ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲರುಣಿಯ ಶಯ್ಯ ಪವನಾ |ಕಾವೇರಿ ಕೂಲಗ ಚೆನ್ನಾ | ಬಾಬಾರನ್ನಾ ಪ ಕಾಳಿರಮಣನುತ | ಕಾಳಿಂದಿಯ ಮನಕೀಲಾಲಜ ರವಿ | ಬಾಲ ಗೋಪಾಲಾ ಅ.ಪ. ಜಾಣಾ | ನೀರದವರ್ಣಾ | ಜಟೆ ಹೇಮವರ್ಣಾ | ಭಕ್ತ ಪಾವನ್ನಾ |ಮೌನಿ ಕುಲಕೆ ಸನ್ಮಾನ್ಯ ಪರಾಶರಮುನಿ ಸಂಭವ ತವ ಚರಣಕೆ ಶರಣು 1 ಅಹಿ | ಪೇಂದ್ರ ವಂದ್ಯ ಮನಮಂದಿರ ಚಂದಿರ ನಂದವನೀಯೋ 2 ಹೃದ್ಯಾ | ಅಚ್ಛೇದ್ಯ ಭೇದ್ಯಾ | ಹೇ ಅನವದ್ಯಾ | ಇಂದಿರಾರಾಧ್ಯ ಭಾಧ್ಯ ಭಾದಕ ಸನ್ಮೋದ ಪ್ರಮೋದನೆವೇದ ವೇದ್ಯ ಗುರು | ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಬಿಡ್ವು-ದುತ್ತ ಮವು ಪ ಹೋದಯೋಚನೆ ಮಾಡಲು ಮನದಲ್ಲಿ ಅತಿಶಯವೇನಲ್ಲಿ ಫಲವೇನಿಲ್ಲಾ ಬಹು ಭಾದಕ ವಂದೆ ಬುದ್ಧಿಯು ತಿಳಿಯದೆ ಸುಲಭದಿಂದಲಿ ಮುನಿವಂದ್ಯನ ಸ್ತುತಿಯ ಮಾಡಿದಲ್ಲಿ ಖನಿಯಂತೆ ಭಾಗ್ಯವು ಬೇಗನೆ ಕೊಡುವನು---ಸ್ಥಿರವಲ್ಲಿ 1 ಹೊಟ್ಟಿಯ ದೆಸೆಯಿಂದಾ ಕೃಷ್ಣನ ಚರಣಾರವ ಕ್ರಿಯದಲಿ ಪೂಜಿಸಿ ನಿಷ್ಟವಾಗು---- ಕಷ್ಟವೆಲ್ಲ ಕಳೆದು ಕರುಣಿಸಿ ಶೀಘ್ರದಿ ಕಾಯುವ ಗೋವಿಂದ 2 ಕೂಡಿ ಪುಣ್ಯವು ಕಳೆದು ಪಾಪಕೆ ಹೋಗಬೇಡಾ ಮಂqಲದೊಡೆಯನ ಮಹಿಮ ವುಳ್ಳ ದಾಸರ ಮನ್ನಿಸದಿರ ಬೇಡಾ -------- ಪಾದ ಬಿಡಬೇಡಾ 3
--------------
ಹೆನ್ನೆರಂಗದಾಸರು
ರಾಮಾನಂದ ವಿಠಲ | ಪ್ರೇಮದಲಿ ಪೊರೆಯೋ ಪ ಭಾಮಿನಿಯ ಮೊರೆ ಕೇಳಿ | ಪ್ರಾರ್ಥಿಸುವೆ ಹರಿಯೇ ಅ.ಪ. ಅನುವಂಶಿಕವಾಗಿ | ಗಾನಕಲೆಯುಳ್ಳವಳುಮೇಣು ಸಂಸ್ಕಾರಗಳು | ಹೊಂದಿಕೊಳ್ಳುತಲೀಈ ನಾರಿ ಯಂಕಿತವ | ಕಾಂಕ್ಷಿಸುತ್ತಿಹಳಯ್ಯಶ್ರೀನಿವಾಸನೆ ಇವಳ | ಬಿನ್ನಪವ ಸಲಿಸೋ 1 ಪತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂಬ ಸ-ನ್ಮತಿಯನೇ ಕರುಣಿಸುತ | ಕಾಪಾಡೊ ಹರಿಯೆಗತಶೋಕ ಗತಿಪ್ರದನೆ | ಹತಮಾಡಿ ಗರ್ವಗಳಸ್ಮøತಿಗೆ ವಿಷಯನು ಆಗಿ | ಸತತ ಪೊರೆ ಇವಳಾ 2 ಮೋದ ಕೊಡು ದೇವಾ 3 ಭವವೆನಿಪ ಅಂಬುಧಿಗೆ | ಪ್ಲವವೆನಿಪ ತವನಾಮಸ್ತವನ ಸಂತತಗೈವ | ಹವಣೆಯಲಿ ವಜ್ರಾಕವಚವನೆ ತೊಡಿಸುತ್ತ | ಭವತಾರ ಕೆಂದಿನಿಸೋಧ್ರುವವರದ ಕರಿವರದ | ಕಾರುಣ್ಯಮೂರ್ತೇ 4 ಛಲದ ಮುನಿ ಅನುಸರಿಸಿ | ಶಿಲೆಯ ಸತಿಯಳ ಮಾಡಿಜಲಜಾಕ್ಷಿ ಜನಕಜೆಯ | ಕೈಯನೇ ಪಿಡಿದೂಇಳೆಯ ಭಾದಕ ಕಳೆದ | ಚೆಲುವಂಗದವ ಸೂರ್ಯಕುಲ ತಿಲಕನೇ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು