ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಚ್ಯುತಾನಂತನೆ ನಿನ್ನ ನೆಚ್ಚಿಕೊಂಡಿಹೆನು ಇಚ್ಛಾರೂಪ ಸ್ವಚ್ಛಾಭೂಪ ಸ್ವೇಚ್ಛೋಪಾತ್ತ ಸಗುಣ ರೂಪ ಪ. ನಾಮತ್ರಯ ಮಂತ್ರ ಜಪಿಸಿ ಸೋಮಧರನು ತಾನು ಆ ಮಹಾ ಹಲಾಹಲವನು ನೇಮದಿಂದ ಜಯಿಸಿರುವನು ಕಾಮಚಾರ ಕುಮತಿ ಮನುಜರಾ ಮಾಯಾದಿಗಳನು ಶ್ರೀಮಹೀಶ ಸಿಂಧುವಾಸ ನೀ ಮನ್ನಿಸಲು ನಿಲುವದೇನು 1 ನಗಧರ ನಿನ್ನಂಘ್ರಿಕಮಲಯುಗಳ ಒಂದೆ ಸಾಕು ಎನಗೆ ತ್ರಿಗುಣ ವಿಷಯವಾದ ಸರ್ವ ನಿಗಮಕರ್ಮವ್ಯಾಕೊ ಅಗಣಿತಾತ್ಮ ಅಮೃತಾಂಧಸರ ಮಗುವಿನಂತೆ ಪೊರೆವಿ ನಗುತಲೆನ್ನ ನೀ ಕಾಯ್ದದಕೆ ಪೊಗಳಲು ನಾ ಶಕ್ತನಹುದೆ 2 ಪೋರ ಕೆಟ್ಟುಹೋದನೆಂದು ಊರಜನರು ನುಡಿದಾ ಕ್ರೂರ ಮಾತ ಕೇಳಿ ತಾಳಲಾರದೆ ನಾ ಬಂದು ವಾರಿಜಾಕ್ಷ ನಿನ್ನ ಪದಕೆ ದೂರ ಪೇಳಲಂದು ಶ್ರೀರಮಣಿಯ ಸಹಿತಲೆನಗಾಧಾರವಾದಿ ದೀನಬಂಧು 3 ಇಂದ್ರಿಯಂಗಳೆನ್ನ ವಿಷಯಬಂಧದಿಂದ ಬಿಡಲು ಒಂದು ಕರ್ಮದಲು ಸಾಂಗದಿಂದಲೆನಗೆ ನಿಲಲು ಇಂದಿರೇಶ ಈ ಕಾರಣದಿ ಕುಂದಮನಕೆ ತಾರದಿರೊ ತಂದೆ ನೀನೆ ಶರಣನೆಂದು ಹೊಂದಿರುವದನೆಣಿಸಿ ಸಲಹೊ 4 ನಾಮಸ್ಮರಣವಿತ್ತು ಕಾಯಿ ಕಾಮಿತಾರ್ಥದಾಯಿ ನೇಮ ಒಂದು ನಡೆಸದಂಥ ಪಾಮರನಾಗಿಹೆನು ಸೋಮಧರನ ಶುದ್ಧಿಕರಿಸ ಭೂಮಿತೀರ್ಥ ಜನಕರಾಮಕೃಷ್ಣ ವೇದವ್ಯಾಸ ಸ್ವಾಮಿ ಶ್ರೀನಿವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ಇನ್ನೆಂದಿಗು ಮಾಡದಿರು ಶ್ರೀ ಕೃಷ್ಣ ಸರ್ವೋತ್ತಮನೆಂಬುವರಾ ಸಂಗನುದಿನ ಬಿಡದಿರು ಪ ಕೂಡಿರು ಇನ್ನು ವೇದ ಬಾಹ್ಯರ ದುರ್ಭೋಧಿಗಳ ಸಂಗೆಂದಿಗು ಹೋಗದಿರು ಶ್ರೀಧರನಂಘ್ರಿಯ ಚಿತ್ತದಿ ಬಿಡದಿರೊ ಶರಣರ ಹೊಂದಿರು ಮಂಡಲಿಸೇರದಿರು 1 ದುರ್ಮನುಜರಾದ ಈ ದುಷ್ಟದುರಾತ್ಮರ ಮಾತನೆ ಕೇಳದಿರು ಅನಿಮಿಷ ಬಿಡದಾ ಸಂತರ ಪಾದವು ಅರ್ಚಿಸುತಲಿ ಇರು ದುರ್ಗುಣವುಳ್ಳ ಪರಮ ಪತಿತ ಜನರ ಪಥವನೆ ಬಿಟ್ಟಿರು 2 ಸಕಲ ವೇದ ಶಾಸ್ತ್ರ ಮಂತ್ರ ಮರ್ಮಗಳ ಸರ್ವದಾ ತಿಳಿದಿರು ಇನ್ನು ವಿಕಟ ಕುಭಕ್ತರ ಶಾಸ್ತ್ರಗಳೆಂಬುವನೆಂದಿಗು ನೋಡದಿರು ರುಕ್ಮಿಣಿವರ ಶ್ರೀ ಹೆನ್ನೆವಿಠ್ಠಲನ ಭಕುತಿಯ ಬಿಡದಿರು ಕೂ------ಕತರಾದ ಕುಚೇಷ್ಟರ ಕೂಡಿ ಭಂಗವ ಬಡದಿರು 3
--------------
ಹೆನ್ನೆರಂಗದಾಸರು
ರಾಜೀಸುವದು ನಾಭಿಯಾ ಸುರಗಂಗೆಯಂ ಶೇಧೀಭಿಯಾ ಪ ನೇತ್ರನ್ನದಯ ಪೂರ್ಣದಾ ಕಮಲಂ ಹಾರಿಸಿ ನೀಡುವ ಬುದ್ದಿ ವಿಮಲಂ ನೇ ಶ್ರೀ ವೆಂಕಟೇಶಂ ಸದಾ1 ಪೊಗಳಲಿಲ್ಲ ಮತಿ ಸಲ್ಲದೇ ಆಶ್ರಯಸಿ ನೆಲೆಗೊಳ್ಳದೇ ಭವಕಾದೆ ಪರಿಹಾರ ದಾ ಪರಿಯಂ ಕಾಣದೆ ಬೇಡಿ ಕೊಂಬೆ ಧೋರಿಯಂ ಶ್ರೀ ವೆಂಕಟೇಶಂ ಸದಾ 2 ಪಟನಾದೆ ನೆರೆ ಭಾಗ್ಯದೀ ನಡಲಂ ದೀಗಳಿ ಪಶ್ಚಾತ್ತಾಪ ಒಡಲಂ ಮನವಿಲ್ಲ ವೈರಾಗ್ಯ ದೀ ಮುಸುಕಿಷ್ಟು ದನಿವಾರ ದಾ ಕಡಲಂ ಮನಿಯೆ ಕಾಯೋ ಸಾಖರದಿಡಲಂ ಶ್ರೀ ವೆಂಕಟೇಶಂ ಸದಾ3 ಬಿದಿರೀಸಿ ವಢ ಮಾಡಿದೇ ಕೊನಿಯಿಂದ ಕಲಕ್ಯಾಡಿದೆ ಮುದವಿತ್ತೆ ಭಕ್ತಂಗದಾ ಮರಳಂ ಕಾವದು ಭಕ್ತಿಗಿಲ್ಲ ಹುರಳಂ ಶ್ರೀ ವೆಂಕಟೇಶಂ ಸದಾ 4 ಕಾಂತಿಚರಣಾಂಬುಜಭಾವ ಭಕ್ತಿಂದಲಿ ಶರಣಂ ಪೊಕ್ಕವರಿಂಗೆ ಜನ್ಮಮರಣಂ ಹರಿಸೂವದಯದಿಂದಲಿ ಸ್ಮರಣಂ ಮಾಡಲು ಪಾಪಹರಣಂ ಸಲೆ ಸಾಧ್ಯಸುರ ಸಂಪದಾ ಕರುಣ ಬೀರುತ ಕಾಯೋಯನ್ನಹರಣಂ ಶ್ರೀವೆಂಕಟೇಶಂ ಸದಾ 5 ಮಾನವ ತನುಂಪಡದೀಗ ಸದ್ಗತಿಯಾ ಗಡ ಹೊಂದಿ ವಿಷಯೇಚ್ಛೆಯಾ ಅಪರಾಧವನು ಗಣಿ ಸದಾ ಪಿತನಂ ತನ್ನಯ ಕಾಯೋ ಜ್ಞಾನ ಚ್ಯುತ ನಂ ಶ್ರೀ ವೆಂಕಟೇಶಂ ಸದಾ 6 ಮೆಚ್ಚಿ ಸುಮನ ನರಿಯೆನು ಯಂತ್ರಿಪ್ಪ ದಾಂನರಿಯೆನು ಗಜವಂ ತಾರಿಸಿದಂತೆಯನ್ನ ವೃಜಿನಂ ದಾಟೀ ಸುವಾ ಬಿರದಾ ಕುಜನಂ ಸೇರಿದಂತೆ ಯನ್ನಂ ಕಾಯೋದ್ವಿಜನಂ ಶ್ರೀ ವೆಂಕಟೇಶಂ ಸದಾ 7 ಸದನಂ ಸುದ್ಗುಣ ಗಾಣದಬ್ಜವದನಂ ಸ್ಪರ್ಧಿಸುತಿದನುಜರಾ ಕದನಂ ಕರ್ಕಶವಾಗಿ ಸೌಖ್ಯ ಪ್ರದನಂ ಭಾವಿಸುತಿಹ ಮನುಜರಾ ಸುಕುಮಾರ ಘನ ಶಾಮದಾ ಇದನಂ ಬಣ್ಣಿಪರಾರು ವೇದವಿದಿನಂ ಶ್ರೀ ವೆಂಕಟೇಶಂ ಸದಾ8 ಶಿಖಿ ಕೇತನಾ ಕಾಯ ಭಂಡಿಯವಾಧನು ಪ್ರಾರ್ಥನಾ ಪರಬ್ರಹ್ಮ ತುರುಗಾಯ್ವನೆಂದು ಪೊಗಳ್ವಾರಿಂತರಿವರೈ ಚರಿತದಾ ಗುರು ಮಹಿಪತಿ ಕಂದಸಲಹೋ ಸ್ಮರಿಸಲು ಅಷ್ಟಕವಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ| ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ| ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ| ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ 1 ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ| ಮಾನದ ಕಾಂಕ್ಷಿಯ ಕೂಡಿ| ಪರಿ ಕುಣಿದಾಡುವ ಹೀನ ಮನುಜರಾ ಪಾಡಿ2 ಸ್ಮರಿಸಲು ಶ್ರೀಹರಿಯಾ ಲೋಹ| ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ| ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು| ಮೂಜಗ ಧೊರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪಘನಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ 1ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ 2ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ 3ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ 4ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ 5ಪಾಂಚಾಲಿಯನು ಗಳಿಸೆ ಕೋಪದಿಂ ಬಂದಹರಿ|ವಂಚಕರ ದರ್ಪವ ಭಂಗಿಸಿ ಲೀಲೆಯಿಂ |ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ 6ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ 7ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು |ಪಾತಕಿವಸವೆಳೆಯೆ ಕೋಪದಿಂದ ||ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ 8ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ 9ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ 10ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ 11ದ್ವೈತ ವನದೊಳು ಬಂದುಮೃಗಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||ನೀತವಕಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು 12ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ 13ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ 14ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆಮಾನ|ವಿತ್ತಂತೆ ತೋರಿ ಎಲ್ಲರ ರಥವನೂ |ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ 15ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿಮಸ್ತಕಶೀಳಿದೆ ||ಬಹುಖೋಡಿಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ 16ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿನಭಬೇಯಿಸುತ್ತಲಿ ||ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ 17ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನರೂಪನೋಡುತಲಿ 18ಸ್ವಾಮಿ ಪ್ರಾಣೇಶ ವಿಠಲನ ಆಜೆÕಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮಕರಪಿಡಿದು ಸಲಹುವದೋ ಪ್ರತಿದಿನದಿ 19
--------------
ಪ್ರಾಣೇಶದಾಸರು
ನಿನ್ನದೋ ನಿಖಿಲ ನಿನ್ನದೋಕುನ್ನಿ ಮನುಜರಾಧೀನೇನಿಲ್ಲ ಶ್ರೀಹರಿ ಪನೀನಿಟ್ಟ ರವಿಶಶಿಗಳುಹರಿನೀನಿಟ್ಟ ದಶದಿಕ್ಕುಗಳುಹರಿನೀನಿಟ್ಟ ಅಗ್ನಿಜ್ಯೋತಿಗಳುಹರಿನೀನಿಟ್ಟ ನದಿತಟಗಳು ಅಹನೀನಿಟ್ಟ ಚಳಿಗಾಳಿ ನೀಕೊಟ್ಟ ಮಳೆಬೆಳೆನೀನಿಟ್ಟ ಉತ್ಪತ್ತಿ ಸ್ಥಿತಿಲಯ ಸಕಲವು 1ನಿನ್ನ ಅಡಿಯೆ ಮಹಾಕ್ಷೇತ್ರಹರಿನಿನ್ನ ನುಡಿಯೆ ವೇದಮಂತ್ರಹರಿನಿನ್ನ ದೃಢವೆ ಸತ್ಯಯಾತ್ರೆಹರಿನಿನ್ನ ಬೆಡಗು ಸ್ಮ್ರತಿಶಾಸ್ತ್ರ ಅಹನಿನ್ನ ಅರಿವೆನಿತ್ಯನಿನ್ನ ಮರವೆಮಿಥ್ಯನಿನ್ನ ಕರುಣ ಎಲ್ಲ ಪ್ರಾರಬ್ಧಗಳ ಗೆಲವು 2ನಿನ್ನ ನಾಮವೆ ಕ್ಷೇಮಕವುಹರಿನಿನ್ನ ನಾಮವೆ ಭವಗೆಲವುಹರಿನಿನ್ನ ನಾಮವೆ ಚಾರುಪದವುಹರಿನಿನ್ನ ನಾಮದ ಬಲವೆ ಬಲವುಹರಿನಿನ್ನ ನಾಮ ಗಾಯತ್ರಿ ನಿನ್ನ ನಾಮತಾರಕನಿನ್ನ ನಾಮ ಭಕ್ತಿ ಯುಕ್ತಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು