ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವ್ಯಾಸರಾಯರು ಚಂದ್ರಾ ಧರೆಯೊಳು ಮೂಡಿದಾ ಪ್ರಹ್ಲಾದನೆಂಬ ಚಂದ್ರಾ ಪ ಹೊಂದಿದವರ ಹೃದಯಾಂಧಕಾರನೀಗುವ ಗುಣ- ಸಾಂದ್ರ ವ್ಯಾಸರಾಜೇಂದ್ರನೆಂಬುವ ಅ.ಪ. ವಿಕಸಿತಸತ್ಕುಮುದಕೆ ಬಂಧೂ ಖಳ ಮುಖಾರವಿಂದವಳಿದು ಕೊಂದೂ ಸುಖದಿ ಕುಳಿವ ಬುಧಚಕೋರ ತತ್ವ ಪ್ರಕಾಶಕರ ಚಂದ್ರಿಕಾಪೂರ್ಣನೆಂಬ 1 ಹೇಯಮತಗಳೆಲ್ಲವ ಮುರಿದೂ ಬಲು ಬಾಯಿಬಾರದೆ ನಿಲ್ಲಲು ಜರಿದೂ ಮಾಯಿಚೋರರು ಪಲಾಯನಗೈಯಲು ವೃಷ್ಟಿ ಕರೆಸಿದಾ 2 ಕಂಡೂ ಗೋಪಾಲಕೃಷ್ಣನ ಪದವ ಕದ- ರುಂಡಲಿಗೀಶ ಭಕ್ತನಾಮೋದವ ಕೊಂಡು ಭೂಮಂಡಲವ ಪಂಡಿತ ಜನಮನ ತಾಂಡವವಾಡಿದ ತರ್ಕತಾಂಡವ ಮಾಡಿದ 3
--------------
ಕದರುಂಡಲಗೀಶರು
ತಾರಾಪತಿಯಹುದೌ ಸತ್ಯಾಭಿನವ ತೀರ್ಥ ಗುರುವೆ ಪ.ತಾರಾಪತಿಯಂತೆ ಕೀರ್ತಿ ಪ್ರಸರವಿಸ್ತಾರದಿಬುಧಚಕೋರವೃಂದಕೆ ನೀನು1ಇಕ್ಷುಚಾಪನ ಗದೆ ಕಕ್ಷಿಪ ಮಾಯಿಗಳನೀಕ್ಷಿಪೆ ನಿರುತ ಸತ್ಪ್ರೇಕ್ಷೆಂದುಕಾಂತಿಗೆ 2ಶ್ರೀರಾಮ ವೇದವ್ಯಾಸರ ಸೇವೆಯೊಳಿಹೆಮಾರುತಿಮತತತ್ವ ವಾರಿಧಿತರಂಗಕೆ 3ಗುರುಪಾದ ಸ್ಮರಣೆಯ ಮರೆಯದೆ ಅಮೃತ ವಾಕ್ಯಗರೆಯುತಹೃತ್ತಾಪಪರಿಹರಿಸುವಂಥ4ಪ್ರಸನ್ವೆಂಕಟ ಪ್ರೀತ ಶ್ರೀ ಸತ್ಯನಾಥರ ಸುತವಸುಧೆಯಾಚಕಕುಮುದಕುಸುಮಕೋರಕಕೆ5
--------------
ಪ್ರಸನ್ನವೆಂಕಟದಾಸರು