ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಧಿಯು ದೊರಕಿತು ಎನಗೆ ನಿಧಿಯು ದೊರಕಿತು. ವಿಧಿ ಭವಾದಿ ದೇವರೆಲ್ಲ ಒದಗಿ ಮಾನದಿಂದ ಕಾಯ್ವ ಪ. ನಿತ್ಯ ಮಂಗಳೆಯನು ತನ್ನುರ ಸ್ಥಳದಲಿ ಧರಿಸಿರುವದು ಎತ್ತ ನೋಡಲಲ್ಲಿ ನಲಿವ ಭೃತ್ಯಪೂರ್ಣಾರ್ಥ ಕೊಡುವ 1 ಕಷ್ಟ ಕಲುಷವೆಂಬ ದೊಡ್ಡ ಬೆಟ್ಟವೆಲ್ಲ ಭೇದಿಸುವುದು ಇಷ್ಟ ಲಾಭ ಪುಷ್ಪ ಜ್ಞಾನ ದೃಷ್ಟಿಸಹಿತ ಕೊಟ್ಟು ಕಾವ 2 ಹಲವು ಭವದ ತಾಪವನ್ನು ಕಳೆದು ಕೃಪಾರಸವ ಸೂಸಿ ಮಧ್ಯಪೊಳೆವಪೂರ್ವ 3 ಸೋತು ಸಕಲ ಜನರ ಮುಂದನಾಥನಾಗೆ ಕರುಣಿ ಜಗ- ನ್ನಾಥದಾಸರೊಲಿದು ಪರಮ ಪ್ರೀತಿಯಿಂದ ತೋರಿದಂಥ 4 ಇಹ ಪರತ್ರ ಸುಖವನೀವ ಮಹದುಪಾಸ್ಯ ಪಾದಪದ್ಮ ವಹಿಸಿದವರ ಸಕಲಭಾಗ್ಯ ನಿವಹಿ ವೆಂಕಟೇಶನೆಂಬ 5
--------------
ತುಪಾಕಿ ವೆಂಕಟರಮಣಾಚಾರ್ಯ
ನುಡಿದಂತೆ ನಡಿಯಬೇಕು ಪಿಡಿದು ಸುಪಥ ಧ್ರುವ ಸಾಧಿಸಿ ತಿಳಿಯದೆ ತನ್ನೊಳು ಖೂನ ಬೋಧಿಸಿ ಹೇಳುದು ಇನ್ನೊಬ್ಬರಿಗೇನ ಅದಿತತ್ವದ ಗತಿಯ ನಿಜಸ್ಥಾನ ಭೇದಿಸುವುದು ಸದ್ಗುರು ಕೃಪೆ ಙÁ್ಞನ 1 ನಡೆನುಡಿ ಒಂದಾದರೆ ಬಲು ಮೇಲು ದೃಢಭಕ್ತಿಗೆ ಒಂದಿದೆ ತಾ ಕೀಲು ಪಡೆವದು ಮನಮಾಡಿ ಮೀಸಲು ಬಿಡದೆ ಮಾಡುವ ಗುರು ದಯ ಕೃಪಾಳು 2 ಹೇಳಿಕಿಗಿದೆ ಬಿದ್ದದೆ ಬಲುಜನ ತಿಳುಹಿಸಿಕೊಡಲಿಕ್ಕಿಲ್ಲದೆ ಙÁ್ಞನ ತಿಳಿವು ತಿಳಿದರೆ ತನ್ನೊಳು ನಿಧಾನ ಹೊಳವ ಮಹಿಪತಿ ಗುರು ನಿಜ ಚಿದ್ಘನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು