ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವದನದಲಿ ಮನವೇ ನೆನಿನಾಮ ಶ್ರಿಹರಿಯಾ | ಸದಮಲದಲಿ ಮರೆಯದೆ ಬಾವದಲಿ ಪ ದಾವನು ದಾಸರ ದಾಸರ ಪದರಾ | ಜೀವ ಯುಗಳ ದರುಶನದಲಿ | ತೀವಿಕೊಂಡಿಹ ಬಹುಜನ್ಮದು ಷ್ಕøತ | ಲಾವಡಗುತಿಹವು ನಿಮಿಷದಲಿ 1 ನಾಮದ ಮಹಿಮೆಯ ತಿಳಿಯಲು ಅರಸಲು | ಅಮಹಾನಿಗಮಾಗಮದಲಿ | ವ್ಯೋಮ ಕೇಶನಾರದಾಹನುಮರೆ ಬಲ್ಲ | ನಾಮದ ಸುಖವೆಂತೋ ಭುವನದಲಿ2 ಸರ್ವಧರ್ಮಾನ್ ಪರಿತ್ಯಜ್ಯಂಬ ವಾಕ್ಯವಾ | ಅರ್ವವ ಹಿಡದು ತ್ರಿಕರ್ಣದಲಿ | ಸರ್ವಭಾವದಿ ಗುರು ಮಹಿಪತಿ ಸ್ವಾಮಿಯ | ಮೆರ್ಪಪಾದುಕ ವಿಟ್ಟು ಹೃದಯದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶುಭ ಮಂಗಳಂ ಭಯ ನಿವಾರಣಮಾಳ್ಪ ಶ್ರೀದೇವಗ ಪ ಭವದ ಭಯ ಭಂಗಂಗೆ ಸರ್ವಾತರಂಗಗೆ ರವಿಕೋಟಿ ಭಾಗಂಗೆ ಸುರತುಂಗಗೆ ತವಕದಿ ಅನಂಗಗ ಪಡೆದಯಮಂಗಗ ಅವನಿರಿಸಿಸಂಗಗ ಶ್ರೀರಂಗಗ 1 ಮಾಯಾ ಅತೀತಗ ಅನಾಥನಾಥಗ ದಯಭರಿತಗ ಅನುಪಮಚರಿತಗ ಅಜನದ್ವೈತಗ ರಣತನಿರ್ಭರಿತಗ ಅವಧೂತಗ 2 ವಿಹಗ ಧ್ವಜ ಛಂದಗ ದೇವಕಿಯ ಕಂದಗ ಮಹಾನಿಗಮ ತಂದಗ ಮುಕುಂದಗ ಮಹಿಪತಿ ನಂದನು ಪಾಲಿಪಾನಂದಗ ಇಹಪರಾವಂದ್ಯಗ ಗೋವಿಂದಗ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು