರು ದೋರುವದಿಲ್ಲಾ | ಆಶಾಪಾಶಕ ಶಿಲಕುವರಲ್ಲಾ 1 ಹೊರಗಾಚರಿಯು ಲೋಕದ ಸರಿಯಾ | ಇರುತಿಹ ಏನೇನರಿಯದ ಪರಿಯಾ 2 ವಿಷಯ ರೂಪವ ಬ್ರಹ್ಮ ಭಾವನೆ ಬಗೆವಾ | ಪರಿ ಕೇಡಿಹ ಜಗವಾ 3 ತೋರನು ವಾಗ್ವಿಸ್ತಾರ ಬಹಳಾ | ಮೀರಿನೆರಿಹಿಕೊಳ್ಳ ಡಿಂಗರ ಮೇಳಾ 4 ದಾವ ಮಾನವರೆಂದು ಸಂತರ ತಿಳಿವಾ | ರವರವ ನರಕದ ಕುಂಡದಲಿಳಿವಾ 5 ಕೋಟ್ಯಾನುಕೋಟಿಗೊಬ್ಬಿಹನು ಸಾಧು | ಸಾಟಿಲ್ಲವರಿಗೆ ಧರಿಯೊಳಗಿಂದು 6 ಮಹಿಪತಿನಂದನ ಪ್ರಭುವಿನ ದಯವಿನಾ | ಮಹಿಮೆಯ ತಿಳಿಯದು ಹೇಳಲಿನ್ನೇನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಯಸವೇ ವ್ಯರ್ಥಾ | ಆಯೋಗ್ಯಜನ ತಿದ್ದುವ ಕುರ್ತಾ ಪ ಏನು ಹೇಳಿದರೇನು | ಮನಸಿಗೇ ತುಸು ಬಂತ | ಅನುದಿನ ಹಾಲವನು ಬೇವಿನ ಮರಗಳಿಗೆರೆದಂತೆ 1 ಕರಿ ಕಲ್ಲಿನ ಮ್ಯಾಲ ಮೇಘದ ಘನಮಳೆ ಕರೆದರೆ | ತೊರೆದು ಕಠಿಣತನವಾ ನೆನೆಯುವೆ ಎಂದಿಗೆ ಏನಾರೆ 2 ಕತ್ತೆಯ ಮರಿ ತೊಳೆದು ಪರಿಪರಿಶೃಂಗರಿಸಿದರಿಂದೆ | ಉತ್ತಮ ಕುದುರೆಯ ದಶಾಂಶಕ ಬಾಹುದೇ 3 ಲಳಗಿಯೊಳಗ ಹಿಡಿದು ನಾಯಿ ಬಾಲವ ಹಾಕಿದ ಗುರುತ | ಸುಲಲಿತ ವಹುದೆಂದು ತೆಗೆದು ನೋಡಲು ಮೊದಲಂತೆ 4 ಅರವ್ಹಲ್ಲಾ ಮರವ್ಹಲ್ಲಾ ಅರಹು ಮರಹಲಿರುತಿಹುದಲ್ಲಾ | ಹರಿಯೇ ರಕ್ಷಿಸಬೇಕು ನಿಜ ಮಹಿಪತಿನಂದನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡಿ ಸಂತರ ಕೂಡೀ ಪ ಹಿತ ನೋಡಿ ಸಂತರ ಕೂಡೀ | ಮತಿ ನಿಜ ಮಾಡಿ | ಶ್ರೀ ಪತಿಯ ಕೊಂಡಾಡಿ 1 ದುರಿತ ವಿಭಂಗಾ | ನೆರೆ ಕರುಣಾಂಗದಿ | ಹೊರೆವನು ರಂಗಾ 2 ಪರಿ | ರಂಜಿಸುತಿಹ ತೇಜಃ | ಪುಂಜನ ನೋಡಿ 3 ಕಂಡಪದಕ ಹರಿದಂಡಲಿಯದೆ ನೆಲೆ | ಗೊಂಡ ವಿವೇಕದ | ಪಂಡಿತರಾಗಿ 4 ತಂದೆ ಮಹಿಪತಿನಂದನು ಸಾರಿದಾ | ಬಂದ ಜನುಮಕಿದು | ಛಂದದು ನೋಡಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು