ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬಾಗಿಲು ತಡೆ) ಸಾರಸ ನಿಲಯೆ ಸಾಗರ ತನಯೆ ಸಾರೆ ಬಂದೆನು ಈಗ ಬೇಗ ಸಾರಿ ಬಾಗಿಲ ತೆಗೆ ಬೇಗ ಪ. ಸಾರು ಸಾರೆಲೊ ಸಾರಿಕೂಗುವನಾರೊ ಸಾರು ಬಾಗಿಲ ತೆಗೆ ನಾನು ಅ.ಪ. ಏಕಿಂತು ಕೋಪವೆ ಕೋಕಿಲಾರವೆ ನೀಂ ಕಟಾಕ್ಷಿಸು ಎನ್ನ ಮುನ ಸಾಕುಮಾಡುವುದಿದೆನ್ನ 1 ಸಾಕು ಸಾಕಿಂತು ಏಕೆ ಕೂಗುತಿರ್ಪೆ ಕಾಕು ನುಡಿಗಳುಸಲ್ಲ 2 ಪುಂಡರ ತಡೆವುದ ಕಂಡುಂಟು ಜಗದೊಳು ಗಂಡನ ತಡೆವರೆ ಭಾಮೆ ರಾಮೆ ಕಂಡವರೇನೆಂಬರೆ ಭಾಮೆ 3 ಗಂಡನಾರಿಗೆ ಹೆಂಡತಿಯಾರಿಗೆ ಪುಂಡಾಟವಾಡದೆ ಪೋಗು ಸಾಗು ಭಂಡನಾಗಿರ್ಪೆ ಪೋಗು 4 ವಲ್ಲಭೆ ನಿನ್ನೆದೆ ಕಲ್ಲಾಗಿರುವುದೆ ಬಲ್ಲವಳೆಂಬುವುದೆಲ್ಲೆ 5 ಬಲ್ಲೆ ಬಲ್ಲೆನೀ ಚಲ್ಲಾಟಗಳ ಸೊಲ್ಲಿಸದಾರನ್ನು 6 ದಶರಥರಾಮನೆ ಸೀತೆ ಖ್ಯಾತೆ ಪುಸಿಯಲ್ಲವೆಲೆ ಭೀತೆ 7 ನಿಶಿಚರರಿಲ್ಲಿಹರೇನೈ ಜ್ಞಾನಿ ವಿಷಮವರ್ತನವೇನೈ 8 ಅಂಗನೆ ನಿನ್ನ ಮೋಹನಾಂಗನಾದ ಶ್ರೀ ರಂಗ ನಾನೆಲೆ ಚಪ ಲಾಕ್ಷಿ ಲಕ್ಷ್ಮಿ | ಭಂಗಿಸಬೇಡೆನ್ನ ಲಕ್ಷ್ಮಿ 9 ತುಂಗ ವಿಕ್ರಮ ರಘು ರಾಮ ಶ್ಯಾಮ ರಂಗ ಕಾರುಣ್ಯಧಾಮ 10 ಪರಿ ಪೇಳುತೆ ಕೈಪಿಡಿದಳು ತ ನ್ನೋಪನ ವಂದಿಸಿ ರಾಣಿ ರಮಣಿ ಕೋಪರಹಿತೆ ಸುವಾಣಿ 11 ಭೂಪಶೇಷಾದ್ರೀಶನು ಕಾಂತೆಯ ಕೈಪಿಡಿದನು ನಲವೇರೆ ಅರರೆ ತಾಪಸನುತ ನಲವೇರೆ 12
--------------
ನಂಜನಗೂಡು ತಿರುಮಲಾಂಬಾ
ತಾಯಿ ಪಾಲಿಸು ಎನ್ನ ದಯದಿ ಗಾಯತ್ರಿದೇವಿ ಸಿದ್ಧಿಯನಿತ್ತು ಸಲಹಾ ಸಾವಿತ್ರಿ ಪ ಪಾವನ ಸುಚರಿತ್ರೆ ಮಾಯೆ ತ್ರಿಜಗಸ್ತೋತ್ರೆ ಕಾಯೆ ಸಿದ್ಧಿಸಿ ಎನ್ನ ಕಾಯಾ ಮಂಗಲಗಾತ್ರೆ ಅ.ಪ ಸಾರಸಾಕ್ಷಿಯೆ ದಯಾಪಾರಾವಾರಳೆ ನಿನ್ನ ಚಾರುಚರಿತಂಗಳು ಸಾರುವೆ ನಿಜಮಂತ್ರ ಮೂರುಲೋಕದ ಸೂತ್ರಧಾರಿ ನೀ ನಿಜ ಓಂ ಕಾರಿ ಕರುಣಿಸಿ ಸುತನ ಗಾರುಮಾಡದೆ ಪೊರೆ ಅ ಪಾರ ಮಹಿಮಳೆ ಬಾರಿಬಾರಿಗೆ ಸೇರಿ ನಿನ್ನಪಾದ ವಾರಿಜಕೆ ನಾ ಸಾರಿ ಬೇಡುವೆ ಧೀರಳೆ ಸುವಿ ಚಾರಿ ನಿಜಸುಖ ತೋರು ಬೇಗನೆ 1 ಮನುಮುನಿಗಳಿಗೊಲಿದು ಘನಸುಖಸಾಮ್ರಾಜ್ಯ ವನು ಕೊಟ್ಟು ಸಲಹಿದಿ ಕನಿಕರದೊಡನೆ ಮಿನುಗುವ ಶತಕೋಟಿದಿನ ಕರಪ್ರಭಾಮಯೆ ಅನುಪಮುನಿಜಜ್ಞಾನವನು ನೀಡು ಬೇಗನೆ ಚಿನುಮಯಾತ್ಮಳೆ ಘನಕೆ ಘನ ನಿನ್ನ ವರರುಹಂಘ್ರಿಯ ನೆನೆವೆನನುದಿನ ಜನನಿ ಅಣುಗನ ಕೊನೆಯಜಿಹ್ವೆಯೊಳ್ ಪ್ರಣಮ ಬರಿಯಮೈ ಮಣಿವೆ ಕಲ್ಯಾಣೆ 2 ಪನ್ನಂಗಧರ ಸುರಸನುತ ಶ್ರೀರಾಮ ಸುನ್ನತ ಮಹಿಮಂಗಳನ್ನು ಬಲ್ಲವಳೆ ಅನ್ನ ಪೂರ್ಣೆಯೆ ಉಮೆ ಪನ್ನಂಗವೇಣಿಯೆ ಮನ್ನಿಸು ಬಡವನ ಬಿನ್ನಪ ಕರುಣೆ ಭಿನ್ನವಿಲ್ಲದೆ ನಿನ್ನ ಬೇಡುವೆ ಉನ್ನತೋನ್ನತ ಪದವನಿತ್ತು ಧನ್ಯನೆನಿಸೌ ಎನ್ನ ಮನದಿಷ್ಟವನ್ನು ಪಾಲಿಸಿ ವಿಮಲ್ಹøದಯೆ 3
--------------
ರಾಮದಾಸರು