ಒಟ್ಟು 16 ಕಡೆಗಳಲ್ಲಿ , 11 ದಾಸರು , 15 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರಿನ ಗಣೇಶನನ್ನು ನೆನೆದು) ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ. ಬಾಗುವೆ ಶಿರ ಶರಣೌಘಶರಣ್ಯ ಸು- ರೌಘಸನ್ನುತ ಮಹಾಗುಮ ಸಾಗರ ಅ.ಪ. ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭ ಕಟಿ ವಿಗತಲೋಭ ಹೃದ್ಯಜನದುರಿತಭಿದ್ಯ ವಿನಾಯಕ ವಿದ್ಯಾದಿ ಸಕಲ ಬುದ್ಧಿಪ್ರದಾಯಕ 1 ಏಕದಂತ ಚಾಮೀಕರ ಖಚಿತ ವಿಭೂಷ ಗಣೇಶ ಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸ ಶೋಕರಹಿತ ನಿವ್ರ್ಯಾಕುಲ ಮಾನಸ ಲೇಖಕಾಗ್ರಣಿ ಪರಾಕೆನ್ನ ಬಿನ್ನಪ 2 ವರಮಂಗಲಪುರ ಶರಭಗಣೇಶ್ವರ ಧೀರ ಉದಾರ ಸುರುಚಿರ ಶುಕ್ಲಾಂಬರಧರ ವಿಘ್ನವಿದಾರ ಹರಿ ಲಕ್ಷ್ಮೀನಾರಾಯಣಶರಣರ ಗುರು ಗುಹಾಗ್ರಜ ಮನೋಹರ ಸುಚರಿತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಆತ್ಮನಿವೇದನೆ ಅಂಬುಜೇಕ್ಷÀಣ ನಂಬಿದೇ ನಿನ್ನ ಪ. ಅಂಬುಜೇಕ್ಷಣ ನಿನ್ನ ನಂಬಿದ ಭಕ್ತರಘ ದ್ಹಂಬನು ಕಡಿದು ನಿನ್ನಿಂಬನು ತೋರುವೆ ಅ.ಪ. ಅನುಪಮ ಚರಿತ ಅಪ್ರಮೇಯನೆ ಕೃಷ್ಣ ತನುಮನಧನಗಳಾ ನಿನಗರ್ಪಿಸುವೆ ಎನ್ನ ಚಿನುಮಯ ರೂಪನೆ ಮನುಮಥ ಪಿತನೆ ನಿನ್ನ ಸರಿಯಾರೋ ಹನುಮದೀಶ ಕೃಷ್ಣ 1 ಉತ್ತಮರುಗಳನು ನಿತ್ಯದಿ ಸೇವಿಪ ಚಿತ್ತವೆನಗೆ ಕೊಡೋ ಉತ್ತಮೋತ್ತಮನೆ ತೆತ್ತೀಸ ಕೋಟಿ ದೇವರ್ಕಳು ನಿನ್ನನು ಸುತ್ತಿ ಸ್ತುತಿಪರೋ ನರ್ತನ ಗೈಯ್ಯುತ 2 ಪದುಮ ಸಂಭವ ಪಿತ ಪದುಮಿಣಿಯರಸನೆ ಒದಗುತ ಭಕ್ತರಾಪ್ತನು ನೀನಲ್ಲೆ ಸದನದಿ ಕಾಯುತ ಮುದವನು ಬೀರುತ ನೀ ಚದುರ ಶ್ರೀ ಶ್ರೀನಿವಾಸ ಕದನವಿನ್ಯಾತಕೋ ರಾಮ 3
--------------
ಸರಸ್ವತಿ ಬಾಯಿ
ಕಂಡುದನು ಪೇಳ್ವೆ ಬ್ರಹ್ಮಾಂಡ ನಾಯಕನೆ | ಕೊಂಡೆಯವಿದಲ್ಲ ಗ್ರಹಕುಂಡಲವ ಶೋಧಿಸುತ ಪ ಮಕರ ಸತಿ ಲಗ್ನದಲ್ಲಿರ್ಪ ಜಲ ತಾರಕೇಂದು ದಶೆ ಯಲಿ ನಿನಗೆ ಜಲದೊಳಾವಾಸವಾಯಿತು ಹರಿಯೆ 1 ಮನುಮಥನ ತಾತ ಕೇಳಿನಸುತನು ನಾಲ್ಕನೆಯ ಮನೆಯೊಳಿರುವನು ಲಗ್ನಕಧಿಪನೆನಿಸಿ ಮನದಿ ಯೋಚಿಸಲಿಕಾ ಶನಿದಶೆಯೊಳಾ ಕುಧರ ವನು ಪೊತ್ತು ದಣಿದೆನೀವ ನಿಧಿಯೊಳು ಹರಿಯೆ2 ಮಂಗಳನೆ ಸುಖಕಧಿಪ ಮಂಗಳನು ಸಿಂಗರದಿ ಸಿಂಗರಾಶಿಯೊಳು ತಾ ಕಂಗೊಳಿಸುತ ತುಂಗವಿಕ್ರಮನವನೆ ಸಂಘಟಿಸಿದನು ವನದಿ ಹಿಂಗದೆ ಬೇರು ಮೆಲುವಂಗವನು ಹರಿಯೆ 3 ವಾರಿಜಾಸನ ಪಿತನೆ ಕ್ರೂರಕ್ಷೇತ್ರದಿ ರಾಹು ಸಾರಿರ್ಪ ರಾಶಿ ವೃಶ್ಚಿಕವೆನಿಸಲು | ಕಾರುಣಿಕನವನ ದಶೆಯಾರಂಭದಲಿ ನಿನಗೆ ಘೋರ ರೂಪವ ತಾಳಲಾಯ್ತು ನರಹರಿಯೆ 4 ಮಂದರೋದ್ಧರ ಕೇಳು ಚಂದಿರನ ರಾಶಿಗಾ ನಂದದಧಿಪತಿ ಸೂರ್ಯನಂದನನು ತಾ ನಿಂದು ಮೇಷದೊಳತ್ರಿಕಂದನ ನಿರೀಕ್ಷಿಸಲು ಬಂದುದೈ ಭಿಕ್ಷೆಯದರಿಂದ ನಿನಗೆಲೆ ಹರಿಯೆ 5 ಅಂಬುಜಾನನ ಕೇಳು ಒಂಭತ್ತರಧಿಪ ಶಶಿ- ಸಂಭವನು ಪಾಪದಿಂ ತುಂಬಿರ್ಪನು | ಸಂಭವಿಸಲವನ ದಶೆಯಿಂದ ನೀ ಕ್ಷತ್ರಿಯ ಕ-ದಂಬ ಮರ್ದಿಸಿ ಧರ್ಮಮಂ ಬಿಟ್ಟೆ ಹರಿಯೆ 6 ದುರಿತ ಸ್ಥಾನಾಧಿಪತಿ ಗುರುವೇಳನೆಯ ಮನೆಯೊಳಿರುವನದರಿಂ | ಹಿರಿಯರುಪದೇಶದಿಂದಿರದೆ ಭಾರ್ಯೆಯನಗಲಿ ಚರಿಸಿದೆಯರಣ್ಯದೊಳಗಿರುತ ನೀ ಹರಿಯೆ 7 ಘೋರಪಾಪವಿನಾಶ ನಾರಿರಾಶಿಯ ನವಮ-ಕಾ ರವಿಯು ಸಾರಿ ನಿಂದಿರ್ಪನದರಿಂ | ಚೋರವ್ಯಾಪಾರ ಪರನಾರಿಯರ ಕೂಡೆ ವ್ಯಭಿ-ಚಾರ ನಿನಗಾಯಿತು ರಮಾರಮಣ ಹರಿಯೇ 8 ಕೈವಲ್ಯ ತಾರಕನಾಥನು | ಪೂತ ಬುದ್ಧಿಸ್ಥಾನ ವಾದನದರಿಂಲಿಂ ಭೂತಲದಿ ಸ್ಥಾಪಿಸಿದೆ ನೂತನ ಮತವ ಹರಿಯೇ 9 ಪಾರವರ್ಜಿತ ಕವಿಯು ಸಾರಿರ್ದ ದಶಮದೊಳ್-ಗಾರವ ನೆನೆಯುಂಟು ಧೀರನೆನಿಸಿ | ಭೂರಿಮ್ಲೇಂಛರನು ಸಂಹಾರ ಗೈಯುತ ತೇಜಿಯೇರಿ ಮೆರೆಯುತ್ತಿರುವ ನಾರಾಯಣ ಹರಿಯೆ 10
--------------
ಅನ್ಯದಾಸರು
ಡಂಬವಿಲ್ಲದೆ ಹರಿಯ ಭಜಿಸಿ ನಂಬಿ ಮನದಲಿ ಪ ಹಂಬಲಿಸದೆ ದುರ್ವಿಷಯವ ಹರುಷ ಪಡುತಲಿ ಅ.ಪ ಸಮಚಿತ್ತದಿ ವರ್ತಿಸಿ ಸಜ್ಜನರ ಕೂಡುತ 1 ಮನುಮಥನಾಟಕೆ ಸಿಲುಕದೆ ಮಮತೆಯ ಬಿಡುತ 2 ಕಾಮ ಮಖ್ಯರಿಪುಗಳನ್ನು ಕಡೆಗೆ ನೂಕಲು ಸ್ವಾಮಿ ಶ್ರೀ ಗುರುರಾಮವಿಠಲ ತೋರ್ಪನವರೊಳು 3
--------------
ಗುರುರಾಮವಿಠಲ
ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ ಈರೇಳು ಭುವನಗಳ ತಿಂದು ತೇಗುವ ದೇವ ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ 1 ಎಂದು ಕಾಣೆವು ಇಂಥಾ ಸುಂದರನ ನಾವೆಂದು ಮಂದಗಮನೆಯರ ನುಡಿ ಅಂದವಾಯಿತೆ ಕಂದ ಸಂದೇಹವಿಲ್ಲವರ ಶೃಂಗಾರಕೀ ಫಲವು ಜಲಧಿ ಮನುಮಥನ ಮನುಮಥನೆ ಗತಿ 2 ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು ನಾರಸಿಂಹಾದಿ ವರಮಂತ್ರಗಳ ಜಪವಾಯ್ತು ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ3
--------------
ವಿದ್ಯಾಪ್ರಸನ್ನತೀರ್ಥರು
ನಿಲ್ಲು ಬಾರೊ ದಯಾನಿಧೆ ಪ ನಿಲ್ಲು ಬಾರೋ ಸರಿಯಲ್ಲ ನಿನಗೆ ಲಕ್ಷ್ಮೀ ವಲ್ಲಭ ಮನ್ಮನದಲಿ ಬಿಡದೆ ಬಂದು ಅ ಅತಿ ಮೃದುವಾದ ಹೃತ್ಯತ ಪತ್ರಸದನದಿ ಶಾ ಶ್ವತವಾಗಿ ಭವ್ಯ ಮೂರುತಿ ಭಕ್ತವತ್ಸಲ 1 ತನುಮನಧನದ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ 2 ಆಶೆಪುಟ್ಟಿತು ನಿನ್ನಲ್ಲೀ ಸಮಯದಲಿ ಪಾ ರಾಶರವರದ ಪೂರೈಸು ಬಯಕೆಯ 3 ನಾನಾವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ4 ಯಾತರ್ಯೋಚನೆ ಮನಸೋತ ಬಳಿಕ ಪುರು ಹೂತವಂದಿತ ಜಗನ್ನಾಧವಿಠ್ಠಲರೇಯ 5
--------------
ಜಗನ್ನಾಥದಾಸರು
ಪದ್ಮನಾಭ ಪದ್ಮನಾಭ ಉಡುಪಿನ ಶ್ರೀಕೃಷ್ಣಜಯ ದುರ್ಜನರಿಗೆ ಅತಿದೂರ ಸುವ್ವಿಸುವ್ವಿ ಸುವ್ವಾಲೆ ಪ. ಸುರರ ಶಿರೋರನ್ನ ಗರುಡವಾಹನನೆ ಕರುಣಸಂಪನ್ನ ಉಡುಪಿನಕರುಣಸಂಪನ್ನ ಉಡುಪಿನ ಶ್ರೀಕೃಷ್ಣಶರಣಾಗು ಧನ್ಯ ಜನರಿಗೆ1 ಮುಖ್ಯಪ್ರಾಣ ಭಾರತೀರಮಣಗೆ ಎರಗುವೆ 2 ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದಶ್ರೀಮಂತ ನಮ್ಮ ಹನುಮಂತಶ್ರೀಮಂತ ನಮ್ಮ ಹನುಮಂತನೆಂದವಗೆಕಾಮಿತಾರ್ಥಗಳ ಕೊಡುವನೆ 3 ಭಾರತ ಯುದ್ಧದಲಿ ಬಾಹುಬಲ ತೋರಿದಧಾರಿಣೀಶ್ವರ ತಿಲಕನೆಧಾರಿಣೀಶ್ವರ ತಿಲಕನೆ ಶ್ರೀ ಭೀಮಸಾರಿದ ಜನರ ಸಲಹುವ 4 ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು ಹೊದ್ದಿದ ಜನರ ಕರುಣದಲಿಹೊದ್ದಿದ ಜನರ ಕರುಣದಲಿ ಹೊರೆವ ಶ್ರೀಮಧ್ವಮುನಿಪನ ಭಜಿಸುವೆ 5 ಹರಿಯ ಸತ್ಕರದಲ್ಲಿ ಕರುಣಂಗಳೊಡನೆದುರುಳ ವಾದಿಗಳ ಗೆಲಿದನೆÀದುರುಳ ವಾದಿಗಳ ಗೆಲಿದನೆ ಹೃಷಿಕೇಶಗುರುಗಳಂಘ್ರಿಗೆ ನಮಿಸುವೆ 6 ದೇಶ ದೇಶದೊಳುಳ್ಳ ದೂಷಿವಾದಿಗಳನ್ನು ದೂಷಿಸಿ ಹರಿಯ ಮಹಿಮೆಯನುದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀನೃಸಿಂಹತೀರ್ಥಯತಿರಾಯ7 ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪಮಧ್ವಮಾರ್ಗವನು ಜಗಕೆಲ್ಲಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-ನಾರ್ದನತೀರ್ಥಯತಿರಾಯ8 ಇಂದಿರೆಯರಸನ ಎಂದೆಂದು ಪೂಜಿಸಿಮಂದಮಾಯಿಗಳ ಕುಮತವಮಂದಮಾಯಿಗಳ ಕುಮತವ ಗೆಲಿದ ಉ-ಪೇಂದ್ರÀತೀರ್ಥಯತಿರಾಯ9 ಈ ಮಹಿಯೊಳಗುಳ್ಳ ತಾಮಸ ಜನರನ್ನುಶ್ರೀಮಧ್ವ ಮುನಿಪನ್ನ ಮತದಿಂದಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿವಾಮನತೀರ್ಥರೆಸೆದರು 10 ಧೀರ ತಾಪಸರಾಗಿ ಗುರುಮಧ್ವಮುನಿಯಚಾರುಚರಣಂಗಳ ಪಿಡಿದಿರ್ದಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-ತೀರ್ಥರಡಿಗೆ ನಮಿಸುವೆ11 ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ ಸ್ವಾಮಿ ಎಂಬುದನು ಜಗಕ್ಕೆಲ್ಲ ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ ರಾಮತೀರ್ಥಯತಿರಾಯ12 ಮನುಮಥನಯ್ಯನ ಘನತೆಯ ತೋರಿಸಿನರ ಮೋಹಗಳ ಬಿಡಿಸಿದಜನರ ಮೋಹಗಳ ಬಿಡಿಸಿದ ಅಧೋಕ್ಷಜಮುನಿಕುಲಾಗ್ರಣಿಗೆ ನಮಿಸುವೆ13 ಮಧ್ವಕಿಂಕರರಾದ ಪದ್ಮನಾಭಾರ್ಯರವಿದ್ಯಾವೈಭವಗಳ ಪೊಗಳುವವಿದ್ಯಾವೈಭವಗಳ ಪೊಗಳುವ ಕವಿಯಾರುಶುದ್ಧ ಮುನಿಗಳಿಗೆ ಅಳವಲ್ಲ 14 ಸ್ವದೇವ ಹಯವದನನ ಆವಾಗ ಪೂಜಿಪ ಪಾವನ್ನ ಮಧ್ವಮುನಿಪನಪಾವನ್ನ ಮಧ್ವಮುನಿಪನ ಶಿಷ್ಯರಾದದೇವತೆಗಳ ಮರೆಹೊಕ್ಕೆ 15
--------------
ವಾದಿರಾಜ
ಮಂಗಳ ಜಯ ಜಯ ಜಯ ಮಂಗಳ ಪ. ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ ಮಂಗಳ ದೇವಿಯರರಸನಿಗೆ ಮಂಗಳ ಮನುಮಥಪಿತನಿಗೆ ಮಂಗಳ ಮಂಗಳ ಮಹಿಮಗೆ ಮಂಗಳ 1 ಅಚ್ಚುತಾನಂತ ಗೋವಿಂದಗೆ ಮಂಗಳ ಸಚ್ಚÀರಿತ್ರನಿಗೆ ಸಕಲ ಮಂಗಳ ಸಚ್ಚಿದಾನಂದ ಸ್ವರೂಪಗೆ ಮಂಗಳ ಅಚ್ಚಹೃದಯನಿಗೆ ಅತಿ ಮಂಗಳ 2 ಕೇಶವ ನಾರಾಯಣನಿಗೆ ಮಂಗಳ ಕೇಶಿಸೂದನನಿಗೆ ಅತಿ ಮಂಗಳ ಶೇಷಶಯನ ಹೃಷೀಕೇಶಗೆ ಮಂಗಳ ವಾಸುದೇವನಿಗೆ ಸಕಲ ಮಂಗಳ 3 ದಾನವವೈರಿ ದೆಸೆದೆಸೆಗಳಿಗೆ ಮಂಗಳ ಹೀನಕುಲದವಗೆ ಹೆಚ್ಚು ಮಂಗಳ ಆನಂದತೀರ್ಥಮುನಿಯ ಮುದ್ದುಕೃಷ್ಣಗೆ ಶ್ರೀನಾರಿಯೆತ್ತುವ ಶುಭಮಂಗಳ 4 ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ ನಗಧರ ಕೂರ್ಮಗೆ ಅತಿಮಂಗಳ ಜಗತಿಯನೆತ್ತದ [ವರಾಹಗೆ]ಮಂಗಳ ಮಗುವ ಕಾಯಿದ ನೃಸಿಂಹಗೆ ಮಂಗಳ 5 ದಾನವ ಬೇಡಿದ ಸ್ವಾಮಿಗೆ ಮಂಗಳ ಕ್ಷೋಣಿಶಾಂತನಿಗೆ ಸಕಲ ಮಂಗಳ ಜಾನಕೀರಮಣ ರಾಮಗೆ ಮಂಗಳ ಶ್ರೀನಂದಾಚ್ಯುತನಿಗೆ ಶುಭಮಂಗಳ 6 ಬುದ್ಧವತಾರ ಶ್ರೀಬದ್ಧಗೆ ಮಂಗಳ ಸದ್ಧರ್ಮ ಮೂಲಸ್ವಾಮಿಗೆ ಮಂಗಳ ಮಧ್ವವಲ್ಲಭ ಹಯವದನರಾಯನಿಗಿಂಥ ಶುದ್ಧಸ್ವಭಾವಗೆ ಶುಭಮಂಗಳ 7
--------------
ವಾದಿರಾಜ
ಯಾಕೆ ಮರುಳಾದೆ ಹೀಂಗೆ ಎಲೆ ಮನವೆ ಕಾಕು ಬುದ್ಧಿಯ ಬಿಡು ಬಿಡು ಸುಮ್ಮನೆ ಪ. ಧನದಾಸೆಯನು ಮರಿ ಮನುಮಥನ ಬಾಣಕಳುಕದಿರು ತೊಳಲದಿರು ನೆಲದಾಸೆಗೆ ನೀನದರ ಅನುವರಿತು ಹರಿಯ ಸ್ಮರಿಸು ಮನವೆ 1 ಅನ್ಯರಾಗುಣ ದೋಷಯಣಿಸದಲೆ ನಿನ್ನಿರವ ನೋಡು ಕಂಡ್ಯಾ ಮನವೆ ಬಂಣಗಾರಿಕೆಯು ಬರಿದೆ ಔದಂಬ್ರ- ಹಣ್ಣಿನಂತೀ ಕಾಯವು ಮನವೆ 2 ತಮ್ಮ ಬುದ್ದಿ ತಲೆಗೆ ಸುತ್ತಿ ಸಂಸಾರ ಭ್ರಮೆಗೊಂಡು ಬಳಲಾದಿರೋ ಕಮಲಪತ್ರಕ್ಕೆ ಒಳಗಿನ ಜಲದಂತೆ ನೆಲಕೆ ನಿರ್ಲೇಪನಾಗೋ ಮನವೆ 3 ಈ ದೇಹ ಸ್ಥಿರವಲ್ಲವೊ ಕಾಲನಾ ಬಾಧೆಗೋಳಗಾಗದಿರೋ ಮನವೆ ಭೇದ ದುರ್ಗುಣವ ತ್ಯಜಿಸು ನೀ ಗೇರುಬೀಜದಂದದಿ ತಿಳಿಯೊ ಮನವೆ 4 ಮಾಡು ಹರಿಸೇವೆಯನ್ನು ಮನದಣಿಯೆ ಬೇಡು ಹರಿಭಕ್ತಿಯನ್ನು ಕೂಡು ಹೆಳವನಕಟ್ಟೆಯ ವೆಂಕಟನ ಬೇಡಿ ಮುಕ್ತಿಯನು ಪಡೆಯೊ ಮನವೆ 5
--------------
ಹೆಳವನಕಟ್ಟೆ ಗಿರಿಯಮ್ಮ
ಸೂಳೆಯನಿಟ್ಟದ್ದೇವೆ ಕೇಳೈ ಆಶಾ ಪ ಸೂಳೆ ಮಾತುಗಳನ್ನು ಕೇಳಿ ಕೇಳಿ ದೇಹ ಜಾಳಾಗಿ ಹೋಯಿತು ಬೀಳೋಕಾಲವು ಬಂತು ಅ.ಪ ಮನೆಯ ಯೋಚನೆ ಬಿಡಿಸಿ ವಿಧವಿಧ ತಿಂಡಿ- ಯನು ತಾತಂದು ಕೊಡಿಸಿ ಮನುಮಥನಾಟವೆಘನ ಬೋಧೆಯೆನ್ನಿಸಿ ಕೊನೆಗೆ ರೋಗಗಳಿತ್ತು ಗತಿಶೂನ್ಯ ಮಾಡುವ 1 ಸತಿಯ ಬಿಡಿಸಿ ಬಿಟ್ಟಳು ಆತ್ಮಜರಲ್ಲಿ ಅತಿದ್ವೇಷವೇ ಕೊಟ್ಟಳು ಪಿತೃಮಾತೃಗಳಿಗಿಲ್ಲ ವಡಹುಟ್ಟಿದವರಿಗಿಲ್ಲ ಪ್ರೀತಿ ಹುಟ್ಟಿಸಿಯಿದ್ದದ್ದೆಲ್ಲಾ ಸೆಳಕೊಂಬುವ 2 ಇತರ ಚಿಂತೆ ಹೋಯ್ತು ಕುಲದಪ- ಧ್ಧತಿಯ ಮರಿಯ ಲಾಯ್ತು ಹಿತವೇ ಪೇಳಿದರ ಹಿತವಾಗಿ ತೋರುವೆ 3 ವಡವೆ ವಸ್ತ್ರವು ಬೇಕಂತೆ ಕೇಳಿದ್ದನೆಲ್ಲ ಕಡುಚಲ್ವೆ ಅವಳೆಂದು ಕಥೆಗಳ ಹೇಳುತ್ತ ಮಡದಿ ಮಕ್ಕಳ ಬಿಟ್ಟುಮನಸು ಅವಳಿಗೆ ಕೊಟ್ಟು 4 ಸ್ಮರನಾಟಯಾವಾಗಲು ಅವಳನೋಡಿ ಕರಗುತ್ತ ಹಗಲಿರುಳು ಪರಗತಿ ಕೊಡುವಂಥ ಗುರುರಾಮ ವಿಠಲನೆ ಅರಿಯವ ಸಂಸಾರ ತೊರೆದು ತುಂಟರಾಗಿ 5
--------------
ಗುರುರಾಮವಿಠಲ
ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
--------------
ಗೋಪಾಲಾರ್ಯರು
(ಮಂಗಳೂರಿನ ಗಣೇಶನನ್ನು ನೆನೆದು)ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ.ಬಾಗುವೆ ಶಿರ ಶರಣೌಘಶರಣ್ಯ ಸು-ರೌಘಸನ್ನುತ ಮಹಾಗುಮ ಸಾಗರ ಅ.ಪ.ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭಶುದ್ಧಾತ್ಮ ಫಣಿಪಬದ್ಧಕಟಿವಿಗತಲೋಭಹೃದ್ಯಜನದುರಿತಭಿದ್ಯ ವಿನಾಯಕವಿದ್ಯಾದಿ ಸಕಲ ಬುದ್ಧಿಪ್ರದಾಯಕ 1ಏಕದಂತಚಾಮೀಕರಖಚಿತ ವಿಭೂಷ ಗಣೇಶಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸಶೋಕರಹಿತ ನಿವ್ರ್ಯಾಕುಲ ಮಾನಸಲೇಖಕಾಗ್ರಣಿ ಪರಾಕೆನ್ನಬಿನ್ನಪ2ವರಮಂಗಲಪುರ ಶರಭಗಣೇಶ್ವರ ಧೀರ ಉದಾರಸುರುಚಿರ ಶುಕ್ಲಾಂಬರಧರ ವಿಘ್ನವಿದಾರಹರಿಲಕ್ಷ್ಮೀನಾರಾಯಣಶರಣರಗುರುಗುಹಾಗ್ರಜ ಮನೋಹರ ಸುಚರಿತ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕಷ್ಟದಿ ಕಾಲವ ಕಳೆವೆನು ದೇವಾ |ಪಕ್ಷಿವಾಹನ ಕಾಯೋ ಕರುಣ ಸಂಜೀವಾ ಪಕೃಷ್ಣಮೂರುತಿ ಫಲುಗುಣನಿಗೆಭಾವ|ಸೃಷ್ಟಿಗೊಡೆಯ ಭಕ್ತಜನರನು ಪೊರೆವಾ ||ಉಟ್ಟ ಸೀರೆಯನು ಕುರು ದುಷ್ಟನು ಸೆಳೆಯಲು |ರಕ್ಷಿಸೆನ್ನುತ ಮೊರೆಯಿಟ್ಟ ದ್ರೌಪದಿಗೆ ||ಅಕ್ಷಯವರವಿತ್ತು ಪಕ್ಷಿವಾಹನ ಕಾಯ್ದೆ |ಸೃಷ್ಟಿಗೊಡೆಯ ಶ್ರೀಕೃಷ್ಣಾವತಾರ 1ದಾನವಾಂತಕ ಭಕ್ತ ದೀನದಯಾಕರ |ಮಾನವಶರೀರ ಮನುಮಥನಯ್ಯ ||ಭಾನುನಂದನಫಣಿಬಾಣವನೆಸೆಯಲು |ಜಾಣತನದಿ ನರನ ಪ್ರಾಣವನುಳುಹಿದೆ 2ನಂದಗೋಪನ ಮುದ್ದು ಕಂದನ ಚರಣಕ್ಕೆ |ವಂದಿಸಿ ಕರಗಳಾನಂದದಿ ಮುಗಿವೆ ||ಇಂದಿರೆಯರಸ ಗೋವಿಂದ ಜನಾರ್ದನ |ಮಂದರಧರ ಅರವಿಂದ ನಯನ ದೇವಾ3
--------------
ಗೋವಿಂದದಾಸ
ಕಾಸು ಕನಕದಾಸೆಯಾದುದೇ | ಹರಿಗೆ |ದಾಸ ಜನರನೆಲ್ಲ ಮರೆತನೇ ಕಡೆಗೆಪವಾಸುದೇವನು ಶ್ರೀನಿವಾಸನೆನಿಸಿಕೊಂಡು |ಶೇಷಗಿರಿಯ ಮೇಲೆ ವಾಸವಾಗಿರುವವಗೆಅ.ಪಛಪ್ಪನ್ನದೇಶದ ಕಪ್ಪವ ತರಿಸುವ | ಒಪ್ಪಿ ಜನರಸರ್ವ ತಪ್ಪಪಾಲಿಸುವ |ಸರ್ಪಶಯನ ನಮ್ಮ ತಾಪತ್ರೆ ಘನವೆನಲು |ಅರ್ಪಿತವಹುದೇತಿಮ್ಮಪ್ಪ| ವೆಂಕಟ ಪತಿಗೆ ||ಕಾಸು||1ಶನಿವಾರ ಶನಿವಾರ ಮನೆ ಮನೆ ಭಿಕ್ಷೆಗೈದು |ಮಿನುಗುವ ಡಬ್ಬಿಯೊಳಿಟ್ಟು ಜನರು ಪೂಜಿಸೆ ನಲಿದು |ವನಜಾಕ್ಷ ನಿನಗೆಂದು ಕಣಜಕ್ಕೆ ಸುರಿಯೆ ತಂದು |ಮನುಮಥ ಪಿತಗೆ ನಮ್ಮ ನೆನಪು ಎಂತಹುದೋ ||ಕಾಸು||2ಗಂಧಚಂದನನಾಮತೀರ್ಥ ಪ್ರಸಾದ |ಸುಂದರವಾಹನಹರಕೆ ವಿನೋದ |ಚಂದದಿ ನೋಡಲ್ ಹರಿಯ ಧನವಿಲ್ಲದಾಗದ |ಸುಂದರಾಮೂರ್ತಿಗೋವಿಂದಗೆ ಸಾರ್ವದಾ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಪೋ ಪೋಗೆÀಲೋ ಸಾ ಸಾರೆಲೊನಗೆಗಿಂತೆನಲು ಮುನಿದು ಪೋದನೆಮನುಮಥನಯ್ಯ ಕಾಣೆ ಪ.ಎನ್ನ ಪೆಸರು ಮಾಧವನೆಂದೆಂಬರುಅನ್ಯರನೊಲ್ಲದೆ ನಿನ್ನೊಳು ಮನವಿಟ್ಟೆವನವ ತಿರುಗುವ ವಸಂತ ನೀನಾದರೆಮನೆಗ್ಯಾತಕೆ ಬಂದೆ 1ವಕ್ರದ ನುಡಿಗಳ ನುಡಿಯದಿರೆನ್ನನುಚಕ್ರಧರನೆಂದೆಂಬರು ಎನ್ನನುರೊಕ್ಕಕ್ಕೆ ಮಡಕೆಯ ಮಾರುವ ಕುಂಬಾರಒಕ್ಕಲ ಮನೆಗೆ ಪೋಗೋ 2ಹಿರಿಯರು ಹರಿಯೆಂದೆಂಬರು ಎನ್ನನುತರಳೆ ನೀನೇನಾದರೆ ಎಂದೆನದಿರುತರುಗಳೇರಿ ಕುಣಿದಾಡುವ ಕಪಿಗಳತೆರದೊಳಾಡು ಪೋಗು 3ಸರ್ಪನÀ ಮಸ್ತಕದಲಿ ನಲಿದಾಡುವೆಅಲ್ಪಕನೆಂದು ನೀ ಬಗೆಯದಿರೆನ್ನನುತಪ್ಪದೆ ಗಗನದೊಳಿಪ್ಪ ಗರುಡನುಬಪ್ಪನೆ ಪುರದೊಳಗೆ 4ಎನ್ನ ಮಹಂತರನಂತನೆಂದೆಂಬರುಮನ್ನ ಬಂದಂತೆ ನೀ ಮಾತುಗಳಾಡದಿರುಪನ್ನಂಗನಾದರೆ ಪಾತಾಳಕ್ಕೆ ಪೋಗುನಿನ್ನ ಸಂಗಕ್ಕೆ ಅಂಜುವೆ 5ಕಡಲೊಳಗಿಪ್ಪನೆಂದೆಂಬರು ಎನ್ನನುಮಡದಿಯೇನಾದರು ಎಂದೆನ್ನದಿರುಮಡಿದು ಮಡಿದು ಹೋಹ ಮೀನು ಮೊಸಳೆಗಳಗಡಣವ ಕೂಡು ಪೋಗು 6ಸಚರಾಚರಂಗಳ ಸೃಜಿಸಬಲ್ಲವನೆಂದುಸುಚರಿತ್ರ ದೇವತೆಯೆಂದೆಂಬರುಉಚಿತವೆ ಹೆಣ್ಣುಮಗಳ ಕೂಡೆ ಮೋಹದವಚನವು ನಿನಗೆ ರಂಗ ಪೋಗು 7ಆಲದೆಲೆಯಮೇಲೆ ಮಲಗಿಪ್ಪ ವಸ್ತು ನಾನುಪಾಲಮಾರುವವರಿಗೆ ಪರತತ್ವನೆಂಬರುಕಾಲಬೆರಳ ಚುಂಬಿಸುವಗ್ಯಾತಕೆ ಗೋಪಾಲಬಾಲೆಯರಾಟ 8ಮೈಯೊಳು ಸಾವಿರ ಕಣ್ಣುಗಳುಳ್ಳವನಯ್ಯನೆಂದು ದೇವತೆಗ-ಳ್ದಿವ್ಯಚಾರಿತ್ರ ದೇವತೆಯೆಂತೆಂಬರುಅಯ್ಯ ನೀನಾದರೆ ಅಹಲ್ಯಾದೇವಿಯಕಯ್ಯ ಪಿಡಿದ ಕಳ್ಳನೆ ಪೋಗು 9ಕಂಗಳ ಕುಡಿನೋಟಗಳಿಂದ ತ್ರಿಜ-ಗಂಗಳನೆಲ್ಲವ ಸಂಹರಿಸುವೆÀ ನಾನುರಂಗ ನೀನಾದರೆ ಕೊಲೆಗಡುಕನು ನ-ಮ್ಮಂಗಳಕ್ಕೆ ಬರಬೇಡವೊ 10ಸ್ವರ್ಗಕ್ಕೆ ಹೋದರೆ ನಿನ್ನವಗುಣವಿದುಅಗ್ಗಳಿಯದ ಹೊನ್ನನ್ಗೆ(?) ಬಗ್ಗುವಳಲ್ಲ ನೀಒಗ್ಗುವೆ ನಾ ನಿನಗಯ್ಯ ಸ್ವರ್ಗಾಪ-ವರ್ಗವ ಕೊಡುವವನೆ ಪೋ ಪೋ 11ಒಲಿದು ನಾ ನಿನ್ನ ಮನೆಗಾಗಿ ಬಂದರೆಕಲಹದ ಮಾತುಗಳಾಡದಿರು ಎನ್ನಲಲನೆಉರದÀಲ್ಲಿದ್ದು ನಾಭಿಕಮಲದಿಂದಛಲದಿ ಮಗನ ಪಡೆದೆ 12ಮುನಿಗಳರ್ಚಿಸುವ ಶ್ರೀಹಯವದನನು ನಾನುವನಿತೆಯೆನ್ನಿರವನು ಬಲ್ಲವರೆ ಬಲ್ಲರುಉಣಲೀಸೆ ಉಡಲೀಸೆ ತಲೆಯೂರಿ ತಪವನುವನದೊಳು ಮಾಡಿಸುವೆ 13
--------------
ವಾದಿರಾಜ