ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮೂಲ್ಕಿಯ ನರಸಿಂಹದೇವರು) ನಂಬಿದೆ ನಿನ್ನ ಇಂಬಿದೆಯೆಂದು ಸನ್ನುತ ಪ. ಕಂಬದಿಂದ ಕಾಣಿಸಿದ ಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ. ಭಾನುಕೋಟಿ ಭಾಸ್ಕರ ಪವ- ಮಾನನಯ್ಯ ಪ್ರಾಣದ ಸುತ್ರಾಣ ಸುಗುಣ ದೀನಜನಸಂತಾನ ಮಾನದ ಆನಂದ ಗುಣಾನಂತ ವಿತಾನಾಬ್ಧಿಶಯ ಹರಿ 1 ಎಷ್ಟೊ ಪಾಪಿ ಕನಿಷ್ಠನೆಂದು ಬಿಟ್ಟರೇನು ಬಿರುದು ಹಿರಿದು ಬರುವುದು ಸೃಷ್ಟಿಕರ್ತರಿಷ್ಟಹರ್ತ ಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2 ಚಿತ್ತಸಾಕ್ಷಿ ಚಿನುಮಯಾತ್ಮ ಸತ್ಯರೂಪ ಸದಯೋದಯ ಸದುಪಾಶ್ರಯ ದೈತ್ಯಭಂಜನ ಸತ್ಯರಂಜನ ಕ್ಷೇತ್ರಜ್ಞ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3 ಮೂಲಿಕಾಪುರ ಮೌಳಿರುತುನ ನೀಲೇಂದೀವರಶ್ಯಾಮಲ ಕಲಿಮಲಭೀಷಣ ಕಾಲಕಾಲ ವಿಶಾಲ ಭುಜಬಲ ಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ತುಪಾಕಿ ವೆಂಕಟರಮಣಾಚಾರ್ಯ
ಕಮಲನಾಭ ಹರುಷದಿಂದ ಖಗವಾಹನನ್ಹೆಗಲನೇರಿ ಬಗೆಬಗೆ ಶೃಂಗಾರವಾಗಿ ಬಂದ ರಂಗನು 1 ಅಂಬರ ಜರನಿರಿಗಳಲಿ ಕುಂದಣದುಡಿದಾರವ ಕಟ್ಟಿ ಚÉಂದುಳ್ಳ ಭುಜಕೀರ್ತಿ ಕರ್ಣಕುಂಡಲನಿಟ್ಟು2 ಶಂಖ ಚಕ್ರ ಕರಗಳಲ್ಲಿ ಕಂಕಣ ಭೂಷಣಗಳಿಂದ ಕಿಂಕಿಣಿ ನೂಪುರಗಳಿಂದ ಅಲಂಕಾರವಾಗಿ 3 ಕಸ್ತೂರಿ ಕೇಸರಿಯು ಗಂಧ ಬುಕ್ಕಿ ್ಹಟ್ಟು ಪರಿಮಳದ ಚೆಂದ ಕರ್ಪೂರ ತಾಂಬೂಲ ಬಾಯಲೊಪ್ಪುವ ರಂಗ 4 ನಿತ್ಯ ಸೂರ್ಯ ಪ್ರಕಾಶ ಮಲ್ಲಿಗೆ- ಮಾಲೆ ಮುಡಿದು ಹೊರಟ ಜಗದಮೋಹನ ರಂಗ5 ಸಾಲು ಸಾಲು ಮನೆಗಳಲಿ ಮೇಲು ಮೇಲುಪ್ಪರಿಗೆನೇರಿ ಬಾಲಕೃಷ್ಣ ಬರುವ ಭರವ ನೋಡುತ್ತಿದ್ದರು 6 ವಾರಿಗೆ ಸತಿಯೇರ ತನ್ನ ವಾರೆನೋಟದಿ ನೋಡುತ ಮಾರನಯ್ಯನು ಬಂದನು ತಾ ಬಜಾರ ಮಧ್ಯದಿ 7 ಚೆಲ್ವೆಯರೆಲ್ಲರು ಅರಳುಮಲ್ಲಿಗೆ ಕರದಲ್ಲಿ ಪಿಡಿದು ಫುಲ್ಲಾಕ್ಷನ ಮ್ಯಾಲೆ ನಗುತ ಚೆಲ್ಲುತಿದ್ದರು 8 ಯಾದವರೇಶನೆ ನಿನಗೆ ಭೇದವ್ಯಾಕೆನ್ನ ಮ್ಯಾಲೆ ನೀ ದಯಮಾಡೆನ್ನ ಮನೆಗೆನುತ ರಾಧೆ ಕರೆದಳು 9 ವಜ್ರದ ಗೊಂಬೆಯಂದದಿ ವೈಯಾರಿ ಮೆಲ್ಲನೆ ಬಂದು ಪದ್ಮನಾಭ ಬಾ ನಮ್ಮನೆಗೆನುತ ಭದ್ರೆ ಕರೆದಳು 10 ಅಂತರಂಗದಲ್ಲಿ ಕೋಟಿ ಪಂಥವ್ಯಾತಕೆನ್ನಮ್ಯಾಲೆ ಸಂತೋಷದಿ ಬಾರೆನುತ ಜಾಂಬವಂತಿ ಕರೆದಳು 11 ಸತ್ಯಭಾಮೆ ರುಕ್ಮಿಣಿದೇವಿ ಮಿತ್ರೆನೀಲಾ ಜಾಂಬವಂತಿ ಲಕ್ಷಣಾ ಕಾಳಿಂದಿ ಭದ್ರೆ ಕರೆಯುತಿದ್ದರು 12 ಇಷ್ಟುಮಂದಿ ಸತಿಯರೊಳಗೆ ನಿಷ್ಠುರವಾಗುವೆನೆಂದು ಎತ್ತ ಕಡೆಗೆ ಪೋಗಲೆಂದು ಶ್ರೀಕೃಷ್ಣ ನುಡಿದನು 13 ಹರಿಯ ಮಾತುಗಳನೆ ಕೇಳಿ ಸರುವರು ಸುಮ್ಮನೆ ನಿಲ್ಲೆ ಕರದಿ ವೀಣೆಯ ಪಿಡಿದು ಬಂದನು ಭರದಿ ನಾರದ 14 ಭಂಗ ಬಂದಿತೇನೊ ನಿನಗೆ ಇಂದೆನ್ನ ಹಿಂದೆ ಬಾರೆನುತ ನಾರಂದ ಕರೆದನು 15 ಕೇಳಿ ನಾರದರ ಮಾತು ತಾಳಲಾರದೆ ರುಕ್ಷ್ಮಿಣಿಯು ದಾನ ಒಯ್ದು ದಕ್ಕಿಸಿಕೊಂಡಿರೆಂದು ನುಡಿದಳು 16 ಅಕ್ಕನ ಮಾತಿನ ಬಾಣ ನೆಟ್ಟಿತು ಎನ್ನೆದೆಗೆ ಬಂದು ಕೃಷ್ಣ ನೀ ಕೇಳೊ ಕೇಳೆಂದು ನುಡಿದಳು ಭಾಮೆ 17 ಬಿಟ್ಟು ಬಾಣವ ಮಾಡಿ ಯುದ್ಧ ದಿಟ್ಟಳೆನಿಸುವುದೆ ಸಿದ್ಧ ಪೃಥಿವಿಯೊಳಗೆ ಬಾಣನಂದಿ ಎಂದು ಪ್ರಸಿದ್ಧಿ 18 ದಾರಿಗೆ ತೆಗೆಸಿದೆ ನೀನು ಮೋರೆಗಡ್ಡ ಮಂಡಿ ಪನ್ನಿ ಹೀನ ಕಾರ್ಯವ ಮಾಡಲು ನೀ ಅರಿಯೇನೆ ರುಕ್ಮಿಣಿ 19 ಗುಣನಿಧಿ ಗೋಪಾಲ ಹರಿಗೆ ಮಡದಿ ಎನಿಸುವುದೆ ಸರಿಯೆ ಮಣಿಯ ಕಳವು ಇಟ್ಟದ್ದು ನಿಮ್ಮ ಗುಣವ ನಾನರಿಯೆ 20 ಮಾಯಕಾರ್ತಿ ಮಾತುಗಳ ಅನ್ಯಾಯವೊ ನ್ಯಾಯವೊ ನಾನು ಬಾಯಬಿಟ್ಟರೇನುಳಿದೀತೆ ನಿನ ಮಾರ್ಯಾದೆ ರುಕ್ಮಿಣಿ 21 ಸಾಕು ಸತ್ಯಭಾಮೆ ನಿನಗೆ ಯಾಕೆ ಕೋಪ ಬಂದಿತೆಂದು ನಾಲ್ಕು ತೋಳಿಂದಪ್ಪಿಕೊಂಡನು ಶ್ರೀಕಾಂತ ನಗುತ 22 ಎಲ್ಲ ಸತಿಯರನು ತಾನಿದ್ದಲ್ಲಿಗೇ ಕರೆಸಿದ ಕೃಷ್ಣ ವಲ್ಲಭೆ ರುಕ್ಮಿಣಿಯ ಚರಣಕ್ಕೆ ಎರಗಿಸಿದನಾಗ 23 ರುಕ್ಮಿಣಿದೇವೇರ ತೊಡೆಯ ವಿಚಿತ್ರದ್ಹಲಿಗೆ ಮಂಚಮಾಡಿ ನಕ್ಷತ್ರದೊಳು ಚಂದ್ರನಂತೆ ಹೊಳೆಯುತ್ತಿದ್ದನು 24 ಆರ್ಯಳು ಎನ್ನ ಪಟ್ಟದ ಭಾರ್ಯಳು ರುಕ್ಮಿಣಿಯ ಮಾತು ಮೀರಬ್ಯಾಡಿರೆಂದೆನುತ ಸಾರಿ ಹೇಳಿದ 25 ಹಚ್ಚಿದ್ಹಗಲು ಬತ್ತಿಯಂತೆ ಹದಿನಾರು ಸಾವಿರ ಮಂದಿ ಭೀಮೇಶ ಕೃಷ್ಣನ ಚರಣಕ್ಕೆರಗಿ ನಗುತ ಕುಳಿತಿರಲು 26
--------------
ಹರಪನಹಳ್ಳಿಭೀಮವ್ವ
ಮದ ಮತ್ಸರವ ಬಿಡದನಕಾ ವಿಧ ವಿಧದ ಸಾಧನವ ಮಾಡಲೇನೋ ಪ ವೇದ ಶಾಸ್ತ್ರಗಳೋದಲೇನು ಗಂಗಾ ಗೋದಾವರಿಯಲಿ ಸ್ನಾನವ ಮಾಡಲೇನು ಸಾಧು ಕರ್ಮವಾಚರಿಸೇನು ವಿಷ್ಣು ಪಾದದಿ ಪಿಂಡ ದಾನವ ಮಾಡಲೇನು 1 ಸನ್ಯಾಸಾಶ್ರಮ ಧರಿಸಲೇನೂ ಗೋಹಿ ರಣ್ಯಾದಿಗಳಲಿ ಮಮತೆ ಬಿಟ್ಟರೇನು ಪುಣ್ಯ ಕ್ಷೇತ್ರಕೆ ಪೋಗಲೇನು ಅನ್ನ ಕನ್ಯಾದಿ ದ್ರವ್ಯದಾನವ ಮಾಡಲೇನು 2 ಪಾಪ ಕರ್ಮವ ತೊರೆದರೇನೊ ಲಕ್ಷ ದೀಪಾರಾಧನೆ ದಿನ ದಿನ ಮಾಡಲೇನು ಶಾಪಾನುಗ್ರಹ ಶಕ್ತಿ ಇದ್ದೇನು ಪೂಜಾ ಸೋಪಸ್ಕರ ಬಹುತರವಿರಲೇನು 3 ಶ್ವಾಸ ನಿರೋಧಿಸಲೇನು ಪಕ್ಷ ಮಾಸೋಕ್ತ ಧರ್ಮ ಕರ್ಮವ ಮಾಡಲೇನು ಆಸನ ಜಯ ಸಂಪಾದಿಸಲೇನು ಉಪ ವಾಸ ವ್ರತದಿ ದೇಹ ಬಳಲಿಸಲೇನು 4 ಜ್ಯೋತಿಷ್ಟೋಮ ಮಾಡಲೇನು ಲಕ್ಷ ಶ್ರೀ ತುಳಸಿ ಅರ್ಪಿಸಲೇನು ಭೂತದಯವು ಇದ್ದರೇನು ಜಗ ನ್ನಾಥ ವಿಠಲನಂಘ್ರಿ ಪೊಂದಿದ್ದವರೊಳು 5
--------------
ಜಗನ್ನಾಥದಾಸರು
ಮನೆಗೆ ಬಾರೋ ಕೃಷ್ಣ ಬೇಗನೆ ಪ ವನಿತೆಯರಕೋ ಓಡಿ ಬರುತಿಹರು ಅ.ಪ. ಕೊಳಲಿನ ಧನಿ ಕೇಳಿ ಹೆಂ_ಗಳು ನಲಿದು ಮೋಹತಾಳಿಸುಳಿದು ನಿನ್ನೆತ್ತಿಕೊಳುತಲೊಯ್ವರುಗಲ್ಲವ ಚುಂಬಿಸಿ ನುಗ್ಗು ಮಾಡುವರೊ 1 ಘಾಸಿ ಮಾಡಿ 2 ಚೆನ್ನಿಗ ಹೇಳುವೆನು ಎಂದುಗುನಿನ್ನನು ಬಿಟ್ಟರೇನುಉನ್ನತ ಗದುಗಿನ ವೀರನಾರಾಯಣಚೆನ್ನಾಗಿ ದಢದಢ ಹೆಜ್ಜೆಯನಿಕ್ಕುತಾ 3
--------------
ವೀರನಾರಾಯಣ
ವಾಲೆ ಬಂದಿಹುದೇ ತಂಗೀಯನ ವ್ವಾಲೆ ಬಂದಿಹುದೆ ಪ. ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ ವಾಲೆ ಅ.ಪ. ಅಂಬುರುಹೋದ್ಭವ ಅಖಿಲ ಸುರಾ ರಂಬರದಲಿ ಸ್ತುತಿಸೆ ಶಂಬರಾಸುರ ಸಂಹರನೈಯ್ಯನ ಹಡಗು ಅಂದು ಮಾರುತನಿಲ್ಲದೆ ಗೋಪಿ ಚಂದನಸಹಿತನಿಲ್ಲೇ ಮಧ್ಯದಿಂದಲೀ ಅಂದದಿ ಮುನಿಗಳ ನಿಂದು ಸ್ತುತಿಸುತಾ ನಂದದಿಂದಾನಂದಕಂದನ ಮುಂದೆ ಕರೆಯೆ ಮುನಿ ದಂದುಗ ಹರಿಸುತ ಬಂದೆನೆಂದು ಇಂಥಾ 1 ಬಂದೆನೆಂದು ತೋರನೆ ಹರಿ ನಿಂದಿರುವನೆ ಬದಿಲಿ ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ ಬಂದ ಭಕ್ತರ ಸೇವಿಸೆಂದು ಬರೆದಿಹ ಬಂಧು ನಾನೆಂದು ತಿಳಿ ಎಂದು ಹೇಳುವತೆರ ಬರಹವ ಇಂದಿರೇಶ ತಾ ಬಂದು ನಿಂದು ಕೈ ಪಿಡಿದ ವಾಲೆ 2 ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ ಶುಭ ಪತ್ರವ ದಾಸಳಾದ ಎನ್ನ ಮನದಾಸೆ ಪೂರೈಸುವ ವಾಲೆ ವಾಸುದೇವನ 3
--------------
ಸರಸ್ವತಿ ಬಾಯಿ
(ಮೂಲ್ಕಿಯ ನರಸಿಂಹದೇವರು)ನಂಬಿದೆ ನಿನ್ನ ಇಂಬಿದೆಯೆಂದುಅಂಬುಜಾಯತಾಂಬಕ ತ್ರ್ಯಂಬಕಸನ್ನುತಪ.ಕಂಬದಿಂದ ಕಾಣಿಸಿದಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.ಭಾನುಕೋಟಿಭಾಸ್ಕರಪವ-ಮಾನನಯ್ಯ ಪ್ರಾಣದಸುತ್ರಾಣಸುಗುಣದೀನಜನಸಂತಾನ ಮಾನದಆನಂದ ಗುಣಾನಂತ ವಿತಾನಾಬ್ಧಿಶಯಹರಿ1ಎಷ್ಟೊ ಪಾಪಿ ಕನಿಷ್ಠನೆಂದುಬಿಟ್ಟರೇನು ಬಿರುದು ಹಿರಿದು ಬರುವುದುಸೃಷ್ಟಿಕರ್ತರಿಷ್ಟಹರ್ತಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2ಚಿತ್ತಸಾಕ್ಷಿ ಚಿನುಮಯಾತ್ಮಸತ್ಯರೂಪ ಸದಯೋದಯ ಸದುಪಾಶ್ರಯದೈತ್ಯಭಂಜನ ಸತ್ಯರಂಜನಕ್ಷೇತ್ರಜÕ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3ಮೂಲಿಕಾಪುರ ಮೌಳಿರುತುನನೀಲೇಂದೀವರಶ್ಯಾಮಲ ಕಲಿಮಲಭೀಷಣಕಾಲಕಾಲ ವಿಶಾಲ ಭುಜಬಲಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ