ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ದಶಾವತಾರ ಅಂಜಿ ಬಿಡಲಿ ಬ್ಯಾಡೋ ಮುಂದಕೆ ಮುಂದೆ ಅಂಜಿ ಕೂಡಲಿ ಬೇಕೋ ಹಿಂದಕೆ ಪ ಅನಿಮಿಷಾಗತ ರೂಪ ನೋಡಿದ್ಯಾ ಮತ್ತೆ ಘನ ಕಮಲೇಶನೆಂದಾಡಿದ್ಯಾ ಒಳ್ಳೆ ವನಚದರೆಪಿ [?] ಯೆಂದೋಡಿದ್ಯಾ ಮತ್ತೆ ಮನುಜ ಮೃಗನ ಕಂಡಂಜಿದ್ಯಾ ನರ- ಸನುಮತದೀಕ್ಷಿಸು ಮತ್ಸ್ಯಕಚ್ಛಪ ರೂಪಾ ಧನುಜ ಸಂಹಾರಕಾಗಿ ವರನರಸಿಂಹರೂಪ 1 ವಟುರೂಪದಿ ದಿಟವೆಂದಾಡಿದ್ಯಾ ಮತ್ತೆ ಕಠಿಣಪರಷು ಕಂಡೋಡಿದ್ಯಾ ನರ- ವಟುರಾವಣಾದಿ ಕಂಡಂಜಿದ್ಯಾ ಮತ್ತೆ ಭಟ ಮುಷ್ಠಿಹರನಂದಾಡಿದ್ಯಾ ನರ- ಧಟ ಹರವಾಮನ ಪರಶುರಾಮರೂಪ ಸಟೆಯಿಲ್ಲ ತಿಳಿ ಶ್ರೀ ರಾಮಕೃಷ್ಣರೂಪ 2 ನನ್ನ ರೂಪವ ಕಂಡಂಜಿದ್ಯಾ ಮತ್ತೆ ಸುಜ್ಞ ಹಯವದನನೆಂದಾಡಿದ್ಯಾ ಕರಿ ವಿಘ್ನನಾಶಕ ಬೌದ್ಧಕಲಿಕೆಯು ಧ್ಯಾನ ಮಗ್ನನಾಗೆವರನ್ನು ಕಂಡಿದ್ಯಾ ನರ ಪ್ರಜ್ಞವಿರಲಿ ಪತ್ತುಪಾವನ ರೂಪನ ಸುಜ್ಞ ನರಸಿಂಹವಿಠ್ಠಲನಾಣೆ ಸಾರುವೆ 3
--------------
ನರಸಿಂಹವಿಠಲರು
ವೆಂಕಟ ಕೃಷ್ಣವಿಠಲ | ಲೆಂಕನನ ಸಲಹೋ ಪ ಪಂಕಜೋದ್ಭವ ಪಿತನೆ | ವೆಂಕಟೇಶಾ ಅ.ಪ. ಅಬುಜ ಜಾಂಡೋದರನೆ | ಶಬರಿ ಎಂಜಲನುಂಡೆಕುಬುಜೆಗಂಧಕೆ ಒಲಿದು | ಸದ್ಗತಿಯನಿತ್ತೆಇಭವರದ ನೀನಾದೆ | ಕುಲಶೀಲನೆಣಿಸದಲೆವಿಭುವೆ ಈ ಭಕುತಂಗೆ | ವೈಭವವ ತೋರೋ 1 ಮಧ್ವಮತ ತತ್ವದಲಿ | ಶುದ್ಧ ಭಕುತಿಯ ತೋರ್ಪಶ್ರದ್ಧಾಳು ಎನಿಸಿಹನು | ಬುದ್ಧಿ ಪೂರ್ವಾಸಿದ್ಧಾಂತ ತಾತ್ಪರ್ಯ | ಬುದ್ಧಿಗೆಟಕೂವಂತೆಉದ್ಧರಿಸ ಬೇಕಿವನ | ಅಬ್ದಿಜೆಯ ರಮಣ 2 ನೀಚೋಚ್ಚ ತರತಮದ | ಸ್ವಚ್ಛ ಜ್ಞಾನವ ನೀಯೊಮತ್ಸ್ಯಕಚ್ಛಪರೂಪಿ | ಸಚ್ಚಿದಾನಂದಾನಿಚ್ಚ ನಾಮಸ್ಮರಣೆ | ಸ್ವಚ್ಛ ಪೇರ್ಮೆಲಿ ಗೈವಉತ್ಸಾಹ ಇವಗಿತ್ತು | ಉದ್ಧರಿಸೊ ಹರಿಯೇ 3 ವ್ಯಾಜ ಕರುಣೀ4 ಪಾಕ್ಕು ಕರ್ಮವ ಕಳೆದು | ಲೋಕದಲಿ ಸತ್ಕೀರ್ತಿಬೇಕಾದ ವರಗಳನೆ | ತೋಕನಿಗೆ ಈಯೋನಾಗನದಿ ಪಿತ ಗುರೂ | ಗೋವಿಂದ ವಿಠ್ಠಲನೆವಾಕು ಮನ್ನಿಸಿ ಕಾಯೋ | ಶ್ರೀ ಕರಾರ್ಜಿತನೇ 5
--------------
ಗುರುಗೋವಿಂದವಿಠಲರು