ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ. ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ 1 ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ2 ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನÀ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆÉ 3 ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ 4 ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ 5 ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ 6 ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ 7
--------------
ವಾದಿರಾಜ
ನೆನೆಯುತ್ತ ತಿರಗುವೆನಯ್ಯ ಜೀಯ ನಿನಗ್ಯಾಕೆ ದಯಬಾರದಯ್ಯ ಪ ಮನುಮುನಿನುತ ನಿಮ್ಮ ವನÀರುಹಂಘ್ರಿಯಧ್ಯಾನ ಅನುದಿನ ಬಿಡದೆ ಅ.ಪ ಪೋಷಿಸಲೊಲ್ಲ್ಯಾಕೋ ನೀನು ನಿಮ್ಮಯ ದಾಸನು ನಾನಲ್ಲವೇನು ದೇಶದೇಶಂಗಳನ್ನು ನಾನು ಬಿಡದೆ ಘಾಸ್ಯಾದೆ ತಿರುತಿರುಗಿನ್ನು ಈಸು ದಿವಸ ವ್ಯರ್ಥ ಮೋಸವಾದೆನು ನಿಮ್ಮ ಧ್ಯಾಸ ಮರೆದು ಭವಪಾಶವಿದೂರನೆ 1 ಪರುಷವ ಶಿರದೊಳು ಪೊತ್ತು ಎ ನ್ನಿರವ್ಹಸಿದು ಬಳಲುವಂತಿತ್ತು ಕರದಲ್ಲೆ ಮುಕುರುವಿತ್ತು ಅರಿಯದೆ ಹಂಚಿನೋಳ್ಹಲ್ಕಿಸಿದಂತಿತ್ತು ಪರಮಪುರುಷ ನಿಮ್ಮ ನೆರೆನಂಬಿ ಬದುಕದೆ ದುರಿತದಿಂ ಬಳಲಿದೆ ಪರಿಪರಿ ಹರಿಹರಿ2 ವರಭಕ್ತರಭಿಮಾನ ನಿನಗೆ ಇಲ್ಲೇನು ಸ್ಥಿರ ಮುಕ್ತಿ ಪದದಾಯಕನೆ ಸ್ಥಿರವಾಗಿ ಅರಿದು ನಾ ನಿಮಗೆ ಮರೆಹೋದೆ ಕರುಣದಿ ಕೊಡು ವರಸುತಗೆ ಅರಘಳಿಗ್ಯಗಲದೆ ಸ್ಮರಿಪೆ ನಿಮ್ಮಯ ಪಾದ ಶರಣಾಗತರ ಪಾಲ ಸಿರಿವಂತ ಶ್ರೀರಾಮ 3
--------------
ರಾಮದಾಸರು