ಒಟ್ಟು 7 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು
ಮರೀಬೇಡೋ ಮರೀಬೇಡೋ ಪಾದ ಮರೀಬೇಡೋ ಮರೀಬೇಡೋ ಪ ಮರೀಬೇಡೆಲೆ ಮನ ಜರಾಮರಣೆಂದೆಂಬ ತಿರುಗದ ಗಣೆ ಮಡುವಿನೋಳ್ಜಾರಿಬಿದ್ದುಅ.ಪ ಒಂದೆ ನಿಮಿಷ ಇಹ್ಯ ಚಂದಕಂಡು ಬಲು ಅಂದಗೆಡುವ ಸುಖ ಮಂದನಾಗಿ ಮೆಚ್ಚಿ 1 ನಿಜವನು ತಿಳಿಸದೆ ಮಜತೋರಿಸಿ ಬಲು ಗಿಜಿಗಿಜಿಮಾಡುವ ಕುಜಮತಿಯೊಳು ಬಿದ್ದು 2 ಅಸಮಸಂಪದಕೆ ಮಸಿಹಚ್ಚಿ ಒಂದುದಿನ ನಶಿಸಿಪೋಗುವ ಮಾಯ ಮುಸುಕಿನೊಳಗೆ ಸಿಕ್ಕು 3 ಸವಿಯದಾನಂದವನು ಭವಕೆ ಕಿಡಿಯನಿಟ್ಟು ಜವನಿಗೀಡೆನಿಸುವ ಭೂಸುಖಕ್ಕೊಳಪಟ್ಟು 4 ಪೊಡವಿಯೊಳಗೆ ತನ್ನ ದೃಢದಿ ಸ್ಮರಿಪರ ಬೇಡಿದ ಮನದಿಷ್ಟ ಕೊಡುವ ಶ್ರೀರಾಮನ 5
--------------
ರಾಮದಾಸರು
ಮೊರೆ ಕೇಳು ಭಕುತಬಂಧು ಮರೀಬೇಡ ಕರುಣಾಸಿಂಧು ಪ ಮರೆಯಬಿದ್ದು ಸೆರಗನೊಡ್ಡಿ ನಿರುತ ನಿಮ್ಮ ಚರಣ ಭಜಿಪೆ ಶರಣಾಗತರ ವರಪ್ರದಾತ ನಿರುತ ಪರಿಪಾಲಿಸಭವ 1 ಶುದ್ಧ ನಿಮ್ಮ ಭಕ್ತನೆನಿಸೊ ಬದ್ಧನೆನಿಸಿಬೇಡ ದೇವ ಬಿದ್ದು ಬೇಡ್ವೆ ನಿಮ್ಮ ಪದಕೆ ತಿದ್ದಿಕಾಯೋ ಎನ್ನ ತಪ್ಪ 2 ತರಳನ್ಹೊರೆದಿ ಭರದಿ ಬಂದು ನರನ ಕಾಯ್ದಿ ಧುರದಿ ನಿಂದು ಪರಮಸಿದ್ಧಿ ನೀಡು ಈಗ ಚರಣದಾಸಗೆ ವರ ಶ್ರೀರಾಮ 3
--------------
ರಾಮದಾಸರು