ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದ್ರಹಾಸನ ಕಥೆ ಸುಜನ ತ್ರೈಭುವನೋದ್ಧಾರ ಕಾರುಣ್ಯನಿಧಿ ಹೆಳವನಕಟ್ಟೆರಂಗಯ್ಯ ನಾರಾಯಣ ಶರಣೆಂಬೆ 1 ಭಕ್ತರ ಭಾಗ್ಯನಿಧಿಯೆ ನುಡಿಸಯ್ಯ ಎನ್ನ ಜಿಹ್ವೆಯಲಿ 2 ಅಜಹರಿಸುರ ವಂದಿತನೆ ನಿಜವಾಗೊ ಮತಿಗೆ ಮಂಗಳವ 3 ಸಂಗೀತಲೋಲೆ ಸುಶೀಲೆ ಹಿಂಗದೆ ನೆಲಸೆನ್ನ ತಾಯೆ 4 ನಿತ್ಯಾನಂದ ರಜತಾಚಲವಾಸನೆ ಭಕ್ತವತ್ಸಲ ಭಾಳನೇತ್ರ ಮುಗಿದು ವಂದಿಸುವೆ 5 ಸೂರ್ಯ ಪತಿಯ ಚರಣವನ್ನು ನೆನೆವೆ ಮಂಗಳವಾಗಲೆಂದು 6 ಒರೆದಂಥ ಜೈಮಿನಿಯೊಳಗೆ ಮಾಡಿ ವರ್ಣಿಸುವೆ 7 ಸಂದೇಹ ಮಾಡುತ್ತಿರಲು ಪೇಳಿದ ಫಲುಗುಣಗೆ 8 ಮುಂದೊತ್ತಿ ರಥವ ಬೆಂಬತ್ತಿ ನಿಂದಿರಿಸಿದ ಚಂದ್ರಹಾಸ 9 ವೈಷ್ಣವಕುಲ ಶಿರೋರನ್ನ ಪರಾಕ್ರಮ ದಿಟ್ಟರಿಗಿದು ನೀತವೆಂದು 10 ನ್ನೊಡೆಯಗೆ ಪೇಳಿದರಾಗ ಕಡುಚಿಂತೆಯಲಿ ಪಾರ್ಥನಿದ್ದ 11 ದಿನಕರ ಪ್ರತಿಬಿಂಬದಂತೆ ವನಜನಾಭ ಕೃಷ್ಣ ಶರಣೆನ್ನುತ ಸುರಮುನಿ ಇಳಿದಂಬರದಿಂದ12 ಉಟ್ಟಿಹ ಕರದಿ ವೇಣುವನು ಶ್ರೇಷ್ಠÀ ಬಂದನು ಇವರೆಡೆಗೆ 13 ಆನಂದದಿಂದ ಕೇಳಿದರು 14 ಎಲ್ಲ ವೃತ್ತಾಂತವನರುಹಿ ಬಲ್ಲಿದ ತುರಗವ ಕಟ್ಟಿದ ಧೀರ ಅಲ್ಲಾರು ಎನುತ ಕೇಳಿದರು15 ಪ್ರಮುಖರಿಲ್ಲ್ಯಾರು ಪೇಳೆನುಲು ಸಮಯವಲ್ಲವು ಪೇಳೆನಲು 16 ವ್ಯಾಸಾಂಬರೀಷ ವಿಭೀಷಣಕ್ರೂರ ಪರಾಶರ ಧ್ರುವ ಪ್ರಹಲ್ಲಾದ ಈಸುಮಂದಿ ಭಕ್ತರಿಗಧಿಕನು ಚಂದ್ರಹಾಸನೆಂಬಾ ಹರಿಭಕ್ತ17 ಹೇಳಬೇಕೆನುತ ಮುನೀಶನೆಂದೆಂಬ ಕೇರಾಳದೇಶದ ರಾಜ್ಯವನು ಪ್ರಧಾನಿಯನು 18 ಭೂತಮೂಲದಲಿ ಪುಟ್ಟಿದನು ತಾತ ಕಾಲವಾಗಿ ಪೋದ 19 ಸಾಯಲಾದಳು ರಾಜಪತ್ನಿ ಸಿರಿ ಪರರಾಯರು ಬಂದು ಕಟ್ಟಿದರು20 ಬಾಲನಿರಲು ಆ ಶಿಶುವೆತ್ತಿ ನಡೆದಳು 21 ಕುಂತಳಪುರಕಾಗಿ ಬಂದು ಆ ಗ್ರಾಮದಲ್ಲಿ 22 ಎರೆದು ಪೋಷಣೆಯ ಮಾಡುವಳು ಮರುಗುತಿರ್ದಳು ಮನದೊಳಗೆ 23 ಹಾಸುವ ವಸ್ತ್ರಗಳಿಲ್ಲ ಬೇಸತ್ತು ಅಳಲುವಳೊಮ್ಮೆ 24 ನೋಡಿ ಹಿಗ್ಗುವಳು ಆಲಂಬದಲ್ಲಿರುತಿಹಳು 25 ಕಂಗಳ ಕುಡಿನೋಟವೆಸೆಯೆ ಮಂಗಳಗಾತ್ರದ ಮುದ್ದುಬಾಲಕನೆಲ್ಲರಂಗಳ- ದೊಳಗಾಡುತಿಹನು 26 ಪರಪುಟ್ಟನಾದುದ ಕಂಡು ಮಡಿಯ ಪೊದಿಸುವರು 27 ಮಾಗಾಯಿ ಮುರವಿಟ್ಟು ಮನ್ನಿಸಿ ಕೆನೆಮೊಸ- ರೋಗರವನ್ನು ಉಣಿಸುವರು ರಾಗಗಾನದಲಿ ಪಾಡುವರು 28 ಎಣ್ಣೂರಿಗೆಯನು ಕೊಡಿಸುವರು ಕೇರಿ ಕೇರಿಗಳೊಳು ಕೊಡುವರೆಲ್ಲರ ಕಾರುಣ್ಯದ ಕಂದನಾಗಿ29 ತಮ್ಮಾಲಯದೊಳು ಕರೆದೊಯ್ದು ಮಾಲೆಯನವಗೆ ಹಾಕುವರು 30 ಮಾವಿನ ಫಲಗಳನು ಮದನನಯ್ಯನ ಕಿಂಕರಗೆ 31 ಸಾಲಿಗ್ರಾಮ ಶಿಲೆಯ ಅಷ್ಟು ಜನರಿಗೆ ತೋರಿಸಿದ 32 ಪುಣ್ಯೋದಯದಿ ಸಾಲಿಗ್ರಾಮ ಶಿಲೆಯು ಲಕ್ಷ್ಮಿನಾರಾಯಣ ಮೂರುತಿಯ 33 ಕೂಡಿದ ಗೆಳೆಯರ ಕೂಡೆ ದೌಡೆಯೊಳಿಟ್ಟು ಕೊಂಡಿಹನು 34 ಮಂಡೆಗಳನು ತಗ್ಗಿಸುವನು 35 ಬೆಚ್ಚುವನಪಹರಿಸುವರೆನುತ ಬಹು ಎಚ್ಚೆತ್ತು ಪಿಡಿದಾಡುವನು ಬಾಯೊಳಗಿಡುವ 36 ಮಂದಿರದಲಿ ವಿಪ್ರರಿಗೆ ಆ- ಬಂದರು ಬುಧಜನರೆಲ್ಲ 37 ಶ್ರೇಷ್ಠರೆಲ್ಲರ ಕುಳ್ಳಿರಿಸಿ 38 ಮಂತ್ರಾಕ್ಷತೆಯನು ಮಂತ್ರಿಗಿತ್ತು ಲಕ್ಷಣವನ್ನೆ ನೋಡಿದರು 39
--------------
ಹೆಳವನಕಟ್ಟೆ ಗಿರಿಯಮ್ಮ
ನಾಲ್ಕನೆಯ ಸಂಧಿ ಶಶಿಹಾಸ ಕಾಳಿಯನೊಲಿಸಿ ಪೊಸತಾಗಿ ತೋರಿತಾಶ್ಚರ್ಯ ಮಿಥ್ಯದ ವಿಷವನು ಉಣಿಸಿ ಕೃತ್ಯವೆ ಪಥ್ಯವಾದುದನು 1 ಕರುಣದ ಬಗೆಯ ತನುಜೆಯು ವಿಷಯು 2 ವಿಷಯೆ ಇದ್ದೆಡೆಗೆ ತಲೆಯ ತಗ್ಗುವಳು 3 ಪನ್ನಗಧರನ ಕೃಪೆಯಿಂದ ಸನ್ಮಾನವನೆ ಮಾಡಿದರು 4 ಜಾರಿದ ಕುರುಳನೋಸರಸಿ ಚಾರುಮಾಣಿಕಖಚಿತ ಪೀಠಕ್ಕೆ 5 ಹರಸಿ ಅಕ್ಷತೆಗಳನಿಟ್ಟು ಅರಸಿನಗಳ ತಿವರಿದರು 6 ಮಜ್ಜನ ತಂಬಿಗೆಯ ಲೋಕುಳಿಯ ಬೆನ್ನಲೋಕುಳಿಯನೆರೆದರು 7 ಮುಡಿಮೈಗಳನೋಸರಿಸಿ ದುಕೂಲವ ಬಡನಡುವಿಗೆ ಅಳವಡಿಸಿ ಜಡಿತದಾಭರಣಕರಡಿಗೆಯನು ತಂದಿಡುವರು ಇಕ್ಕೆಲದಲ್ಲಿ8 ಪಾಟಿಸಿ ತುರುಬನೋಸರಿಸಿ ಮಧ್ಯದಲಿ ಇಡುವರು 9 ಬೆಳಗುವ ಮೂಗುತಿಯ ಮಂದ ಗಮನೆಯರು ಹರುಷದಲಿ 10 ಮೂಗುತಿಯನಿಕ್ಕುವರು ಕೋಕಿಲಗಾನೆ ಕುಟಿಲಕುಂತಳದಾನೆ ಬಾಗಿದ ಬಾವುಲಿಗಳಲಿ11 ಇಟ್ಟರು ತೋಳ ಚಳರಕ್ಷೆ ಮಣಿಗಳ ಗಟ್ಟಿಕಂಕಣ ಚಳಕಗಳ ಬೆರಳ ಮುದ್ರಿಕೆಯು 12 ಕಡಗ ಮುತ್ತಿನ ಹತ್ತೆ ಕಡಗ ಎಡೆಪಣಿಚಿಂತಾಕದ ಸರಿಗೆಯ ತಂದಿಡುವರಂಗನಗೆ ನಾರಿಯರು 13 ಕಂಠೀಸರ ಬಿಲ್ಲಸರವು ಸರಸಿಜ ಗಂಧಿಯರೊಲಿದು 14 ಕಣಕಾಲುಗಳೆಸೆವ ಭಾವಕಿಯ ಸಾಲುಗಂಟೆ ಗೆಜ್ಜೆ ಸರಪಳಿ ಘಲಿರೆಂಬ ಕಾಲಂದಿಗೆಯನಿಡುವರು15 ಉಂಗುರ ಮುದ್ರಿಕೆಯಿಟ್ಟು ಮಂದಗಮನೆಗೆ ಒಪ್ಪಿದವು 16 ಸಾರಿಸಿ ಅಂಗಕ್ಕೆ ತಿಗುರಿ ಹಾವುಗೆಯನೆ ಮೆಟ್ಟಿಸಿದರು 17 ನಾರಿಯರೆಡಬಲದಲಿ ಕರವಿಡಿಯಲು ಚಾರುವದನೆ ಚಂಚಲಾಕ್ಷಿ ಬಂದೇರಿದಳೊಜ್ರದಂದಣವ 18 ಹೊತ್ತರು ಕಳಸ ಕನ್ನಡಿಯ ಹೊತ್ತಿದ ಕಾಳಂಜಿಯವರು 19 ಜಗಜಗ ಬೆಳಕುಗಳು ತುಂಬಿ ಜಗಜಗಿಸುವ ಜೊ‑ಂಪಿನ ಸುರೆಪಾನವು ನೆಗಪಿದವಗಣಿತವಾಗ20 ಉದುರು ಬಾಣ ಪುಷ್ಪಬಾಣ ಸದನದಿ ನಡೆತಂದಳಬಲೆ 21 ಹೊನ್ನಂದಣವನೆ ಇಳಿಸುವರು ಬಂದಳು ವಿವಾಹ ಮಂಟಪಕೆ 22 ಪಿಡಿದಳು ಮದನನರ್ಧಾಂಗಿ23 ಮುಕುಂದಗರ್ಪಿತವಾಗಲೆಂದು ಮಂದಾರಮಾಲೆ ಹಾಕಿದರು 24 ಪೊರೆಯಲಿ ತಂದು ನಿಲ್ಲಿಸಿದರು ಅರುಹಬೇಕೆಂದು ಕೇಳಿದರು 25 ಎನ್ನ ಪರಮ ಗುರುವೆಂದ 26 ಸಮಯವು ಲಗ್ನವೆಂದೆನುತ ಬ್ರಾಹ್ಮಣೋತ್ತಮರು ಹೇಳಿದರು 27 ಸಮಯವು ಲಗ್ನವೆಂದೆನುತ ಮೇಲೆ ಸೂಸಿದನು 28 ಶತಪತ್ರನಯನೆ ಸಮಗಾತ್ರೆ ಚಮತ್ಕಾರದಿಂದ ಸೂಸಿದಳು 29 ಸೊಡರುಗಳನೆ ಹಚ್ಚುವರು ಪಿಡಿದರು ಇತ್ತಂಡದಲ್ಲಿ 30 ಮುತ್ತೈದೆಯರೆಲ್ಲ ಅಲಂಕರದಿ ವಿಷಯೆ ಸಂಭ್ರಮದಿ 31 ಕೈಯಿಂದ ತೋರುವರು ಸುತ್ತ ನಕ್ಷತ್ರದ ಮಧ್ಯದಿ ಕಂಡಳು ಪ್ರತ್ಯಕ್ಷದಿಂದರುಂಧತಿಯ 32 ದಿನಕರ ಪ್ರತಿಬಿಂಬದಂತೆ ಅನುಕೂಲಗಳನೆ ಮಾಡಿದರು 33 ಮಾಡಿದನು ಶ್ರೀಪತಿಯ ಆಜ್ಯತಂಡುಲ ಆಪೋಶನೆ ಮಾಡಿದ ನಿರ್ಜರಪತಿ ಮೆಚ್ಚುವಂತೆ34 ಎಡೆಮಾಡಿ ಚಪ್ಪರದೊಳಗೆ ಭೋಜನಕೆ ಕುಳ್ಳಿರಿಸಿ 35 ಉಪ್ಪಿನೆÀಸರುಕಾಯಿ ಪರಿಪರಿ ಶಾಕವು ಹಪ್ಪಳ ಬಾಳಕಗಳನು ಅಪ್ಪಲು ಅತಿರಸ ಸೂಪಾಕ್ಷತಶಾಲ್ಯನ್ನ ಚಪ್ಪರದಲಿ ಬಡಿಸುವರು 36 ಕಾಮಿನಿಯರು ಕನಕದ ಹರಿವಾಣದಿ ಶಾವಿಗೆ ಪರಮಾನ್ನಘೃತವ ಭೂಮಕ್ಕೆ ಬಡಿಸಿದರಾಗ 37 ರಾಜೀವ ಮುಖಿ ತನ್ನ ಪತಿಗೆ ಮ- ಹಾಜನರೆಲ್ಲ ಉಂಡು ಕೈತೊಳೆದರು ಹೂಜಿಯಲ್ಲುದಕವ ಪಿಡಿದು38 ಸಂಭ್ರಮದಿಂದ ಸೂಸಿದರು39 ವಾಸುದೇವ ಕೃಷ್ಣ ಎನುತ ಮದನ ವಿಲಾಸದಿಂದಲಿ ನಿದ್ರೆಗೈದ 40
--------------
ಹೆಳವನಕಟ್ಟೆ ಗಿರಿಯಮ್ಮ