ಒಟ್ಟು 21 ಕಡೆಗಳಲ್ಲಿ , 1 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಜರು ಹರಿಭಟರು ದುರಿತಾರಿಗಂಜರು ಹರಿಭಟರುಮಂಜಿನ ದಂಡೋಡಿಪ ಮೂಡಣವರಕಂಜಸಖನ ಪೋಲ್ವವರು ಪ.ಅಗ್ಗಳಿಕೆಯೈಗಣೆಯನ ಬಲದಲಿಮುಗ್ಗದೆ ಕುಲಿಶೆದೆಯಲ್ಲಿ ವೈರಾಗ್ಯಾಸ್ತ್ರದಿ ಈರೈದಾಳಾಣ್ಮನಕುಗ್ಗಿಸಿ ಸೆರೆ ತರುವವರು 1ಮೂರರಾಯುಧ ಹತಿಭಯಜರಿದುವಾರಣನಾಕೆರಡಿರಿದು ಶೃಂಗಾರದ ರಾಹುತರೆಂಟರ ಸದೆವರುವೀರಹರಿಧ್ವನಿಯವರು2ಎರಡೊಂಬತ್ತು ನಾದಿಕಾಭೇರಿಎರಡು ಕಹಳೆಯ ಚೀರಿಸರಕುಮಾಡಿ ನವಕಲಿ ಸಂಜಿತರುಹರಿಮಂಡಿತ ನವರಥರು3ಒಂದೆ ನಿಷ್ಠೆಯ ರಣಧ್ವಜ ಮೇರೆಗೆಹಿಂದಾಗದೆ ಮುಂದಾಗಿಒಂದಿಪ್ಪತ್ತರಿ ವ್ಯೂಹ ಕೆಡಹುವರುಕುಂದದ ಧೃತಿ ಮತಿಯವರು 4ಹಂಗಿನ ಸ್ವರ್ಗವ ಸೂರ್ಯಾಡುವರುಡಂಗುರ ಹೊಯ್ಯುವ ಮಹಿಮರುರಂಗ ಪ್ರಸನ್ವೆಂಕಟಪತಿ ಭಟರುಮಂಗಳಪದ ಲಂಪಟರು 5
--------------
ಪ್ರಸನ್ನವೆಂಕಟದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು
ಆದಿಗುರುರಾಯ ನಮ್ಮ ಮುಖ್ಯ ಪ್ರಾಣಭವವ್ಯಾಧಿ ಕೋಟಿ ಭೇಷಜನೆಮುಖ್ಯಪ್ರಾಣಪ.ಜೀವ ತೊರೆದ ಪ್ಲವಗಗಣಕೆಮುಖ್ಯಪ್ರಾಣಸಂಜೀವನ ತಂದೌಷಧವನಿತ್ತಮುಖ್ಯಪ್ರಾಣಹೇವಿನ ರಕ್ಕಸರಮಾರಿಮುಖ್ಯಪ್ರಾಣಹನುಮದೇವ ದೇವ ರಾಘವಪ್ರಿಯಮುಖ್ಯಪ್ರಾಣ1ಸೋಜಿಗದಿ ಕೀಚಕನ ಕೊಂದಮುಖ್ಯಪ್ರಾಣಭೀಮಆಜನುಮ ಅಸಹಾಯಶೂರಮುಖ್ಯಪ್ರಾಣರಾಜಸೂಯಕೆ ಮುಖ್ಯಕರ್ತಾಮುಖ್ಯಪ್ರಾಣಕ್ಷಾತ್ರತೇಜಪೂರ್ಣ ಕೃಷ್ಣಾಂಕಿತನೆಮುಖ್ಯಪ್ರಾಣ2ರೌಪ್ಯಪೀಠದಿ ಕೃಷ್ಣಾರ್ಚಕನೆಮುಖ್ಯಪ್ರಾಣಮಧ್ವ ಸಾರೂಪ್ಯ ಮುಖ್ಯದ ಮುಕ್ತಿದಾತಮುಖ್ಯಪ್ರಾಣಗೌಪ್ಯ ಶ್ರುತ್ಯಜ್ಞಾಚಾರ್ಯನೆಮುಖ್ಯಪ್ರಾಣದೇದೀಪ್ಯ ಪ್ರಸನ್ವೆಂಕಟಪತಿಪ್ರಿಯಮುಖ್ಯಪ್ರಾಣ3
--------------
ಪ್ರಸನ್ನವೆಂಕಟದಾಸರು
ಎನ್ನ ಭಕುತಿ ನೋಡಲು ಎಳ್ಳನಿತು ಹುರುಳಿಲ್ಲನಿನ್ನ ನಾಮವೆ ನಾ ನಂಬಿದಮುನ್ನೆಲೆಕೃಷ್ಣಪ.ನಿಚ್ಚನೀರೊಳಗೆ ಪೋಗಿ ಮುಳುಗಿ ಮುಳುಗಲೇನುಮತ್ಸ್ಯಸ್ನಾತಿಯೆನಿಸುವುದೆ ಮಹೀತಳದಿಅಚ್ಯುತನಿನ್ನಯ ಧ್ಯಾನವಿಲ್ಲದೆ ದ್ವಾದಶನಾಮಹಚ್ಚುವೆನು ಮೊಲನಾಳು[ವೇಷ]ವಿಟ್ಟ ತೆರದಿ 1ಬಯಲು ಡಂಬಕದಿಂದ ಬಹಳ ತುಲಸೀಮಾಲೆನಯದಿ ಕಂಠದೊಳಾಂತಪಾರ ಗರ್ವದಿಆಯಾಟೆಸಬಟ್ಟೆನು ಹರಿದಾಸನೆನಿಪೆನೆಂದು¥ಯೋನಿಧಿವಾಸ ನಿನ್ನ ಪದವ ಲಕ್ಷಿಸೆ ನಾ 2ಮುಸುಕು ಮೌನದಿ ಹರಿಯೆಂದು ಜಪಿಸಲಿಲ್ಲವಸುಧೆವಸುಕಾಂತೆಯರ ಚಿಂತಿಪೊಹರಿದಾಸ ಬೆಳ್ವಕ್ಕಿಯಂತೆನಗೆ ಹೇಯಂಗಳಿಲ್ಲಪ್ರಸನ್ವೆಂಕಟಪತಿ ತಪ್ಪ ಕಾಯೊಜೀಯ3
--------------
ಪ್ರಸನ್ನವೆಂಕಟದಾಸರು
ತಲ್ಲಿಕಾರರು ನಿನ್ನ ಬಂಟರು ರಂಗನಿಲ್ಲಲೀಸರು ಸಂಸಾರಿಗಳನು ಕೃಷ್ಣ ಪ.ಮಳ್ಳಿದರಾಗಿ ಮಾತಾಡಿ ಬಲುಂಡುಟ್ಟುಇಲ್ಲದ ತಪ್ಪನೆಣಿಸಿ ಹೊರಿಸಿಸುಳ್ಳುಕಳವು ಹಾದರದ ಪಾಪಭವಬಳ್ಳಿಯ ಹರಿದು ಮೊಳೆಯನೊತ್ತಗೊಡರು 1ಕಾಂಚನವಿಡಿದು ಕಕ್ಕಸಬಟ್ಟು ಪೂರ್ವದಸಂಚಿತದಿ ನರಪಶುಗ್ರಾಸದಮುಂಚುವ ಬಣವೆಗೆ ಕಿಚ್ಚಿಕ್ಕಿ ಹುಡಿದೂರಿಪಂಚಾನನಂತೆ ಖೋ ಇಟ್ಟು ಕೂಗುವರು 2ಇದಿರೆದ್ದು ಕರೆದು ಮನ್ನಿಸಿ ಪೂಜಿಸಿಪಾದೋದಕ ಪ್ರೋಕ್ಷಿಸಿಕೊಂಡು ಮರೆಹೊಕ್ಕರೆಬದಿಯ ಸಂಪದ ಬಂದ ಕಬ್ಬು ಬಾಳೆÉ ನೆಲ್ಲುಗದ್ದೆಯ ಸಂಹರಿಸುವರುಪಕಾರಿಗಳು 3ಛಲದಿ ಮಂದಿರ ಹೊಕ್ಕು ಹರಿಸೇವೆ ಗೊಂದಣಗಳಲಿ ಬೇಡಿ ಚಾಮುಂಡೆರೋಡಿಸಿಹೊಲ ಮನೆ ಮಧ್ಯದ ಪಾಮರರ ಹಿಡಿ ತಂದುಬಲು ಕಾಸಿಸಿ ಮುದ್ರೆಯೊತ್ತದೆ ಬಿಡರು 4ಈಪರಿಭವಸುಖಸೂರ್ಯಾಡಿಎಳೆದೊಯ್ದುಶ್ರೀಪದಪುರದಿ ಸೆರೆಯಿಕ್ಕುವರುಶ್ರೀಪ್ರಸನ್ವೆಂಕಟಪತಿ ಮುಖ್ಯ ಪ್ರಾಣೇಶಈ ಪುಂಡರಿಗೆ ಹೇಳೊ ಇವರ ಸಾಕೆಂದು 5
--------------
ಪ್ರಸನ್ನವೆಂಕಟದಾಸರು
ದಾಟುವೆನೆಂದರೆ ದಾಟು ಹೊಳೆಯುಕೈಟಭಾಂತಕ ಭಟರಿಗೆ ಭವಜಲವು ಪ.ಪೂರ್ವಯಾಮದಿ ಹರಿಗುಣಕರ್ಮನಾಮನಿರ್ವಚನದಿ ಕೀರ್ತನೆ ಮಾಡುವ ಮಹಿಮಉರ್ವಿಯ ಮೇಲಿದ್ದು ಒಲಿಸಿಕೊಂಡನು ಸುರಸಾರ್ವಭೌಮನ ಸೀತಾರಾಮನ 1ಜಲದಲಿ ಮಿಂದೂಧ್ರ್ವ ತಿಲಕಿಟ್ಟು ನಲಿದುತುಲಸಿಕುಸುಮಗಂಧ ಅಗ್ರದ ಜಲದಿನಳಿನೇಶನಂಘ್ರಿಗರ್ಪಿಸಿ ಸಹಸ್ರನಾಮಾವಳಿಯಿಂದ ಧೂಪದೀಪಾರತಿ ಬೆಳಗಿ 2ಪರಮಾನು ಯೋಗಾವಾಹನೆ ವಿಸರ್ಜನೆಯುಸ್ಮರಣೆ ವಂದನೆ ಪ್ರದಕ್ಷಿಣೆ ನರ್ತನವುವರಗೀತಪಠಣೆ ಭಾಗವತಾ ಶ್ರವಣವುತ್ವರಿಯದಿ ಭೂತಕೃಪೆಯಲ್ಲಿ ಮನವು 3ಗುರುಪಾದಪದ್ಮದಿ ಬಲಿದು ವಿಶ್ವಾಸಗುರುಕೃಪೆಯಿಲ್ಲದ ಪುಣ್ಯ ನಿಶ್ಯೇಷಗುರುಬೆನ್ನಟ್ಟಿದ ಕರಿಗಡ್ಡಹಾಸ ಹಾಸಗುರುಗಳ ಮರೆದು ಕಳೆಯನೊಂದುಶ್ವಾಸ4ಈಪರಿಹರಿಪುರ ದಾರಿಯ ತೊಲಗಿಕಾಪುರುಷರುಭವಮಡುವಲಿ ಮುಳುಗಿಆಪತ್ತು ಪಡುವರ ನೋಡಿ ಬೆರಗಾಗಿಶ್ರೀ ಪ್ರಸನ್ವೆಂಕಟಪತಿ ನಕ್ಕನಾಗಿ 5
--------------
ಪ್ರಸನ್ನವೆಂಕಟದಾಸರು
ದೇವಿಯನೆತ್ತಿದನಾರೆಲಮ್ಮಾ ನಮ್ಮದೇವ ಸಿರಿಪತಿ ಕಾಣೆಲಮ್ಮಾದೇವಿ ನಮ್ಮ ದೇವರು ಬಂದರು ಕಾಣಮ್ಮ ಪ.ಕಣ್ಣೆವೆ ಇಕ್ಕದೆ ಮಾತಿಗೆ ಮನವಿಟ್ಟಸಣ್ಣದೊಡ್ಡನಾಹನಾರೆಲಮ್ಮಉನ್ಮತ್ತಖಳಸೋಮಕನವೈರಿಹೊಸ ಹೊನ್ನಬಣ್ಣದ ಮಚ್ಛವತಾರಿ ಅಲ್ಲೇನಮ್ಮ 1ಸಾರಿಸಾರಿಗೆ ಉಯ್ಯಾಲಿಡುತಲಿ ಮುಸುಡನುತೋರಿ ಜಾರಿದವನಾರೆಲಮ್ಮಆರಿಗು ಮೀರಿದಮಂದರಬೆನ್ನಲಿಭಾರಾಂತ ಶ್ರೀಕೂರ್ಮನಲ್ಲೇನಮ್ಮ 2ಘರ್ಘರಿಸುತ ಕಾಲಕೆದರಿ ಜಗದಗಲಭೋರ್ಗರೆವುತಲಿಹನಾರೆಲಮ್ಮದುರ್ಘಟ ದೈತ್ಯನ್ನ ದಂಷ್ಟ್ರದಿ ಚುಚ್ಚಿದನಘ್ರ್ಯವರಾಹದೇವನಲ್ಲೇನಮ್ಮ3ಕೂಗುತÀ ಕೊಲ್ಲುತ ಕಿಡಿಯನುಗುಳುತಲಗುಬಗೆದವನಾರೆಲಮ್ಮನೀಗಿದುಷ್ಟನ ಶರಣಾಗತ ಶಿಶುರಕ್ಷಯೋಗಿನರಹರಿ ಅಲ್ಲೇನಮ್ಮ4ಭೂಮಿ ಆಕಾಶಕೆ ಒಬ್ಬನೆ ಹಬ್ಬುತಸೀಮೆಯ ಮುಚ್ಚುವನಾರೆಲಮ್ಮಹೇಮಹೋಮದಿಮತ್ತಬಲಿಯನೊತ್ತ್ಯಾಳಿದಸಾಮದ ವಾಮನನಲ್ಲೇನಮ್ಮ 5ಸಾವಿರ ಕೈಯ್ಯವನಳಿದು ಕಡಿದು ತಾನೆಹೇವದಟ್ಟಿವನಾರೆಲಮ್ಮಈ ವಸುಧೆಯ ಭಾರವಿಳುಹಿದ ವೀರ ಭೂದೇವಕುಲದ ರಾಮನಲ್ಲೇನಮ್ಮ 6ಕರಡಿಕೋಡಗಕೊಂಡು ಕಡಲೊಳಗಾಡಿದಹುರುಡಿಲ್ಲದ ಬಿಲ್ಲನುಳ್ಳನಾರೆಲಮ್ಮಸರಕುಮಾಡಿ ರಕ್ಕಸರನೊದ್ದಸಮೀರಜವರದ ಸೀತಾರಾಮ ಅಲ್ಲೇನಮ್ಮ 7ಬಂಡಿ ಕುದುರಿ ಗೂಳಿ ಹಕ್ಕಿ ಸೀಳಿ ಗೊಲ್ಲಹೆಂಡಿರೊಳಾಡುವನಾರೆಲಮ್ಮಪಾಂಡವಪಾಲ ರುಕ್ಮಿಣಿ ವಿಜಯನುಬಂಡಿಕಾರ ಕೃಷ್ಣನಲ್ಲೇನಮ್ಮ 8ಉಡುಗೆಯನುಡದಂತರಾಟದಿ ಕದ ತಪ? ವಿದ್ದಮಡದೇರ ಕೆಡಿಸಿದನಾರೆಲಮ್ಮಮೃಡಸುರರುಬ್ಬಸಬಡಿಸುವ ಬೌದ್ಧರಕೆಡಿಪ ಮೋಹನ ಬುದ್ಧನಲ್ಲೇನಮ್ಮ 9ವಾಜಿಯನೇರಿ ಠೇವಿಡಿದು ಗಡಬಡಿಸಿಮೂಜಗ ಸುತ್ತುವನಾರೆಲಮ್ಮಮಾಜಿದ ಪುಣ್ಯವನೆತ್ತಿ ಕಲಿಯ ಕೊಂದಸೋಜಿಗದ ಕಲ್ಕಿ ಅಲ್ಲೇನಮ್ಮ 10ಮುಗ್ಧರಾಗಲಿ ಪ್ರೌಢ ಬಂಟರಾಗಲಿ ಕರೆದರೆದ್ದೋಡಿ ಬಂದವನಾರೆಲಮ್ಮಸಿದ್ಧಪುರುಷ ಪ್ರಸನ್ವೆಂಕಟಪತಿಸಾಧಿಸಿ ಪಾಡಿದಲ್ಲಿದ್ದನಮ್ಮ 11
--------------
ಪ್ರಸನ್ನವೆಂಕಟದಾಸರು
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ನಿನ್ನರಮನೆ ಕಾಯ್ವ ಪಶುದೇಹಧಾರಿಯಮಾಡುಕಂಡ್ಯ ಕೃಷ್ಣನಿನ್ನವನಲ್ಲದಮಾನವಜನುಮೆಂದು ಬ್ಯಾಡ ಕಂಡ್ಯಪ.ಅಚ್ಯುತಚಿತ್‍ಸ್ವರೂಪೋಚ್ಚಾರಿಪ ಗಿಣಿಮಾಡುಕಂಡ್ಯ ಕೃಷ್ಣನಿಚ್ಚಾರಿ ನಿಶಾಚರಹರನೆಂಬ ಜಾಣ್ವಕ್ಕಿಮಾಡುಕಂಡ್ಯ1ಅಹೋ ಮಾಉಮೇಶವಿಧಿಪನೆಂಬ ನವಿಲುಮಾಡುಕಂಡ್ಯ ಕೃಷ್ಣಕುಹಕಕುವ್ರತವೈರಿಅವರಿಗೆಂಬ ಪಿಕನಮಾಡುಕಂಡ್ಯ2ಹರಿಯವಯವಗಳೆಂಬ ಪುಷ್ಪದಿ ಚರಿಪಾಳಿಯಮಾಡುಕಂಡ್ಯ ಕೃಷ್ಣಪರಮಮುಕ್ತಾಹಾರದ ಪರಮಹಂಸನಮಾಡುಕಂಡ್ಯ3ಭುಲ್ಲಿಪ ವೈಕುಂಠ ಸಿರಿಯ ನಿಟ್ಟಿಪಹುಲ್ಲೆಮಾಡುಕಂಡ್ಯ ಕೃಷ್ಣಎಲ್ಲ ಪ್ರಕಾರದ ಸಾರಿ ಕೂಗುವ ನರಿಯಮಾಡುಕಂಡ್ಯ4ಸ್ವರೂಪ ಬಿಂಬವ ನೋಡಿ ನರ್ತಿಪ ಕುದುರೆಯಮಾಡುಕಂಡ್ಯ ಕೃಷ್ಣವರಮುಕ್ತರರಮನೆಭಾರ ಹೊರುವ ಗೂಳಿಮಾಡುಕಂಡ್ಯ5ನವೀನ ಮುಕ್ತರಿಗೊದಗುವ ಬಾಗಿಲ ಕುನ್ನಿಮಾಡುಕಂಡ್ಯ ಕೃಷ್ಣಗೋವಿಂದ ಗೋವಿಂದೆಂದು ಬೀದಿಲೊದರುವ ಕತ್ತೆಮಾಡುಕಂಡ್ಯ6ಹರಿನಿರ್ಮಾಲ್ಯ ಕಸ್ತೂರಿ ಕರ್ದಮದ ಪತ್ರಿಮಾಡುಕಂಡ್ಯ ಕೃಷ್ಣಸ್ವರ್ಗಾಮೃತ ತಟವಾಪಿಯ ಮೀನವಮಾಡುಕಂಡ್ಯ7ಬಾಡಿ ಕೆಡದ ಪುಷ್ಪಲತೆ ತರುಗುಲ್ಮವಮಾಡುಕಂಡ್ಯ ಕೃಷ್ಣನೋಡಿ ಸ್ವಾನಂದದಿ ಜಿಗಿದಾಡುವ ಕಪಿಯಮಾಡುಕಂಡ್ಯ8ನಾಕಕೈವರ ಸಂಗತಿ ಬಿಟ್ಟಗಲದಂತೆಮಾಡುಕಂಡ್ಯ ಕೃಷ್ಣಆಕಾಂಕ್ಷವಿಲ್ಲದುಗ್ಗಡಿಪ ಭಟನನ್ನೆಮಾಡುಕಂಡ್ಯ9ಮಣಿಮಯ ಭಿತ್ತಿ ಸೋಪಾನ ವಿತಾನವಮಾಡುಕಂಡ್ಯ ಕೃಷ್ಣತೃಣ ಮುಕ್ತಾದವರೊಳಗೊಂದಾರೆ ಜಾತಿಯಮಾಡುಕಂಡ್ಯ10ಜ್ಞಾನಾನಂದಗಳ ಯೋಗ್ಯತೆ ನೋಡಿ ಕೂಡುವಂತೆಮಾಡುಕಂಡ್ಯ ನೀದಾನಕ್ಕೆ ಮೊಗದೋರಿಕೈವಲ್ಯಪುರಾಗಾರಮಾಡುಕಂಡ್ಯ11ಈಪರಿಬಿನ್ನಹವಾಲಿಸಿ ಭವದೂರಮಾಡುಕಂಡ್ಯ ಕೃಷ್ಣಶ್ರೀ ಪ್ರಸನ್ವೆಂಕಟಪತಿ ಬಿಂಬಾತ್ಮಕ ಕೃಪೆಮಾಡುಕಂಡ್ಯ12
--------------
ಪ್ರಸನ್ನವೆಂಕಟದಾಸರು
ನೀ ಕರುಣಿಸೊ ವಿಠಲ ನಮ್ಮಸಾಕೊ ಪಂಡರಿ ವಿಠಲ ಪ.ದೋಷಿಗಳೊಳಗೆ ಹಿರಿಯನು ನಾ ನಿರ್ದೋಷಿಗಳರಸನೆ ವಿಠಲಸಾಸಿವೆಯಷ್ಟು ಭಕುತಿಯನರಿಯೆನುಶೇಷಶಯನ ಶ್ರೀ ವಿಠಲ 1ಭವಸಾಗರದೊಳು ಮುಳುಗುವೆ ಸುಮ್ಮನೆಅವಲೋಕಿಸುವರೆ ವಿಠಲನವ ನವ ವಿಷಯಕೆ ಮುಗ್ಗುತಲಿಹ ಮನದವಸರ ಕಾಯೊ ವಿಠಲ 2ತನುಸಂಬಂಧಿಗಳತಿ ಕಾರ್ಯಾರ್ಥಿಗಳ್ಎನಗಾರಿಲ್ಲೊ ವಿಠಲಾಬಿನಗುಮಾನವರನುಸರಣೆಯಲಿದಣಿಸದಿರಯ್ಯ ವಿಠಲ 3ನಿಶಿದಿನಅಶನವಸನಕೆ ಹೆಣಗುವೆಹುಸಿಸಂಗ್ರಹಿಸಿದೆ ವಿಠಲನಿಶಿದ್ಧಗಳಂಜಿಕೆ ಇಲ್ಲವು ನರಕದಗಸಣೆಗೆ ಅಂಜುವೆ ವಿಠಲ 4ಜಾವಕೆ ಮಾಡುವೆ ಸಾವಿರ ತಪ್ಪನುಕಾವದಯಾಂಬುಧಿ ವಿಠಲನಾ ವಡಲ್ಹೊಕ್ಕೆನೊ ಪ್ರಸನ್ವೆಂಕಟಪತಿಜೀವಕೆ ಹೊಣೆ ನೀ ವಿಠಲ 5
--------------
ಪ್ರಸನ್ನವೆಂಕಟದಾಸರು
ಭಕ್ತರೆಂದರೆ ನೈಜ ಭಕ್ತರವರು ಪ.ಚಿತ್ತಜನಯ್ಯನ ಚರಿತಾಮೃತಕೆ ಮನವಿಟ್ಟು ಅ.ಪ.ಅಧಿಯಾತ್ಮ ತಾಪಗಳುಅಧಿಭೂತ ಕ್ಲೇಶದನುಭವಅಧಿದೈವದಟ್ಟುಳಿಯನೆಣಿಸರತಿ ಬಲವಂತರ್ಮಧು ಮಥನಗಲ್ಲದರ ಬಗೆಗಂಜರು 1ವೇದತಂತ್ರವಾಕ್ಯದಿಂದುಪದೇಶಮಾಡಿದರೆ ಮೋಹನಕೊಳಗಾಗರುವದಿಸಿ ಬಲವತ್ಸ್ನಾನವ ಮಾಡಿ ಬೆದರಿಸಲುಕದಲದಂತಃಕರಣದ್ಹರಿದಾಸರು 2ಬದಿಗೆ ಬಂದಡಲಾವದುರಿತಕೋಟಿಗಳನ್ನುತುದಿಗಾಲಿಲೊದ್ದು ಸಲೆ ತಲೆವಾಗರುಹುದುಗೊಂಡು ಷಡುವರ್ಗ ರಿಪುಗಳನು ಗೆದ್ದುಹರಿಪದಲಂಪಟ ಜ್ಞಾನಾಂಬುಧಿಗಳು 3ವಿಧಿಭವೇಂದ್ರಾದಿ ಸುರರಾಳ್ದ ಲಕುಮೀಪತಿಯಸುದಯಾರಸನುಂಬುವ ಬೋಧನವರುಸದಮಲ ಗುಣಾನಂತ ಪ್ರಸನ್ವೆಂಕಟಪತಿಯಹೃದಯವಲ್ಲಭರೆನಿಪಅಚಲಮತಿಯವರು4
--------------
ಪ್ರಸನ್ನವೆಂಕಟದಾಸರು
ಮೋಕ್ಷೋಪಾಯಕಾನಂದ ಮುನೀಂದ್ರನಶಿಕ್ಷಾ ಮಾರ್ಗಹುದಯ್ಯಲಕ್ಷ್ಷ್ಯಶ:ಲಕ್ಷಣವಾರ್ಹೇಳೇನುಲಕ್ಷದಿ ಗುಣವಿಲ್ಲಯ್ಯ ಪ.ಸುಕೃತತಾನಾದರೆ ಚಿರಕಾಲಕೆ ಒಮ್ಮೆಧಿಕೃತವಾಹುದು ಭವತುಷ್ಟಿಸುಖವೆಂಬುದು ಸ್ವರೂಪಾನಂದಾನುಭವವಿಕಸವಾಗುವ ಜ್ಞಾನದೃಷ್ಟಿ ಆಸುಖವಾಪೇಕ್ಷಿಸಿ ಪ್ರಕೃತವುದಾಸಿಪದಖಿಳ ಮಹಾತ್ಮರಭೀಷ್ಟಿಸಕಳಾನಿಷ್ಟವ ಸಾಗಿಸುವ ಶ್ರೀಸುಖತೀರ್ಥರ ಶುಭಗೋಷ್ಟಿ 1ಕಿವಿಯಲಿ ಸತ್ಶಾಸ್ತ್ತ್ರವಕೇಳಿಧ್ಯಾನಮನನವ ಸಾಧಿಪುದೆ ದೇವಸಾರ್ಥಿಕುವಲಯಪ್ರಿಯಕುಲತಿಲಕನು ಮೆಚ್ಚಿಹನವಭಕುತಿಯಪಥಕೀರ್ತಿಅವಿರಳ ಎದೆಗದ್ದಿಗೆಯೊಳು ಮೆರೆವನಸವಿಗುಣ ನಿರ್ಣಯವಾರ್ತಿವಿವರಿಸಿ ವಾರಂವಾರ ವರದ ಮದ್ಧವ ಜಗದ್ಗುರು ವರಮೂರ್ತಿ 2ಈಶ್ವರ ಸಾಕ್ಷಾತ್ಕಾರದ ಭೇದರಹಸ್ಯ ವಿಚಾರವಂತಯೋಗಿನಶ್ವರಾನಶ್ವರವರಿತ ವೈರಾಗ್ಯದಐಶ್ವರ್ಯಾನ್ವಿತಭೋಗಿಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣಭಾಷ್ಯಕ ಶ್ರೀಪದಯೋಗಿವಿಶ್ವದೊಡೆಯ ಪ್ರಸನ್ವೆಂಕಟಪತಿ ಪದವಿಶ್ವಾಸಿಕ ಮುನಿಯೋಗಿ 3
--------------
ಪ್ರಸನ್ನವೆಂಕಟದಾಸರು
ವೃಥಾ ಭವದಿ ಮೆರೆದೆರಥಚರಣಧರನ ಸ್ಮøತಿಯನೆ ಮರೆದೆ ಪ.ಸತಿಸುತರೆನ್ನವರತಿಶಯ ಗೃಹಧನಪತಿಯು ನಾನೆಂಬೊ ಮಮತೆವಿಡಿದುರತಿಪತಿಪಿತನಂಘ್ರಿರತಿ ಲೇಶವಿಲ್ಲದೆಸತತ ಯಮಪುರದ ಪಥವನೆ ಪಿಡಿದು 1ಅತಿಥಿಗಳೊಲ್ಲದೆ ಯತಿಪೂಜೆಯಿಲ್ಲದೆಪೂತಿ ಮಲಭಾಂಡ ಭರಿತನಾಗಿಚತುರ್ಮುಖನಯ್ಯನ ವ್ರತವ ಬಿಸುಟು ಅನ್ಯಪತಿತ ಮಾರ್ಗವ ಪೊಂದಿ ಹತಭಾಗ್ಯನಾಗಿ 2ಮಿತಮನರಹಿತ ದುರ್ಮತಪಂಡಿತನಾಗಿಪ್ರತಿಬೊಮ್ಮರಕ್ಕಸೋನ್ನತನೆನಿಸಿಅತಿಪ್ರಾಜÕಶಾಸ್ತ್ರದೇವತೆ ಪ್ರಸನ್ವೆಂಕಟಪತಿಯನೆ ಬಿಟ್ಟಿನ್ನಿತರವ ಭಜಿಸಿ 3
--------------
ಪ್ರಸನ್ನವೆಂಕಟದಾಸರು
ವೆಂಕಟೇಶನ ಮಹಿಮೆಯ ಹೊಗಳುವಕಿಂಕರಧನ್ಯನಯ್ಯಪ.ಇಳೆಯ ಭಕ್ತರ ನೋಡಿದ ವೈಕುಂಠದಿಂದಿಳಿದು ಶ್ರೀಸಹಿತ ಬಂದಸಲೆ ಸುವರ್ಣಮುಖರಿಯ ತೀರವಒಲಿದು ನಿಂತನು ತಿಮ್ಮ್ಮಯ್ಯ 1ಭೂವರಾಹ ಸ್ವಾಮಿಯ ಸನ್ನಿದಶ್ರೀವತ್ಸಲಾಂಛನಿಹಶ್ರೀವಿಮಾನಸಹಿತ ದೇವಾಧಿದೇವ ತಾನಿಲ್ಲಿ ನಿಂತ 2ಸ್ವಾಮಿ ಪುಷ್ಕರಿಣಿಯೆಂಬ ತೀರ್ಥದನಾಮದ ಮಹಿಮೇನೆಂಬೆಆ ಮಹಾ ದುಷ್ಕøತವು ಸ್ನಾನದನೇಮದಲ್ಲೋಡುವುದು 3ರಾಜಾಧಿರಾಜನಿತ್ಯಉಪಚಾರಪೂಜೆ ಲೋಕಾರ್ಥದೊಳು ತಾಮೂಜಗಕಾನಂದವವರಕರುಣಾಜಲಧಿ ಕೊಡುವ 4ನಿತ್ಯಸ್ವಾರಿಗೈದುವಸುರಋಷಿಮೊತ್ತದಿ ಚರಿಪದೇವಮತ್ತೆ ಆ ಲಕ್ಷ್ಮಿಯ ಕೂಡ ಮುನಿವದೊಂದರ್ತಿಯ ಬುಧರು ನೋಡಿ 5ನುಡಿವ ಸಾವಿರ ಪೇರ್ಗಂಟೆ ಉಬ್ಬುಬ್ಬಿಹೊಡೆವರ್ಯೊಡೆ ಜಾಗಟೆಬಡಿವ ಕರಡೆ ಭೇರಿಯು ಮುಂದೆ ಉಗ್ಗಡಿಪ ಸಾಮಗಾನವು 6ಚಿತ್ರವರ್ಣದ ಸತ್ತಿಗೆ ಸಾಲ್ಗಳುಸುತ್ತಲು ಕೈ ದೀವಿಗೆಉತ್ತಮ ವಾಹನವೇರಿ ವಿಶ್ವದಕರ್ತಬಂದನು ಉದಾರಿ7ಉದಯ ತೋಮಾಲೆ ಸೇವೆ ಪುಳುಕಾಪುಮೊದಲಾದ ದಿವ್ಯಸೇವೆಒದಗಿದವಸರಂಗಳು ನೈವೇದ್ಯಮೃದುಭಕ್ಷ್ಯವರಪೊಂಗಲು8ಅತಿರಸ ಮನೋಹರವುದಧ್ಯನ್ನಅತಿರುಚಿ ಅನ್ನವಾಲವುಕ್ಷಿತಿಯ ಮೇಲಿಹ ಭಕ್ತರು ಶ್ರೀಲಕ್ಷ್ಮೀಪತಿಗೆ ಅರ್ಪಿಸುತಿಹರು 9ಹೂವಿನಂಗಿಯ ತೊಡುವಮೃಗಮದಲಾವಣ್ಯ ತಿಲಕಿಡುವಕಾವನಂತರ ತೇಜವ ಗೆಲ್ಲುವಸಾವಿರ ಹೆಸರ ದೇವ 10ತಪ್ಪದೆ ನುಡಿವಂದನು ಮುಡಿಪಿನಕಪ್ಪವೆಣಿಸಿ ಕೊಂಬನುಚಪ್ಪನ್ನ ದೇಶಸ್ತರು ಬಂದು ಸಮರ್ಪಣೆ ಮಾಡುವರು 11ಕೊಟ್ಟ ವಾಕ್ಯಕೆ ತಪ್ಪನು ವರಭಯವಿಟ್ಟು ಸಾಕುತಲಿಪ್ಪನುಇಷ್ಟಾರ್ಥದಾತನಯ್ಯ ವಿಶ್ವದಶಿಷ್ಟರೊಡೆಯ ತಿಮ್ಮಯ್ಯ 12ಕಿರೀಟ ಕುಂಡಲವಿಟ್ಟನು ತಿಮ್ಮಯ್ಯಕರುಣ ನೋಟದ ಚೆಲ್ವನುಅರಿಶಂಖವನು ಧರಿಸಿದ ಹಾರಕೇಯೂರ ಕೌಸ್ತುಭದಲೊಪ್ಪಿದ 13ತೋಳಬಂದಿಯು ಕಂಕಣಮುದ್ರಿಕೆಕೀಲುಕಡಗಒಡ್ಯಾಣನೀಲಮಾಣಿಕ ಪಚ್ಚದ ಮುತ್ತಿನಮಾಲೆಗಳಿಂದೊಪ್ಪಿದ 14ಮಣಿಮಯ ಕವಚ ತೊಟ್ಟ ಗಳದಲಿಮಿನುಗುವಾಭರಣವಿಟ್ಟಕನಕಪೀತಾಂಬರವು ಕಟಿಯಲ್ಲಿಅಣುಗಂಟೆಗಳೆಸೆದವು 15ರನ್ನದಂದುಗೆಯನಿಟ್ಟಿಹ ಪಾದಕೆಪೊನ್ನಹಾವುಗೆಮೆಟ್ಟಿಹಘನ್ನ ದೈತ್ಯರ ಸೋಲಿಪ ಬಿರುದಿನಉನ್ನತ ತೊಡರಿನಪ್ಪ 16ದಿನಕೆ ಸಾವಿರ ಪವಾಡ ತೋರುವಜನಕೆ ಪ್ರತ್ಯಕ್ಷ ನೋಡಘನಶಾಮ ತಿರುವೆಂಗಳ ಮೂರ್ತಿಯಮನದಣಿಯೆ ಹೊಗಳಿರೆಲ್ಲ 17ಭೂವೈಕುಂಠವಿದೆಂದು ಸಾರಿದಭಾವಿಕ ಭಕ್ತ ಬಂಧುಶ್ರೀ ವಾಯುಜಾತ ವಂದ್ಯ ಶ್ರೀನಿವಾಸಗೋವಿಂದ ನಿತ್ಯಾನಂದ 18ಸೇವಕಜನರಪ್ರಿಯಅರುಣರಾಜೀವಲೋಚನ ತಿಮ್ಮಯ್ಯದೇವಶಿಖಾಮಣಿಯು ಬ್ರಹ್ಮಾದಿದೇವರಿಗೆ ದೊರೆಯು 19ಕಶ್ಚಿಜ್ಜೀವನೆನ್ನದೆ ನನ್ನನುನಿಶ್ಚಯದಲಿ ಹೊರೆವನುಆಶ್ಚರ್ಯಚರಿತ ನೋಡಿ ಶರಣರವತ್ಸಲನ ಕೊಂಡಾಡಿ 20ಆರಾಶ್ರಯಿಲ್ಲೆನಗೆ ದ್ರಾವಿಡವೀರನೆ ಗತಿಯೆನಗೆಭೂರಿಪ್ರಸನ್ವೆಂಕಟಪತಿ ಸುಖತೀರಥವರದ ನಮೊ 21
--------------
ಪ್ರಸನ್ನವೆಂಕಟದಾಸರು
ಸಂತರವರೆ ನೋಡಿರೈ ಕೈವಲ್ಯದಸಂತರವರೆ ನೋಡಿರೈ ಪ.ಸತ್ಯ ರಮೇಶನ ಸೃಷ್ಟಿಯೆ ಸತ್ಯಹತ್ತೆರಡೈದು ತತ್ವವೆ ಸತ್ಯಸತ್ಯಾತ್ಮೇಶರ ಭೇದವೆ ಸತ್ಯಸತ್ಯಾತ್ಮಕನ ಪದ ಸತ್ಯೆನುವ 1ಹರಿಭಕ್ತರ ಕಂಡಪ್ಪುತ ನಿರುತಹರಿಸಲ್ಲಾಪ ಕಥಾಶ್ರಯ ಬಲಿದಹರಿಭೃತ್ಯರಿಗನ್ನೋದಕನೀವರುಹರಿಸಂಕೀರ್ತನೆ ಮನಮನೆಯವರು2ಆನಂದಕೆ ಕವಲಿಲ್ಲದ ಸುಖದು:ಖಾನಂದವನನುಭವಿಸಿ ಬಿಡುವರುಆನಂದಮುನಿಯ ಮತಪ್ರಿಯನಿತ್ಯಆನಂದ ಪ್ರಸನ್ವೆಂಕಟಪತಿಯವರು 3
--------------
ಪ್ರಸನ್ನವೆಂಕಟದಾಸರು