ಒಟ್ಟು 14 ಕಡೆಗಳಲ್ಲಿ , 12 ದಾಸರು , 14 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಇಂದು ಕಾಯಲಿಬೇಕೊ ಸುಂದರ ಧನ್ವಂತ್ರಿ ಇಂದಿರೆರಮಣ ಆನಂದ ಕೃಷ್ಣ ಪ. ತಂದೆ ಮುದ್ದುಮೋಹನ ಗುರುಗಳ ನೀನು ಚಂದದಿಂ ಪಾಲಿಸಿ ತಂದುಕೊ ಕೀರುತಿಅ.ಪ. ಬಂದಿತೊ ನಿನಗೊಂದು ಕುಂದು ಇದರಿಂದ ನಂದಕಂದನೆ ಕೃಷ್ಣ ಉಡುಪಿ ನಿಲಯ ಮಂದರೋದ್ಧರ ಕೃಷ್ಣ ಬಂದು ಈಗ ನೀ ಕಾಯೊ ಇಂದು ಬೇಡುವೆ ನಿನ್ನ 1 ಭವರೋಗ ಹರನಿಗೆ ಇದೊಂದಸಾಧ್ಯವೆ ತವಕದಿಂದಲಿ ಆಯುವಿತ್ತು ಕಾಯೊ ಪವನನಂತರ್ಯಾಮಿ ಭವಪಾಶಬದ್ಧರ ತವಕದಿಂದಲಿ ಕಾಯ್ವ ಗುರುಗಳಲ್ಲವೆ ಇವರು 2 ನಿನ್ನ ಆಜ್ಞೆಯಿಂದ ಭಕ್ತರನುದ್ಧರಿಸ ಲಿನ್ನು ಧರೆಗೆ ಬಂದವರಲ್ಲವೆ ಮನ್ನಿಸಿ ನೀನಾಯುರಾರೋಗ್ಯ ಭಾಗ್ಯವಿತ್ತು ಚನ್ನಾಗಿ ಕಾಯಬೇಕಿನ್ನು ಎನ್ನಯ ದೊರೆಯೆ 3 ಕಷ್ಟ ಬಿಡಿಸುವರಿಗೆ ಕಷ್ಟ ಕೊಡುವರೆ ನೀನು ಕಷ್ಟ ಪರಿಹಾರಕನೆಂದೆನಿಸಿ ಬಿಂಕ ಥಟ್ಟನೆ ಕಾಪಾಡೊ ಶ್ರೇಷ್ಠ ಗುರುಗಳ ಎಮ್ಮ ಕಷ್ಟ ಬಿಡಿಸುವರ 4 ಅನ್ನ ಪಾನವಿಲ್ಲದಿನ್ನು ಬಳಲಿಸುವರೆ ಚನ್ನವಾಯಿತು ಇದು ನಿನ್ನ ಘನತೆ ಸನ್ನುತ ಮಹಿಮ ಶ್ರೀ ಗೋಪಾಲಕೃಷ್ಣವಿಠ್ಠಲ ಇನ್ನು ಕಾಯದಿರೆ ಎನ್ನಾಣೆ ಬಿಡೆ ಕಂಡ್ಯಾ 5
--------------
ಅಂಬಾಬಾಯಿ
(ಆ) ಲಕ್ಷ್ಮೀ ಸ್ತುತಿಗಳು ಅಮ್ಮಾ ನೀನೆಮ್ಮ ಮನೆಯಲಿಹುದಮ್ಮಾ ನಿತ್ಯ ಪ ನಮ್ಮಯ್ಯನೊಡನೆ ಸುಭಾಷಿಸುತಲಿ ಸಮ್ಮಾನದಿ ಮುಖದಿಂ ನಲಿದಾಡುತಾ ಅ.ಪ ಮಕ್ಕಳೆಂದೆಮ್ಮ ನಲಿಸುತ ಒಲಿಸುತ ಸಕ್ಕರೆ ಸಮಿಗುಂಮಿಗಲಹ ಮಾತುಗ ಳಕ್ಕರದಾಡುತ ಶುಭಸಂಪದಗಳ ನಕ್ರೂರಾರ್ಚಿತೆ ಕೊಡುತ ಮೋದದಿಂ 1 ನೀನಿರುವ ಮನೆಯು ಶೋಭಿಸುತಿಹುದು ತಾನೇತಾ ಮಂಗಳ ನೆಲೆಸಿಹುದು ಸಾನುರಾಗದಿಂ ಸರ್ವರ ಜನನಿಯೆ ನಾನಿನ್ನಾದರದ ಪ್ರೇಮಸುಪುತ್ರನು 2 ನಿತ್ಯಾರಾಧನೆಗನುಕೂಲಗಳಂ ಸತ್ಯಧರ್ಮಗಳ ಬಿಡದಾಚರಿಪುದ ಸ್ತುತ್ಪತದಿ ಸಮಾರಾಧನ ವೆಸಗುನವ ಅತ್ಯಾನಂದದ ಸೌಭಾಗ್ಯವಿತ್ತು 3 ಸವಿ ಸವಿಭಕ್ಷ್ಯಗಳನುಗೊಳಿಸುತ್ತ ಸುವಿಮಲ ಮಂಗಲ ದ್ರವ್ಯಸುಪುಷ್ಪವ ಸುವಾಸಿನಿಯರಿಗೂ ಸದಭಕ್ತರಿಗುಂ ಸುವರ್ಣಭಾಜನದೀಯುವುದಿತ್ತು 4 ಹಾಲು ಹಣ್ಣು ಮಧು ಮಧುರದ ಮನೆಯಂ ಶ್ರೀಯೋಗಗಾನ ಧ್ಯಾನದ ನೆಲೆಯ ಬಾಲರ ಲೀಲೆಯ ಲಾಲನ ಪಾಲನ ಕಾಲವೆಲ್ಲ ಸೊಗನಗೆ ಮೊಗನೆರೆಯಲಿ 5 ಭೃಗುಸುತೆ ಕ್ಷೀರಸಾಗರಜಾತೆ ಭಗವತಿ ಭಾಗ್ಯದಾತೆ ಅಮೃತ ಮಂಗಳಸುಂದರಿ ಚಂದ್ರಸಹೋದರಿ ಅಗಲದೆ ಹರಿವಕ್ಷಸ್ಥಲಸ್ಥಿತೇ 6 ಸುವರ್ಣವರ್ಣಿ ಕಮಲಸುಚರಣೆ ಭುವಿಸುರ ಪೂಜಿತೆ ಕಲ್ಪಲತೆ ಭವ ಭವಹಾರಿಣೆ ಭಕ್ತೊದ್ಧಾರಿಣೆ ದಿವಿರಾಜವರದೆ 7 ಶ್ರೀಕರ ಸಾತ್ವಿಕ ಸುಲಲಿತರಿಂದ ನಾಕಿಗರೆಂಬೊ ಬಂಧುಗಳೊಡನೆ ಜೋಕೆಯ ಮಕ್ಕಳ ವಿವಾಹಗೈದು ಸಾಕಾರ ಸಂಸಾರ ಸುಖನಿಧಿ ಎನಿಸು 8 ಚಪ್ಪರ ತೋರಣ ಮೇಲ್ಕಟ್ಟುಗಳಿಂ ದೊಪ್ಪುವ ಬಗೆಬಗೆ ರಂಗವಲಿಗಳಿಂ ದಿಪ್ಪಾಸಾಗರ ಮಂಗಳ ವಾದ್ಯಂಗ ಳಪ್ಪ ಸದೃಹವ ಮಾಡುತ ಮಮತೆಯಿಂ9 ಅಪ್ರತಿಮ ರತ್ನಪೀಠವನಿಟ್ಟು ತುಪ್ಪದ ನಂದಾದೀವಿಗೆ ಹಚ್ಚಿ ಅಪ್ರಮೇಯನೋಡನಿಪ್ಪ ನಿನ್ನ ಸುಪ್ರೀತಿಯೊಳಾಂ ಪೂಜಿಪುದೀಯತ 10 ಪರಿಮಳ ತೈಲದಭ್ಯಂಜನದಿಂ ಸುರಭೀತೊಯ ಸ್ನಾವನಗೈದು ಹರಿದ್ರಾಕುಂಕುಮ ರತ್ನ ಕಿರೀಟವು ಸರಪೀತಾಂಬರ ಕಮಲವ ಧರಿಸಿ 11 ನರುಗುಂಪಿನ ಶ್ರೀಗಂಧದ ಲೇಪ ಪರಿಪರಿ ಘಮ ಘಮ ಸುಗಂಧ ಧೂಪ ಪರಮ ಪ್ರಕಾಶದ ಮಂಗಳ ದೀಪ ಸಿರಿಹರಿ ನಿಮ್ಮಯ ದಿವ್ಯ ಸ್ವರೂಪ 12 ಬಗೆ ಬಗೆ ಭಕ್ಷ್ಯವು ಕ್ಷೀರಾಜ್ಯಗಳಂ ಹಗಲಿರುಳುಂ ಫಲತಾಂಬೂಲಗಳಂ ನಿಗಮ ಸ್ತುತಿಕೈಗೊಳ್ಳುತ ಪಿಯೆ ನೀ ನಗಲದೆ ಸವಿಯುತ ಸಂತೋಷದಿಂದ 13 ಜಯ ಜಯ ಕರ್ಪೂರಾರತಿಮಾತೆ ನಯದಿಂ ಕುಸುಮಾಂಜಲಿಯಖ್ಯಾತೆ ದಯೆಯಿಂ ಭಾವಭಯ ಹರಿಸಾಪೂತೆ ಜಯ ಜಯ ಶ್ರೀಕೇಶವ ಸಂಪ್ರೀತೆ 14 ವಿಧಿರಮಾತೇ ಶ್ರೋಣಿತ ಚರಿತೆ ಬುಧಜನಪಾಲೆ ಕೃಪಾಲಪಾಲೆ ಮುದದಿಂ ಪಾಲಿಸು ಬಾಳಿನಲಿಡುತೆ ಹೃದಯನ್ನುತೆ ಜಾಜೀಶ ಸಹಿತೆ 15 ಅಗಣಿತ ಸುಗುಣೆ ಕರುಣಾಭರಣೆ ಜಗದೋದ್ಧಾರೆ ಜಯಜಯತಾರೆ ಯುಗಪದಕೀಗಲೆ ಮುಡಿಯಿಟ್ಟಿರುವೆ ಮಗುವಾದೆನ್ನಂ ಮಡಿಲೊಳಗಿಡು ನೀಂ 16
--------------
ಶಾಮಶರ್ಮರು
(ಹೋಳಿ ಪದ) ಧುಮ್ಮಿಶಾಲೆನ್ನಿ ನಮ್ಮ ರಮ್ಮೆಯರಸ ಕೃಷ್ಣನಡಿಯ ಒಮ್ಮನದಿ ನೆನೆದು ಸಕಲ ಕರ್ಮಕಲುಷವ ಕಳಿಯಿಸಿ ಪ. ನಿಗಮ ಸ್ಮøತಿ ಗಣೋಕ್ತ ಕರ್ಮಕರಣ ಭವಿ ಷ್ಯೋತ್ತರ ಪುರಾಣವಚನವೆತ್ತಿ ಜಗಕೆ ತಿಳಿಸಿದಾ ಒತ್ತಿ ಬರುವ ವಿಘ್ನಗಣವ ಕತ್ತರಿಸುವ ಹೋಳಿಯೆಂಬ ಉತ್ತಮದ ವ್ರತವು ಜಗವ ಸುತ್ತಿಕೊಂಡು ಮೆರೆವುದು 1 ವಿಧಿಯ ಸ್ತುತಿಗೆ ಮೆಚ್ಚಿ ಕರುಣಾಸುಧೆಯ ಸುರರ ಮೇಲೆ ಕರದು ಮಧುರೆಯಲ್ಲಿ ಜನಿಸಿ ಬಂದ ಮಧುಮುರಾರಿ ಮರ್ದನ ಯದುಕುಲೇಶ ಕೃಷ್ಣಗೋಪ ಚದುರೆಯರನು ಒಲಿವೆನೆಂದು ಮದನನು ಹುಣ್ಣಿವೆಯ ಹಬ್ಬ ಸದರದಿಂದ ರಚಿಸಿದ 2 ಮೇಲು ಬೆಲೆಗಳುಳ್ಳ ಬಿಳಿಯ ಶಾಲೆಗಳನು ಧರಿಸುತ ಗು ಲಾಲ ಪುಡಿಯ ಸುರಿವ ಗೋಪ ಬಾಲಜನರ ಕೂಡುತ ಗಜ ಮೇಲಾಳುತನವ ನಡೆಸುತಿರಲು ಶ್ರೀ ಲಲಾಮ ವಾರನಾರಿ ಜಾಲವನ್ನು ಕರೆಸಿದ 3 ಸಿರಿಯ ಮುಡಿಯ ಮೇಲೆ ನವಿಲಗರಿಯ ಗೊಂಚಲಿರಿಸಿ ನಾನಾ ಪರಿಯ ಪುಷ್ಪ ಮಾಲೆಗಳನು ಧರಿಸಿ ಕಂಠ ಮಧ್ಯ ಪೋಕ ಥರವ ತೋರ್ಪ ಪದವ ಸಪ್ತ ಸ್ವರದಿ ಕೂಡಿ ವಾಡಿ ಬೀದಿ ತಿರುಗಿ ಬಂದ ಕೃಷ್ಣನು 4 ಶಿಷ್ಟ ಸಂಗ್ರಹೀತ ಕಾರ್ಯ ಶ್ರೇಷ್ಠವಾಗಿ ತಿಳಿಯಿರೆಂದು ದಮನ ನರನೊಳೆಂದ ಸ್ಪಷ್ಟ ಗೀತ ವಚನವ ಶಿಷ್ಟ ಜನರು ಗ್ರಹಿಸಿ ನಡದರಷ್ಟ ಭಾಗ್ಯವಿತ್ತು ಶೇಷ ಬೆಟ್ಟದೊಡೆಯ ಹರಿಯು ಕರುಣಾ ದೃಷ್ಟಿಯಿಂದ ಪೊರೆವನು 5
--------------
ತುಪಾಕಿ ವೆಂಕಟರಮಣಾಚಾರ್ಯ
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಈತನೇನೆ ನಿನ್ನ ಮಗನು ಪ ಸೀತಾಪತಿ ರಘುನಾಥನೆಂಬವನು ಅ ವ್ಯಾಸನ ಜನನಿಯ ವಾಸನೆ ತಾಳ್ದನುದೇಶದೊಳಗೆ ಬಲು ಪೆಸರುಳ್ಳವನುನಾಸದೊಳೊರ್ವನ ಪೊತ್ತು ಮುರಿದು ಮು-ನೀಶರ ಶಾಪವ ಪಿಡಿದು ಕೊಂದಾತನು 1 ಶರಧಿ ಶಯನ ಮಾಡಿದಾತನು 2 ಮೂಗ್ರಾಮ ಮುರಿದು ವಾಜಿಯನೇರಿದಾತನುಸಾಗ್ರದಿಂದಿಳೆಯ ಭಾಗ್ಯ ಹಿಂಗಿಸಿದಯೋಗ್ಯದಿಂದ ಬಳಪತಿತನವನಿಗೆಭಾಗ್ಯವಿತ್ತ ಕಾಗಿನೆಲೆಯಾದಿಕೇಶವ 3
--------------
ಕನಕದಾಸ
ಉಗಾಭೋಗ ವಿಕ್ರಮ ಸಂವತ್ಸರದಲ್ಲಿ ನಿನ್ನ ನಿಜ ದಾಸಕೂಟ ಜನಕೆ ಪ- ರಾಕ್ರಮ ಹೆಚ್ಚಲಿ ಅಚ್ಚುತಾನಂತ ಕೃಷ್ಣ ಶಕ್ರಾನುಜನೆ ನಿನ್ನ ದೂತ ಹನುಮನ ಸೇವೆ ವಕ್ರವಿಲ್ಲದೆ ನಡೆದು ನಿನ್ನ ಕೃಪೆಯಾಗಲಿ ಅಕ್ರೂರವರದ ತಂದೆ ಮುದ್ದುಮೋಹನ್ನರ ವಿಕ್ರಮೌದಾರ್ಯ ದಶ ದಿಕ್ಕುಗಳ ಬೆಳಗಲಿ ಶಕ್ರಾನುಜನೆ ಉದರ ಬಗೆದು ತರಳನ ಕಾಯ್ದ ವಕ್ರನಖನೆ ನಮ್ಮ ನೀತ ಶ್ರೀ ಗುರುಗಳಿಗೆ ವಿಕ್ರಮ ಶಾಂತಿ ಆಯುರಾರೋಗ್ಯ ಭಾಗ್ಯವಿತ್ತು ಚಕ್ರಧರನೆ ನಿನ್ನ ಸೇವೆ ಕೈಕೊಂಡೆಮ್ಮ ಭವ- ಚಕ್ರ ತೊಡಕು ಬಿಡಿಸಿ ದಾಸ ಜನರ ಕಾಯೋ ಉ- ರು ಕ್ರಮದೇವ ಜಗಚ್ಚಕ್ರವರ್ತಿಯೆ ನಮೋ ಶಕ್ತಾದ್ಯಮರ ನುತ ಗೋಪಾಲಕೃಷ್ಣವಿಠಲಾ
--------------
ಅಂಬಾಬಾಯಿ
ಕರುಣವಾರಿಧಿಯೆ ಮೊರೆ ಕೇಳೋ ಹರಿಯೆ ಪ ಶರಣರಿಗೆ ಜರಾಮರಣರಹಿತವಹ ಪರ ವಿದೇಹ ಅ.ಪ ಇನಕುಲಭೂಷಣನೆನಿಪ ರಾಮ 1 ಹಿಡಿಯವಲಕ್ಕಿಯ ಬಡಬ್ರಾಹ್ಮಣ ಕೊಡ- ಲೊಡನೆ ಒಲಿದು ಸೌಭಾಗ್ಯವಿತ್ತು 2 ಸ್ವಾಮಿ ಕಾಯೊ ಗುರುರಾಮವಿಠಲಾ 3
--------------
ಗುರುರಾಮವಿಠಲ
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ ಅಗ್ರ ಬುದ್ಧಿಯ ತಾಳು ನಿನಗೆ ಸಾ ಮಗ್ರಿ ಆಲೋಚನಿ ಯಾತಕೆ ಸ ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ ಉಗ್ರ ಮನುಜರ ಕೂಡಿಸದೆ ಪಾ ಅಂದು ಪೊಗಳಲು ಶೀಘ್ರದಲಿ ನಿಂದಿಹರೊ 1 ಹರಿಗುರುಗಳ ಸಂಕಲ್ಪ ತಪ್ಪದು ಗಿರಿಗಹ್ವರದೊಳಗಿದ್ದರು ಅದು ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ2 ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ ಹೊತ್ತು ಮೀರದೆ ಮಾಳ್ಪುದು ಧರ್ಮ ಮೊತ್ತವಲ್ಲದೆ ಇನ್ನೊಂದಿಲ್ಲವೊ ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು3 ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ ನಾನಾ ಪರಿಯಲಿ ತಿಳಿದು ನೋಡು ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು ಶಿರೋಮಣಿ ಅನಂತಾನಂತ ಜನುಮದಲೀಗ ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ4 ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ ಸೊಲ್ಲುಗಳಲ್ಲದೆ ಇದು ಸಲ್ಲದೊ ಸಕಲ ಮನೋಭೀಷ್ಟಾ ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ 5 ನೂನ್ಯಪೂರ್ಣವು ಅವರನ ಕೂಡಿ ತನ್ನ್ಯೋಪಾಯವು ಯಾಕೆ ನಿನಗೆ ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ 6 ಊರ್ವಿಗೀರ್ವಾಣರಿಗೆ ಉಣಿಪುದು ಗರ್ವವನು ತಾಳದಲೆ ಚೆನ್ನಾಗಿ ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ ಪೂರ್ವತನೆ ಬಯಸುತಾರಾಧಿಸು ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ7
--------------
ವಿಜಯದಾಸ
ವಂಚನೆಲ್ಲಿಹುದಯ್ಯ ವೈಕುಂಠಪತಿ ಗೊಂಚನೆಲ್ಲಿಹದಯ್ಯ ಪ ವಂಚನೆಲ್ಲಿಹ್ಯದು ವಿರಂಚಿತಾತನಿಗೆ ಕಿಂಚಿತ್ತು ಧ್ಯಾನಕ್ಕಾಗೊಂಚನಿಲ್ಲದೆ ಬಂದ ಅ.ಪ ಚರಣದಾಸರೆಂದು ಪಾಂಡವರ ತುರಗಕಾಯ್ದ ನಿಂದು ನರಗೆ ಬೆಂಬಲನಾಗಿ ತಿರುಗಿದ ಧುರದಲಿ ಜರ ಮರೆಯಾಗದೆ ಪರಮಕರುಣಾಕರ 1 ಜಾಗುಮಾಡುತಲಿವ ಭಕ್ತರ ಯೋಗಕ್ಷೇಮ ತಿಳಿವ ನೀಗದಂಥ ಮಹಾಭೋಗಭಾಗ್ಯವಿತ್ತು ಬಾಗಿಲ ಕಾಯ್ದನು ಸಾಗರನಿಲಯ 2 ಜಾರನೆನಿಸಿಕೊಂಡ ಒಲಿದು ಚೋರನೆನಿಸಿಕೊಂಡ ತೋರಿದವರ ಮನಸಾರ ವರವಿತ್ತು ಭೂ ಭಾರವಿಳುಹಿದ ನಮ್ಮ ಧೀರ ಶ್ರೀಗುರುರಾಮ 3
--------------
ರಾಮದಾಸರು
ವಾದೀಗಳಾಗೆದ್ದು ಸಿದ್ಧಾಂತ ಸ್ಥಾಪಿಸಿ ಮುದ್ದು ಕೃಷನ ತಂದ ವೇದ ವ್ಯಾಸರ ಪ್ರಿಯ ಮಧ್ವರಾಯ ಮಧ್ವರಾಯ ಪ ಬಿದ್ದೆ ನಿಮ್ಮಯ ಚಲುವ ಪಾದಪದ್ಮಂಗಳಿಗೆ ವೇದ ಮಧ್ವರಾಯ ಮಧ್ವರಾಯ ಅ.ಪ ತಂದು ಚೂಡಾಮಣಿ ನಿಂದೆ ರಾಮನ ಮುಂದೆ ಮಧ್ವರಾಯ ಮಧ್ವರಾಯ ಕಂದನು ಎಂತೆಂದು ಮುಂದೆ ಪಾಲಿಸ ಬೇಕು ಮಧ್ವರಾಯ ಮಧ್ವರಾಯ 1 ದ್ವಾಪರ ಯುಗದಲ್ಲಿ ದ್ರೌಪದಿ ಗಂಡನೆನಿಸಿ ಪಾಪಿಗಳಾಕೊಂದು ಪತಿ ಸೇವೆ ಮಾಡ್ದೆ ಮಧ್ವರಾಯ ಮಧ್ವರಾಯ ಕೋಪವು ಮಾಡದೆ ತಾಪಗಳೋಡಿಸಿ ಗೋಪಾಲ ಕೃಷ್ಣನ ಕೃಪೆಯ ಕೊಡಿಸೈಯ ಮಧ್ವರಾಯ ಮಧ್ವರಾಯ 2 ದುರುಳ ಮಾಯಿಗಳೆಲ್ಲ ಹರಿಯ ದೂರುತ್ತಿರಲು ಸುರರ ಮಧ್ವರಾಯ ಮಧ್ವರಾಯ ಭವ ಬಿಡಿಸಿ ವೀರ ವೈಷ್ಣವ ನೆನಿಸಿ ಸಾರಿ ಸಾರಿಸ ಬೇಕು ಹರಿಯ ನಾಮವನ್ನು ಮಧ್ವರಾಯ ಮಧ್ವರಾಯ 3 ಲೋಕದಿ ಸಜ್ಜನರ ಸಾಕಬೇಕು ಎಂದು ಬೇಕೆಂದು ಯತಿಯಾದೆ ಶ್ರೀಕಾಂತ ಪಟ್ಟಪುತ್ರ ಮಧ್ವರಾಯ ಮಧ್ವರಾಯ ನೂಕೋದುರಿತ ರಾಶಿ ಲೋಕಕ್ಕೆಲ್ಲಾ ಗುರು ಮಧ್ವರಾಯ ಮಧ್ವರಾಯ 4 ಸುರರೆಲ್ಲ ಪರಿವಾರ ತಾರತಮ್ಯವ ತೋರ್ದೆ ಮಧ್ವರಾಯ ಮಧ್ವರಾಯ ಸೂರಿಗಳೊಡೆಯನೆ ಭಾರತಿ ಪ್ರಾಣಕಾಂತ ಮಧ್ವರಾಯ ಮಧ್ವರಾಯ5 ಮತ್ತೆ ಹರಿಯಮತದಂತೆ ಬರೆದೆಯೊ ಹೊಸ ಭಾಷ್ಯ ಮಧ್ವರಾಯ ಮಧ್ವರಾಯ ಪೊರೆದೆ ಹರಿಯಪ್ರಧಮಾಂಗ ವೀರ ಮಾರುತಿ ದೇವ ಮಧ್ವರಾಯ ಮಧ್ವರಾಯ 6 ಬೃಹತೀಗೆ ನೀ ಪ್ರತಿಮ ಬಹುರೂಪ ಧಾರಕ ವಹಿಸೊ ಎಮ್ಮೆಯ ಅಹಿ ಭೂಷಣ ಪ್ರಿಯ ಮಧ್ವರಾಯ ಮಧ್ವರಾಯ ದಹಿಸೋ ಸೋಹಂ ಜ್ಞಾನ ಮಹಿಯೊಳು ಅಪ್ರತಿಮ ಮಧ್ವರಾಯ ಮಧ್ವರಾಯ 7 ಜಪ ಬೇರೆ ಬೇರೆ ಮಾಡಿ ಮೂರು ಗತಿಯ ತೋರ್ಪೆ ಮಧ್ವರಾಯ ಮಧ್ವರಾಯ ಭಾರೀಶಕ್ತನು ನೀನು ಆರು ಸರಿಯು ನಿನಗೆ ಮಧ್ವರಾಯ ಮಧ್ವರಾಯ 8 ಆನಂದ ಶಾಸ್ತ್ರವ ಸಾನುರಾಗದಿ ಪೇಳ್ದೆ ಮಧ್ವರಾಯ ಮಧ್ವರಾಯ ಮಾನವ ಜ್ಞಾನಾದಿಗಳ ಕೊಟ್ಟು ಕಾಯ ಬೇಕೋ ಮಧ್ವರಾಯ ಮಧ್ವರಾಯ 9 ಜಗ ಭಾರವ ವಹಿಸಿದೆ ಮೇರೆ ಗಾಣದ ಸತ್ವ ಮಧ್ವರಾಯ ಮಧ್ವರಾಯ ಹರಿಯ ಅರಿವ ಮರ್ಮ ಕರುಣದಿ ಅರುಹೈಯ್ಯ ಮಧ್ವರಾಯ ಮಧ್ವರಾಯ 10 ಅಮರ ವೃಂದಕ್ಕೆಲ್ಲ ಹರಿಯ ತೋರಿಸಿ ಕೊಟ್ಟೆ ಮಧ್ವರಾಯ ಮಧ್ವರಾಯ ಬೊಮ್ಮದೇವಗು ಬಲವ ಕೊಟ್ಟನ್ನ ಕೊಳ್ಳುವೆ ಮಧ್ವರಾಯ ಮಧ್ವರಾಯ 11 ಬಂದು ಮೂವತ್ತೇಳು ಸುಂದರ ಗ್ರಂಥ ಮಾಡ್ದೆ ಮಧ್ವರಾಯ ಮಧ್ವರಾಯ ಶುದ್ದ ಸತ್ವಮೂರ್ತಿ ಬದ್ಧನು ನೀನಲ್ಲ ವದ್ದು ಅವಿದ್ಯೆಯ ತಿದ್ದೊ ಎಮ್ಮೆಯ ಮನ ಮಧ್ವರಾಯ ಮಧ್ವರಾಯ 12 ಅಖಿಳಾಗಮಾವೇತ್ತ ಸುಖದ ಪ್ರಾರಬ್ಧವೋ ಮಧ್ವರಾಯ ಮಧ್ವರಾಯ ಸಕಲ ಲಕ್ಷಣವಂತ ಸಕಲ ತತ್ವರಪತಿ ಮಧ್ವರಾಯ ಮಧ್ವರಾಯ 13 ತತ್ವೇಶ ರೊಳಗೆಲ್ಲ ನಿನ್ನವ್ಯಾಪಾರವು ಉತ್ತಮ ನಿನ್ನಲ್ಲಿ ಹರಿಯ ವ್ಯಾಪಾರವು ಮಧ್ವರಾಯ ಮಧ್ವರಾಯ ನಿತ್ಯ ಕೃಷ್ಣನಕಾಂಬ ಸೂತ್ರನಾಮಕದೊರೆ ಮಧ್ವರಾಯ 14 ಉತ್ತುಮೋತ್ತುಮ ವಿಷ್ಣು ನಿನ್ನ ದ್ವಾರವೆ ವಲಿವ ಮಧ್ವರಾಯ ಮಧ್ವರಾಯ ನಿತ್ಯ ತೃಪ್ತನಿಗೀವೆ ನಿಷ್ಕಾಮ ಭಕ್ತಿ ನಿಧಿ ಮಧ್ವರಾಯ ಮಧ್ವರಾಯ15 ದಿವಿಜಾನಾಯಕ ನೀನು ಪಾದ್ಯ ಹೌದಯ್ಯಮಧ್ವರಾಯ ಮಧ್ವರಾಯ ಸೇವಕರೆನಿಸುವ ಭಾಗ್ಯವಿತ್ತು ಕಾಯೋ ಮಧ್ವರಾಯ ಮಧ್ವರಾಯ 16 ನಾಗಾರಿಶಿವ ಗುರುವೆ ಭವ ಬಿಡಿಸು ಮಧ್ವರಾಯ ಮಧ್ವರಾಯ ನೀಗಿಸು ಇವರ ಬಾಧೆ ಪಂಚ ಕೋಶಗ ಪ್ರಾಣ ಮಧ್ವರಾಯ ಮಧ್ವರಾಯ17 ಶ್ರೀ ಪತಿದಯದಿಂದ ತಾಳ ಹಾಕುವ ಶಕ್ತ ಮಧ್ವರಾಯ ಮಧ್ವರಾಯ ನೀಪಾಲಿಸಿದ ರುಂಟು ಏನೆಂಬೆ ನಿಮ್ಮ ಮಹಿಮೆ ಮಧ್ವರಾಯ ಮಧ್ವರಾಯ18 ಭಾನುಸ್ಥ ಪ್ರಭು ನೀನು ಆಧ್ಯಾತ್ಮಗತನಾಗಿ | ಸಾನುರಾಗದಿ ಜಗ ಜೇಷ್ಟೆಯ ನಡಿಸುವೆ ಮಧ್ವರಾಯ ಮಧ್ವರಾಯ ಶ್ರೀನಿವಾಸನ ಪೂರ್ಣ ಕೃಪೆಗೆ ನೀ ಪಾತ್ರನು | ಪೂರ್ಣ ಭೋದ ಗುರುವೆ ದೀನರೆಮ್ಮನು ಪಿಡಿ ಮಧ್ವರಾಯ ಮಧ್ವರಾಯ19 ಅಣವು ಮಹದ್ ಘನ ಪೂರ್ಣ ಪ್ರಜ್ಞನು ನೀನು | ಅನ್ನಜೀವರು ನಿನಗೆ ಅನ್ನ ಶ್ರೀಶಗೆ ನೀನು ಮಧ್ವರಾಯ ಮಧ್ವರಾಯ ನಿನ್ನ ರೂಪಗಳಲ್ಲಿ ನ್ಯೂನವಿಲ್ಲವು ಗುಣದಿ | ಮಣಿಸದೆ ಚಿತ್ತದಲ್ಲಿ ಉಣಿಸೋ ಹರಿ ಕೀರ್ತನೆ ಮಧ್ವರಾಯ ಮಧ್ವರಾಯ 20 ಭೇದಬೊಧೆಯ ನಿತ್ತು ಉದ್ದಾರ ಮಾಡಿದೆ | ವಾದಿ ಭೀಕರಯತಿ ಶ್ರೆದ್ಧೆ ಮನೋಹರ ಮಧ್ವರಾಯ ಮಧ್ವರಾಯ ಮುದ್ದು ಕೃಷ್ಣನ ತಂದು ತಿದ್ದಿ ಪದ್ದತಿಗಳ | ಶುದ್ಧವೈಷ್ಣವರಿಗೆಲ್ಲ ವೃದ್ಧಿ ಮಾಡಿದೆ ಭಕ್ತಿ ಮಧ್ವರಾಯ ಮಧ್ವರಾಯ 21 ಗುರು ಪ್ರಾಣ ನಾಥನೆ ಹರಿಯ ಮನದಂತೆ | ಪರಿಪರಿಲೀಲೆಯ ನಿರುತ ತೋರುತಲಿಪ್ಪೆ ಮಧ್ವರಾಯ ಮಧ್ವರಾಯ ಭರತ ಪ್ರಭುವೆ ನಿನ್ನ ಚರಣವ ಸಾರಿದೆ | ಗಾರು ಸಂಸಾರದಿ ದಾರಿ ತೋರಲಿ ಬೇಕು ಮಧ್ವರಾಯ ಮಧ್ವರಾಯ 22 ಜಯ ಜಯ ಜಯ ಹನುಮ ಜಯ ಜಯ ಜಯ ಭಿಮ ಮುಖ್ಯಪ್ರಾಣ ಮರಾಮರಾ ಜಯ ಜಯತೀರ್ಥ ವ್ಯಂದ್ಯನೆ ಜಯ ಕೃಷ್ಣವಿಠಲನ ಮಧ್ವರಾಯ ಮಧ್ವರಾಯ 23
--------------
ಕೃಷ್ಣವಿಠಲದಾಸರು
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ ಕುಟಿಲವನು ಕಳೆದು ಬಲು ಕುಶಲತನವೀವದು ಪ ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ ಯೋಗಿಗಳು ನೆನೆದರೆ ಸವಿಯಾದ ಮಂತ್ರ 1 ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ ಕದನದೊಳು ಫಲ್ಗುಣನ ಕಾಯಿದ ಮಂತ್ರ ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ ಯದುಕುಲಾಗ್ರಣಿಯಾದ ವಿಶ್ವಮಂತ್ರ 2 ಹಾರೈಸಿದವರಿಗೆ ವರವನೀವ ಮಂತ್ರ ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ ಸೇರಿದವರನ್ನ ಬಿಡದೆ ಪೊರೆವ ಮಂತ್ರ 3
--------------
ವಿಜಯದಾಸ
ಶೌರಿ ಅಡಿಗಳನು ಧ್ಯಾನಿಸುವ ಮತಿ ಕೋರಿ ಪ ಮೃಡ ಪುರಂದರರೊಡೆಯ ಶ್ರೀಹರಿ ಕಡಲಶಯನನ ಬಿಡದೆ ಭಜಿಪರ ಸಡಗರದಿ ಸನ್ಮಾರ್ಗ ತೋರುವ ಬಡವರ ಆಧಾರಿ ನರಹರಿ ಅ.ಪ ನಿನ್ನ ದಾಸರ ಸಂಗದೊಳಿರಿಸೆನ್ನ ಬೇಡುವೆನು ನಿನ್ನ ನಿನ್ನ ನಾಮಸ್ಮರಣೆ ಅನುದಿನ ನಿನ್ನ ಚರಣವ ಭಜಿಪ ಭಕ್ತರನು ಕೊಂಡಾಡುವಂಥ ಅ- ಚ್ಛಿನ್ನ ಭಕ್ತರ ಕೂಟದಲಿರಿಸೆನ್ನ ಸನ್ನುತಾಂಗನೆ ಸರ್ವವ್ಯಾಪಕ ನಿನ್ನ ಮೊರೆ ಹೊಕ್ಕಿರುವೆ ಪಾಲಿಸು ಪನ್ನಗಾದ್ರಿವಾಸ ವೆಂಕಟ ಆ- ಪನ್ನ ಜನರನು ಪೊರೆವ ಕರುಣಿಯೆ 1 ಗಜ ನೀ ಕೇಳಿ ತ್ವರದೊಳು ಬಿಡದೆ ರಕ್ಷಿಸಿ ಪೊರೆದ ಕರುಣಾಳು ಬಡವ ವಿಪ್ರಗೆ ಒಲಿದೆ ಕ್ಷಿಪ್ರದೊಳು ಸೌಭಾಗ್ಯವಿತ್ತೆ ಹುಡುಗ ತಪವಿರೆ ಅಂದು ಅಡವಿಯೊಳು ತಡೆಯದಲೆ ನೀನೊಲಿದೆ ಭಕುತಿಗೆ ಒಡೆಯರೈವರ ಮಡದಿ ಮೊರೆ ಕೇಳಿ ಬಿಡದೆ ಅಕ್ಷಯವೆಂದು ಸಲಹಿದೆ ದೃಢ ಭಕುತರನು ಬಿಡದೆ ಪೊರೆಯುವೆ 2 ರಂಗನಾಥ ನಿನ್ನಂಘ್ರಿ ಕಮಲಗಳ ಭಜಿಸುವವರ ಭವ ಹಿಂಗಿಸುತ ಪೊರೆದಂಥ ಚರಿತೆಗಳ ಸಂಗರಹಿತನೆ ಬಿಡಿಸು ಬಂಧಗಳ ಸಲಹೆಂದು ಪ್ರಾರ್ಥಿಪೆ ಅಂಗಜನಪಿತ ತರಿದೆನ್ನಪರಾಧ ಮಂಗಳಾಂಗ ಪ್ಲವಂಗ ವತ್ಸರ ಗಂಗಾಜನಕ ನಿನ್ನಂಘ್ರಿ ಭಜಕರ ಹಿಂಗದಲೆ ಪಾಲಿಸುತ ಪೊರೆ ಕೃಪಾ-ಪಾಂಗ ಕಮಲನಾಭ ವಿಠ್ಠಲನೆ 3
--------------
ನಿಡಗುರುಕಿ ಜೀವೂಬಾಯಿ
ಶ್ರೀ ಸಂತಾನ ಗೋಪಾಲಕೃಷ್ಣ 141 ಗೋಪಿ ವಿನುತ ಧಾಮ ಅನಂತಾಸನ ಯೈದಿ ವಿಪ್ರನಿಗೆ ಸುಪುತ್ರನ್ನ ತಂದಿತ್ತ ಘೃಣೀಯೇ 1 ಅಂದು ವೈರಾಟಿಯು ಪಾಹಿ ಪಾಹಿ ಮಹಾ ಯೋಗಿನ್ ದೇವ ದೇವ ಜಗತ್ ಪತೇ ನಾನ್ಯಂ ತತ್ ಅಭಯಂ ಪಸ್ಯೆ ಎಂದು ನಾಥನೇ ನಿನ್ನ ಮೊರೆ ಹೋಗಲು ಅವಳ ಉದರ ಪ್ರವೇಶಿಸಿ ಶಿಶುವ ರಕ್ಷಿಸಿದ ಚಕ್ರಿ 2 ಸುಸ್ಪಟಿಕ ಕಾಂತಿಮಾನ್ ಶಿವ ಶಿವಾ ಪೋಲು ಈ ದಂಪತಿಗಳು ಯಥಾ ಯೋಗ್ಯ ಪ್ರೇಮ ಪರಸ್ಪರ ಬೆಳೆಸಿ ಹರಿ ಗುರು ಭಕ್ತಿ ವರ್ಧಿಸಿ ಸುಪುತ್ರ ಸಂತಾನ ಭಾಗ್ಯವಿತ್ತು ಸಲಹುದು 3 ಕಲ್ಯಾಣ ತಮರೂಪ ಅಂಬುಜ ಸುದರ್ಶನ ಬಲು ಚೆÀಲುವ ಶಂಖ ಕೌಮೋದಕೀಧರನೇ ಮಾಲಕ್ಷ್ಮೀ ವಕ್ಷನೀ ವರ ಅಭಯ ಪ್ರದನಾಗಿ ಸಲುಹುತಿಯೇ ಭಕ್ತರನ ಗುರುಗ ಶ್ರೀ ಕೃಷ್ಣ 4 ಗುರುಗಳೋಳಿಪ್ಪ ವರ ವಾಯು ಅಂತರ್ಗತನೇ ವಾರಿಜಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸ ಶರಣು ಭಾಗೀರಥಿ ಜನಕ ಪಾವನ ನಾಮನೇ ಪೂರ್ಣ ಕಾಮನೇ ಭಕ್ತ ವಾಂಛಿತ ಪ್ರದನೇ 5 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಹುಚ್ಚು ಹೊಳೆಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಎನ್ನ ಅಚ್ಚಳಿಯದೆ ದಡಕೆ ತಂದಿತಚ್ಚುತನ ದಯ 1 ಬಿಚ್ಚಿ ತೋರಲಾಗದೆನ್ನ ಅಚ್ಚರಿಯನು ದೇವ ನಿನ್ನ ಮೆಚ್ಚುಗೆಯನು ಪಡೆವೆನೆಂದು ಸತ್ಯ ಮಾಡುವೆ 2 ಅಷ್ಟದಾರಿದ್ರ್ಯ ಬರಲಿ ಕಷ್ಟ ರಾಶಿ ರಾಶಿ ಬರಲಿ ಶ್ರೇಷ್ಟದ ಮಾನಸದ ಭಾಗ್ಯವಿತ್ತು ಪೊರೆಯಲೊ 3 ವಿಷವ ಬಡಿಸುವರಿಗೆ ದಿವ್ಯ ರಸ ಕುಡಿಸುವಂತೆ ದೇವ ಹಸನ ಬುದ್ಧಿಯಿತ್ತು ಪೊರೆಯೊ ಹೃಷಿಕೇಶನೆ 4 ತ್ರಾಣವ ಕೊಡೊ ಮನಕೆ ದೇವ ಪ್ರಾಣಗಳನ್ನು ಚರಣದಲ್ಲಿ ಕಾಣಿಕೆಯರ್ಪಿಸುವೆ ರಮಾಪ್ರಾಣನಾಥನೆ5 ಮದಕೆ ಕಿಚ್ಚನೊಟ್ಟಿ ಕ್ಷಣದಿ ಎದೆಗೆ ಕೆಚ್ಚನಿತ್ತು ಮುದದಿ ಬದುಕಿನಲೇ ಮುಕುತಿ ಸೌಖ್ಯವಿತ್ತು ಪೊರೆಯೆಲೊ6 ವಿಭವ ತೋರುತಲಿ ಪ್ರಸನ್ನನಾಗೆಲೊ 7
--------------
ವಿದ್ಯಾಪ್ರಸನ್ನತೀರ್ಥರು