ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನುಡಿದಂತೆ ನಡಿಯಬೇಕು ಪಿಡಿದು ಸುಪಥ ಧ್ರುವ ಸಾಧಿಸಿ ತಿಳಿಯದೆ ತನ್ನೊಳು ಖೂನ ಬೋಧಿಸಿ ಹೇಳುದು ಇನ್ನೊಬ್ಬರಿಗೇನ ಅದಿತತ್ವದ ಗತಿಯ ನಿಜಸ್ಥಾನ ಭೇದಿಸುವುದು ಸದ್ಗುರು ಕೃಪೆ ಙÁ್ಞನ 1 ನಡೆನುಡಿ ಒಂದಾದರೆ ಬಲು ಮೇಲು ದೃಢಭಕ್ತಿಗೆ ಒಂದಿದೆ ತಾ ಕೀಲು ಪಡೆವದು ಮನಮಾಡಿ ಮೀಸಲು ಬಿಡದೆ ಮಾಡುವ ಗುರು ದಯ ಕೃಪಾಳು 2 ಹೇಳಿಕಿಗಿದೆ ಬಿದ್ದದೆ ಬಲುಜನ ತಿಳುಹಿಸಿಕೊಡಲಿಕ್ಕಿಲ್ಲದೆ ಙÁ್ಞನ ತಿಳಿವು ತಿಳಿದರೆ ತನ್ನೊಳು ನಿಧಾನ ಹೊಳವ ಮಹಿಪತಿ ಗುರು ನಿಜ ಚಿದ್ಘನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೊಳ್ಳ ಕಳ್ಳೊಟ್ಟೆ ಜಂಬಾಳಗಟ್ಟೆ ಸಂಸಾರ ನೋಡಮ್ಮಲೊಳ್ಳ ಕಳ್ಳೊಟ್ಟೆ ಸರಸನಂಬಲುಗತಿಯದು ಲೊಳ್ಳಟ್ಯಮ್ಮಮ್ಮಪಹೆಂಡಿರು ಮಕ್ಕಳು ತಂದೆ ತಾಯಿಗಳುಭಾಗ್ಯವು ಲೊಳ್ಳಟ್ಯಮ್ಮಮ್ಮಚಂಡ ಯಮದೂತರುಮಂಡೆತಿವಿವಾಗಬಿಡಿಸುವರಾರು ಇಲ್ಲಮ್ಮ1ಶ್ರೇಷ್ಠತೆ ಚೆಲುವಿಕೆ ವಸ್ತ್ರವು ಪ್ರಾಯವುಸಿದ್ಧಿಯು ಲೊಳ್ಳಟ್ಯಮ್ಮಮ್ಮದುಷ್ಟಮದೂತರು ದುಬುದುಬು ಬಡಿವಾಗಬಿಡಿಸುವರಾರು ಇಲ್ಲಮ್ಮ2ವಾರೆ ಮುಂಡಾಸವು ಗೀರು ಗಂಧಗಳುಪೋರತನವು ಲೊಳ್ಳಟ್ಯಮ್ಮಮ್ಮಘೋರ್ಯಮದೂತರು ಘರ್ಜಿಸುತ ಒಯ್ವಾಗಬಿಡಿಸುವರಾರು ಇಲ್ಲಮ್ಮ3ಕನಸಿನ ತೆರವಿದು ಸಂಸಾರವೆಂಬುದುಅನುಮಾನವಿದಕಿಲ್ಲಮ್ಮಮ್ಮಕನಸೆಂದು ನಿಶ್ಚೈಸೆ ಕಾಲನು ಬಾರನುಮನದಲಿ ತಿಳಿದುಕೊ ನೀನಮ್ಮ4ತನ್ನನು ಮರೆತು ಸಂಸಾರ ನೆಚ್ಚಲುತಿರುಗುವ ಜನ್ಮವ ನಮ್ಮಮ್ಮಚೆನ್ನ ಚಿದಾನಂದ ಗುರುವೆಂದು ನಂಬಲುಜನ್ಮವ ಕಳೆವುವು ತಿಳಿಯಮ್ಮ5
--------------
ಚಿದಾನಂದ ಅವಧೂತರು