ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನ ಮೋಹನ ಭಾಮೆ ರುಕ್ಮಿಣಿ ಸತ್ಯಭಾಮೆಯರಸ ಬೇಗ ಪ ಯಮುನಾ ತೀರದಿ ಮುರಳಿಯ ನುಡಿಸಲು ಪ್ರಮದೇರು ಗೋವ್ಗಳು ಮರುಳಾಗಿರಲು ಮಮತೇಲಿ ಸಲಹಿದ ಚಲುವ ಕೃಷ್ಣನೆ ಬೇಗ 1 ಗೋಪಿಯ ಕಂದ ಶ್ರೀ ಗೋಪಾಲನೆ ಗೋವರ್ಧನೋದ್ಧಾರಿ ಶ್ರೀ ಕೃಷ್ಣನೆ ಗೋಪಿಕಾಲೋಲ ಶ್ರೀ ಗೋಪಾಲ ಕೃಷ್ಣ ಬೇಗ 2 ಕಮಲ ಸಂಭವನಯ್ಯ ಕಮಲಾಪತೆ ಕಮಲಜಾತೆಯ ಪ್ರಿಯ ಪೊರೆ ಶ್ರೀಪತೆ ಕಮಲ ಪತ್ರಾಕ್ಷ ಶ್ರೀ ಕಮಲನಾಭ ವಿಠ್ಠಲ 3
--------------
ನಿಡಗುರುಕಿ ಜೀವೂಬಾಯಿ