ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ಬಗೆಯಿಂದ ಸಲಿಗೆಯನಿತ್ತಿಯೊ ಮಾವಮರ್ದನ ರಂಗ ನಿನ್ನ ದಯಾ ತಿಳಿಯದು ಪ ಅಂದರೆ ಆನಂದ ಅನಂದದೇ ಅನಾನಂದ ನಿಂದದೆ ಗೋಕುಲ ನಿಲದದೆ ವ್ಯಾಕುಲ ಬಂದದೆ ಪುರುಷಾರ್ಥ ಬಾರದಿದ್ದರೆ ವ್ಯರ್ಥ ಮಂಧರಧರ ನಿನ್ನ ಮನಸು ಬಂದದ್ದೆ ಸರಿ 1 ಕೊಟ್ಟದ್ದೆ ಪುರುಷಾರ್ಥ ಕೊಡದಿಪ್ಪದೆ ಅನರ್ಥ ಅಟ್ಟಿ ಬರುವ ಪಾಪ ಸುಟ್ಟು ಬಿಡು ನಿರ್ಲೇಪ ತಟ್ಟಿದುದೆ ವೇದಾರ್ಥ (ತಟ್ಟದದೆ) ಮಿಥ್ಯ ವಿಠ್ಠಲ ನಿನ್ನ ಭಕ್ತರಿಗೆ ನೀ ಬಲು ಸುಲಭಾ 2 ದೆರಗಲು ಆಕ್ಷಣವೆ ಸಿದ್ಧ ಮಾಳ್ಪೆ ಕರುಣ ನಿಧಿಯೆ ನಮ್ಮ ವಿಜಯವಿಠ್ಠಲ ನಿನ್ನ ಸರಿಯಾದ ದೇವರನು ಕಾಣೆ ತ್ರಿಭುವನದಲ್ಲಿ3
--------------
ವಿಜಯದಾಸ
ಚಾರು ಕೋರಿ ಸ್ಮರಿಸುವೆನು ಹರಿಯೆ ಪ ಕಾರುಣ್ಯ ಸಾಗರ | ಪರಮಕೃಪಾಕರ | ಸಾರಸುಗುಣ ಗಂ | ಭೀರ ರಮಾವರ|| ಠಾರ ಭುವನೋ | ದ್ಧಾರ ದೀನೋ | ದ್ಧಾರ ಹತ್ತವ | ತಾರ ಶ್ರೀಹರಿ1 ಚಂದದಿ ಪೂಜಿಸಿ ದೇವ || ಕಂದರ್ಪನಯ್ಯನೆ | ಮಂಧರಧರನೆ ಮು | ಕುಂದ ಗೋವಿಂದ | ಬೃಂದಾರಕ ವಂದ್ಯ || ನಂದಕಂದನೆ | ಸಿಂಧುಶಯನನೆ | ಹರಣ ಜಗದಾ | ನಂದಮೂರುತಿ | ವೆಂಕಟೇಶನೆ 2
--------------
ವೆಂಕಟ್‍ರಾವ್
ಪೇಳಲೇನು ವಿಧಿಯ ಲೀಲೆಯ ಮಹಿಮೆ ಪ ವ್ಯಾಳಶಯನನ ಸಂಕಲ್ಪದಂತಿಹುದು ಅ.ಪ. ಮೂರ್ತಿ ನೋಡುವ ಕಂಗಳು ಅಂಗನೆಯರ ರೂಪ ನೋಡಲೆಳಸಿದವು 1 ಶ್ರೀ ರಮಣನ ಕಥೆ ಕೇಳುವ ಕರ್ಣಗಳು ವಾರನಾರಿಯರ ವಾರ್ತೆಗೆ ಸೋತವು 2 ಮಂಧರಧರನ ನಿರ್ಮಾಲ್ಯವನೊಲ್ಲದೆ ಸುಂದರಿಯರ ಮೈ ಗಂಧ ಬಯಸಿತು ಘ್ರಾಣ 3 ಹರಿಯ ಪ್ರಸಾದವು ಭುಜಿಸದೆ ಜಿಹ್ವೆಯು ಪರಮ ನಿಷಿದ್ಧ ಪಾನ ಭೋಜನ ಬಯಸಿತು 4 ರಂಗನ ಭಕ್ತರ ಸಂಗವ ಬಿಟ್ಟು ಸ್ಪರ್ಶ ಅಂಗನೆಯ ದೇಹಾಲಿಂಗನ ಬಯಸಿತು 5 ಶ್ರೀನಿಕೇತನ ನಾಮ ನುಡಿಯುವ ನಾಲಿಗೆ ದೀನ ಕಾಮಾತುರ ನುಡಿಯಲಿ ನಲಿಯಿತು 6 ಪಾದ ಸ್ಮರಣೆಯ ಬಿಟ್ಟಾ ಮನ ತರುಣಿಯರು ಸದಾ ನೆನೆಸಿತು ಅಕಟಾ 7
--------------
ವರಾವಾಣಿರಾಮರಾಯದಾಸರು
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು
ಏನು ಫಲ ಇದು ಏನು ಫಲಏನು ಫಲ ಇನ್ನೇನು ಫಲಪಬೇವಿನ ಮೂಲಿಕೆ ಬೆಲ್ಲವ ಸುರಿದರೆಹಾವಿಗೆ ಹಾಲೆರೆದಷ್ಟೆ ಫಲಮಾವಿನ ಮರದಡಿ ಗಾಯನ ಹಾಡಲುಸಾವಿನ ಮನೆಯೊಳಗತ್ತ ಫಲ1ಕೋಣನ ಮುಂದೆ ವೀಣೆಯ ನುಡಿಸಲುಮಾಣಿಕ್ಯ ಮರ್ಕಟಗಿತ್ತ ಫಲಶ್ವಾನನ ಬಾಲವ ನಳಿಗೆಯೊಳಿಟ್ಟರೆಹೀನ ಕುಲಜ ಮಡಿಯುಟ್ಟ ಫಲ2ಮೂರ್ಖಗೆ ಬುದ್ಧಿಯ ಮಾತನು ಪೇಳಲುಗೋರ್ಕಲ್ಲ ಮೇಲೆ ಮಳೆ ಹೊಯ್ದ ಫಲಊರ್ಕತಿ ಕಂಟಕನಾಗಿಹ ಮನುಜನುನೂರ್ಕಾಲ ಬದುಕಿದರೇನು ಫಲ3ಸೂಳೆಯ ಬಳಿಯಲಿ ಅಂತರ್ಯ ನುಡಿದರೆಗಾಳಿಗೆ ಕಸ್ತೂರಿ ಇಟ್ಟ ಫಲಕೋಳಿಯ ಕಾಲಿಗೆ ಗೆಜ್ಜೆಯ ಕಟ್ಟಲುನೀಲಿಯ ನೀರೊಳು ತೊಳೆದ ಫಲ4ಹಂದಿಯ ಕೊರಳಿಗೆ ಹಾರವ ಹಾಕಲುಅಂಧಗೆ ಕನ್ನಡಿ ಕೊಟ್ಟ ಫಲಮಂಧರಧರ ಗೋವಿಂದನೋಳ್ವೈರದಿಇಂzÀ್ರನು ಮಳೆ ಸುರಿದ ಫಲ5<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ