ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣದೇವ ನೀ ಕಾಯೊ ಕರುಣಿ ಸತತ ಪಾಲಿಸು ಸುಖದಾತ ಪ. ಪ್ರಣಾಪಾನವ್ಯಾನೊದಾನತೋಷ ಭಾರತೀಶ ಅ.ಪ. ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ 1 ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ ಸತ್ವ ಗುಣದ ಜೀವರ ಸದ್ಗತಿದಾತ ಸುಜ್ಞಾನ ಪ್ರದಾತ 2 ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ 3
--------------
ಅಂಬಾಬಾಯಿ
ಕಂಡೆ ಗುಣಗಣ ಸಾಂದ್ರಳಕೈಕೊಂಡೆ ಮುಕ್ತಿ ಫಲಗಳ ಪ.ಶೃತಿ ತತಿಗಳಿಂದ ಯುಕ್ತಳಲಕ್ಷ್ಮೀಪತಿಯ ದಯಕೆ ಪೂರ್ಣ ಪಾತ್ರಳಅತಿ ಭಕ್ತಿಯಿಂದ ಯುಕ್ತಳಮಧ್ವಮತಕ ಹಿತದಿಂದ ವ್ಯಾಪ್ತಳ 1ವ್ಯಾಳಾಶಯನನ ಭಕ್ತಳಗುಣಹೇಳಿದೆಮ್ಮ ಸುಶಕ್ತಳೆಏಳು ಲೋಕದಿ ವ್ಯಾಪ್ತಳಕರುಣಾಳು ಎನಿಸುತಿಪ್ಪಳ 2ರಮಿಯ ರೂಪಳೆ ರುಕ್ಮಿಣಿಯದಿವ್ಯ ಪ್ರಮೇಯ ತಿಳಿಸಿದೆ ಭಾಮಿನಿಅಮಿತ ಮಹಿಮಳೆಕಾಮಿನಿನಮಗೆ ಸುಮತಿದಾತಳೆ ಸುಗುಣಿ ನೀ 3
--------------
ಗಲಗಲಿಅವ್ವನವರು