ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಋು) ಬ್ರಹ್ಮ ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ | ಸಂಜೀವಧರಣ ಧನಂಜಯ ಪೂರ್ವಜ | ಅಂಜದ ದುರ್ವಾದಿ ಭಂಜ ಪೂಭಂಜನ ಪ ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ | ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ | ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ | ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ | ರಾಗ ಭಕುತಿಯಿಂದ ಭೋಗದೊಳಗೆ ಮೇಲು | ಬಾಗಿಲ ಸಾರುವ ವೇಗವನೀಯೋ 1 ನಿತ್ಯ ಪ್ರವಾಸ ರೂಪಾ | ವ್ಯಕ್ತಿ ಜ್ಞಾನ ಪ್ರತಾಪಾ | ಸುತ್ತು ತುಂಬಿದೆ ಕೀರ್ತಿ ಇತ್ತು ಸಂತತಾ | ಸ್ಛೂರ್ತಿ ಕಿತ್ತಿ ಬಿಸಾಟು ಪಂಕಾ | ನಿಷ್ಕಲಂಕಾ | ರಿಪುಬಲ | ಕತ್ತರಿಸಿದಿ ಭೀಮಾ | ಉತ್ತಮನೆಂಬೋದೀ ಉತ್ತರ ಬರಲಿ2 ದುರುಳ ಸಮೂಹವೆಂಬೋ | ಸ್ಮರನಾ ನಿನ್ನಯ ಮೈಗೆ ಈ ಕೈಗೆ | ಭರದಿಂದ ಸೋಂಕಲು | ವರಗಲ್ಲಿನ ಮೇಲೆ ವರಸಿದಂತಾಗುವದೊ ಇದಹುದೋ | ಅರುಹಿದ ಆನಂದ | ವರ ಮುನಿಯೇ ವಿ | ಸ್ತರ ಕರುಣಾಂಬುಧಿ ವಿಜಯವಿಠ್ಠಲನ್ನ ಚರಣವ ತೋರಿಸಿ ತೊರೆಯಯ್ಯಾ ಪ್ರಾಣಾ 3
--------------
ವಿಜಯದಾಸ
ವಾಯುದೇವರು ಆಂಜನೇಯ ಕುಂತೀತನಯ- ಅಂಜನಾಭಪ್ರಿಯ ಮಧ್ವಾಖ್ಯರಾಯ ಪ. ಮಂಜುಳಾಂಗ ಮೃತ್ಯುಂಜಯಾದಿ ಸುರ- ನಿತ್ಯ ನಿ- ರಂಜನ ದೇವಪ್ರಭಂಜನತನಯ ಅ.ಪ. ರಾಮರಾಯಬಂಟ ದಿತಿಸುತ- ಸ್ತೋಮಹರಣ ತುಂಟ ಸ್ವಾಮಿಕಾರ್ಯಮನಪ್ರೇಮನಿರಾಮಯ ಭೀಮಪರಾಕ್ರಮಧಾಮ ಘನಾಘನ- ಶ್ಯಾಮ ನಿಕಾಮ ಸುಧೀಮಲಲಾಮ 1 ಚಿಂತಾಮಣಿ ರಾಮ ನೇಮ- ವಾಂತು ಸಾರ್ವಭೌಮ ಸಂತೋಷದಿ ಗಗನಾಂತರಪಂಥದಿಂ ಅಂತರಿಸುತ ಮಹಾಂತೋದಧಿಯ ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ2 ಆಟನೋಟದಿಂದ ವನದೊಳು ಸಾಟಿಯಾಗಿ ಬಂದ ಮೀಟೆನಿಸುವ ಬಲು ಕಾಟಕ ದೈತ್ಯರ ಕೂಟ ಕೆಡಹಿ ಪುರಕೋಟಿಯ ತಿಕ್ಕಿದ ಪಾಟಲಮುಖ ಶತಕೋಟಿಶರೀರ 3 ಅಟ್ಟಹಾಸದಿಂದ ಕಮಲದಿ ಪುಟ್ಟಿದಾಸ್ತ್ರದಿಂದ ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ- ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಯುದೇವರು ಆಂಜನೇಯ ಕುಂತೀತನಯ- ಅಂಜನಾಭಪ್ರಿಯ ಮಧ್ವಾಖ್ಯರಾಯ ಪ. ಮಂಜುಳಾಂಗ ಮೃತ್ಯುಂಜಯಾದಿ ಸುರ- ನಿತ್ಯ ನಿ- ರಂಜನ ದೇವಪ್ರಭಂಜನತನಯ ಅ.ಪ. ರಾಮರಾಯಬಂಟ ದಿತಿಸುತ- ಸ್ತೋಮಹರಣ ತುಂಟ ಸ್ವಾಮಿಕಾರ್ಯಮನಪ್ರೇಮನಿರಾಮಯ ಭೀಮಪರಾಕ್ರಮಧಾಮ ಘನಾಘನ- ಶ್ಯಾಮ ನಿಕಾಮ ಸುಧೀಮಲಲಾಮ 1 ಚಿಂತಾಮಣಿ ರಾಮ ನೇಮ- ವಾಂತು ಸಾರ್ವಭೌಮ ಸಂತೋಷದಿ ಗಗನಾಂತರಪಂಥದಿಂ ಅಂತರಿಸುತ ಮಹಾಂತೋದಧಿಯ ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ 2 ಆಟನೋಟದಿಂದ ವನದೊಳು ಸಾಟಿಯಾಗಿ ಬಂದ ಮೀಟೆನಿಸುವ ಬಲು ಕಾಟಕ ದೈತ್ಯರ ಕೂಟ ಕೆಡಹಿ ಪುರಕೋಟಿಯ ತಿಕ್ಕಿದ ಪಾಟಲಮುಖ ಶತಕೋಟಿಶರೀರ 3 ಅಟ್ಟಹಾಸದಿಂದ ಕಮಲದಿ ಪುಟ್ಟಿದಾಸ್ತ್ರದಿಂದ ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ- ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ 4
--------------
ತುಪಾಕಿ ವೆಂಕಟರಮಣಾಚಾರ್ಯ