ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಬಂದರು ಸಖಿ ತೇರಿನ ಬೀದಿಲೆಮಾರಜನಕನ ಸಾರುತ ಹೊಗಳುವರಾರೆ ಕರಿಪುರದಲಿ ಬಂದವರಾರೆ ಪ. ದುಷ್ಟ ದೈತ್ಯರ ಶಿರವ ಕುಟ್ಟಿ ತಮಸ್ಸಿಗೆ ಹಾಕಿಅಟ್ಟಹಾಸದಿಂದ ಭೇರಿ ಘಟ್ಯಾಗಿ ಹೊಯಿಸುವರಾರೆ1 ಕ್ರೂರ ದೈತ್ಯರ ಶಿರವ ಸೇರಿಸಿ ತಮಸ್ಸಿಗೆ ಭೋರೆಂಬೊ ತುತ್ತೂರಿ ಕಾಳಿ ಹಿಡಿಸುವರಾರೆ 2 ವೆಂಕಟನ ದ್ವೇಷಿಗೆ ಸಂಕಟ ಬಿಡದೆಂದುಡಂಕರದಿಂದಲೆ ಡಂಕಿಯ ಹೊಯಿಸುವರಾರೆ 3 ಖೂಳ ದೈತ್ಯರ ಶಿರವ ಸೀಳಿ ತಮಸಿಗೆ ಹಾಕಿಭಾಳಾ ರೌಸದಿಂದ ಕಾಳಿಯ ಹಿಡಿಸುವರಾರೆ4 ಭಾಗವತರ ಸುಖ ಹೀಗೆ ಉನ್ನತ ಎಂದು ಈಗ ತೋರುತ ಭರದಿ ನಾಗಸ್ವರ ಹಿಡಿಸುವರಾರೆ5 ಅಂಬುಜನಾಭನ ನಂಬಲು ಸುಖವಿತ್ತು ಬಂಬಂಬೆನುತ ಶಂಖವ ಸಂಭ್ರಮದಿ ಹಿಡಿಸುವರಾರೆ 6 ನಿರ್ಜರ ಹಂಸನೀ ಹೌದೆಂದು ಸಂಶಯ ಬಿಡಿಸುತ ಕಂಸಾಳೆ ಹೊಯ್ಸುವರಾರೆ7 ಎಷ್ಟೆಷ್ಟು ಕಾಲಕ್ಕೂ ಕೃಷ್ಣಗೆ ದೊರೆ ಎಂದುಶ್ರೇಷ್ಠಾದ ಜಾಂಗುಟಿ ಫಟ್ಯಾಗಿ ಹೊಯಿಸುವರಾರೆ8 ಕಬ್ಬು ಬಿಲ್ಲಿನಯ ಒಬ್ಬ ಜಗದೀಶನೆಂದುಅಬ್ಬರದಿ ಕರಣೆ ನಿರ್ಭಯದಿ ಹಿಡಿಸುವರಾರೆ9 ಮಿತಿಯಿಲ್ಲದೆ ಶೃತಿ ಸಾರುವ ಮಧ್ವಮvವೆÉ ಅಧಿಕವೆಂದು ಶೃತಿಯನೆÉ ಹಿಡಿಸುವರಾರೆ 10 ತಂದೆ ರಾಮೇಶನ ಹೊಂದಲು ಸುಖವೆಂದು ಸುಂದರ ಕೊಳಲನೆ ಮುಂದೆ ಊದಿಸುವರಾರೆ 11
--------------
ಗಲಗಲಿಅವ್ವನವರು
ಸಜ್ಜನ ಬಾಲೆಯರ ಲಜ್ಜಗೈಸಿದಿಹೆಜ್ಜೆನಿಕ್ಕಿ ಸಿದೆಯೊ ಕೃಷ್ಣಗೆಜ್ಜೆಕಟ್ಟಿಸಿದ್ಯೊಗೋವಳ ಹೆಜ್ಜೆನಿಕ್ಕಿಸಿದ್ಯೊ ಪ.ಅರಿಷಿಣ ಕುಂಕುಮ ಗಂಧಧರಿಸಿ ಸೀರೆ ಕುಪ್ಪುಸ ಕ್ಯಾದಿಗೆಸರಸದ ಭೂಷಣಗಳಿಟ್ಟುಅರಸೆಯರು ಬಂದಾರೊ ಕುಣಿಯಲು 1ನಾನಾ ಪುಷ್ಪ ಬಳ್ಳಿಯೊಳಗೆಮೀನಾಕ್ಷಿಯರ ಕೂಡಿ ರಮಿಸಿಮಾನವಕಳೆದುಕೊಂಡ್ಯೊಎನುತ ತಾನು ಪಾರ್ಥನಗುತ 2ಇಬ್ಬರಿಬ್ಬರ ನಡುವೆನೀನುಒಬ್ಬನೊಬ್ಬನಾಗಿ ನಿಂತುಕಬ್ಬು ಬಿಲ್ಲಿನಯ್ಯ ಕುಣಿಸಿದಿನಿರ್ಭಯದಿಂದಲೆ ಕೃಷ್ಣ 3ಮಿತ್ರೆಯರಹೆಗಲಲ್ಲೆ ಪರಸ್ಪರಹಸ್ತನಿಟ್ಟು ಹರುಷದಿಂದನರ್ತನ ಮಾಡಿಸಿದವಿಚಿತ್ರ ಪುರುಷನೆ ಕೃಷ್ಣ 4ಕಕ್ಕಸಕುಚದ ಬಾಲೆಯರಚಕ್ರದಂತೆ ನಿಲಿಸಿ ನೀನುಢಕ್ಕಡ ಢಕ್ಕಡ ತಾಥಾಎನುತಲೆ ಧಿಕ್ಕಿಡಿ ಧಿಮಿಕಿಡಿ ಕೃಷ್ಣ 5ಬಗರಿ ಕುಚದ ಬಾಲೆಯರ ಕೂಡನಗಧರÀ ನೀ ಕುಣಿಯಲುನಗಗೀಡಾದಿತಯ್ಯ ಜಗದಿಹಗರಣಪುರುಷನೆ ಕೃಷ್ಣ6ಪುಂಡರಿಕಾಕ್ಷನು ಕೂಡಿಕೊಂಡುಅವರಕುಣಿಸುವಾಗಗಂಡರು ಬಂದರು ತಮ್ಮಹೆಂಡಿರ ನೋಡಲು ಕೃಷ್ಣ 7ಭಾಳಗೋವಳರಿಂದ ಕೂಡಿತಾಳನ್ಹಾಕಿಸಿದಿಯಯ್ಯಾಹೀಂಗೆಭಾಳರೌಸವಕೇಳಿ ಜನರುಮೇಳವಾದರೊ ಗಡನೆ 8ಶ್ರೀಶ ರಾಸಕ್ರೀಡೆ ಮಾಡಿಸೋಸಿಲೆಸುರರೆಲ್ಲ ನೋಡಿಸೂಸಿದರು ಪುಷ್ಪ ಮಳೆಯಆಸಮಯದಲಿ ಕೃಷ್ಣ 9ಚಲುವ ರಾಮೇಶ ತಾನುಜಲಕ್ರೀಡೆಯನ್ನಾಡಿಲಲನೆಯರ ಸಹಿತಾಗಿ ತಾನುಬಲು ಬಲು ಹರುಷದಲೆ ಕೃಷ್ಣ 10
--------------
ಗಲಗಲಿಅವ್ವನವರು