ಒಟ್ಟು 13 ಕಡೆಗಳಲ್ಲಿ , 10 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿವೆ ಚರಣಕ್ಕೆರಗುವೆ ಭರದಿ ರಕ್ಷಿಸು ಬಿಡದೇ ಶ್ರೀ ಪ ಮಾನವ ಕಾಯ್ದೆಯೊ ಹೀನರ ಮದಗರ್ವವನೆಲ್ಲ ಅಳಿದೆಯೊ ಧ್ಯಾನ ಮಾಡುವ ಸ್ವಾನುಭವಿಗಳ ಸ್ಥಾನ ಹೃದಯವಾಸ ಶ್ರೀ 1 ಧ್ಯಾನಿಸಿವಂಥಾ ಗಜರಾಜನ ಕಾಯ್ದೆ ಮಾನಿನಿ ಅಹಲ್ಯೆಯ ಪಾದದೊಳುದ್ಧರಿಸಿದೆ ದೀನರಕ್ಷಕ ಬಿರುದ ಪೊತ್ತ ವಿ ಜ್ಞಾನದೊಳಗಿರಿಸೆನ್ನಾ 2 ಶಬರಿಯ ಭಕ್ತಿಗೆ ಮೆಚ್ಚನೀ ಬಂದೆಯೊ ಬದರಿಯ ಹಣ್ಣನೆ ಸವಿಸವಿ ದುಂಡೆಯೊ ವಿಭು ಪರಮಾನಂದಾ ಪ್ರಭೆಯೊಳಗಿರಿಸಿದೆ 3 ಸ್ವರ್ಣಕಶ್ಯಪನ ಸೊಕ್ಕಗಿಸಿದೆ ದೇವಾ ಮನ್ನಿಸಿ ಪಾಂಡವರೈವರ ಸಲಹುವಾ ಚನ್ನ ಗೋಪಿಯರ ಕೂಡಿ ಮನ್ನಣೆಕ್ರೀಡೆಯ ನಾಡಿ 4
--------------
ಶಾಂತಿಬಾಯಿ
ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ
ಜಾಹ್ನವಿ ಜನಕ ಮೂಜಗತ್ಪತಿ ಸುರಕುಲ ಸನಕಾ ದೀಜನ ಮನೋಹರ ಮಾಣಿಕ್ಯ ಕನಕಾ ವೈಜಯಂತಿ ಹಾರ ಪಾವನ್ನ ಪದಕ ಪ ಕೇಶಿಭಂಜನ ವ್ಯೋಮಕೇಶ ವಂದಿತ ಪಾದ ಕ್ಲೇಶನಾಶನ ವಾತೇಶನ ಜನಕ ಕೇಶರಿರುಹ ಮುಂಜಿಕೇಶನೆ ಕುಂಕುಮ ಶೌರಿ 1 ವಾರುಣಿ ಪತಿನುತ ವಾರುಣನ ಭಯ ನಿ ವಾರಣಾ ವಾರಣಾಶಿ ಪುರದರಸೆ ವಾರಣ ನಗರಿಯ ವಾರನಹತಪಲ್ಲ ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ 2 ಮಾದೇವಿ ರಮಣ ಭೂಮಿದೇವಿ ಉದ್ಧಾರ ಮಾಧುರ್ಯ ವಚನ ಉಮಾದೇವಿ ವಿನುತಾ ಮಾಧಾರ ಮಹಶೂರ ಮತ್ಕುಲನೆ ಪ್ರೇ ಮಾಧವ ರಾಯಾ 3 ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ ಗೋವುಗಳ ಕಾಯಿದ ಗೋವಳರಾಯಾ ವಿಪ್ರ ಸಂರಕ್ಷ ಗೋವಿದಾಂಪತಿ ರಂಗ ಗೋವಿಂದ ನಂದ 4 ಮಧುಕೈಟಭಾಸುರ ಮದಗರ್ವ ಮರ್ದನ ನಿತ್ಯ ಮಧುರನ್ನ ಪಾನಾ ಮಧುರಾಪುರ ಪಾಲ ಮದಗಜ ಹರಣಾ ಶಾ ಮದವರ್ಣ ಶರೀರ ಮಧುಸೂದನನೆ 5 ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ ವಿಷ್ಣು ಸರ್ವೋತ್ತಮ ವಿಶ್ವನಾಟಕನೆ6 ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ ವಿಕ್ರಮನಾಗಿ ಕಾಲಕ್ರಮಣಿ ಮಾಡೆ ಶಕ್ರಮರ್ಚಿಸೆ ಅನುಕ್ರಮನಾಗಿ ಪ ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ 7 ವಾಮಲೋಚನೆಯರ ವಾಮನ ಕೆಡಿಸಿದೆ ವಾಮನವಾಶಿಷ್ಟವಾ ಮುನಿವಂದ್ಯ ವಾಮನದಲಿ ದಾನವಾಮನ್ಯಗಳರನ್ನು ಅ ವಮಾನ ಮಾಡಿದೆ ಸಿರಿವಾಮನನೆ 8 ಶ್ರೀಧರ ರಮಣನೆ ಶೃಂಗಾರ ವಾರಿಧಿ ಶ್ರೀಧನ ಸಂಪತ್ತಾಶ್ರಿತ ಜನರಿಗೆ ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ ಶ್ರೀದೇವಿ ಉರಭೂಷಾ ಶ್ರೀಧರನಂತಾ 9 ಋಷಿಕೇಶನ ತಾತ ಋಷಿಜನ ಸಂಪ್ರೀತ ಋಷಿಕುಲೋದ್ಭವ ಪುರುಷ ರಾಮ ಮಹಾ ಋಷಿನಾಮಧೇಯನೆ ಋಷಿಪತ್ನಿ ಪಾಲನೆ ಋಷಿಗಳ ಒಡೆಯನೆ ಹೃಷಿಕೇಶ ದೇವ 10 ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ ಪದುಮನಾಭಿಯಲ್ಲಿ ಪದುಮಜನ ಪೆತ್ತ ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ ಪದುಮ ಮಿಗಲು ಕಾಂತಿ ಪದುಮನಾಭನೆ11 ಧಾಮನಿಧಿಕುಲನು ಧಾಮನೆ ನಿರುತ ತ್ರಿ ಧಾಮನಿವಾಸ ಸುಧಾಮನ ಮಿತ್ರ ಧಾಮ ಪುಣ್ಯಧಾಮ ಭಕ್ತ ಹೃದ್ವನಜ ಧಾಮ ಮಧುಕರನೆ ದಾಮೋದರ ಧರ್ಮಾ 12 ಶಂಖ ಸುರಾಹರಾ ನಿಃಶಂಕ ಚರಿತ ಶಂಖಪಾಣಿ ಶಶಾಂಕ ಸುವದನ ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ ಸಂಕರುಷಣನುವುಜ ಸಂಕರುಷಣನೆ 13 ಪ್ರಧಾನ ಮೂರುತಿ ಪ್ರದ್ವೀಪ ವರ್ಣ ಸುಪ್ರದಾಯಕನೆ ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ14 ವಾಸುವಾನುಜ ಶ್ರೀನಿವಾಸ ಪುಂಡ್ರೀಕ ವಾಸುದೇವನ ಶಮನಪುರದಲ್ಲಿ ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ ವಾಸುದೇವ 15 ಅನುಗಾಲವು ನಿನ್ನ ಅನುಸರಿಸಿದೆ ನಾನು ಅನುಕೂಲವಾಗಿ ಎನ್ನನು ಸಾಕುವುದು ಅನುಮಾನವ್ಯಾತಕೆ ಅನಿಮಿತ್ತ ಬಂಧು ಅನಿರುದ್ಧ ಶ್ರೀಶಾ 16 ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ ಪುರುಷೇಶ್ವರ ತತ್ಪುರುಷಾದಿ ಪುರುಷ ಪುರುಷ ಬೀಜ ವೇದ ಪುರುಷ ಪರಮ ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ 17 ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ ಅಕ್ಷಯ ಪಾತ್ರಿಯ ಶಾಖಾದಳವನ್ನು ಅಕ್ಷಯ ಮಾಡಿದಧೋಕ್ಷಜ ಚಕ್ರಿ 18 ನರಸಖ ನರಹರಿ ನಾರಾಯಣ ವಾ ನರ ದಳನಾಯಕ ನಾರದ ವಿನುತ ನರಕ ಉದ್ಧಾರಕ ನರಕಾಂತಕ ಕಿ ನ್ನರ ಸುರನರೋರಗ ವೃಂದ ನರಸಿಂಹ 19 ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ ಸಚ್ಚರಾಚರದೊಳೂ ಗುಣಪರಿಪೂರ್ಣ ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ ಸಚ್ಚೂತ ಚುತಿ ದೂರ ಚಿನ್ಮಯ ರೂಪಾ 20 ಜನನ ಮರಣ ನಾಶ ಜನನಾದಿಕರ್ತಾಂ ಜನಸುತಗತಿ ಪ್ರೇಮಾಂಜನ ಗಿರಿಧಾಮ ಜನಕವರದ ಸಜ್ಜನರಘದಹನ ದು ರ್ಜನರ ಕುಲರಾತಿ ಜನಾರ್ದನನೆ 21 ವೀಂದ್ರವಾಹನ ಮಹೇಂದ್ರಧಾರನೆ ಗ ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ 22 ಹರಿ ಎನುತಾ ಹರಿ ಹರಿದು ಓಡಿ ಬರೆ ಹರಿದು ಪೋಗಿ ಪರಿಹರಿಸಿದ ಖಳನ ಹರಿ ಹರಿಯು ನಲಿವನೆ ಹರಿರೂಪ ಪರಿ ಹರಿನಾಮವೆ ಗತಿ ಹರಿ ಸರ್ವೋತ್ತಮಾ23 ಕೃಷ್ಣದ್ವಯಪಾಯನ ಉತ್ಕøಷ್ಟ ಮುನೇಶ ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ ಕೃಷ್ಣಾವತಾರ ಕೃಷ್ಣ ಕಮಲೇಶ 24 ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ ನಿನ್ನೊಳಗೆ ನೀನು ಬೀಯ ಬೀಜವನು ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ 25
--------------
ವಿಜಯದಾಸ
ತುಳಸೀ ದೇವಿ ಉದಯ ಕಾಲದೊಳೆದ್ದು ಮುದದಿಂದ ಶ್ರೀ ತುಳಸಿ ಸತಿ ಉದ್ಧರಿಸೆನ್ನನೆಂದು ಉದಕವೆರೆದು ನಮಸ್ಕರಿಸಿ ವಂದಿಸುತಲಿ ಸುಧೆಯ ಸುರರಿಗಿತ್ತ ಧನ್ವಂತರಿ ನಯನದಿ ಉದಿಸಿದೆ ಆನಂದ ಅಶ್ರುಗಳಿಂದಲಿ ಮದಗರ್ವ ಬಿಡಿಸೆನ್ನ ಶುದ್ಧಿಯನ್ನೆ ಮಾಡಿ ಹೃದಯದಿ ಹರಿಯ ತೋರಿ ರಕ್ಷಿಸೆಂದೆನಲು ಸದ್ದಿಲ್ಲದೆ ಪೊರೆವ ಗೋಪಾಲಕೃಷ್ಣವಿಠ್ಠಲ
--------------
ಅಂಬಾಬಾಯಿ
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1 ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2 ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3 ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4 ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5 ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6 ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7 ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8 ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9 ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10 ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಕೂಡು | ಸಾಯಾಸಗಳನೇ ಬಿಡು ಪ ಪಾದ ಕೂಡು ಸಾಯಾಸಗಳನೇ ಬಿಡು | ಸಾಧಿಸುವದು ನೋಡು ಸದ್ಗತಿಯ ಸುಖಾಡು 1 ತನುವಿಟ್ಟು ಧನವಿಟ್ಟು ಚರಣಕ ಮನಕೊಟ್ಟು | ಅನುವಾಗಿ ತಿಳಿಗಟ್ಟು ಮದಗರ್ವಗಳ ಬಿಟ್ಟು 2 ನಿನ್ನಾ ನೀ ತಿಳಿಯಣ್ಣಾ ಮ್ಯಾಲ ದೋರುದ್ಯಾಕ ಬಣ್ಣಾ | ಇನ್ನಾರೆ ದೆರಿಕಣ್ಣಾ ಆಗದಿರು ಮಸಿಮಣ್ಣಾ 3 ತನಗ ತಾನೇವೇ ಬಂಧು ತನಗೆ ತಾನೇ ಹಗೆಯೆಂದು | ವನಜಾಕ್ಷ ಹೇಳಿದುದು ಅನುಮಾನಿಲ್ಲಿದಕಿಂದು 4 ಇನ್ನೊಂದು ಸಾಧನಿಲ್ಲಾ ಇದರಿಂದಧಿಕವಿಲ್ಲಾ | ಮನ್ನಿಸಿ ಕೇಳಿರೆಲ್ಲಾ ಮಹಿಪತಿಜನ ಸೊಲ್ಲಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆನ್ನನಿಲ್ಲಿಗೆ ಎಳೆ ತಂದ್ಯೊ ಹರಿ ತಪ್ಪೇನನೆಸಿಗಿದೆನೊ ಪ. ಜೋಕೆಯಿಂದಲಿ ಎನ್ನ ಕಾಯಬೇಕಲ್ಲದೆ ನೂಕಿದರೆನ್ನನು ಸಾಕುವರ್ಯಾರೊ ದೊರಿ ಅ.ಪ. ಯಾರಿಗೇನೆಸಗಿದೆ ಆರ ನಾ ದೂಷಿಸಿದೆ ಆರ ನಾ ನಿಂದಿಸಿದೆನೊ ಕಾರದಿ ನೋಡಿದೆನೊ ಈ ರೀತಿ ನೊಂದೆನು 1 ವಿಧಿ ಬರಹದೊಳಿನ್ನು ವಿಧಿಪಿತ ನಿನ್ನ ಕಾಣಲಿಲ್ಲ ಮದಗರ್ವ ಬಿಡಿಸೆನ್ನ ಸದಮಲ ಹೃದಯದಿ ಪದ ಪದುಮವ ತೋರಿ ಉದ್ಧರಿಸೆನ್ನನು 2 ಸೃಷ್ಟಿಕರ್ತನೆ ಕೇಳೊ ಕಷ್ಟವಪಡಲಾರೆ ದೃಷ್ಟಿಲಿ ನೋಡಿ ಕಾಯೊ ಎಷ್ಟು ಬೇಡಲೊ ನಾನು ಬೆಟ್ಟದೊಡೆಯ ಹರಿ ವೃಷ್ಣೀಶ ಗೋಪಾಲಕೃಷ್ಣವಿಠ್ಠಲ ದೊರಿ3
--------------
ಅಂಬಾಬಾಯಿ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ ರಾಣೀ ನಾರೀ ಶಿರೋಮಣಿ ಪ ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು- ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ. ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ ಸರಸಿಜದಳ ಸುನೇತ್ರಿ ನಿಕರ ಸ್ತೋತ್ರಿ - ಶೋಭನಗಾತ್ರಿ ಕರುಣಾಸಾಗರೆ ಪವಿತ್ರಿ ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ- ಬರಧರೆ ಸುಂದರಿ ಎರಗುವೆ ಎನ್ನನು ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1 ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ ಸರ್ವರಿಗೆ ಮಹಾ ಪ್ರೀತೆ ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ ಪೂರ್ವದೇವತೆ ಹರಿಜಾತೆ ಉರ್ವಿಯೊಳಗೆ ಮದಗರ್ವದ ಮತಿನಾ- ನೋರ್ವನಲ್ಲದೆ ಮತ್ತೋರ್ವನ ಕಾಣೆನು ಪೂರ್ವಜನ್ಮದ ಪಾಪ ಪರ್ವತದಂತಿದೆ ನಿರ್ವಾಹವನುಮಾಡೆ ದೂರ್ವಾಂಕುರದಿ 2 ನಿಗಮಾಭಿಮಾನಿ ಸುಜ್ಞಾನಿ ಅಗಣಿತ ಫಲದಾಯಿನಿ ಝಗಝಗಿಸುವ ಕರಯುಗಳ ಭೂಷಣ ಪ - ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
--------------
ವಿಜಯದಾಸ
ವಿಷಯಾಸೆ ಬಿಡಲೊಲ್ಲದೋ ದೇವ ಪ. ವಸುದೇವಸುತ ನಿನ್ನ ವಶವಾಗೋತನಕ ಅ.ಪ. ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ 1 ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆÀಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ2 ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ3 ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] 4 ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ 5
--------------
ವಾದಿರಾಜ
ವಿಷ್ಣುಶತಕ ಶಿರಿದೇವಿ ಹೃತ್ಕುಮುದ ಚಂದ್ರಮನೆ ಕರುಣಾರ್ಣವಾಗಣಿತ ಸದ್ಗುಣನೇ ಭಂಜನ ಮುರಾಂತಕನೇ ಪರಮಾತ್ಮ ಪಾಲಿಸು ಪರಾತ್ಪರನೇ 1 ಕಮಲಾಸನಾದ್ರಿಜೆ ಮನೋಹರ ಮು ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ- ಹಾತ್ಮರಾದ ಗುರುಪಾದಕೆ ನಾಂ ನಮಿಸೀ ಪ್ರಬಂಧವನು ಹೇಳುತಿಹೇಂ2 ನೂರಾದ ಪದ್ಯಗಳೊಳಾಂ ಸಕಲಂ ಧಾರಾಳವಾಗಿ ತವ ಸನ್ನಿದಿಯೋಳ್ ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ 3 ಕವಿತಾ ಧುರೀಣತೆಯು ಬಂದುದು ನಿ_ ನವ ಯುಕ್ತಿ ಚತುರತೆಗಳೊಂದರಿಯೇಂ 4 ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ ದೇವೀ ಮನೀಷದೊಳು ಬ್ರಹ್ಮನಿಹಂ ಯಾ ವಿಶ್ವನಾಥ ಸಹ ರುದ್ರ ಮನೋ ಭಾವಂಗಳಿಂಗೊಡೆಯನಾಗಿರುವಂ 5 ಸಲೆ ಹಮ್ಮಿಗಾ ತ್ರಿಪುರ ಸಂಹರನೇ ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್ ಒಳಗಿದ್ದು ಒಳ್ಳಿದನು ಕೆಟ್ಟುದನೂ ಬಲವಿತ್ತು ಮಾಡಿಸುವರೈ ಹರಿಯೆ 6 ಜಲಜಾತ್ಮಜಾಭಿಮತ ಬಂಧು ಪಥಂ ಗಳು ಮೂರು ಬಗೆಯು ನೋಡಿದರೆ 7 ಮಿಗೆ ಕರ್ಮಕರ್ಮವು ವಿಕರ್ಮಗಳೂ ಜಗದಲ್ಲಿ ಎಲ್ಲರಿಗು ಮೂಲವಿದೂ ತ್ರಿಗುಣ ಪ್ರಬದ್ಧರಹ ಜೀವಗಣಾ ಖಗರಾಜ ವಾಹನನೆ ಸಾಕ್ಷಿಯು ನೀಂ 8 ಸದಸದ್ವಿವೇಕಾವನು ಕಾಣದೆ ಸ ಚಿದಚಿದ್ವಿಲಕ್ಷಣನು ನೀನೆನದೇ ಮದಗರ್ವದಿಂದ ಮೆರೆದಾಂ ಕೆಡುವೇಂ 9 ಕುಹುಕಾತ್ಮರಾದವರ ಸಂಗದಿ ಬಂ- ದಿಹ ನೋವು ನಾನಕಟ ಬಣ್ಣಿಸೇಂ10 ಅಂತವರ್ಗವಾರ್ವರು ಶರೀರದೊಳಿ ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್ ಪರಮಾತ್ಮ ನಿನ್ನವರ ಸೇರಿರುವೇಂ 11 ಮಲಮೂತ್ರ ಕೂಪವಹ ದೇಹವಿದು ಜಲಗುಳ್ಳೆ ಎಂದರಿತಡಂ ಬರಿದೇ ಕಲುಷಾತ್ಮನಾದೆ ಕರಿರಾಜವರದಾ 12 ಹಸನಾಗಿ ತೋರುತಿಹ ದುರ್ವಿಷಯಂ ಬಿಸಿನೀರು ತುಂಬಿರುವ ಬಾವಿಯಿದುಂ ಕುಸುಮಾಸ್ತ್ರನೆಂಬ ಕಡುಗಳ್ಳನು ತಾ ನೆಸಗೀ ಪ್ರವಾಹದಲಿ ನೂಕುತಿಹಂ13 ಪಾದ ಪದ್ಮಂಗಳ ನಂಬಿದೆ ವೆಂ- ಮ್ಮವಮಾನ ಮಾನಗಳು ನಿನ್ನದುದೆಂ- ದ್ವ್ಯವಸಾಯವಂತರೆ ಮಹಾತ್ಮಕರೂ 14 ಜನುಮಗಳನೆತ್ತುತಲಿ ಜೀವರು ನಿಂ ನನು ಕಾಂಬ ಯೋಚನೆ ತಿರಸ್ಕರಿಸೀ ಘನ ಕಾಮಭೋಗಗಳಪೇಕ್ಷಿಸಿತಾಂ ಧನಕಾಗಿ ದುರ್ಜನರ ಸೇವಿಸುವರು 15 ಹಿತದಿಂದ ಎಲ್ಲರಿಗೆ ನೀನೆ ಇದಂ ಮತಿಹೀನರಾದವರು ಬಾಹ್ಯರ ನಂ- ಬುತ ದುಃಖದಿಂದಲವಿವೇಕರಹರ್ 16 ಗುಣಶೂನ್ಯ ನೀನೆನುತ ಕೊಂಚ ಜನಂ ಗಣಿಸಲ್ಕಸಾಧ್ಯವಹ ವಾದಗಳಿಂ ಘನ ತರ್ಕದಿಂದ ಅನುವಾದಿಸಿ ದುರ್ ಜನ ಮುಖ್ಯರೆನಿಸುತಿಹರ್ ಭುವಿಯೊಳ್ 17 ಅನುಮಾನವೇ ತಮಗೆ ಮುಖ್ಯವೆನು- ತನುಸಾರಿ ರಾಜಸದಿ ತಾಂ ಮುಳುಗೀ ವನಜಾಕ್ಷ ಕೋರಿಕೆಗಳಿಂ ಭಜಿಪರ್ 18 ಉದರ ಪ್ರಯುಕ್ತ ಪರರಾಶ್ರಯಿಸಿ ಪದ್ಯ ಪದ್ಯ ಪೇಳಿ ಬಹುನೀಚನು ನಾ- ನುದಯಾಸಮುದ್ರರೆಲೆ ನೀವೆನುತೇ ಸುದುರಾತ್ಮರಂ ಪೊಗಳಿ ಕೆಟ್ಟೆನು 19 ಹಿತತತ್ವ ಭಾವದಲಿ ದುರ್ಜನರು ಮತಿವಂತರಂತೆ ಬಹಿಯೋಳ್ ನಟಿಸಿ ಸತಿ ಪುತ್ರ ವಿತ್ತಗಳ ಮೋಹದಲೀ ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್20 ಮೊದಲಾಗಿ ಎಲ್ಲರನು ಮಾಯದಿ ನಿ- ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್ ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ 21 ಅನುಮಾನವುಳ್ಳ ಜನಕೆಂದಿಗು ಪಾ- ಮೂರ್ತಿ ನಿನ್ನ ಘನ ಜ್ಞಾನ ಸುಖಂ ತೃಣ ಮಾತ್ರವೂ ಬರದು ಸ್ವಪ್ನದೊಳು ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ 22 ಗುರುಸೇವೆಯಿಂದ ತನುದಂಡಿಸಿ ತಾ ನಿರುತಂ ಸುಶಾಸ್ತ್ರಗಳ ನೋಡುತಲಿ ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ ಹರಿಭಕ್ತರಿಂದ ಕಡೆಸೇರುತಿಹಂ 23 ಕವಿಯಾದವರ್ ನಿರುತವುಂ ಮಿಗೆ ಭಾ- ಗವತಾದಿ ಗ್ರಂಥಗಳ ಸಜ್ಜನರಿಂ ಕಿವಿಯಿಂದ ಕೇಳುವುದಕಂ ಬಹು ಜ- ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ 24 ಹರಿಕೃಷ್ಣ ಕೇಶವ ಮುಕುಂದ ನೃಕೇ- ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ ಪದ್ಮನಾಭ ಮಧುಸೂದನ ಹೇ ಪುರಷೋತ್ತಮೌಚ್ಯುತ ಜನಾರ್ದನನೇ 25 ವಸುದೇವ ನಂದನ ಮುರಾಂತಕನೇ ಹೃಷಿಕೇಶ ನಾರೇಯಣ ಮಾಧವನೇ ಪರಿ ಪಾ- ಲಿಸುಪೇಂದ್ರ ಭಕ್ತರ ಅಧೋಕ್ಷಜನೇ 26 ಪರಮಾತ್ಮ ನೀನೆಮಗೆ ಎನ್ನುತನಂ- ಬರು ನಿನ್ನ ತಾಮಸರು ಸತ್ಯವಿದು ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ- ಸರಣ ಪ್ರವಾಹದೊಳು ಬೀಳುತಿಹರ್ 27 ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ ಘನ ಮೋಹ ದುಃಖದೊಳು ಸತತ ನಿ- ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ 28 ನ್ನನು ನಂಬಿ ನಂಬಿದಲೆ ತಾವ್ ನಿರತಂ- ಘನ ಕಾಮ ಕ್ರೋಧ ಮದ ಮತ್ಸರದಿಂ ಜನದಿಂದ ಯತ್ನವನು ಮಾಡುತಿಹರ್ 29 ದೇವಾದಿದೇವ ದಿವಿ ಭೂಮಿಗಳೋಳ್ ಭಾವ ಪ್ರಭೇದದಲಿ ಧ್ಯಾನಿಪರಿಂ- ಗೀ ವೇಷ್ಟಸಿದ್ಧಿಗಳ ನೀನೆ ಸದಾ 30 ಯೋಗಿ ಜನವಂದಿತ ಸ- ಜ್ಜನಕಲ್ಪವೃಕ್ಷ ಜಗದೇಕ ವಿಭೋ ವನಜಾಕ್ಷ ಇಂದಿರೆಯ ವಲ್ಲಭ ಬ್ರಾ- ಹ್ಮಣ ಪ್ರೀಯ ಭಕ್ತಸುಖದಾಯಕನೇ 31 ರವಿಕೋಟಿತೇಜ ರಮಣೀಯ ಕಥಾ- ತವನಾಮ ಕೀರ್ತನೆಯ ಮಾಳ್ಪರ ಪಾ- ಪವ ನೀನೆ ಓಡಿಸುವುದೇನರಿದೈ 32 ವರಾಹ ನೃಕೇ- ಸರಿ ವಾಮನಾವನಿ ಸುರೋತ್ತಮ ಭಾ- ಸ್ಕರ ವಂಶ ಚಂದ್ರವಸುದೇವಜ ಭಾ ಬುದ್ಧ ಕಲ್ಕ ವಪುಷೇ ನಮಃ 33 ಮುನಿಕರ್ದಮಂಗುದಿಸಿ ತಾಯಿಗೆ ಪಾ ವನ ರಾಜಯೋಗವನು ಬೋಧಿಸಿದೈ ಘನಯೋಗಿವರ್ಯ ಕಪಿಲಾಖ್ಯನೆನಿ- ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ 34 ರ್ಜುನ ಕಾರ್ತವೀರ್ಯಗುಪದೇಶಿಸಿದೇ ಘನಯೋಗ ಬೋಧೆಯನು ಹೈಹಯರ್ ತಾ ವನುವಾದ ಶಿಷ್ಯರೆಲೆದತ್ತವಿಭೋ 35 ಋಷಭಾಖ್ಯನಾಗಿ ಸುತರಿಂಗೆ ಮಹಾ ಋಷಿಚರ್ಯ ಬೋಧಿಸಲವರ್ ತಿಳಿದು ದಶಯೋಗಿವಂದಧಿಕ ಎಂಬತ್ತು ಭೂ- ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ 36 ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ ಅಂಭೋಜನಾಭ ತವನೇಮದಲೀ 37 ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು ರ್ನರರನ್ನು ಕೊಂದು ಶರಣಾಗತರಂ ಪರಿಪಾಲಿಸುತ್ತಿರುವೆ ಸಂತತವುಂ 38 ಕಲಿಕಾಲವೀಗ ಖಳರೆಲ್ಲರು ಸ- ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ ಬಲುಬಾಧಿಸುತ್ತ ದುರಿತಂ ಘಳಿಸೇ ನರಕಂಗಳಲ್ಲಿ ನೆರೆಯಾಗುತಿಹರ್ 39 ಪರಮಾತ್ಮ ತತ್ವದಲಿಯೇ ಮರವು ದುರ್ವಿದ್ಯವಭ್ಯಸಿಪುದಕೆ ಮನವು 40 ಪರರನ್ನು ನೋಡಿಯವರಂತೆ ತಾ ವಿರಬೇಕೆನ್ನುತ್ತಲನಿಶಂ ಬಳಲೀ ಗುರುಯತ್ನಮಾಡಿ ವಿಫಲಾಗಲು ಶ್ರೀ ಹರಿ ನಿನ್ನದೂರುತಿರುವರ್ ದುರುಳರ್41 ಕರ್ಣ ಮುಖರಿಂದಲಿ ಸಂ ಗರದಲ್ಲಿ ಕಾದಿ ಮಡಿದಂ ಬರಿದೇ42 ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್ ಭ್ರಮೆಯಿಂದಲನ್ನಕಸುಗಳ್ ತೊರೆದರ್ 43 ಯಮಜಂ ವೃಕೋದರನು ಫಲ್ಗುಣನೂ ಯಮಳರ್ ತವಾಂಫ್ರಿಸ್ಮøತಿಯೇ ಬಲವಾ- ಗಿ ಮಹಾಪದಂಗಳನು ದಾಂಟಿದರೈ ಸುಮಬಾಣನಯ್ಯನೆ ಮಹಾತ್ಮರವರ್ 44 ಹರಿ ನಿನ್ನ ಡಿಂಗರಿಗರಿಗಾಶ್ರಯವೇ ವರಭಾಗ್ಯ ನಿತ್ಯಸುಖವೆನ್ನುತಲೀ ಅರಿದುತ್ತಮರ್ ಬಯಸರೆಂದಿಗು ಪಾ- ಮರರಂತೆ ತುಚ್ಛಗಳ ಸ್ವಪ್ನದೊಳು 45 ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ ಗಳ ಗೃಹಕ್ಷೇತ್ರ ಸುತದಾರ ಧನ- ಗಳ ನಿತ್ಯವೆಂದರಿದು ಲೆಕ್ಕಿಸದೇ ಜಲಜಾಕ್ಷ ನಿನ್ನ ಭಜಿಪರ್ ಸುಜನರ್ 46 ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ ನಿತ್ಯ ನಿರವದ್ಯ ಸ್ವಭಾ ವಜ ಕರ್ಮದಿಂ ಸಕಲ ಪ್ರಾಣಿಗಳೂ ನಿಜಯೋಗ್ಯತೆಯಂತೆ ವರ್ತಿಪುದು 47 ಕರುಣಾನಿಧೇ ಕಮಲಲೋಚನನೆ ಸು- ರರಾಜ ಸೋದರನೆ ಭಾವಜನೈ ಯರಮಾಧಿನಾಥ ಯದುವಂಶ ಭೂ ರಥಾಂಗ ಪಾಣಿಯೆ ಜನಾರ್ದನನೇ 48 ರಘುವಂಶಕೇತು ರವಿಮಂಡಲದೋಳ್ ಭಗವನ್ನಿರಂತರದಿ ನೀನಿರುತೆ ಜಗಕೆಲ್ಲ ಕಾಲದನುಸಾರದಿ ನೀ ನಘನಾಳಿಯಿಂದ ಮಳೆಯಂ ಕೊಡುವೇ 49 ವಿಭುದಾಗ್ರಗಣ್ಯರಹ ಜ್ಞಾನಿಗಳೂ ಶುಭವನ್ನು ಲೋಕಕೆ ಸದಾಚರಿಸಿ ನಭ ಭೂಮಿ ಮಧ್ಯದಲಿ ಕೀರ್ತಿ ಸೌ- ರಭವಾಗಿ ಸ್ಥಾಪಿಸಿ ವಿಮುಕ್ತರಹರ್ 50 ಯೋಗ ಪ್ರವರ್ತನೆಯಲೇ ಸುಖಿಸಿ ರೋಗಾದ್ಯುಪದ್ರಗಳು ಇಲ್ಲದಲೇ ರಾಗಾದಿ ದೋಷಗಳ ಸುಟ್ಟಿರುವರ್ 51 ಮನವಾಕ್ಕು ಕಾಯಗಳೊಳೊಂದೆ ವಿಧಂ ಋಣಮುಖ್ಯ ಸೂತಕಗಳಿಲ್ಲದೆಲೇ ಗುಣವಂತರೆನ್ನಿಸಿಯೇ ಶೋಭಿಸುತಾ ಜನದಲ್ಲಿ ಮೌನದಲಿ ವರ್ತಿಸುವರ್ 52 ನರರೊಳ್ ದಿವೌಕಸರು ಪುಟ್ಟುತಲೀ ಹರಿಭಕ್ತಿಯುಕ್ತರೆನಿಸುತ್ತಲಿಸ- ತ್ವರದಿಂದ ಸಾಧನವ ಮಾಡುತಲೀ<
--------------
ಗುರುರಾಮವಿಠಲ
ಹ್ಯಾಂಗೆ ನೀ ದಾಸನಾದೆ ಪ್ರಾಣಿ ಪ ಭವ ಭಂಗವ ಪಡುವವನು ಅ ಆಸೆಯ ಬಿಡಲಿಲ್ಲ ಕಾಸು ಗಳಿಸುವೆಯಲ್ಲದೋಷಕ್ಕೆ ಗುರಿಯಾಗಿ ಹೇಸಿಕೆಯೊಳು ಬಿದ್ದು 1 ತನುವು ತನ್ನದು ಎಂದು ತನಯ ಮಾನಿನಿಯರೆತನಗೆ ಗತಿಯೆಂದು ನಂಬಿರುವ ಮೂಢನೆ 2 ಕಾಲನ ದೂತರು ಕರುಣಸಂಪನ್ನರೆಕಾಲ ವ್ಯರ್ಥದಿ ಕಳೆವ ಕೀಳು ಬುದ್ಧಿಯ ಪ್ರಾಣಿ3 ತಲೆ ಹುಳಿತ ನಾಯಂತೆ ಹಲವು ಬೀದಿಯ ತಿರುಗಿಗೆಲುವಿನಿಂದಲಿ ಮೂಲ ಮಲವನಳಿಯದೆ4 ಉದರಪೋಷಣೆಗಾಗಿ ಅಧಮರ ಯಾಚಿಸುತಮದಗರ್ವವೆಂಬುವುದ ಬದಿಯಲ್ಲಿ ಇಟುಗೊಂಡು 5 ಹಿರಿಯರ ನಿಂದಿಸಿ ಹರಿದಾಸನೆನಿಸಿದೆಗುರುಮಂತ್ರವರಿಯದ ಮರುಳು ಪಾಮರ ಪ್ರಾಣಿ6 ಕಾಲುಗೆಜ್ಜೆಯ ಕಟ್ಟಿ ಮೇಲೆ ಕರತಾಳ ತಟ್ಟಿಶ್ರೀಲೋಲನ ಗುಣ ಪೊಗಳಿ ನಟಿಸದಲೆ 7 ಕುಣಿಕುಣಿದು ಮನದಣಿದು ಮಣಿದು ಸಜ್ಜನ ಪದಕೆಅಣಿಮಾದಿ ಅಷ್ಟಸಿದ್ಧಿಯನು ಕೈಗೊಳ್ಳದಲೆ 8 ಭಾಗವತ ಕೇಳದೆ 9 ಕಟ್ಟಿ ಕೈ ಪರರಲಿ ಹೊಟ್ಟೆಗೋಸುಗವೆ ಕಂ-ಗೆಟ್ಟು ಯಾಚಿಸುವ ಭ್ರಷ್ಟಪ್ರಾಣಿಯೆ ನೀನು 10 ನೇಮದಿ ಉಪವಾಸ ಆ ಮಹಾ ಏಕಾದಶಿಕಾಮಜನಕನನು ಪ್ರೇಮದಿ ಸ್ಮರಿಸಿದೆ11 ಏಸುದಿನ ಬದುಕಿದರು ಸೂಸುವ ಪಾಪವಈಸಿ ದಾಟದೆ ಕಾಸುವೀಸಕೆ ಬಾಳಿದವ 12 ಮೂರ್ತಿ ಪಾದಂಗಳ ಮನದಲಿ ಹಿಂಗದೆ ಭಜಿಸದೆ 13 ಬತ್ತಿ ಹೋಯಿತು ನದಿ ಬಿತ್ತದೆ ಬೆಳೆಯದೆಅತ್ತರೆ ಬಹುದೇನೊ ಉತ್ತಮ ಫಲ ಸೂಸಿ14 ಆಡುವ ಮಕ್ಕಳ ಕೈಗೆ ನೀಡದೆ ಕಡಲೆಯಬೇಡಿದರೆ ಕೊಟ್ಟು ಕೂಡಿ ಆಡದವನು ನೀ 15 ಶೃಂಗಾರ ಬಯಸುತ ಬಂಗಾರದೊಡವೆಯಹಿಂಗದೆ ಶ್ರೀ ತುಲಸಿಯ ರಂಗಗರ್ಪಿಸದೆ 16 ಸುತ್ತ ಕತ್ತಲೆ ಚಿಂತೆ ಮತ್ತೆ ಭಯದ ಭ್ರಾಂತಿಚಿತ್ತಜನಯ್ಯನು ದೊರೆವ ಬಗೆ ಕಾಣದೆ 17 ಡಂಬವ ಮಾಡಿಕೊಂಡು ತುಂಬ ಪಾಪ ಒಳಗೆಹಂಬಲಿಸಿದರಿನ್ನು ಬೆಂಬಲಕಾರುಂಟು 18 ದುಂಡು ನಾಮವ ಬಳಿದು ಭಂಡತನದಲಿ ಜಗದಿದಂಡಿಗೆ ಬೆತ್ತ ಪಿಡಿದು ಹೆಂಡಿರ ಕಾಯ್ವನೆ 19 ಹಕ್ಕಿವಾಹನನ ಗುಣ ಲೆಕ್ಕಿಸಿ ಪೊಗಳದೆಬೆಕ್ಕಸ ಬೆರಗಾಗಿ ಅಕ್ಕಿಗೆ ತಿರುಗುವವ 20 ಪಾದ ರಾಗದಿ ಭಜಿಸದೆಕಾಗಿನೆಲೆಯಾದಿಕೇಶವರಾಯನೆನದೆ21
--------------
ಕನಕದಾಸ
ಬಾ ಬಾರೋ ಬಾರೋ ಬೇಗ ಬಾರೊ ಮುರವೈರಿ |ಬಾರೋ ಮುರವೈರಿ |ಬಾರೋ ಮುರವೈರಿ ತೋರೋ ದಯವ ಶೌರೀ ಪನೀನಲ್ಲದಲ್ಲದೆಮ್ಮ ಇನ್ಯಾರು ಇನ್ನು ಪೊರೆವರು |ಯಾರು ಇನ್ನು ಪೊರೆವರೂ | ಯಾರು ನª À ್ಮು ಕರೆವರೂ 1ಕಾಯದೊಳು ಮಾಯತುಂಬಿ| ಪ್ರಾಯ ಮದಗರ್ವದೀ |ಪ್ರಾಯಮದಗರ್ವದೀ | ಹೇಯವಾದೆ ಸರ್ವದೀ 2ಬಂಧುಗಳು ಬಾಂಧವರೆಂದೆಂದು | ಮನ ಬಂದದಿ |ಎಂದು ಮನ ಬಂದದೀ| £Éೂಂದೆನು ಗೋವಿಂದನೇ 3
--------------
ಗೋವಿಂದದಾಸ